ಮುಂಬೈ: ಬಾಲಿವುಡ್ನ ಸಿನಿ ಉದ್ಯೋಗಿಗಳನ್ನು ಬೆಂಬಲಿಸಲು ಚಲನಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಮುಂದಾಗುತ್ತಿದ್ದಾರೆ.
ಖತ್ರೋನ್ ಕೆ ಖಿಲಾಡಿ ರಿಯಾಲಿಟಿ ಶೋದ ನಿರೂಪಣೆ ಮಾಡುತ್ತಿರುವ ರೋಹಿತ್ ಶೆಟ್ಟಿ, ಪ್ರಸ್ತುತ ಪ್ರಸಾರವಾಗುತ್ತಿರುವ ವಿಶೇಷ ಆವೃತ್ತಿಯ ಆದಾಯದಿಂದ ಸಹಾಯ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ಕಿರಿಯ ಕಲಾವಿದರು, ಹಿನ್ನೆಲೆ ನೃತ್ಯಗಾರರು, ಸ್ಟಂಟ್ ಮೆನ್, ಲೈಟ್ ಮೆನ್ ಮತ್ತು ಇತರರನ್ನು ಬೆಂಬಲಿಸಲು ತಮ್ಮ ಸಂಭಾವನೆಯ ಒಂದು ಭಾಗವನ್ನು ಬಳಸಲು ನಿರ್ಧರಿಸಿದ್ದಾರೆ. ನೇರವಾಗಿ ಅವರ ಖಾತೆಗಳಿಗೆ ಹಣ ಕಳುಹಿಸುವ ಮೂಲಕ ನೆರವಾಗಲಿದ್ದಾರೆ.
ಖತ್ರೋನ್ ಕೆ ಖಿಲಾಡಿ: ಮೇಡ್ ಇನ್ ಇಂಡಿಯಾ ಎಂಬ ವಿಶೇಷ ಆವೃತ್ತಿಯ ಚಿತ್ರೀಕರಣವನ್ನು ಅವರು ಭಾನುವಾರದಿಂದ ಪ್ರಾರಂಭಿಸಿದ್ದಾರೆ. ಇದನ್ನು ಸಂಪೂರ್ಣವಾಗಿ ಮುಂಬೈನಲ್ಲಿ ಚಿತ್ರೀಕರಿಸಲಾಗುವುದು ಎಂದು ತಿಳಿದು ಬಂದಿದೆ.