ETV Bharat / sitara

ಸಂಕ್ರಾಂತಿ ಸಂಭ್ರಮ...ಕಿರುತೆರೆಯಲ್ಲಿ ಹಿಟ್ ಸಿನಿಮಾಗಳ ಸುಗ್ಗಿ

ಇತ್ತೀಚೆಗೆ ತೆರೆಕಂಡ ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ನಟನೆಯ ಬ್ಲಾಕ್​ ಬಸ್ಟರ್ ಸಿನಿಮಾ 'ಬ್ರಹ್ಮಚಾರಿ' ಕೂಡಾ ಪ್ರಸಾರವಾಗಲಿದೆ. ಉದಯ ಟಿವಿಯಲ್ಲಿ ಈ ಸಿನಿಮಾ ಪ್ರಸಾರವಾಗುತ್ತಿದೆ. ನೀವು ಮನೆಯಲ್ಲೇ ಕುಳಿತು ಈ ಕಾಮಿಡಿ ಸಿನಿಮಾವನ್ನು ಎಂಜಾಯ್ ಮಾಡಬಹುದು.

author img

By

Published : Jan 10, 2020, 9:59 PM IST

bramhachari
ಅದಿತಿ ಪ್ರಭುದೇವ, ನೀನಾಸಂ ಸತೀಶ್

ಹಿರಿತೆರೆಯಲ್ಲಿ ತೆರೆಕಂಡಿರುವ ಜನಪ್ರಿಯ ಸಿನಿಮಾಗಳು ಕಿರಿತೆರೆಯಲ್ಲಿ ಪ್ರಸಾರವಾಗುವುದು ಮಾಮೂಲು ಸಂಗತಿ. ಸಂಕ್ರಾಂತಿ ಸಡಗರಕ್ಕಾಗಿ ಇದೇ ಭಾನುವಾರ ಜೀ ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್​' ಸಿನಿಮಾ ಪ್ರಸಾರವಾಗುತ್ತಿರುವುದು ಕಿರುತೆರೆಪ್ರಿಯರ ಸಂತೋಷಕ್ಕೆ ಕಾರಣವಾಗಿದೆ.

ಇನ್ನು ಭಾನುವಾರವೇ ಇತ್ತೀಚೆಗೆ ತೆರೆಕಂಡ ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ನಟನೆಯ ಬ್ಲಾಕ್​ ಬಸ್ಟರ್ ಸಿನಿಮಾ 'ಬ್ರಹ್ಮಚಾರಿ' ಕೂಡಾ ಪ್ರಸಾರವಾಗಲಿದೆ. ಉದಯ ಟಿವಿಯಲ್ಲಿ ಈ ಸಿನಿಮಾ ಪ್ರಸಾರವಾಗುತ್ತಿದೆ. ನೀವು ಮನೆಯಲ್ಲೇ ಕುಳಿತು ಈ ಕಾಮಿಡಿ ಸಿನಿಮಾವನ್ನು ಎಂಜಾಯ್ ಮಾಡಬಹುದು. ಚಿತ್ರದಲ್ಲಿ ರಾಮ ಭಕ್ತ ರಾಮು ಆಗಿ ನೀನಾಸಂ ಸತೀಶ್ ಅಭಿನಯಿಸಿದ್ದರೆ, ಬರಹಗಾರ್ತಿ ಸುನೀತ ಕೃಷ್ಣಸ್ವಾಮಿ ಪಾತ್ರಕ್ಕೆ ಅದಿತಿ ಪ್ರಭುದೇವ ಬಣ್ಣ ಹಚ್ಚಿದ್ದಾರೆ. ಅವರಿಬ್ಬರೂ ಪರಿಚಯವಾಗುವುದು ಹೇಗೆ, ಮದುವೆಯಾಗುವುದು ಹೇಗೆ, ಅವರ ಮುಂದಿನ ಜೀವನ ಯಾವ ರೀತಿಯಲ್ಲಿ ಹೋಗುತ್ತದೆ ಎಂಬುದನ್ನು ತಿಳಿಯಬೇಕಾದರೆ ಬ್ರಹ್ಮಚಾರಿ ಸಿನಿಮಾ ನೋಡಲೇ ಬೇಕು. ಕಳೆದ ವರ್ಷ ನವೆಂಬರ್​​​​​​ನಲ್ಲಿ ಬಿಡುಗಡೆಯಾದ 'ಬ್ರಹ್ಮಚಾರಿ' ಸಿನಿಮಾವನ್ನು ಚಂದ್ರ ಮೋಹನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನೀನಾಸಂ ಸತೀಶ್, ಅದಿತಿ ಪ್ರಭುದೇವ, ಅಚ್ಯುತ್ ಕುಮಾರ್, ಶಿವರಾಜ್​ ಕೆ.ಆರ್. ಪೇಟೆ, ಹಿರಿಯ ನಟ ದತ್ತಾತ್ರೇಯ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

ಹಿರಿತೆರೆಯಲ್ಲಿ ತೆರೆಕಂಡಿರುವ ಜನಪ್ರಿಯ ಸಿನಿಮಾಗಳು ಕಿರಿತೆರೆಯಲ್ಲಿ ಪ್ರಸಾರವಾಗುವುದು ಮಾಮೂಲು ಸಂಗತಿ. ಸಂಕ್ರಾಂತಿ ಸಡಗರಕ್ಕಾಗಿ ಇದೇ ಭಾನುವಾರ ಜೀ ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್​' ಸಿನಿಮಾ ಪ್ರಸಾರವಾಗುತ್ತಿರುವುದು ಕಿರುತೆರೆಪ್ರಿಯರ ಸಂತೋಷಕ್ಕೆ ಕಾರಣವಾಗಿದೆ.

ಇನ್ನು ಭಾನುವಾರವೇ ಇತ್ತೀಚೆಗೆ ತೆರೆಕಂಡ ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ನಟನೆಯ ಬ್ಲಾಕ್​ ಬಸ್ಟರ್ ಸಿನಿಮಾ 'ಬ್ರಹ್ಮಚಾರಿ' ಕೂಡಾ ಪ್ರಸಾರವಾಗಲಿದೆ. ಉದಯ ಟಿವಿಯಲ್ಲಿ ಈ ಸಿನಿಮಾ ಪ್ರಸಾರವಾಗುತ್ತಿದೆ. ನೀವು ಮನೆಯಲ್ಲೇ ಕುಳಿತು ಈ ಕಾಮಿಡಿ ಸಿನಿಮಾವನ್ನು ಎಂಜಾಯ್ ಮಾಡಬಹುದು. ಚಿತ್ರದಲ್ಲಿ ರಾಮ ಭಕ್ತ ರಾಮು ಆಗಿ ನೀನಾಸಂ ಸತೀಶ್ ಅಭಿನಯಿಸಿದ್ದರೆ, ಬರಹಗಾರ್ತಿ ಸುನೀತ ಕೃಷ್ಣಸ್ವಾಮಿ ಪಾತ್ರಕ್ಕೆ ಅದಿತಿ ಪ್ರಭುದೇವ ಬಣ್ಣ ಹಚ್ಚಿದ್ದಾರೆ. ಅವರಿಬ್ಬರೂ ಪರಿಚಯವಾಗುವುದು ಹೇಗೆ, ಮದುವೆಯಾಗುವುದು ಹೇಗೆ, ಅವರ ಮುಂದಿನ ಜೀವನ ಯಾವ ರೀತಿಯಲ್ಲಿ ಹೋಗುತ್ತದೆ ಎಂಬುದನ್ನು ತಿಳಿಯಬೇಕಾದರೆ ಬ್ರಹ್ಮಚಾರಿ ಸಿನಿಮಾ ನೋಡಲೇ ಬೇಕು. ಕಳೆದ ವರ್ಷ ನವೆಂಬರ್​​​​​​ನಲ್ಲಿ ಬಿಡುಗಡೆಯಾದ 'ಬ್ರಹ್ಮಚಾರಿ' ಸಿನಿಮಾವನ್ನು ಚಂದ್ರ ಮೋಹನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನೀನಾಸಂ ಸತೀಶ್, ಅದಿತಿ ಪ್ರಭುದೇವ, ಅಚ್ಯುತ್ ಕುಮಾರ್, ಶಿವರಾಜ್​ ಕೆ.ಆರ್. ಪೇಟೆ, ಹಿರಿಯ ನಟ ದತ್ತಾತ್ರೇಯ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

Intro:Body: ಇತ್ತೀಚೆಗಷ್ಟೇ ಹಿರಿತೆರೆಯಲ್ಲಿ ತೆರೆಕಂಡಿರುವಂತಹ ಜನಪ್ರಿಯ ಚಿತ್ರಗಳು ಕಿರಿತೆರೆಯಲ್ಲಿ ಪ್ರಸಾರವಾಗುವುದು ಮಾಮೂಲಿ ಸಂಗತಿ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಝೀ ಕನ್ನಡದಲ್ಲಿ ಇದೇ ಆದಿತ್ಯವಾರ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಪ್ರಸಾರವಾಗುತ್ತಿರುವುದು ಕಿರುತೆರೆ ಪ್ರಿಯರ ಸಂತಸವನ್ನು ಮಗದಷ್ಟು ಹೆಚ್ಚಿಸಿದೆ.

ಇದರ ಜೊತೆಗೆ ಇದೇ ದಿನ ಮತ್ತೊಂದು ಚಲನಚಿತ್ರವೂ ಕೂಡಾ ಪ್ರಸಾರವಾಗಲಿದೆ. ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೊತೆಯಾಗಿ ನಟಿಸಿರುವಂತಹ ಬ್ಲಾಕ್ ಬಾಸ್ಟರ್ ಸಿನಿಮಾ ಬ್ರಹ್ಮಚಾರಿಯೂ ಕೂಡಾ ಇದೇ ದಿನ ಪ್ರಸಾರವಾಗಲಿದೆ.

ರಾಮ ಭಕ್ತ ರಾಮು ಆಗಿ ನೀನಾಸಂ ಸತೀಶ್ ಅಭಿನಯಿಸಿದ್ದರೆ, ಬರಹಗಾರ್ತಿ ಸುನೀತಾ ಕೃಷ್ಣಸ್ವಾಮಿ ಪಾತ್ರಕ್ಕೆ ಅದಿತಿ ಪ್ರಭುದೇವ ಬಣ್ಣ ಹಚ್ಚಿದ್ದಾರೆ. ಅವರಿಬ್ಬರೂ ಪರಿಚಯವಾಗುವುದು ಹೇಗೆ, ಮದುವೆಯಾಗುವುದು ಹೇಗೆ, ಅವರ ಮುಂದಿನ ಜೀವನ ಯಾವ ರೀತಿಯಲ್ಲಿ ಹೋಗುತ್ತದೆ ಎಂಬುದನ್ನು ತಿಳಿಯಬೇಕಾದರೆ ಬ್ರಹ್ಮಚಾರಿ ಸಿನಿಮಾ ನೋಡಲೇ ಬೇಕು.

ಕಳೆದ ನವೆಂಬರ್ ನಲ್ಲಿ ಬಿಡುಗಡೆಯಾದ ಚಂದ್ರ ಮೋಹನ್ ಅವರ ಬ್ರಹ್ಮಚಾರಿ ಚಿತ್ರದಲ್ಲಿ ನೀನಾಸಂ ಸತೀಶ್, ಅದಿತಿ ಪ್ರಭುದೇವ ಹೊರತಾಗಿ ಶಿವರಾಜ್ ಕೆ ಆರ್ ಪೇಟೆ, ದತ್ತಣ್ಣ ಮತ್ತು ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ.


https://www.instagram.com/p/B7IdEDfH1Fu/?igshid=1ook7xnlredndConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.