ETV Bharat / sitara

ದೀಪಿಕಾ ಸಿನಿಮಾ ನೋಡಲು ಕಾರ್ಯಕರ್ತರಿಗೆ ಥಿಯೇಟರ್​​ ಬುಕ್​ ಮಾಡಿದ ಮಾಜಿ ಸಿಎಂ​​! - Samajwadi Party organize Chhapaak screening

ಚಪಾಕ್​​ ಸಿನಿಮಾ ನೋಡಲು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​​​ ತಮ್ಮ ಪಕ್ಷದ ಕಾರ್ಯಕರ್ತರಿಗೆ ಲಖನೌದಲ್ಲಿ ಥಿಯೇಟರ್​​​ ಬುಕ್​ ಮಾಡಿದ್ದಾರೆ. ಅಲ್ಲದೆ ಇಂದು ಬಿಡುಗಡೆಯಾಗಿರುವ ಚಪಾಕ್​ ಸಿನಿಮಾಕ್ಕೆ ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ತೆರಿಗೆ ರಹಿತ ಶೋಗಳನ್ನು ನಡೆಸಲಾಗುತ್ತಿದೆ. ಹೀಗಂತ ಆ ರಾಜ್ಯ ಸರ್ಕಾರಗಳೇ ಘೋಷಿಸಿವೆ.

Samajwadi Party organize a screening of the movie Chhapaak for its workers
ಕಾರ್ಯಕರ್ತರಿಗೆ ಸಿನಿಮಾ ನೋಡಲು ಥಿಯೇಟರ್​​ ಬುಕ್​ ಮಾಡಿದ ಅಖಿಲೇಶ್​​!
author img

By

Published : Jan 10, 2020, 10:18 AM IST

ಇಂದು ದೇಶಾದ್ಯಂತ ಬಾಲಿವುಡ್​ನ ಚಪಾಕ್​ ಸಿನಿಮಾ ರಿಲೀಸ್​​ ಆಗಿದೆ. ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಆ್ಯಸಿಡ್​​ ದಾಳಿಗೊಳಗಾದ ಲಕ್ಷ್ಮಿ ಅಗರ್​ವಾಲ್​​​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೊಂದು ವಿಶೇಷ ಅಂದ್ರೆ ಈ ಸಿನಿಮಾ ನೋಡಲು ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​​​ ತಮ್ಮ ಪಕ್ಷದ ಕಾರ್ಯಕರ್ತರಿಗೆ ಲಖನೌದಲ್ಲಿ ಥಿಯೇಟರ್​​​ ಬುಕ್​ ಮಾಡಿದ್ದಾರೆ. ಮತ್ತೊಂದೆಡೆ ನಾಳೆ ಪಂಜಾಬ್​​ನ ಜಿರಾಕ್​ಪುರ್​​ನಲ್ಲಿ ಸಾಮಾಜಿಕ ಅಭಿವೃದ್ಧಿ ಕಲ್ಯಾಣ ಇಲಾಖೆ ಆ್ಯಸಿಡ್​​ ದಾಳಿ ಸಂತ್ರಸ್ತರಿಗೆ ವಿಶೇಷ ಪ್ರದರ್ಶನವನ್ನು ಆಯೋಜಿಸಿದೆ.

  • Samajwadi Party: On the directive of party President Akhilesh Yadav ji, today party will organize a screening of the movie #Chhapaak for its workers. A cinema hall in Lucknow has been booked for this. pic.twitter.com/Tux2F1GfsZ

    — ANI UP (@ANINewsUP) January 10, 2020 " class="align-text-top noRightClick twitterSection" data=" ">

ಇನ್ನು ಚಪಾಕ್​ ಸಿನಿಮಾದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಇತ್ತೀಚೆಗೆ ಜೆಎನ್​​​ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ಇದರಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಚಪಾಕ್​ ಸಿನಿಮಾ ವೀಕ್ಷಿಸದಂತೆ ಕರೆ ನೀಡಿದ್ದರು. ಇದಾದ ಮೇಲೆ ಚಿತ್ರದ ಕಥಾ ನಾಯಕಿ ನನಗೆ ಈ ಸಿನಿಮಾದಿಂದ ಯಾವುದೇ ಕ್ರೆಡಿಟ್​​ ಸಿಕ್ಕಿಲ್ಲ ಅಂತ ಕೋರ್ಟ್​​ ಮೆಟ್ಟಿಲೇರಿದ್ದರು. ಹಾಗೂ ಸಿನಿಮಾದಲ್ಲಿ ಬಳಸಲಾಗಿರುವ ಬಶೀರ್ ಎಂಬ ಪದವನ್ನು ರಾಜೇಶ್​​ ಎಂದು ಬಳಸಲಾಗಿದೆ. ಇದರಿಂದ ಧರ್ಮಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಇಷ್ಟೆಲ್ಲ ಆರೋಪ, ಸವಾಲುಗಳನ್ನು ಎದುರಿಸಿರುವ ಚಪಾಕ್​ ಸಿನಿಮಾ ಇಂದು ತೆರೆ ಕಂಡಿದೆ. ಚಿತ್ರಕ್ಕೆ ಮೇಘನಾ ಗುಲ್ಜಾರ್​​ ನಿರ್ದೇಶನವಿದ್ದು, ದೀಪಿಕಾ ಪಡುಕೋಣೆ ಮತ್ತು ಗುಲ್ಜಾರ್​​​ ಬಂಡವಾಳ ಹೂಡಿದ್ದಾರೆ.

ಇಂದು ದೇಶಾದ್ಯಂತ ಬಾಲಿವುಡ್​ನ ಚಪಾಕ್​ ಸಿನಿಮಾ ರಿಲೀಸ್​​ ಆಗಿದೆ. ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಆ್ಯಸಿಡ್​​ ದಾಳಿಗೊಳಗಾದ ಲಕ್ಷ್ಮಿ ಅಗರ್​ವಾಲ್​​​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೊಂದು ವಿಶೇಷ ಅಂದ್ರೆ ಈ ಸಿನಿಮಾ ನೋಡಲು ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​​​ ತಮ್ಮ ಪಕ್ಷದ ಕಾರ್ಯಕರ್ತರಿಗೆ ಲಖನೌದಲ್ಲಿ ಥಿಯೇಟರ್​​​ ಬುಕ್​ ಮಾಡಿದ್ದಾರೆ. ಮತ್ತೊಂದೆಡೆ ನಾಳೆ ಪಂಜಾಬ್​​ನ ಜಿರಾಕ್​ಪುರ್​​ನಲ್ಲಿ ಸಾಮಾಜಿಕ ಅಭಿವೃದ್ಧಿ ಕಲ್ಯಾಣ ಇಲಾಖೆ ಆ್ಯಸಿಡ್​​ ದಾಳಿ ಸಂತ್ರಸ್ತರಿಗೆ ವಿಶೇಷ ಪ್ರದರ್ಶನವನ್ನು ಆಯೋಜಿಸಿದೆ.

  • Samajwadi Party: On the directive of party President Akhilesh Yadav ji, today party will organize a screening of the movie #Chhapaak for its workers. A cinema hall in Lucknow has been booked for this. pic.twitter.com/Tux2F1GfsZ

    — ANI UP (@ANINewsUP) January 10, 2020 " class="align-text-top noRightClick twitterSection" data=" ">

ಇನ್ನು ಚಪಾಕ್​ ಸಿನಿಮಾದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಇತ್ತೀಚೆಗೆ ಜೆಎನ್​​​ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ಇದರಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಚಪಾಕ್​ ಸಿನಿಮಾ ವೀಕ್ಷಿಸದಂತೆ ಕರೆ ನೀಡಿದ್ದರು. ಇದಾದ ಮೇಲೆ ಚಿತ್ರದ ಕಥಾ ನಾಯಕಿ ನನಗೆ ಈ ಸಿನಿಮಾದಿಂದ ಯಾವುದೇ ಕ್ರೆಡಿಟ್​​ ಸಿಕ್ಕಿಲ್ಲ ಅಂತ ಕೋರ್ಟ್​​ ಮೆಟ್ಟಿಲೇರಿದ್ದರು. ಹಾಗೂ ಸಿನಿಮಾದಲ್ಲಿ ಬಳಸಲಾಗಿರುವ ಬಶೀರ್ ಎಂಬ ಪದವನ್ನು ರಾಜೇಶ್​​ ಎಂದು ಬಳಸಲಾಗಿದೆ. ಇದರಿಂದ ಧರ್ಮಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಇಷ್ಟೆಲ್ಲ ಆರೋಪ, ಸವಾಲುಗಳನ್ನು ಎದುರಿಸಿರುವ ಚಪಾಕ್​ ಸಿನಿಮಾ ಇಂದು ತೆರೆ ಕಂಡಿದೆ. ಚಿತ್ರಕ್ಕೆ ಮೇಘನಾ ಗುಲ್ಜಾರ್​​ ನಿರ್ದೇಶನವಿದ್ದು, ದೀಪಿಕಾ ಪಡುಕೋಣೆ ಮತ್ತು ಗುಲ್ಜಾರ್​​​ ಬಂಡವಾಳ ಹೂಡಿದ್ದಾರೆ.

Intro:Body:

national


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.