ETV Bharat / sitara

ದರ್ಶನ್ ಬಲಗೈ ಮರು ಶಸ್ತ್ರಚಿಕಿತ್ಸೆ... ಈ ಬಗ್ಗೆ 'ಒಡೆಯ' ಹೇಳಿದ್ದೇನು?

ಅಪಘಾತ ಆದ ಕೆಲವು ದಿನಗಳ ನಂತರ ನಾನು ಶೂಟಿಂಗ್​​ನಲ್ಲಿ ಪಾಲ್ಗೊಂಡಿದ್ದು ವೈದ್ಯರಿಗೆ ಇಷ್ಟ ಆಗಿಲ್ಲ. ಇದೀಗ ಮತ್ತೆ ಕೈಗೆ ಶಸ್ತ್ರಚಿಕಿತ್ಸೆ ಮಾಡಬೇಕು. ರಾಡ್ ಹೊರ ತೆಗೆದ ನಂತರ ಮತ್ತೆ ಮೂರು ತಿಂಗಳು ರೆಸ್ಟ್ ಮಾಡಬೇಕು ಎಂದರೆ ಕಷ್ಟವಾಗುತ್ತದೆ ಎಂದು ದರ್ಶನ್ ಹೇಳಿದ್ದಾರೆ.

author img

By

Published : Dec 2, 2019, 5:12 PM IST

Darshan talked about right hand surgery
ದರ್ಶನ್

ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಸಿನಿಮಾ ಇದೇ ತಿಂಗಳ 12ರಂದು ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ವಿಷಯ ತಿಳಿಸಲು ನಿನ್ನೆ 'ಒಡೆಯ' ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿತ್ತು. ಈ ವೇಳೆ ಚಿತ್ರದ ಮೂರು ಹಾಡುಗಳು ಹಾಗೂ ಟ್ರೇಲರನ್ನು ಕೂಡಾ ಬಿಡುಗಡೆ ಮಾಡಲಾಯಿತು.

ನಂತರ ತಮ್ಮ ಬಲಗೈ ಮರು ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ದರ್ಶನ್​​​, ಕಳೆದ ವರ್ಷ ಕಾರು ಅಪಘಾತವಾಗಿದ್ದ ವೇಳೆ ಬಲಗೈಗೆ ಶಸ್ತ್ರಚಿಕಿತ್ಸೆ ಮಾಡಿ ಪುಟ್ಟ ರಾಡ್ ಅಳವಡಿಸಲಾಗಿತ್ತು. ಇದೀಗ ಆ ರಾಡನ್ನು ಮತ್ತೆ ಚಿಕಿತ್ಸೆ ಮಾಡಿ ಹೊರ ತೆಗೆಯಬೇಕಿದೆ. ರಾಡ್ ತೆಗೆದ ನಂತರ ಮತ್ತೆ ಮೂರು ತಿಂಗಳು ರೆಸ್ಟ್ ಮಾಡಬೇಕು. ವೈದರು ಈ ಬಗ್ಗೆ ನನಗೆ ಒಂದು ವರ್ಷದಿಂದ ಕೇಳುತ್ತಿದ್ದಾರೆ. ಅಪಘಾತ ಆದ ಕೆಲವು ದಿನಗಳ ನಂತರ ನಾನು ಶೂಟಿಂಗ್​​ನಲ್ಲಿ ಪಾಲ್ಗೊಂಡಿದ್ದು ವೈದ್ಯರಿಗೆ ಇಷ್ಟ ಆಗಿಲ್ಲ. ಸಾಹಸ ಸನ್ನಿವೇಶಗಳಲ್ಲಿ ಪಾಲ್ಗೊಂಡಾಗ ಕೈ ಮರಗಟ್ಟಿದ ಹಾಗೆ ಆಗುತ್ತಿತ್ತು. ನಿರ್ಮಾಪಕ ಹಾಗೂ ಚಿತ್ರತಂಡದ ಪರಿಸ್ಥಿತಿ ಬಗ್ಗೆ ಯೋಚಿಸಿ ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಈಗ ಮತ್ತೆ ರೆಸ್ಟ್​ ಮಾಡಬೇಕು. ಶೂಟಿಂಗ್​​ಗೆ ಹೋಗಬಾರದು ಎಂದರೆ ಸ್ವಲ್ಪ ಕಷ್ಟವೇ ಎಂದರು.

ಇನ್ನು ಡಿಸೆಂಬರ್​ 6ರಂದು 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಸೆಟ್ಟೇರುತ್ತಿದೆ. ಒಡೆಯ ತಮಿಳಿನ ರೀಮೇಕ್ ನಿಜ. ಆದರೆ ನಾವು ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ತಮಿಳು ಚಿತ್ರ 3:15 ನಿಮಿಷ ಅವಧಿ ಇತ್ತು. ಕನ್ನಡಕ್ಕೆ ತರುವಾಗ ನಮ್ಮ ಸಂಸ್ಕೃತಿಗೆ ಒಗ್ಗಿಸಿಕೊಂಡು 2:40 ನಿಮಿಷಕ್ಕೆ ಸಿದ್ಧ ಮಾಡಿದ್ದೇವೆ. ನನಗೆ ಇಲ್ಲಿ ಎರಡು ಶೇಡ್ ಇರುವ ಪಾತ್ರ ಇದೆ. ಇಡೀ ಕುಟುಂಬಕ್ಕೆ ಇದೊಂದು ಪಕ್ಕಾ ಮನರಂಜನೆ ನೀಡುವ ಸಿನಿಮಾ ಎಂದು ದರ್ಶನ್ ಹೇಳಿದರು.

ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಸಿನಿಮಾ ಇದೇ ತಿಂಗಳ 12ರಂದು ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ವಿಷಯ ತಿಳಿಸಲು ನಿನ್ನೆ 'ಒಡೆಯ' ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿತ್ತು. ಈ ವೇಳೆ ಚಿತ್ರದ ಮೂರು ಹಾಡುಗಳು ಹಾಗೂ ಟ್ರೇಲರನ್ನು ಕೂಡಾ ಬಿಡುಗಡೆ ಮಾಡಲಾಯಿತು.

ನಂತರ ತಮ್ಮ ಬಲಗೈ ಮರು ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ದರ್ಶನ್​​​, ಕಳೆದ ವರ್ಷ ಕಾರು ಅಪಘಾತವಾಗಿದ್ದ ವೇಳೆ ಬಲಗೈಗೆ ಶಸ್ತ್ರಚಿಕಿತ್ಸೆ ಮಾಡಿ ಪುಟ್ಟ ರಾಡ್ ಅಳವಡಿಸಲಾಗಿತ್ತು. ಇದೀಗ ಆ ರಾಡನ್ನು ಮತ್ತೆ ಚಿಕಿತ್ಸೆ ಮಾಡಿ ಹೊರ ತೆಗೆಯಬೇಕಿದೆ. ರಾಡ್ ತೆಗೆದ ನಂತರ ಮತ್ತೆ ಮೂರು ತಿಂಗಳು ರೆಸ್ಟ್ ಮಾಡಬೇಕು. ವೈದರು ಈ ಬಗ್ಗೆ ನನಗೆ ಒಂದು ವರ್ಷದಿಂದ ಕೇಳುತ್ತಿದ್ದಾರೆ. ಅಪಘಾತ ಆದ ಕೆಲವು ದಿನಗಳ ನಂತರ ನಾನು ಶೂಟಿಂಗ್​​ನಲ್ಲಿ ಪಾಲ್ಗೊಂಡಿದ್ದು ವೈದ್ಯರಿಗೆ ಇಷ್ಟ ಆಗಿಲ್ಲ. ಸಾಹಸ ಸನ್ನಿವೇಶಗಳಲ್ಲಿ ಪಾಲ್ಗೊಂಡಾಗ ಕೈ ಮರಗಟ್ಟಿದ ಹಾಗೆ ಆಗುತ್ತಿತ್ತು. ನಿರ್ಮಾಪಕ ಹಾಗೂ ಚಿತ್ರತಂಡದ ಪರಿಸ್ಥಿತಿ ಬಗ್ಗೆ ಯೋಚಿಸಿ ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಈಗ ಮತ್ತೆ ರೆಸ್ಟ್​ ಮಾಡಬೇಕು. ಶೂಟಿಂಗ್​​ಗೆ ಹೋಗಬಾರದು ಎಂದರೆ ಸ್ವಲ್ಪ ಕಷ್ಟವೇ ಎಂದರು.

ಇನ್ನು ಡಿಸೆಂಬರ್​ 6ರಂದು 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಸೆಟ್ಟೇರುತ್ತಿದೆ. ಒಡೆಯ ತಮಿಳಿನ ರೀಮೇಕ್ ನಿಜ. ಆದರೆ ನಾವು ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ತಮಿಳು ಚಿತ್ರ 3:15 ನಿಮಿಷ ಅವಧಿ ಇತ್ತು. ಕನ್ನಡಕ್ಕೆ ತರುವಾಗ ನಮ್ಮ ಸಂಸ್ಕೃತಿಗೆ ಒಗ್ಗಿಸಿಕೊಂಡು 2:40 ನಿಮಿಷಕ್ಕೆ ಸಿದ್ಧ ಮಾಡಿದ್ದೇವೆ. ನನಗೆ ಇಲ್ಲಿ ಎರಡು ಶೇಡ್ ಇರುವ ಪಾತ್ರ ಇದೆ. ಇಡೀ ಕುಟುಂಬಕ್ಕೆ ಇದೊಂದು ಪಕ್ಕಾ ಮನರಂಜನೆ ನೀಡುವ ಸಿನಿಮಾ ಎಂದು ದರ್ಶನ್ ಹೇಳಿದರು.

Intro:Body:

DArshan hand fracture


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.