ETV Bharat / sitara

ನಿಜ ಜೀವನದಲ್ಲೂ ಹೀರೋ ರೀತಿ ಇರಿ: ದಳಪತಿಗೆ ಛೀಮಾರಿ ಹಾಕಿ, ದಂಡ ವಿಧಿಸಿದ ಮದ್ರಾಸ್ ಹೈಕೋರ್ಟ್​​

ಕಾಲಿವುಡ್ ಸೂಪರ್​ಸ್ಟಾರ್ ದಳಪತಿ ವಿಜಯ್​ ಹೊಸದಾಗಿ ಕೊಂಡುಕೊಂಡ ಐಷಾರಾಮಿ ಇಂಪೋರ್ಟೆಡ್ ಕಾರು ವಿಚಾರಕ್ಕೆ ಮದ್ರಾಸ್ ಹೈಕೋರ್ಟ್ ದಂಡ ವಿಧಿಸಿದೆ.

author img

By

Published : Jul 13, 2021, 8:12 PM IST

Updated : Jul 13, 2021, 10:32 PM IST

Court fines Thalapathy Vijay and orders him to pay it to Chief Minister
ದಳಪತಿ ವಿಜಯ್​ಗೆ ಮದ್ರಾಸ್ ಹೈಕೋರ್ಟ್​ನಿಂದ ಛೀಮಾರಿ, ಒಂದು ಲಕ್ಷ ರೂ. ದಂಡ

ಚೆನ್ನೈ(ತಮಿಳುನಾಡು): ಕಾಲಿವುಡ್​ನ ಸೂಪರ್​ಸ್ಟಾರ್, ದಳಪತಿ ವಿಜಯ್​ಗೆ ಮದ್ರಾಸ್ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಆ ದಂಡದ ಮೊತ್ತವನ್ನು ತಮಿಳುನಾಡು ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ನೀಡಬೇಕೆಂದು ಆದೇಶಿಸಿದೆ.

ವಿಜಯ್​ಗೆ ಮೊದಲಿನಿಂದ ಕಾರುಗಳ ಮೇಲೆ ಕ್ರೇಜ್ ಹೆಚ್ಚಿದ್ದು, ಈಗಾಗಲೇ ವಿಜಯ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಹೊಸದಾಗಿ ಕೊಂಡುಕೊಂಡ ಐಷಾರಾಮಿ ಇಂಪೋರ್ಟೆಡ್ ಕಾರು ವಿಚಾರಕ್ಕೆ ಮದ್ರಾಸ್ ಹೈಕೋರ್ಟ್ ದಂಡ ವಿಧಿಸಿದೆ.

2012ರಲ್ಲಿ ವಿಜಯ್ ರೋಲ್ಸ್ ರೋಯ್ಸ್​ ಕಾರನ್ನು ವಿದೇಶದಿಂದ ಕೊಂಡುಕೊಂಡಿದ್ದು, ಎಂಟ್ರಿ ಟ್ಯಾಕ್ಸ್​ಗೆ ವಿನಾಯಿತಿಯನ್ನು ಕೋರಿದ್ದರು. ಆದರೆ ತೆರಿಗೆ ವಿನಾಯಿತಿ ನೀಡಲು ಇಲಾಖೆ ನಿರಾಕರಿಸಿತ್ತು. ನಂತರ ತೆರಿಗೆ ವಿನಾಯಿತಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಎಸ್​.ಎಂ.ಸುಬ್ರಮಣಿಯಂ ಸಿನಿಮಾನಟರೂ ಸಾಮಾನ್ಯರಂತೆ ಜೀವ ನಡೆಸಬೇಕು. ಅವರನ್ನು ಟ್ಯಾಕ್ಸ್​ನಿಂದ ಹೊರಗುಳಿಸಲು ಸಾಧ್ಯವಾಗುವುದಿಲ್ಲ. ಸಿನಿಮಾಗಳಲ್ಲಿ ಸಾಮಾಜಿಕ ಬದ್ಧತೆ ಬಗ್ಗೆಮಾತನಾಡುವ ಅವರು ವಾಸ್ತವ ಜೀವನದಲ್ಲೂ ಬದ್ಧತೆ ಅಗತ್ಯ ಎಂದಿದ್ದಾರೆ.

ಇದನ್ನೂ ಓದಿ: ಇತ್ತೀಚೆಗೆ 8 ಕೋಟಿ ಮೌಲ್ಯದ ಕಾರು ಕೊಂಡಿದ್ದ ಬಿಲ್ಡರ್ ವಿರುದ್ಧ ದಾಖಲಾಯ್ತು ವಿದ್ಯುತ್ ಕಳವು ಕೇಸ್

ಇದರ ಜೊತೆಗೆ ಕಾರಿನ ತೆರಿಗೆ ಜೊತೆಗೆ ಒಂದು ಲಕ್ಷ ರೂಪಾಯಿ ದಂಡವನ್ನು ನೀಡಬೇಕೆಂದು, ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡಬೇಕೆಂದು ಎಸ್.ಎಂ.ಸುಬ್ರಮಣಿಯಂ ಆದೇಶಿಸಿದ್ದಾರೆ.

ಚೆನ್ನೈ(ತಮಿಳುನಾಡು): ಕಾಲಿವುಡ್​ನ ಸೂಪರ್​ಸ್ಟಾರ್, ದಳಪತಿ ವಿಜಯ್​ಗೆ ಮದ್ರಾಸ್ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಆ ದಂಡದ ಮೊತ್ತವನ್ನು ತಮಿಳುನಾಡು ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ನೀಡಬೇಕೆಂದು ಆದೇಶಿಸಿದೆ.

ವಿಜಯ್​ಗೆ ಮೊದಲಿನಿಂದ ಕಾರುಗಳ ಮೇಲೆ ಕ್ರೇಜ್ ಹೆಚ್ಚಿದ್ದು, ಈಗಾಗಲೇ ವಿಜಯ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಹೊಸದಾಗಿ ಕೊಂಡುಕೊಂಡ ಐಷಾರಾಮಿ ಇಂಪೋರ್ಟೆಡ್ ಕಾರು ವಿಚಾರಕ್ಕೆ ಮದ್ರಾಸ್ ಹೈಕೋರ್ಟ್ ದಂಡ ವಿಧಿಸಿದೆ.

2012ರಲ್ಲಿ ವಿಜಯ್ ರೋಲ್ಸ್ ರೋಯ್ಸ್​ ಕಾರನ್ನು ವಿದೇಶದಿಂದ ಕೊಂಡುಕೊಂಡಿದ್ದು, ಎಂಟ್ರಿ ಟ್ಯಾಕ್ಸ್​ಗೆ ವಿನಾಯಿತಿಯನ್ನು ಕೋರಿದ್ದರು. ಆದರೆ ತೆರಿಗೆ ವಿನಾಯಿತಿ ನೀಡಲು ಇಲಾಖೆ ನಿರಾಕರಿಸಿತ್ತು. ನಂತರ ತೆರಿಗೆ ವಿನಾಯಿತಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಎಸ್​.ಎಂ.ಸುಬ್ರಮಣಿಯಂ ಸಿನಿಮಾನಟರೂ ಸಾಮಾನ್ಯರಂತೆ ಜೀವ ನಡೆಸಬೇಕು. ಅವರನ್ನು ಟ್ಯಾಕ್ಸ್​ನಿಂದ ಹೊರಗುಳಿಸಲು ಸಾಧ್ಯವಾಗುವುದಿಲ್ಲ. ಸಿನಿಮಾಗಳಲ್ಲಿ ಸಾಮಾಜಿಕ ಬದ್ಧತೆ ಬಗ್ಗೆಮಾತನಾಡುವ ಅವರು ವಾಸ್ತವ ಜೀವನದಲ್ಲೂ ಬದ್ಧತೆ ಅಗತ್ಯ ಎಂದಿದ್ದಾರೆ.

ಇದನ್ನೂ ಓದಿ: ಇತ್ತೀಚೆಗೆ 8 ಕೋಟಿ ಮೌಲ್ಯದ ಕಾರು ಕೊಂಡಿದ್ದ ಬಿಲ್ಡರ್ ವಿರುದ್ಧ ದಾಖಲಾಯ್ತು ವಿದ್ಯುತ್ ಕಳವು ಕೇಸ್

ಇದರ ಜೊತೆಗೆ ಕಾರಿನ ತೆರಿಗೆ ಜೊತೆಗೆ ಒಂದು ಲಕ್ಷ ರೂಪಾಯಿ ದಂಡವನ್ನು ನೀಡಬೇಕೆಂದು, ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡಬೇಕೆಂದು ಎಸ್.ಎಂ.ಸುಬ್ರಮಣಿಯಂ ಆದೇಶಿಸಿದ್ದಾರೆ.

Last Updated : Jul 13, 2021, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.