ETV Bharat / jagte-raho

ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು: ಪಾಲಿಕೆ ಸದಸ್ಯನ ಕೊಲೆ ಆರೋಪಿಗಳು ಅಂದರ್ - ಹಂದಿ ಅಲಿಯಾಸ್ ಮಹೇಶ್ ಮತ್ತು ಸತೀಶ್ ಅಲಿಯಾಸ್ ಸೆಡ್ಕಾ

ಸಿದ್ಲಗಟ್ಟ ಪಾಲಿಕೆ ಸದಸ್ಯನ ಕೊಲೆ ಪ್ರಕರಣದ ಆರೋಪಿಗಳಾದ ಇಬ್ಬರು ರೌಡಿ ಶೀಟರ್​​​ಗಳ  ಮೇಲೆ ಸಿಸಿಬಿ ಪೊಲೀಸರು ಶೂಟೌಟ್ ಮಾಡಿ ಬಂಧಿಸಿದ್ದಾರೆ.

KN_BNG_02_SHOUTOUT_7204498
ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು, ಪಾಲಿಕೆ ಸದಸ್ಯನ ಕೊಲೆ ಆರೋಪಿಗಳು ಅಂದರ್
author img

By

Published : Jan 13, 2020, 8:48 AM IST

Updated : Jan 13, 2020, 10:19 AM IST

ಬೆಂಗಳೂರು: ಸಿದ್ಲಗಟ್ಟ ಪಾಲಿಕೆ ಸದಸ್ಯನ ಕೊಲೆ ಪ್ರಕರಣದ ಆರೋಪಿಗಳಾದ ಇಬ್ಬರು ರೌಡಿ ಶೀಟರ್​​ಗಳ ಮೇಲೆ ಸಿಸಿಬಿ ಪೊಲೀಸರು ಶೂಟೌಟ್ ಮಾಡಿ ಬಂಧಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು: ಪಾಲಿಕೆ ಸದಸ್ಯನ ಕೊಲೆ ಆರೋಪಿಗಳು ಅಂದರ್

ಹಂದಿ ಅಲಿಯಾಸ್ ಮಹೇಶ್ ಮತ್ತು ಸತೀಶ್ ಅಲಿಯಾಸ್ ಸೆಡ್ಕಾ ಗುಂಡೇಟು ತಿಂದ ರೌಡಿಗಳು. ನಗರದ ಬಿಟಿಎಂ ಲೇಔಟ್ ಬಳಿಯ ರಂಕಾ ಕಾಲನಿಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್​​​​​ಪೆಕ್ಟರ್ ಗಳಾದ ಕೇಶವ ಮೂರ್ತಿ ಮತ್ತು ಪುನೀತ್ ಕುಮಾರ್ ಆರೋಪಿಗಳನ್ನ ಹಿಡಿಯಲು ತೆರಳಿದ್ದಾರೆ. ಈ ವೇಳೆ, ಆರೋಪಿಗಳು ಪೇದೆ ಹನುಮೇಶ್ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನ ‌ಮಾಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಶರಣಾಗುವಂತೆ ಸೂಚಿಸಿದ್ರು ಮತ್ತೆ ಹಲ್ಲೆಗೆ ಮುಂದಾದಾಗ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

ಇನ್ನು ಪ್ರಮುಖವಾಗಿ ಈ ಆರೋಪಿಗಳು 2016 ರಲ್ಲಿ ಸಿದ್ಲಗಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಿಕೆ ಸದಸ್ಯನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದರು. ನಂತರ ತಲೆಮರೆಸಿಕೊಂಡು ಮತ್ತೆ 2019ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ರು. ಇವರ ಮೇಲೆ ಈಗಾಗಲೇ ನ್ಯಾಯಾಲಯದ ವಾರಂಟ್ ಕೂಡ ಜಾರಿಯಲ್ಲಿದೆ. ಸದ್ಯ ಆರೋಪಿಗಳು ಸಿಸಿಬಿ ಖೆಡ್ಡಾಕ್ಕೆ ಬಿದ್ದಿದ್ದು, ಆತ್ಮರಕ್ಷಣೆ ಹಿನ್ನೆಲೆ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್ ಮಾಡಿ ಸ್ಥಳೀಯ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಮುಂದಿನ ತನಿಖೆ ಮುಂದುವರೆಸಲಿದ್ದಾರೆ.

ಬೆಂಗಳೂರು: ಸಿದ್ಲಗಟ್ಟ ಪಾಲಿಕೆ ಸದಸ್ಯನ ಕೊಲೆ ಪ್ರಕರಣದ ಆರೋಪಿಗಳಾದ ಇಬ್ಬರು ರೌಡಿ ಶೀಟರ್​​ಗಳ ಮೇಲೆ ಸಿಸಿಬಿ ಪೊಲೀಸರು ಶೂಟೌಟ್ ಮಾಡಿ ಬಂಧಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು: ಪಾಲಿಕೆ ಸದಸ್ಯನ ಕೊಲೆ ಆರೋಪಿಗಳು ಅಂದರ್

ಹಂದಿ ಅಲಿಯಾಸ್ ಮಹೇಶ್ ಮತ್ತು ಸತೀಶ್ ಅಲಿಯಾಸ್ ಸೆಡ್ಕಾ ಗುಂಡೇಟು ತಿಂದ ರೌಡಿಗಳು. ನಗರದ ಬಿಟಿಎಂ ಲೇಔಟ್ ಬಳಿಯ ರಂಕಾ ಕಾಲನಿಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್​​​​​ಪೆಕ್ಟರ್ ಗಳಾದ ಕೇಶವ ಮೂರ್ತಿ ಮತ್ತು ಪುನೀತ್ ಕುಮಾರ್ ಆರೋಪಿಗಳನ್ನ ಹಿಡಿಯಲು ತೆರಳಿದ್ದಾರೆ. ಈ ವೇಳೆ, ಆರೋಪಿಗಳು ಪೇದೆ ಹನುಮೇಶ್ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನ ‌ಮಾಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಶರಣಾಗುವಂತೆ ಸೂಚಿಸಿದ್ರು ಮತ್ತೆ ಹಲ್ಲೆಗೆ ಮುಂದಾದಾಗ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

ಇನ್ನು ಪ್ರಮುಖವಾಗಿ ಈ ಆರೋಪಿಗಳು 2016 ರಲ್ಲಿ ಸಿದ್ಲಗಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಿಕೆ ಸದಸ್ಯನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದರು. ನಂತರ ತಲೆಮರೆಸಿಕೊಂಡು ಮತ್ತೆ 2019ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ರು. ಇವರ ಮೇಲೆ ಈಗಾಗಲೇ ನ್ಯಾಯಾಲಯದ ವಾರಂಟ್ ಕೂಡ ಜಾರಿಯಲ್ಲಿದೆ. ಸದ್ಯ ಆರೋಪಿಗಳು ಸಿಸಿಬಿ ಖೆಡ್ಡಾಕ್ಕೆ ಬಿದ್ದಿದ್ದು, ಆತ್ಮರಕ್ಷಣೆ ಹಿನ್ನೆಲೆ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್ ಮಾಡಿ ಸ್ಥಳೀಯ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಮುಂದಿನ ತನಿಖೆ ಮುಂದುವರೆಸಲಿದ್ದಾರೆ.

Intro:ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು
ಪಾಲಿಕೆ ಸದಸ್ಯನ ಕೊಲೆ ಪ್ರಕರಣದ ಆರೋಪಿಗಳು ಅಂದರ್

ಸಿದ್ಲಗಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಿಕೆ ಸದಸ್ಯನ ಕೊಲೆ ಪ್ರಕರಣದ ಇಬ್ಬರು ರೌಡಿಪಟ್ಟಿ ಆಸಾಮಿಗಳ ಮೇಲೆ ಸಿಸಿಬಿ ಪೊಲೀಸರು ಶೂಟೌಟ್ ಮಾಡಿ ಬಂಧಿಸಿದ್ದಾರೆ.ಹಂದಿ ಮಹೇಶ್ ಮತ್ತು ಸತೀಶ್ @ ಸೆಡ್ಕಾ ಗುಂಡಿನ ದಾಳಿಗೆ ಒಳಗಾದವರು..

ಇವರು ನಗರದ ಬಿಟಿಎಂ ಲೇಔಟ್ ಬಳಿಯ ರಂಕಾ ಕಾಲನಿಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್ಪೆಕ್ಟರ್ ಗಳಾದ ಕೇಶವ ಮೂರ್ತಿ ಮತ್ತು ಪುನೀತ್ ಕುಮಾರ್ ಆರೋಪಿಗಳನ್ನ ಹಿಡಿಯಲು ತೆರಳಿದ್ದಾರೆ. ಈ ವೇಳೆ ಜೊತೆಗಿದ್ದ
ಹನುಮೇಶ್ ಎಂಬ ಪೇದೆ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನ ‌ಮಾಡಿದ್ದಾರೆ ಆರೋಪಿಗಳು. ತಕ್ಷಣ ಎಚ್ಚೆತ್ತ ಇನ್ಸ್ಪೆಕ್ಟರ್ಗಳು ಶರಣಾಗುವಂತೆ ಸೂಚಿಸಿದ್ರು ಕ್ಯಾರೆ ಎನ್ನದೇ ಇದ್ದಾಗ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

ಇನ್ನು ಪ್ರಮುಖವಾಗಿ ಈ ಆರೋಪಿಗಳು 2016 ಸಿಧ್ಲಗಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಿಕೆ ಸದಸ್ಯ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಆಗಿದ್ದಾರೆ. ನಂತ್ರ ತಲೆಮರೆಸಿಕೊಂಡು ಮತ್ತೆ 2019ರಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ರು. ಇವರ ಮೇಲೆ ಈಗಾಗ್ಲೇ ನ್ಯಾಯಲಯದ ವಾರೆಂಟ್ ಕೂಡ ಜಾರಿಯಲ್ಲಿದೆ.


ಸತೀಶ್ ಅಲಿಯಾಸ್ ಸೆಡ್ಕಾ ಮೇಲೆ ಹಲವಾರು ಪ್ರಕರಣ ದಾಖಲಾಗಿವೆ..

2011 ರಲ್ಲಿ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ 307 ಕೊಲೆ ಯತ್ನ..
2012 ರಲ್ಲಿ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಮಾನಭಂಗ ಯತ್ನ..
2014ರಲ್ಲಿ ಹೂಸೂರು ಪೊಲೀಸ್ ಠಾಣೆ ಬಳಿ ಕೊಲೆ ಯತ್ನ 307
2016 ರಲ್ಲಿ ಸಿದ್ಲಗಟ್ಟ ಬಳಿ ಪಾಲಿಕೆ ಸದಸ್ಯ ಕೊಲೆಯ ಪ್ರಮುಖ ಆರೋಪಿ..
2019 ರಲ್ಲಿ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಕೇಸ್..

ಇನ್ನು ಹಂದಿ ಮಹೇಶನ ಮೇಲೂ ಸಾಕಷ್ಟು ಪ್ರಕರಣ;-

2016 ರಲ್ಲಿ ಪಾಲಿಕೆ ಸದಸ್ಯ ಕೊಲೆ ಪ್ರಕರಣ
2019 ರಲ್ಲಿ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್ ನಲ್ಲಿ ಭಾಗಿಯಾಗಿದ್ದಾನೆ.

ಸದ್ಯ ಆರೋಪಿಗಳು ಸಿಸಿಬಿ ಖೆಡ್ಡಾಕ್ಕೆ ಬಿದ್ದಿದ್ದು ಆತ್ಮರಕ್ಷಣೆ ಹಿನ್ನೆಲೆ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್ ಮಾಡಿ ಸ್ಥಳೀಯ ಆಸ್ಪತ್ರೆ ಗೆ ದಾಖಲಿಸಿದ್ದಾರೆ .ಹಾಗೆ ಈ ಸಂಬಂಧ ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಮುಂದಿನ ತನಿಖೆ ಮುಂದುವರೆಸಲಿದ್ದಾರೆBody:KN_BNG_02_SHOUTOUT_7204498Conclusion:KN_BNG_02_SHOUTOUT_7204498
Last Updated : Jan 13, 2020, 10:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.