ETV Bharat / sitara

ಪುನೀತ್​ ಜತೆ ಸಂತೋಷ್ ಆನಂದ್​​ರಾಮ್​​​ ಮೂರನೇ ಸಿನಿಮಾ ಪಕ್ಕಾ

ಸ್ಯಾಂಡಲ್​ವುಡ್​ ಪವರ್​ಸ್ಟಾರ್​ ಪುನೀತ್ ರಾಜ್​​​ಕುಮಾರ್ ನಟನೆಯ ‘ರಾಜಕುಮಾರ’ ಮತ್ತು ‘ಯುವರತ್ನ’ ಯಶಸ್ಸಿನ ಬಳಿಕ ಸಂತೋಷ್ ಆನಂದ್​ರಾಮ್ ಮತ್ತೆ ಪುನೀತ್ ಜೊತೆ ಸಿನಿಮಾ ಮಾಡುವುದು ಖಚಿತವಾಗಿದೆ. ಮುಂದಿನ ವರ್ಷದಿಂದ ಈ ಚಿತ್ರ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

author img

By

Published : Sep 19, 2021, 10:32 AM IST

Updated : Sep 19, 2021, 10:38 AM IST

3rd-film-of-puneeth-rajkumar-and-santhosh-anandram-will-starts-from-next-year
ಪುನೀತ್​ ಜತೆ ಸಂತೋಷ್ ಆನಂದ್​​ರಾಮ್​​​ ಮೂರನೇ ಸಿನಿಮಾ ಪಕ್ಕಾ

ಯುವರತ್ನ ಸಿನಿಮಾ ಬಿಡುಗಡೆಯಾಗುವುದಕ್ಕೆ ಮುಂಚೆಯೇ ಪುನೀತ್ ರಾಜ್​ಕುಮಾರ್​ ಮತ್ತು ಹೊಂಬಾಳೆ ಫಿಲಮ್ಸ್​ ನಿರ್ಮಾಣದ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಸಂತೋಷ್ ಆನಂದರಾಮ್ ಹೇಳಿದ್ದರು. ಆದರೆ ಆ ಚಿತ್ರ ಬಿಡುಗಡೆಯಾಗಿ ಇಷ್ಟು ದಿನಗಳಾದರೂ ಹೊಸ ಚಿತ್ರದ ಬಗ್ಗೆ ಸುದ್ದಿಯೇ ಇರಲಿಲ್ಲ. ಆದರೆ ಇದೀಗ ಅಭಿಮಾನಿಗಳ ಪ್ರಶ್ನೆಗೆ ಸಂತೋಷ್ ಕೊನೆಗೂ ಅಂತ್ಯಹಾಡಿದ್ದಾರೆ.

ನಟ ಪುನೀತ್ ರಾಜ್​​ಕುಮಾರ್ ಜೊತೆ ಮುಂದಿನ ವರ್ಷ ಹೊಸ ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಸಂತೋಷ್ ಆನಂದ್​ರಾಮ್ ಈ ಮೊದಲು ಹೊಂಬಾಳೆ ಫಿಲಮ್ಸ್ ನಿರ್ಮಾಣದಲ್ಲಿ ರಾಜ​ಕುಮಾರ ಮತ್ತು ಯುವರತ್ನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಎರಡೂ ಚಿತ್ರಗಳು ಯಶಸ್ವಿಯಾಗಿದ್ದವು. ಹಾಗಾಗಿ ಇದೇ ಕಾಂಬಿನೇಷನ್​​ನಲ್ಲಿ ಇನ್ನೊಂದು ಚಿತ್ರ ಮಾಡುವುದಾಗಿ ಸಂತೋಷ್ ಘೋಷಿಸಿದ್ದರು.

ಆದರೆ ಚಿತ್ರ ಅಂದುಕೊಂಡಂತೆ ಇದುವರೆಗೂ ಸೆಟ್ಟೇರಿರಲ್ಲ. ಈ ಮಧ್ಯೆ ಜಗ್ಗೇಶ್ ಅಭಿನಯದಲ್ಲಿ ‘ಶ್ರೀ ಗುರು ರಾಘವೇಂದ್ರ ಎಂಟರ್ಪ್ರೈಸಸ್’ ಎಂಬ ಚಿತ್ರ ಶುರು ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಆ ಚಿತ್ರವು ಶುರುವಾಗಿಲ್ಲ. ಈ ನಡುವೆ ಪುನೀತ್ ಅಭಿನಯದ ಹೊಸ ಚಿತ್ರವನ್ನು ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭಿಸುವುದಾಗಿ ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.

  • To All the Fans & Audience who are continuously asking About my film with Power star @PuneethRajkumar sir in association with @hombalefilms will start by Early Next year🤗Thanks for the love❤️ “ನಿಮ್ಮ ಅಭಿಮಾನ ನಮಗೆ ಶ್ರೀರಕ್ಷೆ” pic.twitter.com/8J1ic0SgdT

    — Santhosh Ananddram (@SanthoshAnand15) September 18, 2021 " class="align-text-top noRightClick twitterSection" data=" ">

ಅಭಿಮಾನಿಗಳು ಮತ್ತು ಪ್ರೇಕ್ಷಕರು ನನ್ನ ಮತ್ತು ಪುನೀತ್ ಕಾಂಬಿನೇಷನ್​ನಲ್ಲಿ ಚಿತ್ರ ಯಾವಾಗ ಎಂದು ಕೇಳುತ್ತಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರ ಪ್ರಾರಂಭವಾಗಲಿದೆ. ಇನ್ನಷ್ಟು ಮಾಹಿತಿಗಳನ್ನು ಸದ್ಯದಲ್ಲೇ ಹಂಚಿಕೊಳ್ಳಲಾಗುವುದು ಎಂದಿದ್ದಾರೆ.

‘ಜೇಮ್ಸ್’ ಚಿತ್ರವನ್ನು ಮುಗಿಸಿರುವ ಪುನೀತ್, ಅಕ್ಟೋಬರ್​ನಿಂದ ಲೂಸಿಯಾ ಪವನ್ ನಿರ್ದೇಶನದ ‘ದ್ವಿತ್ವ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಸಾಹಸ ಸಿಂಹನ ಹುಟ್ಟುಹಬ್ಬಕ್ಕೆ 101 ಕೆಜಿ ಕೇಕ್ ಕತ್ತರಿಸಿದ ಜೂ. ವಿಷ್ಣುವರ್ಧನ್

ಯುವರತ್ನ ಸಿನಿಮಾ ಬಿಡುಗಡೆಯಾಗುವುದಕ್ಕೆ ಮುಂಚೆಯೇ ಪುನೀತ್ ರಾಜ್​ಕುಮಾರ್​ ಮತ್ತು ಹೊಂಬಾಳೆ ಫಿಲಮ್ಸ್​ ನಿರ್ಮಾಣದ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಸಂತೋಷ್ ಆನಂದರಾಮ್ ಹೇಳಿದ್ದರು. ಆದರೆ ಆ ಚಿತ್ರ ಬಿಡುಗಡೆಯಾಗಿ ಇಷ್ಟು ದಿನಗಳಾದರೂ ಹೊಸ ಚಿತ್ರದ ಬಗ್ಗೆ ಸುದ್ದಿಯೇ ಇರಲಿಲ್ಲ. ಆದರೆ ಇದೀಗ ಅಭಿಮಾನಿಗಳ ಪ್ರಶ್ನೆಗೆ ಸಂತೋಷ್ ಕೊನೆಗೂ ಅಂತ್ಯಹಾಡಿದ್ದಾರೆ.

ನಟ ಪುನೀತ್ ರಾಜ್​​ಕುಮಾರ್ ಜೊತೆ ಮುಂದಿನ ವರ್ಷ ಹೊಸ ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಸಂತೋಷ್ ಆನಂದ್​ರಾಮ್ ಈ ಮೊದಲು ಹೊಂಬಾಳೆ ಫಿಲಮ್ಸ್ ನಿರ್ಮಾಣದಲ್ಲಿ ರಾಜ​ಕುಮಾರ ಮತ್ತು ಯುವರತ್ನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಎರಡೂ ಚಿತ್ರಗಳು ಯಶಸ್ವಿಯಾಗಿದ್ದವು. ಹಾಗಾಗಿ ಇದೇ ಕಾಂಬಿನೇಷನ್​​ನಲ್ಲಿ ಇನ್ನೊಂದು ಚಿತ್ರ ಮಾಡುವುದಾಗಿ ಸಂತೋಷ್ ಘೋಷಿಸಿದ್ದರು.

ಆದರೆ ಚಿತ್ರ ಅಂದುಕೊಂಡಂತೆ ಇದುವರೆಗೂ ಸೆಟ್ಟೇರಿರಲ್ಲ. ಈ ಮಧ್ಯೆ ಜಗ್ಗೇಶ್ ಅಭಿನಯದಲ್ಲಿ ‘ಶ್ರೀ ಗುರು ರಾಘವೇಂದ್ರ ಎಂಟರ್ಪ್ರೈಸಸ್’ ಎಂಬ ಚಿತ್ರ ಶುರು ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಆ ಚಿತ್ರವು ಶುರುವಾಗಿಲ್ಲ. ಈ ನಡುವೆ ಪುನೀತ್ ಅಭಿನಯದ ಹೊಸ ಚಿತ್ರವನ್ನು ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭಿಸುವುದಾಗಿ ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.

  • To All the Fans & Audience who are continuously asking About my film with Power star @PuneethRajkumar sir in association with @hombalefilms will start by Early Next year🤗Thanks for the love❤️ “ನಿಮ್ಮ ಅಭಿಮಾನ ನಮಗೆ ಶ್ರೀರಕ್ಷೆ” pic.twitter.com/8J1ic0SgdT

    — Santhosh Ananddram (@SanthoshAnand15) September 18, 2021 " class="align-text-top noRightClick twitterSection" data=" ">

ಅಭಿಮಾನಿಗಳು ಮತ್ತು ಪ್ರೇಕ್ಷಕರು ನನ್ನ ಮತ್ತು ಪುನೀತ್ ಕಾಂಬಿನೇಷನ್​ನಲ್ಲಿ ಚಿತ್ರ ಯಾವಾಗ ಎಂದು ಕೇಳುತ್ತಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರ ಪ್ರಾರಂಭವಾಗಲಿದೆ. ಇನ್ನಷ್ಟು ಮಾಹಿತಿಗಳನ್ನು ಸದ್ಯದಲ್ಲೇ ಹಂಚಿಕೊಳ್ಳಲಾಗುವುದು ಎಂದಿದ್ದಾರೆ.

‘ಜೇಮ್ಸ್’ ಚಿತ್ರವನ್ನು ಮುಗಿಸಿರುವ ಪುನೀತ್, ಅಕ್ಟೋಬರ್​ನಿಂದ ಲೂಸಿಯಾ ಪವನ್ ನಿರ್ದೇಶನದ ‘ದ್ವಿತ್ವ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಸಾಹಸ ಸಿಂಹನ ಹುಟ್ಟುಹಬ್ಬಕ್ಕೆ 101 ಕೆಜಿ ಕೇಕ್ ಕತ್ತರಿಸಿದ ಜೂ. ವಿಷ್ಣುವರ್ಧನ್

Last Updated : Sep 19, 2021, 10:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.