ಚಾಮರಾಜನಗರ: ಮದುವೆಯಾಗುವುದಾಗಿ ನಂಬಿಸಿ ಯುವತಿಯೋರ್ವಳ ಮೇಲೆ ಯುವಕನೋರ್ವ ನಿರಂತರ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.
ಕೊಳ್ಳೇಗಾಲದ ಕಂಟ್ರಾಕ್ಟರ್ ಪುಟ್ಟಸ್ವಾಮಿ ಎಂಬಾತನ ಮಗ ವಿನೋದ್ (29) ಬಂಧಿತ ಆರೋಪಿ. ಬಿಎ ವ್ಯಾಸಂಗ ಮಾಡುವ ವೇಳೆ ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆಯಾಗಬೇಕು ಎಂದು ಗಂಟುಬಿದ್ದಾಗ ಯುವಕನ ಮನೆಯವರು ಹುಡುಗಿ ಬಡವರಾಗಿದ್ದು, ಆಕೆಯನ್ನು ಮನೆಗೆ ತಂದುಕೊಳ್ಳುವುದಿಲ್ಲ ಎಂದು ಸಾಗಹಾಕಿದ್ದಾರೆ ಎಂದು ಹನೂರು ತಾಲೂಕಿನ ಗ್ರಾಮವೊಂದರ ಯುವತಿ ದೂರಿದ್ದಾಳೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿನೋದ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.