ETV Bharat / sitara

ಸಿನಿಮಾ ಕ್ಷೇತ್ರದ ಮೂವರು ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ

author img

By

Published : Sep 4, 2019, 12:08 PM IST

ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಸಂಗೀತ ನಿರ್ದೇಶಕ ರತ್ನಂ ಹಾಗೂ ಹಿರಿಯ ಸಿನಿಮಾ ಪತ್ರಕರ್ತ ಬಿ.ಎನ್​.ಸುಬ್ರಹ್ಮಣ್ಯ ಮೂವರಿಗೂ ಈ ಬಾರಿಯ ಶ್ರೀ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ. ಇಂದು ಸಂಜೆ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕೆಂಪೇಗೌಡ ಪ್ರಶಸ್ತಿ

ಈ ವರ್ಷದ ನಾಡಪ್ರಭು ಶ್ರೀ ಕೆಂಪೇಗೌಡ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಈ ಬಾರಿ ಒಟ್ಟು 100 ಸಾಧಕರಿಗೆ ಈ ಪ್ರಶಸ್ತಿ ಲಭಿಸುತ್ತಿದ್ದು, ಕನ್ನಡ ಚಿತ್ರರಂಗದಿಂದ ಮೂವರಿಗೆ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ. ಇಂದು ಸಂಜೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

kempegowda award
ಮುಖ್ಯಮಂತ್ರಿ ಚಂದ್ರು

ಸಿನಿಮಾ ಕ್ಷೇತ್ರದಲ್ಲಿ ಈ ಬಾರಿ ಕೆಂಪೇಗೌಡ ಪ್ರಶಸ್ತಿಯನ್ನು ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಸಂಗೀತ ನಿರ್ದೇಶಕ ರತ್ನಂ ಹಾಗೂ ಹಿರಿಯ ಸಿನಿಮಾ ಪತ್ರಕರ್ತ ಬಿ.ಎನ್​​.ಸುಬ್ರಹ್ಮಣ್ಯ ಅವರಿಗೆ ನೀಡಲಾಗುತ್ತಿದೆ. ಇಂದು ಸಂಜೆ 5.30ಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ ಡಾ. ರಾಜ್​​ಕುಮಾರ್ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್​​​​.ಯಡಿಯೂರಪ್ಪ ಸಾಧಕರಿಗೆ ಪ್ರಶಸ್ತಿ ನೀಡಲಿದ್ದಾರೆ. ಸುಮಾರು 16 ವಿಭಾಗಗಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು 50,000 ರೂಪಾಯಿ ನಗದು, ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಹಾಗೂ ಶ್ರೀ ಕೆಂಪೇಗೌಡ ಅವರ ಸೊಸೆ ಲಕ್ಷ್ಮಿದೇವಿ ಹೆಸರಿನಲ್ಲಿ ಕೂಡಾ 10 ಪ್ರಶಸ್ತಿಗಳು ನೀಡಲಾಗುವುದು. ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್, ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಂಬಿಕೆ ಪ್ರಶಸ್ತಿ ವಿತರಣೆ ಸಮಯದಲ್ಲಿ ಹಾಜರಿರುತ್ತಾರೆ. ಮಾಧ್ಯಮ ಕ್ಷೇತ್ರದಿಂದ ಈಟಿವಿ ಭಾರತದ ರೀಜನಲ್ ನ್ಯೂಸ್ ಕೋಆರ್ಡಿನೇಟರ್ ಪ್ರವೀಣ್ ಅಕ್ಕಿ ಹಾಗೂ ಇತರರಿಗೆ ಪ್ರಶಸ್ತಿ ಲಭಿಸಿದೆ.

kempegowda award
ಸಂಗೀತ ನಿರ್ದೇಶಕ ಸತ್ಯಂ
kempegowda award
ಸಿನಿಮಾ ಪತ್ರಕರ್ತ ಬಿ.ಎನ್​.ಸುಬ್ರಹ್ಮಣ್ಯ

ಈ ವರ್ಷದ ನಾಡಪ್ರಭು ಶ್ರೀ ಕೆಂಪೇಗೌಡ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಈ ಬಾರಿ ಒಟ್ಟು 100 ಸಾಧಕರಿಗೆ ಈ ಪ್ರಶಸ್ತಿ ಲಭಿಸುತ್ತಿದ್ದು, ಕನ್ನಡ ಚಿತ್ರರಂಗದಿಂದ ಮೂವರಿಗೆ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ. ಇಂದು ಸಂಜೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

kempegowda award
ಮುಖ್ಯಮಂತ್ರಿ ಚಂದ್ರು

ಸಿನಿಮಾ ಕ್ಷೇತ್ರದಲ್ಲಿ ಈ ಬಾರಿ ಕೆಂಪೇಗೌಡ ಪ್ರಶಸ್ತಿಯನ್ನು ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಸಂಗೀತ ನಿರ್ದೇಶಕ ರತ್ನಂ ಹಾಗೂ ಹಿರಿಯ ಸಿನಿಮಾ ಪತ್ರಕರ್ತ ಬಿ.ಎನ್​​.ಸುಬ್ರಹ್ಮಣ್ಯ ಅವರಿಗೆ ನೀಡಲಾಗುತ್ತಿದೆ. ಇಂದು ಸಂಜೆ 5.30ಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ ಡಾ. ರಾಜ್​​ಕುಮಾರ್ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್​​​​.ಯಡಿಯೂರಪ್ಪ ಸಾಧಕರಿಗೆ ಪ್ರಶಸ್ತಿ ನೀಡಲಿದ್ದಾರೆ. ಸುಮಾರು 16 ವಿಭಾಗಗಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು 50,000 ರೂಪಾಯಿ ನಗದು, ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಹಾಗೂ ಶ್ರೀ ಕೆಂಪೇಗೌಡ ಅವರ ಸೊಸೆ ಲಕ್ಷ್ಮಿದೇವಿ ಹೆಸರಿನಲ್ಲಿ ಕೂಡಾ 10 ಪ್ರಶಸ್ತಿಗಳು ನೀಡಲಾಗುವುದು. ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್, ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಂಬಿಕೆ ಪ್ರಶಸ್ತಿ ವಿತರಣೆ ಸಮಯದಲ್ಲಿ ಹಾಜರಿರುತ್ತಾರೆ. ಮಾಧ್ಯಮ ಕ್ಷೇತ್ರದಿಂದ ಈಟಿವಿ ಭಾರತದ ರೀಜನಲ್ ನ್ಯೂಸ್ ಕೋಆರ್ಡಿನೇಟರ್ ಪ್ರವೀಣ್ ಅಕ್ಕಿ ಹಾಗೂ ಇತರರಿಗೆ ಪ್ರಶಸ್ತಿ ಲಭಿಸಿದೆ.

kempegowda award
ಸಂಗೀತ ನಿರ್ದೇಶಕ ಸತ್ಯಂ
kempegowda award
ಸಿನಿಮಾ ಪತ್ರಕರ್ತ ಬಿ.ಎನ್​.ಸುಬ್ರಹ್ಮಣ್ಯ

ಕೆಂಪೆ ಗೌಡ ಪ್ರಶಸ್ತಿ ಸಿನಿಮಾ ಕ್ಷೇತ್ರದಿಂದ ಮೂವರಿಗೆ

ಈ ವರ್ಷದ 508 ನಾಡ ಪ್ರಭು ಶ್ರೀ ಕೆಂಪೆ ಗೌಡ ಪ್ರಶಸ್ತಿ ಕನ್ನಡ ಚಿತ್ರ ರಂಗದಿಂದ ಮೂವರು ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಲ್ಲಿ ನಟ ಮುಖ್ಯಮಂತ್ರಿ ಚಂದ್ರು, ಸಂಗೀತ ನಿರ್ದೇಶಕ ರತ್ನಂ ಹಾಗೂ ಹಿರಿಯ ಸಿನಿಮಾ ಪತ್ರಕರ್ತ ಬಿ ಎನ್ ಸುಬ್ರಮಣ್ಯ.

ಮಾಧ್ಯಮ ಕ್ಷೇತ್ರದಲ್ಲಿ ಆಯ್ಕೆ ಆಗಿರುವವರ ಪೈಕಿ ಈ ಟಿ ವಿ ಭಾರತ್ ಸಂಸ್ಥೆಯ ಸುದ್ದಿ ಸಮನ್ವಯ ಸಂಪಾದಕ ಶ್ರೀ ಪ್ರವೀಣ್ ಅಕ್ಕಿ ಸಹ ಶ್ರೀ ಕೆಂಪೆ ಗೌಡ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಇಂದು ಸಂಜೆ ಕರ್ನಾಟಕದ ಮುಖ್ಯ ಮಂತ್ರಿ ಬಿ ಎಸ್ ಯೆಡಿಯೂರಪ್ಪ ಬೆಂಗಳೂರು ಮಹಾನಗರ ಪಾಲಿಕೆಯ ಡಾ ರಾಜಕುಮಾರ್ ಗಾಜಿನ ಮನೆಯಲ್ಲಿ 100 ವ್ಯಕ್ತಿಗಳಿಗೆ ಕೆಂಪೆ ಗೌಡ ಪ್ರಶಸ್ತಿ ಪ್ರಧಾನ 5.30 ಘಂಟೆಗೆ ಪ್ರಧಾನ ಮಾಡಲಿದ್ದಾರೆ. 16 ವಿಭಾಗಗಳಲ್ಲಿ ಶ್ರೀ ಕೆಂಪೆ ಗೌಡ ಪ್ರಶಸ್ತಿ ನೀಡಲಾಗುವುದು.

50000 ರೂಪಾಯಿ ಪ್ರಶಸ್ತಿ ಹಣ, ಫಲಕ ಹಾಗೂ ಸರ್ಟಿಫಿಕೇಟ್ ಒಳಗೊಂಡ ಪ್ರಶಸ್ತಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಹಾಗೂ ಶ್ರೀ ಕೆಂಪೆ ಗೌಡ ಸೊಸೆ ಲಕ್ಷ್ಮಿ ದೇವಿ ಹೆಸರಿನಲ್ಲಿ 10 ಪ್ರಶಸ್ತಿಗಳು ನೀಡಲಾಗುವುದು.

ಕೇಂದ್ರ ಹಣಕಾಸು ಮಂತ್ರಿ ಶ್ರೀಮತಿ ನಿರ್ಮಲ ಸೀತಾರಾಮನ್, ಬೆಂಗಳೂರು ಮಹಾ ನಗರ ಪಾಲಿಕೆ ಮೇಯರ್ ಶ್ರೀಮತಿ ಗಂಗಾಂಬಿಕೆ ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ ಹಾಜರಿರುತ್ತಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.