ETV Bharat / sitara

ಅಭಿಮಾನಿಗಳ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ ದುನಿಯಾ ವಿಜಯ್

author img

By

Published : Mar 8, 2021, 5:37 PM IST

ಮಾರ್ಚ್ 7 ರಂದು ಕೋಲಾರದ ಮಾಲೂರಿನಲ್ಲಿ ಏರ್ಪಡಿಸಲಾಗಿದ್ದ ಕ್ರಿಕೆಟ್ ಟೂರ್ನಿಯಲ್ಲಿ 'ಸಲಗ' ತಂಡ ವಿಜಯ ಸಾಧಿಸಿದೆ. ಜಿಲ್ಲೆಯಾದ್ಯಾದ್ಯಂತ ಸಾವಿರಾರು ಸಂಖ್ಯೆಯ ವಿಜಯ್ ಅಭಿಮಾನಿಗಳು ಈ ಮ್ಯಾಚ್ ನೋಡಲು ಆಗಮಿಸಿದ್ದರು. ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿರುವ 'ಸಲಗ' ಸಿನಿಮಾ ಏಪ್ರಿಲ್​​​ನಲ್ಲಿ ತೆರೆ ಕಾಣಲಿದೆ.

Salaga cricket tournament
ಸಲಗ ಕ್ರಿಕೆಟ್ ಟೂರ್ನಿ

ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ 'ಸಲಗ'. ಇದು ವಿಜಯ್ ನಿರ್ದೇಶನದ ಮೊದಲ ಚಿತ್ರ ಎಂಬ ವಿಶೇಷ ಒಂದೆಡೆಯಾದರೆ, ಸಿನಿಮಾ ಮೇಕಿಂಗ್​​ನಿಂದ ಕೂಡಾ ಸದ್ದು ಮಾಡುತ್ತಿದೆ. ಲಾಕ್​ಡೌನ್ ತೆರವುಗೊಳಿದ ನಂತರ 'ಸಲಗ' ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತಾದರೂ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

'ಸಲಗ' ಕ್ರಿಕೆಟ್ ಟೂರ್ನಿ

ಇದನ್ನೂ ಓದಿ: 'ರಾಬರ್ಟ್' ಮೊದಲ ಮೇಕಿಂಗ್ ವಿಡಿಯೋ ರಿವೀಲ್​​​​...ತೆರೆ ಹಿಂದಿನ ರಹಸ್ಯ ಬಿಚ್ಚಿಟ್ಟ ಚಿತ್ರತಂಡ

'ಸಲಗ' ಚಿತ್ರದ ಕ್ರೇಜ್ ಹೇಗಿದೆ ಎಂದರೆ, ವಿಜಯ್ ಅಭಿಮಾನಿಗಳು ಚಿತ್ರದ ಹೆಸರಿನಲ್ಲಿ ನಿನ್ನೆಯಷ್ಟೇ ಕೋಲಾರದ ಮಾಲೂರಿನಲ್ಲಿ ಕ್ರಿಕೆಟ್ ಟೂರ್ನಿಯೊಂದನ್ನು ಏರ್ಪಡಿಸಿತ್ತು. ವಿಜಯ್ ಅಭಿಮಾನಿ ಸೇವಾ ಸಮಿತಿ ಈ ಕ್ರಿಕೆಟ್ ಟೂರ್ನಿಮೆಂಟ್ ಏರ್ಪಡಿಸಿತ್ತು. ಮಾಲೂರಿನ ಹೋಂಡಾ‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಈ ಪಂದ್ಯವನ್ನು ನೋಡಲು ಕೋಲಾರ ಜಿಲ್ಲೆಯ ವಿವಿಧೆಡೆಯಿಂದ ಸಾವಿರಕ್ಕೂ ಹೆಚ್ಚು ದುನಿಯಾ ವಿಜಯ್ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಜಮಾಯಿಸಿದ್ದರು. ಈ ಕ್ರಿಕೆಟ್ ಪಂದ್ಯದಲ್ಲಿ 'ಸಲಗ' ತಂಡ ವಿಜಯ ಸಾಧಿಸಿದೆ. ದುನಿಯಾ ವಿಜಯ್​​, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸೇರಿದಂತೆ 'ಸಲಗ' ಚಿತ್ರತಂಡ ಗೆಲುವಿನ ಖುಷಿಯನ್ನು ಡಾ. ರಾಜ್​​​​​​​​​ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಪುತ್ಥಳಿಗೆ ಮಾಲೆ ಅರ್ಪಿಸಿ ಗೌರವ ಸಲ್ಲಿಸುವ ಮೂಲಕ ಸಂಭ್ರಮಿಸಿದರು. ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ದುನಿಯಾ ವಿಜಯ್ ನೋಡಲು ನೂಕು ನುಗ್ಗಲು ಉಂಟಾಗಿತ್ತು. ಮೆಚ್ಚಿನ ನಟನಿಗೆ ಹಣ್ಣಿನ ಹಾರ ಹಾಕುವ ಮೂಲಕ ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ. 'ಸಲಗ' ಸಿನಿಮಾ ಏಪ್ರಿಲ್​​​ನಲ್ಲಿ ತೆರೆ ಕಾಣಲಿದೆ.

ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ 'ಸಲಗ'. ಇದು ವಿಜಯ್ ನಿರ್ದೇಶನದ ಮೊದಲ ಚಿತ್ರ ಎಂಬ ವಿಶೇಷ ಒಂದೆಡೆಯಾದರೆ, ಸಿನಿಮಾ ಮೇಕಿಂಗ್​​ನಿಂದ ಕೂಡಾ ಸದ್ದು ಮಾಡುತ್ತಿದೆ. ಲಾಕ್​ಡೌನ್ ತೆರವುಗೊಳಿದ ನಂತರ 'ಸಲಗ' ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತಾದರೂ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

'ಸಲಗ' ಕ್ರಿಕೆಟ್ ಟೂರ್ನಿ

ಇದನ್ನೂ ಓದಿ: 'ರಾಬರ್ಟ್' ಮೊದಲ ಮೇಕಿಂಗ್ ವಿಡಿಯೋ ರಿವೀಲ್​​​​...ತೆರೆ ಹಿಂದಿನ ರಹಸ್ಯ ಬಿಚ್ಚಿಟ್ಟ ಚಿತ್ರತಂಡ

'ಸಲಗ' ಚಿತ್ರದ ಕ್ರೇಜ್ ಹೇಗಿದೆ ಎಂದರೆ, ವಿಜಯ್ ಅಭಿಮಾನಿಗಳು ಚಿತ್ರದ ಹೆಸರಿನಲ್ಲಿ ನಿನ್ನೆಯಷ್ಟೇ ಕೋಲಾರದ ಮಾಲೂರಿನಲ್ಲಿ ಕ್ರಿಕೆಟ್ ಟೂರ್ನಿಯೊಂದನ್ನು ಏರ್ಪಡಿಸಿತ್ತು. ವಿಜಯ್ ಅಭಿಮಾನಿ ಸೇವಾ ಸಮಿತಿ ಈ ಕ್ರಿಕೆಟ್ ಟೂರ್ನಿಮೆಂಟ್ ಏರ್ಪಡಿಸಿತ್ತು. ಮಾಲೂರಿನ ಹೋಂಡಾ‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಈ ಪಂದ್ಯವನ್ನು ನೋಡಲು ಕೋಲಾರ ಜಿಲ್ಲೆಯ ವಿವಿಧೆಡೆಯಿಂದ ಸಾವಿರಕ್ಕೂ ಹೆಚ್ಚು ದುನಿಯಾ ವಿಜಯ್ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಜಮಾಯಿಸಿದ್ದರು. ಈ ಕ್ರಿಕೆಟ್ ಪಂದ್ಯದಲ್ಲಿ 'ಸಲಗ' ತಂಡ ವಿಜಯ ಸಾಧಿಸಿದೆ. ದುನಿಯಾ ವಿಜಯ್​​, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸೇರಿದಂತೆ 'ಸಲಗ' ಚಿತ್ರತಂಡ ಗೆಲುವಿನ ಖುಷಿಯನ್ನು ಡಾ. ರಾಜ್​​​​​​​​​ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಪುತ್ಥಳಿಗೆ ಮಾಲೆ ಅರ್ಪಿಸಿ ಗೌರವ ಸಲ್ಲಿಸುವ ಮೂಲಕ ಸಂಭ್ರಮಿಸಿದರು. ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ದುನಿಯಾ ವಿಜಯ್ ನೋಡಲು ನೂಕು ನುಗ್ಗಲು ಉಂಟಾಗಿತ್ತು. ಮೆಚ್ಚಿನ ನಟನಿಗೆ ಹಣ್ಣಿನ ಹಾರ ಹಾಕುವ ಮೂಲಕ ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ. 'ಸಲಗ' ಸಿನಿಮಾ ಏಪ್ರಿಲ್​​​ನಲ್ಲಿ ತೆರೆ ಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.