ETV Bharat / jagte-raho

ಮೃತನ ಜೇಬಿನಲ್ಲಿ ಪತ್ತೆಯಾಯ್ತು ಕಾಂಡೋಮ್ ಪ್ಯಾಕೇಟ್...ಅನೈತಿಕ ಸಂಬಂಧಕ್ಕೆ ಬಲಿಯಾದನೇ ಆತ?

author img

By

Published : Nov 12, 2019, 6:59 PM IST

ವ್ಯಕ್ತಿಯನ್ನು ಹತ್ಯೆ ಮಾಡಿ ಮೃತ ದೇಹವನ್ನು ದುಷ್ಕರ್ಮಿಗಳು ಆತನ ಏರಿಯಾದಲ್ಲೇ ಬಿಸಾಡಿದ್ದಾರೆ. ಇದು ನಾನಾ ಅನುಮಾನಗಳಿಗೂ ಕಾರಣವಾಗಿದೆ.

Person murders in bangalore

ಬೆಂಗಳೂರು: ವ್ಯಕ್ತಿಯನ್ನು ಹತ್ಯೆ ಮಾಡಿ ಮೃತ ದೇಹವನ್ನು ದುಷ್ಕರ್ಮಿಗಳು ಆತನ ಏರಿಯಾದಲ್ಲೇ ಬಿಸಾಡಿದ್ದಾರೆ. ಮೃತನ ಜೇಬಿನಲ್ಲಿ ಕಾಂಡೋಮ್ ಪ್ಯಾಕೇಟ್ ಪತ್ತೆಯಾಗಿದ್ದು, ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಇರಬಹುದು ಎಂಬ ಗುಮಾನಿ ಎದ್ದಿದೆ.

ಜಯನಗರದ ನಿವಾಸಿ ಶ್ರೀನಿವಾಸ ಮೃತರು. ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಯಲಚೇನಹಳ್ಳಿ, ಜಯನಗರ ಹಾಗೂ ಕುಮಾರಸ್ವಾಮಿ ಲೇಔಟ್​ನಲ್ಲಿ ಹೇರ್​ ಕಟಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸ್ತಿದ್ದ. ಸೋಮವಾರ ರಾತ್ರಿ 9.30 ರವರೆಗೆ ಶ್ರೀನಿವಾಸ್ ಅಂಗಡಿಯಲ್ಲಿದ್ದ. ನಂತರ ಅಂಗಡಿ ಬಾಗಿಲು ಮುಚ್ಚಿಕೊಂಡು ಹೋದ ಬಳಿಕ ಕೊಲೆಯಾಗಿದೆ. ಶ್ರೀನಿವಾಸ್​ಗೆ ವಿವಾಹವಾಗಿದ್ದು, ಕೆಲ ವರ್ಷಗಳಿಂದ ಪತ್ನಿಯಿಂದ ದೂರವಿದ್ದ ಎನ್ನಲಾಗಿದೆ.

ಡಿಸಿಪಿ ರೋಹಿಣಿ ಕಟೋಚ್​ ಸೆಪಟ್​

ಇಂದು ಮುಂಜಾನೆ ಮೃತದೇಹ ಪರಿಶೀಲನೆ ನಡೆಸಿದಾಗ ಆತನ ಜೇಬಿನಲ್ಲಿ ಕಾಂಡೋಮ್ ಪ್ಯಾಕೇಟ್​​ ಪತ್ತೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೊಲೀಸರಿಗೆ ಹಲವು ಆಯಾಮಗಳು ಸಿಕ್ಕಂತಾಗಿದೆ. ಎಸಿಪಿ ಮಹದೇವ್ ನೇತೃತ್ವದ ತಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಕೊಲೆಗೆ ಅನೈತಿಕ ಸಂಬಂಧ ಕಾರಣನಾ? ಅಥವಾ ಹಣಕಾಸಿನ ವ್ಯವಹಾರಕ್ಕೆ ಕೊಲೆ ಮಾಡಿದ್ದಾರಾ? ಎಂಬ ಪ್ರಶ್ನೆ ಪೊಲೀಸರಿಗೂ ಕಾಡ್ತಿದ್ದು, ಅದೇ ಆಯಾಮದಲ್ಲಿ ತನಿಖೆ ಮುಂದುವರೆಸಿದ್ದಾರೆ.

ದುಷ್ಕರ್ಮಿಗಳು ಶ್ರೀನಿವಾಸ್ ಅವರನ್ನು ಬೇರೆಡೆ ಕೊಲೆ ಮಾಡಿ ಮುಂಜಾನೆ ಕುಮಾರಸ್ವಾಮಿ ಲೇಔಟ್​​​ನ ಔಟರ್​​ರಿಂಗ್ ರಸ್ತೆಯ ಆತನ ಅಂಗಡಿ ಮುಂಭಾಗಕ್ಕೆ ಎಸೆದು ಹೋಗಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ವ್ಯಕ್ತಿಯನ್ನು ಹತ್ಯೆ ಮಾಡಿ ಮೃತ ದೇಹವನ್ನು ದುಷ್ಕರ್ಮಿಗಳು ಆತನ ಏರಿಯಾದಲ್ಲೇ ಬಿಸಾಡಿದ್ದಾರೆ. ಮೃತನ ಜೇಬಿನಲ್ಲಿ ಕಾಂಡೋಮ್ ಪ್ಯಾಕೇಟ್ ಪತ್ತೆಯಾಗಿದ್ದು, ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಇರಬಹುದು ಎಂಬ ಗುಮಾನಿ ಎದ್ದಿದೆ.

ಜಯನಗರದ ನಿವಾಸಿ ಶ್ರೀನಿವಾಸ ಮೃತರು. ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಯಲಚೇನಹಳ್ಳಿ, ಜಯನಗರ ಹಾಗೂ ಕುಮಾರಸ್ವಾಮಿ ಲೇಔಟ್​ನಲ್ಲಿ ಹೇರ್​ ಕಟಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸ್ತಿದ್ದ. ಸೋಮವಾರ ರಾತ್ರಿ 9.30 ರವರೆಗೆ ಶ್ರೀನಿವಾಸ್ ಅಂಗಡಿಯಲ್ಲಿದ್ದ. ನಂತರ ಅಂಗಡಿ ಬಾಗಿಲು ಮುಚ್ಚಿಕೊಂಡು ಹೋದ ಬಳಿಕ ಕೊಲೆಯಾಗಿದೆ. ಶ್ರೀನಿವಾಸ್​ಗೆ ವಿವಾಹವಾಗಿದ್ದು, ಕೆಲ ವರ್ಷಗಳಿಂದ ಪತ್ನಿಯಿಂದ ದೂರವಿದ್ದ ಎನ್ನಲಾಗಿದೆ.

ಡಿಸಿಪಿ ರೋಹಿಣಿ ಕಟೋಚ್​ ಸೆಪಟ್​

ಇಂದು ಮುಂಜಾನೆ ಮೃತದೇಹ ಪರಿಶೀಲನೆ ನಡೆಸಿದಾಗ ಆತನ ಜೇಬಿನಲ್ಲಿ ಕಾಂಡೋಮ್ ಪ್ಯಾಕೇಟ್​​ ಪತ್ತೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೊಲೀಸರಿಗೆ ಹಲವು ಆಯಾಮಗಳು ಸಿಕ್ಕಂತಾಗಿದೆ. ಎಸಿಪಿ ಮಹದೇವ್ ನೇತೃತ್ವದ ತಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಕೊಲೆಗೆ ಅನೈತಿಕ ಸಂಬಂಧ ಕಾರಣನಾ? ಅಥವಾ ಹಣಕಾಸಿನ ವ್ಯವಹಾರಕ್ಕೆ ಕೊಲೆ ಮಾಡಿದ್ದಾರಾ? ಎಂಬ ಪ್ರಶ್ನೆ ಪೊಲೀಸರಿಗೂ ಕಾಡ್ತಿದ್ದು, ಅದೇ ಆಯಾಮದಲ್ಲಿ ತನಿಖೆ ಮುಂದುವರೆಸಿದ್ದಾರೆ.

ದುಷ್ಕರ್ಮಿಗಳು ಶ್ರೀನಿವಾಸ್ ಅವರನ್ನು ಬೇರೆಡೆ ಕೊಲೆ ಮಾಡಿ ಮುಂಜಾನೆ ಕುಮಾರಸ್ವಾಮಿ ಲೇಔಟ್​​​ನ ಔಟರ್​​ರಿಂಗ್ ರಸ್ತೆಯ ಆತನ ಅಂಗಡಿ ಮುಂಭಾಗಕ್ಕೆ ಎಸೆದು ಹೋಗಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Intro:ಮೃತನ ಜೇಬಿನಲ್ಲಿ ಪತ್ತೆಯಾಗಿತ್ತು ಕಾಂಡಮ್ ಪ್ಯಾಕೇಟ್
ಅನೈತಿಕ ಸಂಬಂಧಕ್ಕೆ ಬಲಿಯಾದ್ನಾ ಶ್ರೀನಿವಾಸ್?


ವ್ಯಕ್ತಿ ಹತ್ಯೆಗೈದು ಮೃತದೇಹವನ್ನು ಮೃತನ ಏರಿಯಾದಲ್ಲಿ ಬೀಸಾಕಿ ಹೋಗಿರುವ ಘಟನೆ ದಕ್ಷಿಣಾ ವಿಭಾಗದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರಿಗೆ ಹಲವಾರು ಅನುಮಾನ ವ್ಯಕ್ತವಾಗಿದೆ. ಯಾಕಂದ್ರೆ ಮೃತ ಜೇಬಿನಲ್ಲಿ ಕಾಂಡೋಮ್ ಪ್ಯಾಕೇಟ್ ಗಳು ಪತ್ತೆಯಾಗಿದ್ದು ಅನೈತಿಕ ಸಂಬಂಧವೇ ಕೊಲೆಗೆ ಕಾರಣನ ಅನ್ನೋ ಗುಮಾನಿ ಉಂಟು ಮಾಡಿದೆ.

ವ್ಯಕ್ತಿಯ ಹೆಸರು ಶ್ರೀನಿವಾಸ ಮೂಲತಃ ಜಯನಗರದ ನಿವಾಸಿ..ಜಯನಗರ ಹಾಗೂ ಕುಮಾರಸ್ವಾಮಿ ಲೇಔಟ್ ನಲ್ಲಿ ಹೇರ್ ಕಟಿಂಗ್ ಶಾಪ್ ಇಟ್ಟಿಕೊಂಡು ಜೀವನ ಮಾಡ್ತಿದ್ದ. ಆದ್ರೆ ದುಷ್ಕರ್ಮಿಗಳು ಶ್ರೀನಿವಾಸ್ ನನ್ನ ಬೇರೆಡೆ ಕೊಲೆ ಮಾಡಿ ಆಟೋದಲ್ಲಿ ಬಂದು ಮುಂಜಾನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಔಟರ್ ರಿಂಗ್ ರಸ್ತೆಯಲ್ಲಿರುವ ಶ್ರೀನಿವಾಸ್ ಅಂಗಡಿ ಮುಂಭಾಗಕ್ಕೆ ಎಸೆದು ಹೋಗಿದ್ದಾರೆ.ಈ ಬಗ್ಗೆ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಶ್ರೀನಿವಾಸ ಹಲವು ವರ್ಷಗಳಿಂದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಯಲಚೇನಹಳ್ಳಿ ಹಾಗೂ ಜಯನಗರದಲ್ಲಿ ಕಟಿಂಗ್ ಶಾಪ್ ಇಟ್ಟುಕೊಂಡು ಜೀವನ ಮಾಡುತ್ತಿದ್ದ.ನಿನ್ನೆ ರಾತ್ರಿ 9-30ರ ವರೆಗೆ ಶ್ರೀನಿವಾಸ್ ಅಂಗಡಿಯಲ್ಲಿದ್ನಂತೆ.ಆದ್ರೆ ರಾತ್ರಿ ಅಂಗಡಿ ಮುಚ್ಚಿಕೊಂಡು ವಾಪಸ್ ಹೋದ ಬಳಿಕ ಇತನ ಕೊಲೆಯಾಗಿದೆ.ಇನ್ನೂ ಇತನಿಗೆ ಮದುವೆಯಾಗಿದ್ದು ಹಲವು ವರ್ಷಗಳಿಂದ ಹೆಂಡತಿಯಿಂದ ದೂರವಿದ್ದು ಒಬ್ಬನೆ ವಾಸಿಸುತ್ತಿದ್ದಂತೆ.ಆದ್ರೆ ಇಂದು ಮುಂಜಾನೆ ಇತನ ಮೃತದೇಹ ಸಿಕ್ಕ ಬಳಿಕ ಆತನ ಜೇಬಿನಲ್ಲಿ ಕಾಂಡೋಮ್ ಪ್ಯಾಕೇಟ್ ಗಳು ಪತ್ತೆಯಾಗಿದೆ.ಇದು ಪೊಲೀಸರ ಅನುಮಾನಕ್ಕೂ ಕಾರಣವಾಗಿದೆ.ಹೀಗಾಗಿ ಪೊಲೀಸರಿಗೆ ಹಲವು ಆಯಾಮಗಳು ಸಿಕ್ಕಿದ್ದು,ಎಸಿಪಿ ಮಹದೇವ್ ನೇತೃತ್ವದ ತಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.ಕೊಲೆಗೆ ಅನೈತಿಕ ಸಂಬಂಧ ಕಾರಣನಾ?ಅಥವಾ ಹಣಕಾಸಿನ ವ್ಯವಹಾರಕ್ಕೆ ಕೊಲೆ ಮಾಡಿದ್ದಾರಾ? ಅನ್ನೋ ಪ್ರಶ್ನೆ ಪೊಲೀಸರಿಗೂ ಕಾಡ್ತಿದ್ದೂ,ಅದೇ ಆಯಾಮದಲ್ಲಿ ತನಿಖೆ ಮುಂದುವರೆಸಿದ್ದಾರೆ.

Byte:ರೋಹಿಣಿ ಕಟೋಚ್ ಸೆಪೆಟ್,ಡಿಸಿಪಿ ದಕ್ಷಿಣ ವಿಭಾಗ .
Body:KN_BNG_08_MURDER_7204498Conclusion:KN_BNG_08_MURDER_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.