ಕಲರ್ಸ್ ಕನ್ನಡದ 'ಹಾಡು ಕರ್ನಾಟಕ' ಶೋ ಮೂಲಕ ಸಂಗೀತ ನಿರ್ದೇಶಕ ಹರಿಕೃಷ್ಣ ಕಿರುತೆರೆಯಲ್ಲಿ ಮೋಡಿ ಮಾಡಲು ಸಿದ್ಧರಾಗಿದ್ದಾರೆ. ಸಾಮಾನ್ಯ ಜನರಿಗೂ ಹಾಡುವ ಅವಕಾಶ ನೀಡಲು ಕಲರ್ಸ್ ಕನ್ನಡ ವೇದಿಕೆ ಒದಗಿಸುತ್ತಿದ್ದು, ಈ ಶೋನಲ್ಲಿ ಹರಿಕೃಷ್ಣ ತೀರ್ಪುಗಾರರಾಗಿದ್ದಾರೆ. ಇವರೊಂದಿಗೆ ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲ, ರಘು ದೀಕ್ಷಿತ್, ಗಾಯಕಿ ಇಂದು ನಾಗರಾಜ್, ವಾರಿಜಾ ಶ್ರೀ ಸಹ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.
ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಚಂದನಾ ಆನಂತಕೃಷ್ಣ ಈ ಕಾರ್ಯಕ್ರಮದ ಮೂಲಕ ಮೊದಲ ಬಾರಿಗೆ ನಿರೂಪಕರಾಗುತ್ತಿದ್ದಾರೆ. ಸದ್ಯದಲ್ಲೇ ಈ ಶೋ ಆರಂಭವಾಗಲಿದೆ. ಶೋನ ಪ್ರೊಮೋ ಈಗಾಗಲೇ ಬಿಡುಗಡೆಯಾಗಿದ್ದು, ಸದ್ದು ಮಾಡುತ್ತಿದೆ.
ಇತ್ತೀಚೆಗೆ ಕಿರುತೆರೆಯ ರಿಯಾಲಿಟಿ ಶೋಗಳಿಗೆ ಸಿನಿಮಾ ತಾರೆಯರು ನಿರೂಪಕರಾಗುವುದು, ಜಡ್ಜ್ಗಳಾಗುವುದು ಸಾಮಾನ್ಯವಾಗಿದೆ. ಆದರೆ, ತಾವಾಯಿತು ತಮ್ಮ ಸಂಗೀತವಾಯಿತು ಎಂದುಕೊಂಡಿದ್ದ ಹರಿಕೃಷ್ಣ ಕಿರುತೆರೆಗೆ ಬಂದಿರುವುದು ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.
- " class="align-text-top noRightClick twitterSection" data="
">
- " class="align-text-top noRightClick twitterSection" data="
">