ETV Bharat / sitara

ಆನೆಗಳ ರಕ್ಷಣೆಗಾಗಿ ಜನರಲ್ಲಿ ಮನವಿ ಮಾಡಿದ 'ಗಜ'

author img

By

Published : Aug 12, 2020, 3:35 PM IST

ಪ್ರಾಣಿ, ಪಕ್ಷಿ ಪ್ರಿಯರಾಗಿರುವ ನಟ ದರ್ಶನ್ ವಿಶ್ವ ಆನೆಗಳ ದಿನವಾದ ಇಂದು ಆನೆಗಳನ್ನು ರಕ್ಷಣೆಗೆ ಮನವಿ ಮಾಡಿದ್ದಾರೆ.

Darshan
Darshan

ಇಂದು ಆಗಸ್ಟ್ 12, ವಿಶ್ವ ಆನೆ ದಿನ. ಜೀವ ವೈವಿಧ್ಯದಲ್ಲಿ ಆನೆಗೆ ಅದರದ್ದೇ ಆದ ಪ್ರಾಧಾನ್ಯತೆ ಇದೆ. ಅಲ್ಲಲ್ಲಿ ಆನೆಗಳ ಜೀವಕ್ಕೆ ಅಪಾಯವುಂಟಾಗುವಂತೆ ಮನುಷ್ಯ ನಡೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ಸ್ವತಃ ಪ್ರಾಣಿ, ಪಕ್ಷಿ ಪ್ರಿಯರಾಗಿರುವ ನಟ ದರ್ಶನ್ ಈ ಸಂದರ್ಭದಲ್ಲಿ ಆನೆಗಳನ್ನು ಸಂರಕ್ಷಿಸಲು ಜನರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆಯ ಪ್ರಚಾರ ರಾಯಭಾರಿಯಾಗಿರುವ ನಟ ದರ್ಶನ್ ಆನೆಗಳನ್ನು ರಕ್ಷಿಸುವ ಬಗ್ಗೆ ಕರೆಕೊಟ್ಟಿದ್ದಾರೆ.

ಇಂದು ಆಗಸ್ಟ್ 12 'ವಿಶ್ವ ಆನೆ ದಿನ' ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದು ಆನೆ ಜೊತೆ ಇರುವ ಪೋಟೋವನ್ನು ಟ್ವಿಟರ್ ನಲ್ಲಿ ಹಾಕುವ ಮೂಲಕ ಆನೆಯ ರಕ್ಷಣೆಯ ಮನವಿ ಮಾಡಿದ್ದಾರೆ.

ಗಜರಾಜನ ಜೊತೆ ಸ್ಯಾಂಡಲ್ ವುಡ್ ನ ಈ ಗಜನ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಇಂದು ಆಗಸ್ಟ್ 12, ವಿಶ್ವ ಆನೆ ದಿನ. ಜೀವ ವೈವಿಧ್ಯದಲ್ಲಿ ಆನೆಗೆ ಅದರದ್ದೇ ಆದ ಪ್ರಾಧಾನ್ಯತೆ ಇದೆ. ಅಲ್ಲಲ್ಲಿ ಆನೆಗಳ ಜೀವಕ್ಕೆ ಅಪಾಯವುಂಟಾಗುವಂತೆ ಮನುಷ್ಯ ನಡೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ಸ್ವತಃ ಪ್ರಾಣಿ, ಪಕ್ಷಿ ಪ್ರಿಯರಾಗಿರುವ ನಟ ದರ್ಶನ್ ಈ ಸಂದರ್ಭದಲ್ಲಿ ಆನೆಗಳನ್ನು ಸಂರಕ್ಷಿಸಲು ಜನರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆಯ ಪ್ರಚಾರ ರಾಯಭಾರಿಯಾಗಿರುವ ನಟ ದರ್ಶನ್ ಆನೆಗಳನ್ನು ರಕ್ಷಿಸುವ ಬಗ್ಗೆ ಕರೆಕೊಟ್ಟಿದ್ದಾರೆ.

ಇಂದು ಆಗಸ್ಟ್ 12 'ವಿಶ್ವ ಆನೆ ದಿನ' ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದು ಆನೆ ಜೊತೆ ಇರುವ ಪೋಟೋವನ್ನು ಟ್ವಿಟರ್ ನಲ್ಲಿ ಹಾಕುವ ಮೂಲಕ ಆನೆಯ ರಕ್ಷಣೆಯ ಮನವಿ ಮಾಡಿದ್ದಾರೆ.

ಗಜರಾಜನ ಜೊತೆ ಸ್ಯಾಂಡಲ್ ವುಡ್ ನ ಈ ಗಜನ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.