ETV Bharat / sitara

ವಿಷ್ಣುವರ್ಧನ್​, ಶಂಕರ್​​ನಾಗ್​​ರನ್ನು ಚಿತ್ರರಂಗಕ್ಕೆ ಕರೆತಂದಿದ್ದು ಯಾರು?  ಅವರೇ ಇವರು! - undefined

ಕನ್ನಡ ಚಿತ್ರರಂಗಕ್ಕೆ ಇಬ್ಬರು ದಿಗ್ಗಜ ನಟರನ್ನು ಪರಿಚಯಿಸಿದ ಕೀರ್ತಿ ಗಿರೀಶ್ ಕಾರ್ನಾಡರಿಗೆ ಸಲ್ಲುತ್ತದೆ. ಒಬ್ಬರು ಸಾಹಸಸಿಂಹ ವಿಷ್ಣುವರ್ಧನ್, ಕರಾಟೆ ಕಿಂಗ್ ಶಂಕರ್​​ನಾಗ್​​.

ಗಿರೀಶ್ ಕಾರ್ನಾಡ್​
author img

By

Published : Jun 10, 2019, 5:02 PM IST

ಅನಾರೋಗ್ಯದಿಂದ ಬಳಲುತ್ತಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್​ ರಘುನಾಥ್ ಕಾರ್ನಾಡ್ ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಸಾಹಿತ್ಯ ಲೋಕ, ರಂಗಭೂಮಿ, ಚಿತ್ರರಂಗಕ್ಕೆ ಕಾರ್ನಾಡ್ ಕೊಡುಗೆ ಅಪಾರವಾದದ್ದು.

ಕನ್ನಡ ಚಿತ್ರರಂಗಕ್ಕೆ ಇಬ್ಬರು ದಿಗ್ಗಜ ನಟರನ್ನು ಪರಿಚಯಿಸಿದ ಕೀರ್ತಿ ನಾಟಕ, ಸಿನಿಮಾ, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಗಿರೀಶ್ ಕಾರ್ನಾಡರಿಗೆ ಸಲ್ಲುತ್ತದೆ. ಒಬ್ಬರು ಸಾಹಸ ಸಿಂಹ ಮತ್ತೊಬ್ಬರು ಕರಾಟೆ ಕಿಂಗ್. ಹೌದು, ಕನ್ನಡ ಚಿತ್ರರಂಗದಲ್ಲಿ ರಾಮಾಚಾರಿಯಾಗಿ ಪ್ರಖ್ಯಾತಿ ಹೊಂದಿದ್ದ, ಸಾಹಸಸಿಂಹ ವಿಷ್ಣುವರ್ಧನ್, 'ನಾಗರಹಾವು' ಸಿನಿಮಾಗೂ ಮೊದಲು ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಿದ್ದರು. ಹಾಗೇ ಕರಾಟೆ ಕಿಂಗ್ ಅವರನ್ನು ಗಿರೀಶ್ ಕಾರ್ನಾಡ್ ಅವರೇ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.

vamshavruksha
'ವಂಶವೃಕ್ಷ'

'ವಂಶವೃಕ್ಷ' ಚಿತ್ರದಿಂದ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ವಿಷ್ಣುವರ್ಧನ್

1971ರಲ್ಲಿ ತೆರೆಕಂಡ 'ವಂಶವೃಕ್ಷ' ಸಿನಿಮಾ ಗಿರೀಶ್ ಕಾರ್ನಾಡ್ ಅವರ ಮೊದಲ ನಿರ್ದೇಶನದ ಸಿನಿಮಾ. ವಿಶೇಷವೆಂದರೆ ಈ ಚಿತ್ರದ ಮೂಲಕ ಒಬ್ಬ ಸ್ಫುರದ್ರೂಪಿ ಹುಡುಗನನ್ನು ಗಿರೀಶ್ ಕಾರ್ನಾಡರು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಈ ನಟ ಮುಂದೆ ಒಂದು ದಿಗ್ಗಜ ನಟರಲ್ಲಿ ಒಬ್ಬರಾಗಿ ಉಳಿಯುತ್ತಾರೆ ಅನ್ನೋದು ಸ್ವತಃ ಆ ನಟನಿಗೂ ಗೊತ್ತಿರಲಿಲ್ಲ. ಗಿರೀಶ್ ಕಾರ್ನಾಡರು ವಿಷ್ಣುವರ್ಧನ್​​ಗೆ ವಂಶವೃಕ್ಷ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು ಎನ್ನುವುದೇ ಹೆಮ್ಮೆಯ ವಿಷಯ.

ondanondu kaladalli
'ಒಂದಾನೊಂದು ಕಾಲದಲ್ಲಿ' ಚಿತ್ರೀಕರಣ

'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ಶಂಕರ್​​ನಾಗ್​​

ಸಾಹಸಸಿಂಹ ವಿಷ್ಣುವರ್ಧನ್ ನಂತರ ಗಿರೀಶ್ ಕಾರ್ನಾಡ್ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಟ್ಯಾಲೆಟೆಂಡ್ ನಟನನ್ನ ಕೊಡುಗೆಯಾಗಿ ನೀಡಿದ್ದಾರೆ. 1978 ರಲ್ಲಿ ಬಿಡುಗಡೆಯಾಗಿದ್ದ 'ಒಂದಾನೊಂದು ಕಾಲದಲ್ಲಿ' ಸಿನಿಮಾ ಮೂಲಕ ಶಂಕರ್​​​ನಾಗ್ ಅವರನ್ನು ಕಾರ್ನಾಡರು ಸಿನಿಮಾಗೆ ಪರಿಚಯಿಸಿದರು. ಅಂದಿನಿಂದ ಶಂಕರ್​​​​ನಾಗ್ ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಇಂದಿಗೂ ಜನರ ಮನಸ್ಸಲ್ಲಿ ಅದರಲ್ಲೂ ಆಟೋಚಾಲಕರ ಮನಸ್ಸಲ್ಲಿ ಉಳಿದಿದ್ದಾರೆ. ಕಾರ್ನಾಡರು ನಿರ್ದೇಶಿಸಿದ ಅತ್ಯುತ್ತಮ ಚಿತ್ರಗಳಲ್ಲಿ ಈ ಚಿತ್ರವೂ ಒಂದು. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡಾ ಬಂದಿದೆ.

ಇಂದು ಬಾರದ ಲೋಕಕ್ಕೆ ಗಿರೀಶ್ ಕಾರ್ನಾಡರು ಪ್ರಯಾಣ ಬೆಳೆಸಿದ್ದಾರೆ. ಇದೀಗ ಗಿರೀಶ್ ಕಾರ್ನಾಡರ ಅಗಲಿಕೆಯಿಂದ ಸಾಹಿತ್ಯ ಲೋಕ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್​ ರಘುನಾಥ್ ಕಾರ್ನಾಡ್ ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಸಾಹಿತ್ಯ ಲೋಕ, ರಂಗಭೂಮಿ, ಚಿತ್ರರಂಗಕ್ಕೆ ಕಾರ್ನಾಡ್ ಕೊಡುಗೆ ಅಪಾರವಾದದ್ದು.

ಕನ್ನಡ ಚಿತ್ರರಂಗಕ್ಕೆ ಇಬ್ಬರು ದಿಗ್ಗಜ ನಟರನ್ನು ಪರಿಚಯಿಸಿದ ಕೀರ್ತಿ ನಾಟಕ, ಸಿನಿಮಾ, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಗಿರೀಶ್ ಕಾರ್ನಾಡರಿಗೆ ಸಲ್ಲುತ್ತದೆ. ಒಬ್ಬರು ಸಾಹಸ ಸಿಂಹ ಮತ್ತೊಬ್ಬರು ಕರಾಟೆ ಕಿಂಗ್. ಹೌದು, ಕನ್ನಡ ಚಿತ್ರರಂಗದಲ್ಲಿ ರಾಮಾಚಾರಿಯಾಗಿ ಪ್ರಖ್ಯಾತಿ ಹೊಂದಿದ್ದ, ಸಾಹಸಸಿಂಹ ವಿಷ್ಣುವರ್ಧನ್, 'ನಾಗರಹಾವು' ಸಿನಿಮಾಗೂ ಮೊದಲು ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಿದ್ದರು. ಹಾಗೇ ಕರಾಟೆ ಕಿಂಗ್ ಅವರನ್ನು ಗಿರೀಶ್ ಕಾರ್ನಾಡ್ ಅವರೇ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.

vamshavruksha
'ವಂಶವೃಕ್ಷ'

'ವಂಶವೃಕ್ಷ' ಚಿತ್ರದಿಂದ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ವಿಷ್ಣುವರ್ಧನ್

1971ರಲ್ಲಿ ತೆರೆಕಂಡ 'ವಂಶವೃಕ್ಷ' ಸಿನಿಮಾ ಗಿರೀಶ್ ಕಾರ್ನಾಡ್ ಅವರ ಮೊದಲ ನಿರ್ದೇಶನದ ಸಿನಿಮಾ. ವಿಶೇಷವೆಂದರೆ ಈ ಚಿತ್ರದ ಮೂಲಕ ಒಬ್ಬ ಸ್ಫುರದ್ರೂಪಿ ಹುಡುಗನನ್ನು ಗಿರೀಶ್ ಕಾರ್ನಾಡರು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಈ ನಟ ಮುಂದೆ ಒಂದು ದಿಗ್ಗಜ ನಟರಲ್ಲಿ ಒಬ್ಬರಾಗಿ ಉಳಿಯುತ್ತಾರೆ ಅನ್ನೋದು ಸ್ವತಃ ಆ ನಟನಿಗೂ ಗೊತ್ತಿರಲಿಲ್ಲ. ಗಿರೀಶ್ ಕಾರ್ನಾಡರು ವಿಷ್ಣುವರ್ಧನ್​​ಗೆ ವಂಶವೃಕ್ಷ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು ಎನ್ನುವುದೇ ಹೆಮ್ಮೆಯ ವಿಷಯ.

ondanondu kaladalli
'ಒಂದಾನೊಂದು ಕಾಲದಲ್ಲಿ' ಚಿತ್ರೀಕರಣ

'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ಶಂಕರ್​​ನಾಗ್​​

ಸಾಹಸಸಿಂಹ ವಿಷ್ಣುವರ್ಧನ್ ನಂತರ ಗಿರೀಶ್ ಕಾರ್ನಾಡ್ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಟ್ಯಾಲೆಟೆಂಡ್ ನಟನನ್ನ ಕೊಡುಗೆಯಾಗಿ ನೀಡಿದ್ದಾರೆ. 1978 ರಲ್ಲಿ ಬಿಡುಗಡೆಯಾಗಿದ್ದ 'ಒಂದಾನೊಂದು ಕಾಲದಲ್ಲಿ' ಸಿನಿಮಾ ಮೂಲಕ ಶಂಕರ್​​​ನಾಗ್ ಅವರನ್ನು ಕಾರ್ನಾಡರು ಸಿನಿಮಾಗೆ ಪರಿಚಯಿಸಿದರು. ಅಂದಿನಿಂದ ಶಂಕರ್​​​​ನಾಗ್ ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಇಂದಿಗೂ ಜನರ ಮನಸ್ಸಲ್ಲಿ ಅದರಲ್ಲೂ ಆಟೋಚಾಲಕರ ಮನಸ್ಸಲ್ಲಿ ಉಳಿದಿದ್ದಾರೆ. ಕಾರ್ನಾಡರು ನಿರ್ದೇಶಿಸಿದ ಅತ್ಯುತ್ತಮ ಚಿತ್ರಗಳಲ್ಲಿ ಈ ಚಿತ್ರವೂ ಒಂದು. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡಾ ಬಂದಿದೆ.

ಇಂದು ಬಾರದ ಲೋಕಕ್ಕೆ ಗಿರೀಶ್ ಕಾರ್ನಾಡರು ಪ್ರಯಾಣ ಬೆಳೆಸಿದ್ದಾರೆ. ಇದೀಗ ಗಿರೀಶ್ ಕಾರ್ನಾಡರ ಅಗಲಿಕೆಯಿಂದ ಸಾಹಿತ್ಯ ಲೋಕ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

Intro:ವಿಷ್ಣುವರ್ಧನ್, ಶಂಕರ್ ನಾಗ್‌ರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಇವ್ರೇ!!

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ನಟ ಗಿರೀಶ್‌ ಕಾರ್ನಾಡ್‌ ಇಂದು
ವಿಧಿವಶರಾಗಿದ್ದಾರೆ. ಬೆಂಗಳೂರಿನ ಲ್ಯಾವಿಲ್ಲೆ ರಸ್ತೆಯ ನಿವಾಸದಲ್ಲಿ ಸೋಮವಾರ 81 ವರ್ಷದ ಗಿರೀಶ್‌ ಕಾರ್ನಾಡ್‌ ಕೊನೆಯುಸಿರೆಳೆದಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಕಳೆದ 1 ತಿಂಗಳಿನಿಂದ ಬಳಲುತ್ತಿದ್ದ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ನಾಟಕ,ಸಿನಿಮಾ, ಸಾಹಿತ್ಯ ಕ್ಷೇತ್ರದಲ್ಲಿಒ ತನ್ನದೇ ಛಾಪು ಮೂಡಿಸಿರುವ ಗಿರೀಶ್ ಕಾರ್ನಾಡ್ ಕನ್ನಡ ಚಿತ್ರರಂಗಕ್ಕೆ ಇಬ್ಬರು, ದಿಗ್ಗಜ ನಟರನ್ನ ಪರಿಚಯಿಸಿದ ಕೀರ್ತಿ ಇವ್ರಿಗೆ ಸಲ್ಲುತ್ತೆ...

ಒಬ್ರು ಸಾಹಸ ಸಿಂಹ ಮತ್ತೊಬ್ರು ಕರಾಟೆ ಕಿಂಗ್
ಹೌದು ಕನ್ನಡ ಚಿತ್ರರಂಗದಲ್ಲಿ ರಾಮಾಚಾರಿಯಾಗಿ ಪ್ರಖ್ಯಾತಿ ಹೊಂದಿದ್ದ, ಸಾಹಸ ಸಿಂಹ ವಿಷ್ಣುವರ್ಧನ್, ಈ ಸಿನಿಮಾಕ್ಕಿಂತ ಮುಂಚೆ ಒಂದು ಸಿನಿಮಾದಲ್ಲಿ ಅಭಿನಯಿಸಿದ್ರು.ಹಾಗೇ ಕರಾಟೆ ಕಿಂಗ್ ಅವ್ರರನ್ನ ಗಿರೀಶ್ ಕರ್ನಾಡ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಿಸಿದ್ರು..

Body:ವಂಶವೃಕ್ಷ ಚಿತ್ರದಿಂದ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ವಿಷ್ಣುವರ್ಧನ್!!
1971 ರಲ್ಲಿ ಬಂದಿದ್ದ ವಂಶವೃಕ್ಷ ಸಿನಿಮಾ ಗಿರೀಶ್ ಕಾರ್ನಾಡ್ ಅವರ ಮೊದಲ ನಿರ್ದೇಶನದ ಸಿನಿಮಾ. ವಿಶೇಷವೆಂದರೆ ಈ ಚಿತ್ರದ ಮೂಲ್ಕ ಒಬ್ಬ ಸ್ಪುರದ್ರೂಪಿ ಹುಡ್ಗನನ್ನ ವಂಶವೃಕ್ಷ ಚಿತ್ರದ ಮೂಲ್ಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಾರೆ...ಈ ನಟ ಮುಂದೆ ಒಂದು ದಿಗ್ಗಜ ನಟರಲ್ಲಿ ಒಬ್ಬರಾಗಿ ಉಳಿಯುತ್ತಾರೆ ಅನ್ನೋದು ಸ್ವತಃ ಆ ನಟನಿಗೂ ಗೊತ್ತಿರಲಿಲ್ಲ..ಅವ್ರೇ ಸಾಹಸ ಸಿಂಹ ವಿಷ್ಣುವರ್ಧನ್...ಹೌದು ವಿಷ್ಣುವರ್ಧನ್ ಅಭಿನಯಿಸಿದ ಚೊಚ್ಚಲ ಸಿನಿಮಾ ವಂಶವೃಕ್ಷ...ಗಿರೀಶ್ ಕಾರ್ನಾಡ್ ನಿರ್ದೇಶನದ ಈ ಚಿತ್ರದಲ್ಲಿ, ಸಾಹಸ ಸಿಂಹ ವಿಷ್ಣುವರ್ಧನ್ ರಿಗೆ ಮೊದಲು ಅವಕಾಶ ನೀಡಿದ್ದು ಅನ್ನೋದು ಹೆಮ್ಮೆಯ ವಿಷ್ಯ...
ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿ ಶಂಕರ್ ಮಯ!
ಸಾಹಸ ಸಿಂಹ ವಿಷ್ಣುವರ್ಧನ್ ನಂತ್ರ, ಗಿರೀಶ್ ಕಾರ್ನಾಡ್ ಚಿತ್ರರಂಗಕ್ಕೆ ,ಮತ್ತೊಬ್ಬ ವೇರಿ ಟ್ಯಾಲೆಟೆಂಡ್ ನಟನನ್ನ ಕೊಡುಗೆಯಾಗಿ ನೀಡ್ತಾರೆ..1978 ರಲ್ಲಿ ಬಿಡುಗಡೆಯಾಗಿದ್ದ ಒಂದಾನೊಂದು ಕಾಲದಲ್ಲಿ, ಸಿನಿಮಾದಲ್ಲಿ, ಗಟ್ಟ ಬಿಡ್ಡು, ಜುಟ್ಟು ಕಟ್ಟೊ ಥೇಟ್ ಕಾಡು ಜನರ ಹಾಗೇ ಜನರ ಮನಸ್ಸು ಗೆದ್ದ ನಟ ಕರಾಟೆ ಕಿಂಗ್ ಶಂಕರ್ ನಾಗ್...ಹೌದು ಶಂಕರ್ ನಾಗ್ ಕಾರಾಟೆ ಕಿಂಗ್ ಆಗೊದಿಕ್ಕೆ ಮುಖ್ಯ ಕಾರಣ, ಗಿರೀಶ್ ಕಾರ್ನಾಡ್ ಅಂದು ಈ ಸಿನಿಮಾಕ್ಕೆ ಆಯ್ಕೆ ಮಾಡಿದ್ದು.ಗಿರೀಶ್ ಕಾರ್ನಾಡ್ ನಿರ್ದೇಶನದ ಈ ಚಿತ್ರದಲ್ಲಿ, ಶಂಕರ್ ನಾಗ್ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಎದುರು ಬಂದಿದ್ದರು.ಅಂದಿನಿಂದ ಶಂಕರ್ ನಾಗ್ ಕನ್ನಡ ಚಿತ್ರರಂಗದ ಧೃವ ತಾರೆಯಾಗಿ ಇವತ್ತಿಗೂ, ಕೋಟ್ಯಾಂತರ ಆಟೋ ಡ್ರೈವರ್ ಮನಸ್ಸಿನಲ್ಲಿ ಉಳಿದಿದ್ದಾರೆ...ಕಾರ್ನಾಡರ ನಿರ್ದೇಶನ ಮಾಡಿದ, ಅತ್ಯುತ್ತಮ ಚಿತ್ರಗಳಲ್ಲಿ ಈ ಚಿತ್ರವೂ ಒಂದು..ಅಂದಹಾಗೆ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದಿದೆ.ಸದ್ಯ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿರೋ ಗಿರೀಶ್ ಕಾರ್ನಾಡ್, ಅದ್ಭುತ ಪ್ರತಿಭೆಯ ನಟರನ್ನ ಪರಿಚಯಿಸಿದ ಹೆಗ್ಗಳಿಕೆ ಇವ್ರಿಗೆ ಸಲ್ಲುತ್ತೆ...Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.