ನೈಜ ಹಾಗೂ ವಾಸ್ತವಿಕ ಹಾಸ್ಯಕಥೆ ಹೊಂದಿರುವ ‘ದಾಮಾಯಣ’ ಸಿನಿಮಾ ಶೀಘ್ರದಲ್ಲೇ ತೆರೆ ಕಾಣಲಿದೆ. ಅದಕ್ಕೂ ಮುನ್ನ ಇಂದು ಓಣಂ ಹಬ್ಬದ ಪ್ರಯುಕ್ತ ಚಿತ್ರತಂಡ ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದೆ. ಇಂದು ಸಂಜೆ ಒಂದೂವರೆ ನಿಮಿಷ ಅವಧಿಯ ಟೀಸರ್ ಬಿಡುಗಡೆಯಾಗಲಿದೆ.
ಇದು ಮಂಗಳೂರು ಸೊಗಡಿನ ಸಿನಿಮಾ. ಇಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಈ ವರ್ಷ ಏಪ್ರಿಲ್ನಲ್ಲಿ ಚಿತ್ರ ಸೆಟ್ಟೇರಿತ್ತು. ಅಂದಿನಿಂದ ಸಿನಿಮಾ ಬಗ್ಗೆ ಚಿತ್ರರಸಿಕರು ಕುತೂಹಲ ಇಟ್ಟುಕೊಂಡಿದ್ದರು. ಈಗಾಗಲೇ ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ. ಸಿನಿಮಾ ಪ್ರಮೋಷನ್ಗಾಗಿ ಚಿತ್ರತಂಡ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪೋಸ್ಟರ್ ನೋಡಿ ಉದ್ಭವವಾಗುವ ಕೆಲವೊಂದು ಪ್ರಶ್ನೆಗಳಿಗೆ ಈ ಟೀಸರ್ ಉತ್ತರ ನೀಡಲಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಸಂಜೆ ಈ ಚಿತ್ರದ ಟೀಸರನ್ನು ಲೋಕಾರ್ಪಣೆ ಮಾಡಲಿದೆ. 'ಸೆವೆಂಟಿ ಸೆವೆನ್ ಸ್ಟುಡಿಯೋ ಬ್ಯಾನರ್' ಅಡಿ ಈ ಸಿನಿಮಾವನ್ನು ಶ್ರೀಮುಖ ನಿರ್ದೇಶಿಸಿದ್ದಾರೆ. ರಾಘವೇಂದ್ರ ಕುಡ್ಲ ಚಿತ್ರಕ್ಕೆ ಹಣ ಹೂಡಿದ್ದಾರೆ. ಮಂಗಳೂರು ಹಾಗೂ ಸುತ್ತಮುತ್ತ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಸಿದ್ದು ಜಿ.ಎಸ್. ಛಾಯಾಗ್ರಹಣವಿದ್ದರೆ ಕಾರ್ತಿಕ್ ಕೆ.ಎಂ. ಸಂಕಲನವಿದೆ. ಐದು ಹಾಡುಗಳಿಗೆ ಕೀರ್ತನ್ ಬಾಳಿಗ ಸಂಗೀತ ನಿರ್ದೇಶನ ಇದೆ.