ETV Bharat / sitara

ಗೆಳೆಯರಿಬ್ಬರ ಕಿತ್ತಾಟ ಪ್ರಕರಣ: ರಾಗಿಣಿ ದ್ವಿವೇದಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ - ರಾಗಿಣಿ ದ್ವಿವೇದಿ

ಗೆಳೆಯರಿಬ್ಬರ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಣಿ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಇಂದು ವಿಚಾರಣೆಗೆ ಹಾಜರಾಗುವಂತೆ ಅಶೋಕ್ ನಗರ ಪೊಲೀಸರು ರಾಗಿಣಿಗೆ ನೋಟೀಸ್ ನೀಡಿದ್ದರು ಎನ್ನಲಾಗಿದೆ.

ರಾಗಿಣಿ ಸ್ನೇಹಿತರು
author img

By

Published : Mar 20, 2019, 11:44 AM IST

ಸ್ಯಾಂಡಲ್​​​ವುಡ್ ನಟಿಗಾಗಿ ಗೆಳೆಯರಿಬ್ಬರ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಇಂದು ನಟಿ ರಾಗಿಣಿ ದ್ವಿವೇದಿ ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಅಶೋಕ್ ನಗರ ಪೊಲೀಸರು ರಾಗಿಣಿಗೆ ನೋಟಿಸ್ ನೀಡಿದ್ದಾರೆ.

Ragini friends
ರಾಗಿಣಿ ಸ್ನೇಹಿತರು

ಮೂರು ದಿನಗಳ ಹಿಂದೆ ನಗರದ ರೆಸಿಡೆನ್ಸಿ ರಸ್ತೆಯ ರಿಟ್ಜ್ ಕಾರ್ಲ್ಟನ್ ಖಾಸಗಿ ಹೋಟೆಲ್​​ನಲ್ಲಿ ಶಿವಪ್ರಕಾಶ್ ಹಾಗೂ ಆರ್​ಟಿಒ ಅಧಿಕಾರಿ ರವಿಶಂಕರ್ ಇಬ್ಬರೂ ರಾಗಿಣಿ ಎದುರಿಗೇ ಬಿಯರ್ ಬಾಟಲ್​​ನಿಂದ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ. ಈ ಮುನ್ನ ಉದ್ಯಮಿ ಶಿವಪ್ರಕಾಶ್ ಜೊತೆ ಆತ್ಮೀಯರಾಗಿದ್ದ ರಾಗಿಣಿ ಇತ್ತೀಚೆಗೆ ರವಿಶಂಕರ್ ಅವರೊಂದಿಗೆ ಹೆಚ್ಚು ಇರುತ್ತಿದ್ದರೆನ್ನಲಾಗಿದೆ. ರವಿ ಜೊತೆ ರಾಗಿಣಿಯನ್ನು ಹೋಟೆಲ್​​​​ನಲ್ಲಿ ನೋಡಿದ ಶಿವಪ್ರಕಾಶ್ ಕೋಪಗೊಂಡು ಆತನ ಮೇಲೆ ಹಲ್ಲೆ ಮಾಡಿದ್ದು, ಕೊನೆಗೆ ಇಬ್ಬರೂ ಬಿಯರ್ ಬಾಟಲಿಯಿಂದ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ.

ಘಟನೆ ನಂತರ ಹೋಟೆಲ್​​​ನವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಘಟನೆ ನಡೆದಾಗ ಇದ್ದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಹಾಗೇ ವಿಚಾರಣೆಗೆ ಹಾಜರಾಗಲು ರಾಗಿಣಿಗೆ ಕೂಡಾ ನೋಟಿಸ್​​​​​ ಜಾರಿ ಮಾಡಿದ್ದಾರೆ. ಈ ಸಂಬಂಧ ಇಂದು ರಾಗಿಣಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸ್ಯಾಂಡಲ್​​​ವುಡ್ ನಟಿಗಾಗಿ ಗೆಳೆಯರಿಬ್ಬರ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಇಂದು ನಟಿ ರಾಗಿಣಿ ದ್ವಿವೇದಿ ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಅಶೋಕ್ ನಗರ ಪೊಲೀಸರು ರಾಗಿಣಿಗೆ ನೋಟಿಸ್ ನೀಡಿದ್ದಾರೆ.

Ragini friends
ರಾಗಿಣಿ ಸ್ನೇಹಿತರು

ಮೂರು ದಿನಗಳ ಹಿಂದೆ ನಗರದ ರೆಸಿಡೆನ್ಸಿ ರಸ್ತೆಯ ರಿಟ್ಜ್ ಕಾರ್ಲ್ಟನ್ ಖಾಸಗಿ ಹೋಟೆಲ್​​ನಲ್ಲಿ ಶಿವಪ್ರಕಾಶ್ ಹಾಗೂ ಆರ್​ಟಿಒ ಅಧಿಕಾರಿ ರವಿಶಂಕರ್ ಇಬ್ಬರೂ ರಾಗಿಣಿ ಎದುರಿಗೇ ಬಿಯರ್ ಬಾಟಲ್​​ನಿಂದ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ. ಈ ಮುನ್ನ ಉದ್ಯಮಿ ಶಿವಪ್ರಕಾಶ್ ಜೊತೆ ಆತ್ಮೀಯರಾಗಿದ್ದ ರಾಗಿಣಿ ಇತ್ತೀಚೆಗೆ ರವಿಶಂಕರ್ ಅವರೊಂದಿಗೆ ಹೆಚ್ಚು ಇರುತ್ತಿದ್ದರೆನ್ನಲಾಗಿದೆ. ರವಿ ಜೊತೆ ರಾಗಿಣಿಯನ್ನು ಹೋಟೆಲ್​​​​ನಲ್ಲಿ ನೋಡಿದ ಶಿವಪ್ರಕಾಶ್ ಕೋಪಗೊಂಡು ಆತನ ಮೇಲೆ ಹಲ್ಲೆ ಮಾಡಿದ್ದು, ಕೊನೆಗೆ ಇಬ್ಬರೂ ಬಿಯರ್ ಬಾಟಲಿಯಿಂದ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ.

ಘಟನೆ ನಂತರ ಹೋಟೆಲ್​​​ನವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಘಟನೆ ನಡೆದಾಗ ಇದ್ದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಹಾಗೇ ವಿಚಾರಣೆಗೆ ಹಾಜರಾಗಲು ರಾಗಿಣಿಗೆ ಕೂಡಾ ನೋಟಿಸ್​​​​​ ಜಾರಿ ಮಾಡಿದ್ದಾರೆ. ಈ ಸಂಬಂಧ ಇಂದು ರಾಗಿಣಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Intro:Body:

 Actress Ragini


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.