ETV Bharat / sitara

ಕಷ್ಟಗಳಿಗೆ ಮಿಡಿಯುವ ಆಫೀಸರ್​... 'ಕೆಂಪೇಗೌಡ 2' ವಿಮರ್ಶೆ ಇಲ್ಲಿದೆ....

author img

By

Published : Aug 9, 2019, 8:32 PM IST

ಕೆಂಪೇಗೌಡ 2 ವಿಮರ್ಶೆ

ಕಾಮಿಡಿ ಅಭಿನಯದಿಂದ ಮಿಂಚಿದ್ದ ಕೋಮಲ್ ಕುಮಾರ್ ಯಾಕೋ ಸೀರಿಯಸ್ ಆಗಿಬಿಟ್ಟಿದ್ದಾರೆ. ಅವರ ಎಂದಿನ ಶೈಲಿ ಈ ‘ಕೆಂಪೇಗೌಡ 2’ ಸಿನಿಮಾದಲ್ಲಿ ಮಿಸ್ ಆಗಿದ್ದು ಅವರೊಬ್ಬ ಹೊರಾಟಗಾರ ಪೊಲೀಸ್ ಅಧಿಕಾರಿ ಆಗಿದ್ದಾರೆ.

ಹೌದು, ಸಿನಿಮಾದಲ್ಲಿ ಹೀರೋ ಷಡ್ಯಂತ್ರಕ್ಕೆ ಸಿಲುಕಿ ಖಳನಟರ ಗ್ಯಾಂಗ್​​​ನಿಂದ ಹೊಡೆತ ತಿಂದ ಮೇಲೆ, ತಕ್ಷಣ ಎದ್ದು ಬಂದು ಹೊಡೆದಾಡುವುದೆಲ್ಲ ಕಾಮನ್. ‘ಹೆಬ್ಬುಲಿ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಖಳ ನಟರಿಂದ ಸಖತ್​​ ಒದೆ ತಿಂದು ಆಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲೇ ‘ಕೆಂಪೇಗೌಡ 2’ ಸಿನಿಮಾ ಕ್ಲೈಮಾಕ್ಸ್ ಇದೆ.

ಕೆಂಪೇಗೌಡ 2 ಈ ಹಿಂದೆ ಕಿಚ್ಚ ಸುದೀಪ್ ಅಭಿನಯಿಸಿದ ಕೆಂಪೇಗೌಡ (ತಮಿಳು ಚಿತ್ರ ಸಿಂಗಮ್ ರಿಮೇಕ್) ಮುಂದುವರೆದ ಭಾಗ ಅಲ್ಲ. ಆದರೆ, ಈ ಕೆಂಪೇಗೌಡ ಸಹ ಪೊಲೀಸ್ ಅಧಿಕಾರಿ. ಇವನು ಅಮಾಯಕರ ಕಷ್ಟಗಳಿಗೆ ಮಿಡಿಯುವ ಅಧಿಕಾರಿ. ಚುನಾವಣೆ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಬಗ್ಗೆ ಹಾಗೂ ಮಾಜಿ ಮುಖ್ಯಮಂತ್ರಿಯ ಮಗ ಅನುಸರಿಸುವ ರೀತಿಯನ್ನು ಪ್ರಶ್ನಿಸುವ ಅಧಿಕಾರಿ ಪಾತ್ರದಲ್ಲಿ ಕೋಮಲ್ ಕಾಣಿಸಿಕೊಂಡಿದ್ದಾರೆ.

ಕೆಂಪೇಗೌಡ ನಿಷ್ಠಾವಂತ ಪೊಲೀಸ್ ಅಧಿಕಾರಿ. ಅವನ ಭುಜಬಲ ಪರಾಕ್ರಮ ಜೋರಾಗೆ ಇದೆ. ಇದರ ಜೊತೆಗೆ ಶೂಟ್ ಔಟ್ ಮಾಡುವುದರಲ್ಲೂ ನಿಸ್ಸೀಮ. ಇಲಾಖೆಯಲ್ಲಿ ಹಲವು ವಿಭಾಗಕ್ಕೆ ಶಿಫ್ಟ್ ಕೂಡ ಆಗುವ ಈತ, ಕೆಲಸಕ್ಕೆ ಬೆಂಬಿಡದೇ ಹಾತೊರೆಯುತ್ತಾನೆ. ನೊಂದ ಕುಟುಂಬಕ್ಕೆ ನೆಮ್ಮದಿ ನೀಡುವುದಕ್ಕೆ ಹಾಗೂ ಚುನಾವಣೆ ಸಮಯದಲ್ಲಿ ಹ್ಯಾಕ್ ಮಾಡಿ ಗೆಲ್ಲುವುದನ್ನು ತಪ್ಪಿಸಲು ಕೆಂಪೇಗೌಡ ಹರಸಾಹಸ ಮಾಡುತ್ತಾನೆ.

ನಟನೆಯಲ್ಲಿ ಕೋಮಲ್ ಕುಮಾರ್ ಸೀರಿಯಸ್ ಆಗಿದ್ದು, ಹೊಡೆದಾಟದ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ಕ್ರಿಕೆಟ್ ಆಟಗಾರ ಶ್ರೀಶಾಂತ್ ಖಳನಟನಾಗಿ ಗಮನ ಸೆಳೆಯುತ್ತಾರೆ. ಖಳನ ಶೇಡ್​​​ನಲ್ಲಿ ಲೂಸ್ ಮಾದ ಯೋಗಿ ಸಹ ಪುಟ್ಟ ಪಾತ್ರ ಮಾಡಿದ್ದಾರೆ. ಇಲ್ಲಿ ನಾಯಕಿಯರಿಗೆ ಏನೂ ಜಾಗವಿಲ್ಲ.

ಒಂದು ಬ್ಯಾಕ್​ಗ್ರೌಂಡ್ ಸ್ಕೋರ್ ಹಾಗೂ ಐಟಂ ಹಾಡು ಸುಮಾರಾಗಿದೆ. ಛಾಯಾಗ್ರಹಣದಲ್ಲಿ ಅಂತಹ ವಿಶೇಷತೆ ಕಾಣುವುದಿಲ್ಲ. ಕೋಮಲ್ ಕುಮಾರ್ ಆಯ್ಕೆಯಲ್ಲಿ ಎಡವಿದರಾ ಎಂಬ ಡೌಟ್ ಅಂತೂ ಚಿತ್ರ ನೋಡಿದ ಮೇಲೆ ಪ್ರೇಕ್ಷಕರಿಗೆ ಮೂಡುತ್ತದೆ.

ಕಾಮಿಡಿ ಅಭಿನಯದಿಂದ ಮಿಂಚಿದ್ದ ಕೋಮಲ್ ಕುಮಾರ್ ಯಾಕೋ ಸೀರಿಯಸ್ ಆಗಿಬಿಟ್ಟಿದ್ದಾರೆ. ಅವರ ಎಂದಿನ ಶೈಲಿ ಈ ‘ಕೆಂಪೇಗೌಡ 2’ ಸಿನಿಮಾದಲ್ಲಿ ಮಿಸ್ ಆಗಿದ್ದು ಅವರೊಬ್ಬ ಹೊರಾಟಗಾರ ಪೊಲೀಸ್ ಅಧಿಕಾರಿ ಆಗಿದ್ದಾರೆ.

ಹೌದು, ಸಿನಿಮಾದಲ್ಲಿ ಹೀರೋ ಷಡ್ಯಂತ್ರಕ್ಕೆ ಸಿಲುಕಿ ಖಳನಟರ ಗ್ಯಾಂಗ್​​​ನಿಂದ ಹೊಡೆತ ತಿಂದ ಮೇಲೆ, ತಕ್ಷಣ ಎದ್ದು ಬಂದು ಹೊಡೆದಾಡುವುದೆಲ್ಲ ಕಾಮನ್. ‘ಹೆಬ್ಬುಲಿ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಖಳ ನಟರಿಂದ ಸಖತ್​​ ಒದೆ ತಿಂದು ಆಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲೇ ‘ಕೆಂಪೇಗೌಡ 2’ ಸಿನಿಮಾ ಕ್ಲೈಮಾಕ್ಸ್ ಇದೆ.

ಕೆಂಪೇಗೌಡ 2 ಈ ಹಿಂದೆ ಕಿಚ್ಚ ಸುದೀಪ್ ಅಭಿನಯಿಸಿದ ಕೆಂಪೇಗೌಡ (ತಮಿಳು ಚಿತ್ರ ಸಿಂಗಮ್ ರಿಮೇಕ್) ಮುಂದುವರೆದ ಭಾಗ ಅಲ್ಲ. ಆದರೆ, ಈ ಕೆಂಪೇಗೌಡ ಸಹ ಪೊಲೀಸ್ ಅಧಿಕಾರಿ. ಇವನು ಅಮಾಯಕರ ಕಷ್ಟಗಳಿಗೆ ಮಿಡಿಯುವ ಅಧಿಕಾರಿ. ಚುನಾವಣೆ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಬಗ್ಗೆ ಹಾಗೂ ಮಾಜಿ ಮುಖ್ಯಮಂತ್ರಿಯ ಮಗ ಅನುಸರಿಸುವ ರೀತಿಯನ್ನು ಪ್ರಶ್ನಿಸುವ ಅಧಿಕಾರಿ ಪಾತ್ರದಲ್ಲಿ ಕೋಮಲ್ ಕಾಣಿಸಿಕೊಂಡಿದ್ದಾರೆ.

ಕೆಂಪೇಗೌಡ ನಿಷ್ಠಾವಂತ ಪೊಲೀಸ್ ಅಧಿಕಾರಿ. ಅವನ ಭುಜಬಲ ಪರಾಕ್ರಮ ಜೋರಾಗೆ ಇದೆ. ಇದರ ಜೊತೆಗೆ ಶೂಟ್ ಔಟ್ ಮಾಡುವುದರಲ್ಲೂ ನಿಸ್ಸೀಮ. ಇಲಾಖೆಯಲ್ಲಿ ಹಲವು ವಿಭಾಗಕ್ಕೆ ಶಿಫ್ಟ್ ಕೂಡ ಆಗುವ ಈತ, ಕೆಲಸಕ್ಕೆ ಬೆಂಬಿಡದೇ ಹಾತೊರೆಯುತ್ತಾನೆ. ನೊಂದ ಕುಟುಂಬಕ್ಕೆ ನೆಮ್ಮದಿ ನೀಡುವುದಕ್ಕೆ ಹಾಗೂ ಚುನಾವಣೆ ಸಮಯದಲ್ಲಿ ಹ್ಯಾಕ್ ಮಾಡಿ ಗೆಲ್ಲುವುದನ್ನು ತಪ್ಪಿಸಲು ಕೆಂಪೇಗೌಡ ಹರಸಾಹಸ ಮಾಡುತ್ತಾನೆ.

ನಟನೆಯಲ್ಲಿ ಕೋಮಲ್ ಕುಮಾರ್ ಸೀರಿಯಸ್ ಆಗಿದ್ದು, ಹೊಡೆದಾಟದ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ಕ್ರಿಕೆಟ್ ಆಟಗಾರ ಶ್ರೀಶಾಂತ್ ಖಳನಟನಾಗಿ ಗಮನ ಸೆಳೆಯುತ್ತಾರೆ. ಖಳನ ಶೇಡ್​​​ನಲ್ಲಿ ಲೂಸ್ ಮಾದ ಯೋಗಿ ಸಹ ಪುಟ್ಟ ಪಾತ್ರ ಮಾಡಿದ್ದಾರೆ. ಇಲ್ಲಿ ನಾಯಕಿಯರಿಗೆ ಏನೂ ಜಾಗವಿಲ್ಲ.

ಒಂದು ಬ್ಯಾಕ್​ಗ್ರೌಂಡ್ ಸ್ಕೋರ್ ಹಾಗೂ ಐಟಂ ಹಾಡು ಸುಮಾರಾಗಿದೆ. ಛಾಯಾಗ್ರಹಣದಲ್ಲಿ ಅಂತಹ ವಿಶೇಷತೆ ಕಾಣುವುದಿಲ್ಲ. ಕೋಮಲ್ ಕುಮಾರ್ ಆಯ್ಕೆಯಲ್ಲಿ ಎಡವಿದರಾ ಎಂಬ ಡೌಟ್ ಅಂತೂ ಚಿತ್ರ ನೋಡಿದ ಮೇಲೆ ಪ್ರೇಕ್ಷಕರಿಗೆ ಮೂಡುತ್ತದೆ.

ಕೆಂಪೆ ಗೌಡ 2 ಚಿತ್ರ ವಿಮರ್ಶೆ

ಕೋಮಲ್ ಶಕ್ತಿ ಹಾಗೂ ಯುಕ್ತಿ

ಆವದಿ – 139 ನಿಮಿಷ, ಕ್ಯಾಟಗರಿ -- ರಿವೇಂಜ್ ಸ್ಟೋರಿ, ರೇಟಿಂಗ್ – 3/5

ಚಿತ್ರ – ಕೆಂಪೆ ಗೌಡ 2, ನಿರ್ಮಾಪಕ – ವಿನೋದ್, ನಿರ್ದೇಶಕ – ಶಂಕರ್ ಗೌಡ, ಸಂಗೀತ - ರೋಶ್ ಮೋಹನ್ ಛಾಯಾಗ್ರಹಣ, ವರುಣ್ ಉಣ್ಣಿ ಸಂಗೀತ, - ತಾರಾಗಣ - ಕೋಮಲ್ ಕುಮಾರ್, ಶ್ರೀಶಾಂತ್, ಯೋಗಿ, ರಕ್ಷಿಕ ಶರ್ಮ, ಮಧುಸೂಧನ್, ಆಲಿ, ಚೇತನ್ ಶರ್ಮ, ಲೋಹಿತಾಶ್ವ, ಸುಚಿಂದ್ರ ಪ್ರಸಾದ್ ಹಾಗೂ ಇತರರು

ಕೋಮಲ್ ಕುಮಾರ್ ಯಾಕೋ ಸೀರಿಯಸ್ ಆಗಿಬಿಟ್ಟಿದ್ದಾರೆ. ಅವರ ಎಂದಿನ ಶೈಲಿ ಈ ಕೆಂಪೇಗೌಡ 2 ಸಿನಿಮಾದಲ್ಲಿ ಮಿಸ್ ಆಗಿದ್ದು ಅವರೊಬ್ಬ ಹೊರಾಟಗಾರ ಪೊಲೀಸ್ ಅಧಿಕಾರಿ ಆಗಿದ್ದಾರೆ. ಮತ್ತೆ ಅದೇ ಷಡ್ಯಂತ್ರದಲ್ಲಿ ಸಿಲುಕಿ ಆಮೇಲೆ ರಪರಪನೇ ಖಳರ ಗ್ಯಾಂಗಿನಿಂದ ಹೊಡತ ತಿಂದು ಎದ್ದು ಬಂದು ಭಾರಿಸುವುದು. ಇದನೆಲ್ಲ ಅದೆಷ್ಟು ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿಲ್ಲ ಎಂದು ಕೋಮಲ್ ಕುಮಾರ್ ಅವರಿಗಾದರೂ ಗೊತ್ತಾಗಿರಬೇಕು. ಹೆಬ್ಬುಲಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಖಳರಿಂದ ಸಕ್ಕಾತಾಗಿ ಒದೆ ತಿಂದು ಆಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಕೆಂಪೆ ಗೌಡ 2 ಸಿನಿಮಾದ ಕ್ಲೈಮಾಕ್ಸ್ ಸಹ ಹಾಗೆ ಆಗಿದೆ.

ಕೆಂಪೇಗೌಡ 2 – ಈ ಹಿಂದೆ ಕಿಚ್ಚ ಸುದೀಪ್ ಅಭಿನಯಿಸಿದ ಕೆಂಪೇಗೌಡ (ಸಿಂಗಮ್ – ತಮಿಳು ರೀಮೇಕ್) ಮುಂದುವರೆದ ಭಾಗ ಅಲ್ಲ. ಈ ಕೆಂಪೇಗೌಡ ಸಹ ಪೊಲೀಸ್ ಅಧಿಕಾರಿ. ಇವನು ಅಮಾಯಕರಿಗೆ ಮಿಡಿಯುವ ಅಧಿಕಾರಿ. ಚುನಾವಣೆ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ ಬಗ್ಗೆ ಹಾಗೂ ಮಾಜಿ ಮುಖ್ಯ ಮಂತ್ರಿಯ ಮಗ ಅನುಸರಿಸುವ ರೀತಿಯನ್ನು ಪ್ರಶ್ನಿಸುವ ಅಧಿಕಾರಿ ಪಾತ್ರದಲ್ಲಿ ಕೋಮಲ್ ಕುಮಾರ್ ಕಾಣಿಸಿಕೊಂಡಿದ್ದಾರೆ.

ಕೆಂಪೆ ಗೌಡ ನಿಷ್ಠಾವಂತ ಪೊಲೀಸ್ ಅಧಿಕಾರಿ. ಅವನ ಭುಜಭಲ ಪರಾಕ್ರಮ ಜೋರಾಗೆ ಇದೆ. ಇದರ ಜೊತೆಗೆ ಷೂಟ್ ಔಟ್ ಮಾಡುವುದರಲ್ಲಿ ಆತ ನಿಸ್ಸೀಮ. ಇವನ ನಿಷ್ಟೆಗೆ ಇಲಾಖೆ ಬೇರೆ ವಿಭಾಗಕ್ಕೆ ಶಿಫ್ಟ್ ಮಾಡುತ್ತದೆ. ಆದರೆ ಇವನ ಅಪೂರ್ಣ ಕೆಲಸಕ್ಕೆ ಬೆಂಬಿಡದೆ ಹಾತೊರೆಯುತ್ತಾನೆ. ಆದರೆ ಆ ಜಾಲ ಬೇದಿಸುವುದು ಅಷ್ಟು ಸುಲಭದ ಮಾತಿಲ್ಲ. ಬುದ್ದಿವಂತ ಯುವಕನೊಬ್ಬನ ದಿಕ್ಕು ತಪ್ಪಿಸಿ ದೇಶಮುಖ್ ತಂಡ ತಪ್ಪು ದಾರಿಗೆ ಎಳೆದಿರುತ್ತದೆ. ಆ ಯುವಕನ ಕೊಲೆ ನಂತರ ಅದೇ ಜಾಗಕ್ಕೆ ಡೇವಿಡ್ (ಯೋಗಿ) ಇರುತ್ತಾನೆ. ನೊಂದ ಕುಟುಂಬಕ್ಕೆ ನೆಮ್ಮದಿ ನೀಡುವುದಕ್ಕೆ ಹಾಗೂ ಚುನಾವಣೆ ಸಮಯದಲ್ಲಿ ಹ್ಯಾಕ್ ಮಾಡಿ ಗೆಲ್ಲುವುದನ್ನು ತಪ್ಪಿಸಲು ಕೆಂಪೆ ಗೌಡ ಹರಸಾಹಸ ಮಾಡುತ್ತಾನೆ.

ಕೋಮಲ್ ಕುಮಾರ್ ಸೀರಿಯಸ್ ಆಗಿದ್ದು ಹೊಡದಾಟದ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ಕ್ರಿಕೆಟ್ ಪಟು ಶ್ರೀಶಾಂತ್ ಖಳ ನಟ ಆಗಿ ಗಮನ ಸೆಳೆಯುತ್ತಾರೆ. ಖಳನ ಶೆಡ್ ಅಲ್ಲಿ ಲೂಸ್ ಮಾದ ಯೋಗಿ ಸಹ ಪುಟ್ಟ ಪಾತ್ರ ಮಾಡಿದ್ದಾರೆ. ಇಲ್ಲಿ ನಾಯಕಿಯರಿಗೆ ಏನು ಜಾಗವಿಲ್ಲ.

ಒಂದು ಬ್ಯಾಕ್ಗ್ರೌಂಡ್ ಸ್ಕೋರ್ ಹಾಗೂ ಐಟೆಮ್ ಹಾಡು ಸುಮಾರಾಗಿದೆ. ಛಾಯಾಗ್ರಹಣದಲ್ಲಿ ಅಂತರ ವಿಶೇಷ ಕಾಣುವುದಿಲ್ಲ. ಕೋಮಲ್ ಕುಮಾರ್ ಆಯ್ಕೆಯಲ್ಲಿ ಎಡವಿದರ ಎಂಬ ಡೌಟ್ ಅಂತೂ ಚಿತ್ರ ನೋಡಿದ ಮೇಲೆ ಮನಸಿಗೆ ಬರುವುದು.

 

 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.