ಜಯಮ್ಮನ ಮಗ ಸಿನಿಮಾ ನಿರ್ದೇಶಕ ವಿಕಾಸ್ ಈ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರೆ. ನಟಿ ಸಿಂಧು ಲೋಕನಾಥ್ ಮದುವೆ ನಂತರ ಈ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗುತ್ತಿದ್ದಾರೆ. 'ಹೀಗೊಂದು ದಿನ' ಇವರ ಕೊನೆಯ ಚಿತ್ರವಾಗಿತ್ತು. ಇದೀಗ ಒಂದೂವರೆ ವರ್ಷದ ಬಳಿಕ 'ಕಾಣದಂತೆ ಮಾಯವಾದನು' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಅವರು ಈ ಚಿತ್ರದಲ್ಲಿ ಎನ್ಜಿಓನಲ್ಲಿ ಕೆಲಸ ಮಾಡುವ ಹುಡುಗಿ ವಂದನಾ ಆಗಿ ಕಾಣಿಸಿಕೊಂಡಿದ್ದಾರೆ.
ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಕಮರ್ಷಿಯಲ್ ಸಿನಿಮಾಕ್ಕೆ ಬೇಕಾಗುವ ಎಲ್ಲಾ ಎಲಿಮೆಟ್ಸ್ ಈ ಚಿತ್ರದಲ್ಲಿದೆ. ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಯೋಗರಾಜ್ ಭಟ್ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ರಾಜ್ ಪತ್ತಿಪಾಟಿ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಸೋಮ್ ಸಿಂಗ್ ನಿರ್ಮಾಣ ಮಾಡಿದ್ದಾರೆ. ಪುಷ್ಪಾ ಸೋಮ್ ಸಿಂಗ್ ಕೂಡಾ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಆಗಸ್ಟ್ನಲ್ಲಿ ಕಾಣದಂತೆ ಮಾಯವಾದನು ಸಿನಿಮಾ ತೆರೆಗೆ ಬರಲಿದೆ.
- " class="align-text-top noRightClick twitterSection" data="">