ETV Bharat / sitara

ಮತ್ತೊಮ್ಮೆ ಸ್ನೇಹಿತರ ಜೊತೆ ಬೈಕ್ ರೈಡ್​​​​​​​​​​​​​​​​​​​​​​​ ಹೊರಟ ಸಾರಥಿ - Darshan and team Bandipura trip

ಕೆಲವು ದಿನಗಳ ಹಿಂದಷ್ಟೇ ಕೊಡಗಿನ ಸುಂದರ ತಾಣಗಳಿಗೆ ಸ್ನೇಹಿತರೊಂದಿಗೆ ಟ್ರಿಪ್ ಹೋಗಿ ಬಂದಿದ್ದ ದರ್ಶನ್, ಈಗ ಮತ್ತೊಮ್ಮೆ ಸ್ನೇಹಿತರೊಂದಿಗೆ ಚಾಮರಾಜನಗರದ ಬಂಡೀಪುರಕ್ಕೆ ಬೈಕ್ ರೈಡ್ ಹೊರಟಿದ್ದಾರೆ.

Darshan Bike trip again
ಮತ್ತೊಮ್ಮೆ ದರ್ಶನ್ ಬೈಕ್ ರೈಡ್
author img

By

Published : Dec 17, 2020, 12:07 PM IST

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರು ಆಗಾಗ ಬೈಕ್ ರೈಡಿಂಗ್​​​​ ಹಾಗೂ ಸೈಕ್ಲಿಂಗ್ ಹೋಗುವುದು ಕಾಮನ್ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಚಾಲೆಂಜಿಂಗ್ ಸ್ಟಾರ್ ತಮ್ಮ ಸ್ನೇಹಿತರೊಂದಿಗೆ ಮಡಿಕೇರಿ, ಕುಶಾಲನಗರ ಹಾಗೂ ಇನ್ನಿತರ ಸ್ಥಳಗಳಿಗೆ ಬೈಕ್​​​​ ರೈಡ್ ಹೋಗಿ ಎಂಜಾಯ್ ಮಾಡಿದ್ದರು. ಇದೀಗ ದರ್ಶನ್ ಮತ್ತೆ ಅದೇ ಟೀಮ್ ಜೊತೆ ಟ್ರಿಪ್ ಹೊರಟಿದ್ದಾರೆ.

2ನೇ ಬಾರಿಗೆ ದರ್ಶನ್ ಬೈಕ್ ಟ್ರಿಪ್

ಇದನ್ನೂ ಓದಿ: ನೆಟ್​​ಫ್ಲಿಕ್ಸ್​ನೊಂದಿಗೆ ಸಂಜಯ್ ಲೀಲಾ ಬನ್ಸಾಲಿ ಒಪ್ಪಂದ

ನಿನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್​ ದರ್ಶನ್, ಚಿಕ್ಕಣ್ಣ ಅವರ ಹೊಸ ಮೇಕೆ ಫಾರ್ಮ್​ಗೆ ಭೇಟಿ ನೀಡಿ ಬಂದಿದ್ದರು. ಗೆಳೆಯನಿಗೆ ಮೇಕೆ ಸಾಗಣೆ ಹಾಗೂ ಇನ್ನಿತರ ವಿಚಾರದ ಬಗ್ಗೆ ದರ್ಶನ್ ಟಿಪ್ಸ್ ನೀಡಿ ಬಂದಿದ್ದರು. ಈಗ ಮತ್ತೊಮ್ಮೆ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ನಿರ್ಮಾಪಕ ಉಮಾಪತಿ, ಪನ್ನಗಾಭರಣ ಸೇರಿದಂತೆ ಇನ್ನಿತರ ಸ್ನೇಹಿತರ ಜೊತೆ ಸೇರಿ ಬೈಕ್ ರೈಡ್ ಹೊರಟಿದ್ದಾರೆ. ಆದರೆ ಈ ಬಾರಿ ಅವರು ಬಂಡಿಪುರದ ಕಡೆ ಸವಾರಿ ಹೊರಟಿದ್ದಾರೆ. ಬಂಡಿಪುರ ಹಾಗೂ ಸುಂದರ ತಾಣಗಳಿಗೆ ಸುಮಾರು 4 ದಿನಗಳ ಕಾಲ ದರ್ಶನ್ ಹಾಗೂ ಸ್ನೇಹಿತರು ಹೊರಟಿದ್ದಾರೆ. ಇತ್ತೀಚೆಗಷ್ಟೇ ವೀರಮದಕರಿ ಸಿನಿಮಾ‌ ಚಿತ್ರೀಕರಣ ಮುಗಿಸಿರುವ ದರ್ಶನ್, ಈ ಟ್ರಿಪ್ ಮೂಲಕ ತಮಗೆ ಇಷ್ಟವಾದ ಬಂಡಿಪುರಕ್ಕೆ ಹೋಗಿದ್ದಾರೆ. ಬೆಂಗಳೂರಿನ ತಮ್ಮ ರಾಜರಾಜೇಶ್ವರಿ ನಗರದ ಮನೆ ಮುಂದೆ ನೀಲಿ ಜೀನ್ಸ್ ಹಾಗೂ ನೀಲಿ ಟಿ ಷರ್ಟ್​ ಧರಿಸಿ ದರ್ಶನ್ ಟೀಂ ಪೋಸ್​ ನೀಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರು ಆಗಾಗ ಬೈಕ್ ರೈಡಿಂಗ್​​​​ ಹಾಗೂ ಸೈಕ್ಲಿಂಗ್ ಹೋಗುವುದು ಕಾಮನ್ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಚಾಲೆಂಜಿಂಗ್ ಸ್ಟಾರ್ ತಮ್ಮ ಸ್ನೇಹಿತರೊಂದಿಗೆ ಮಡಿಕೇರಿ, ಕುಶಾಲನಗರ ಹಾಗೂ ಇನ್ನಿತರ ಸ್ಥಳಗಳಿಗೆ ಬೈಕ್​​​​ ರೈಡ್ ಹೋಗಿ ಎಂಜಾಯ್ ಮಾಡಿದ್ದರು. ಇದೀಗ ದರ್ಶನ್ ಮತ್ತೆ ಅದೇ ಟೀಮ್ ಜೊತೆ ಟ್ರಿಪ್ ಹೊರಟಿದ್ದಾರೆ.

2ನೇ ಬಾರಿಗೆ ದರ್ಶನ್ ಬೈಕ್ ಟ್ರಿಪ್

ಇದನ್ನೂ ಓದಿ: ನೆಟ್​​ಫ್ಲಿಕ್ಸ್​ನೊಂದಿಗೆ ಸಂಜಯ್ ಲೀಲಾ ಬನ್ಸಾಲಿ ಒಪ್ಪಂದ

ನಿನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್​ ದರ್ಶನ್, ಚಿಕ್ಕಣ್ಣ ಅವರ ಹೊಸ ಮೇಕೆ ಫಾರ್ಮ್​ಗೆ ಭೇಟಿ ನೀಡಿ ಬಂದಿದ್ದರು. ಗೆಳೆಯನಿಗೆ ಮೇಕೆ ಸಾಗಣೆ ಹಾಗೂ ಇನ್ನಿತರ ವಿಚಾರದ ಬಗ್ಗೆ ದರ್ಶನ್ ಟಿಪ್ಸ್ ನೀಡಿ ಬಂದಿದ್ದರು. ಈಗ ಮತ್ತೊಮ್ಮೆ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ನಿರ್ಮಾಪಕ ಉಮಾಪತಿ, ಪನ್ನಗಾಭರಣ ಸೇರಿದಂತೆ ಇನ್ನಿತರ ಸ್ನೇಹಿತರ ಜೊತೆ ಸೇರಿ ಬೈಕ್ ರೈಡ್ ಹೊರಟಿದ್ದಾರೆ. ಆದರೆ ಈ ಬಾರಿ ಅವರು ಬಂಡಿಪುರದ ಕಡೆ ಸವಾರಿ ಹೊರಟಿದ್ದಾರೆ. ಬಂಡಿಪುರ ಹಾಗೂ ಸುಂದರ ತಾಣಗಳಿಗೆ ಸುಮಾರು 4 ದಿನಗಳ ಕಾಲ ದರ್ಶನ್ ಹಾಗೂ ಸ್ನೇಹಿತರು ಹೊರಟಿದ್ದಾರೆ. ಇತ್ತೀಚೆಗಷ್ಟೇ ವೀರಮದಕರಿ ಸಿನಿಮಾ‌ ಚಿತ್ರೀಕರಣ ಮುಗಿಸಿರುವ ದರ್ಶನ್, ಈ ಟ್ರಿಪ್ ಮೂಲಕ ತಮಗೆ ಇಷ್ಟವಾದ ಬಂಡಿಪುರಕ್ಕೆ ಹೋಗಿದ್ದಾರೆ. ಬೆಂಗಳೂರಿನ ತಮ್ಮ ರಾಜರಾಜೇಶ್ವರಿ ನಗರದ ಮನೆ ಮುಂದೆ ನೀಲಿ ಜೀನ್ಸ್ ಹಾಗೂ ನೀಲಿ ಟಿ ಷರ್ಟ್​ ಧರಿಸಿ ದರ್ಶನ್ ಟೀಂ ಪೋಸ್​ ನೀಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.