ETV Bharat / international

ಥಾಯ್ಲೆಂಡ್​ನಲ್ಲೂ ಇದೆ ಅಯೋಧ್ಯೆ: ರಾಜರ ಹೆಸರುಗಳಲ್ಲಿ ಹಾಸುಹೊಕ್ಕಾದ ಶ್ರೀರಾಮ

author img

By ANI

Published : Nov 30, 2023, 2:11 PM IST

Thailand too has an Ayodhya: ಥಾಯ್ಲೆಂಡ್​ನ ಅಯೋಧ್ಯೆ ಅಯುತ್ಥಾಯ ನಗರವು ಹಲವು ವಿಶೇಷತೆಗಳನ್ನು ಹೊಂದಿದೆ.

Etv Bharat
Etv Bharat

ಅಯುತ್ಥಾಯ(ಬ್ಯಾಂಕಾಕ್): ಉತ್ತರ ಪ್ರದೇಶದ ಪ್ರಸಿದ್ಧ ಅಯೋಧ್ಯಾ ನಗರಿಯಂತೆ ದೂರದ ಥಾಯ್ಲೆಂಡ್‌ನಲ್ಲೂ ಒಂದು ಅಯೋಧ್ಯೆ ಇದೆ. ಆದರೆ ಈ ಸ್ಥಳಕ್ಕೆ ಅಯೋಧ್ಯೆ ಎಂಬ ಹೆಸರಿಲ್ಲ ಅಷ್ಟೇ. ಆದರೆ, ಇಲ್ಲಿನ ರಾಜರು ತಮ್ಮ ಹೆಸರಿನಲ್ಲಿ ರಾಮನ ಬಿರುದನ್ನು ಸಾಮಾನ್ಯವಾಗಿ ಹೊಂದಿದ್ದಾರೆ. ಇದು ಇಲ್ಲಿನ ಪುರಾತನ ಸಂಪ್ರದಾಯ. ಭಾರತದ ಅಯೋಧ್ಯೆ ಮತ್ತು ಥಾಯ್ಲೆಂಡ್‌ನ ಅಯೋಧ್ಯೆಯ ನಡುವಿನ ಸಾಮ್ಯತೆಗಳೇನು? ಥಾಯ್ಲೆಂಡ್‌ ಅಯೋಧ್ಯೆಯನ್ನು 'ಅಯುತ್ಥಾಯ' ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ರಾಜವಂಶವಿದೆ. ಪ್ರತಿಯೊಬ್ಬ ರಾಜನನ್ನೂ ರಾಮನ ಅವತಾರವೆಂದೇ ಜನರು ಪರಿಗಣಿಸುತ್ತಾರೆ.

ಥಾಯ್ಲೆಂಡ್​ನಲ್ಲಿ 22 ವರ್ಷಗಳಿಂದ ಬೋಧನೆ ಮಾಡುತ್ತಿರುವ ಡಾ.ಸುರೇಶ್ ಪಾಲ್ ಗಿರಿ ಮಾತನಾಡುತ್ತಾ, "ನಾನು ಥಾಯ್ಲೆಂಡ್‌ನ ಧಾರ್ಮಿಕ ವಿಶ್ವವಿದ್ಯಾಲಯದಲ್ಲಿ ಭೋಧನೆ ಮಾಡುತ್ತೇನೆ. ಇಲ್ಲಿ ಹಿಂದೂ ಧರ್ಮದ ಬೇರುಗಳು ಇರುವುದನ್ನು ಗಮನಿಸಬಹುವುದು. ಕಾಲಾನಂತರದಲ್ಲಿ ಬೌದ್ಧ ಮತ್ತು ಹಿಂದೂ ಧರ್ಮಗಳು ಇಲ್ಲಿ ಬೆರೆತವು'' ಎಂದು ಅವರು ಹೇಳುತ್ತಾರೆ.

"ಭಾರತದ ಅಯೋಧ್ಯೆ ಮತ್ತು ಥಾಯ್ಲೆಂಡ್‌ನ ಅಯೋಧ್ಯೆಯ ನಡುವಿನ ಸಾಮ್ಯತೆ ಏನೆಂದರೆ, ನಮ್ಮ ಪೂರ್ವಜರು, ನಮ್ಮ ಅಸ್ತಿತ್ವ ಮತ್ತು ನಮ್ಮ ಸಂಪ್ರದಾಯಗಳನ್ನು ನಾವು ಮರೆತಿಲ್ಲ. ಇಷ್ಟು ವರ್ಷಗಳ ನಂತರವೂ ಶ್ರೀರಾಮನನ್ನು ನಂಬುತ್ತೇವೆ. ಥಾಯ್ಲೆಂಡ್‌ನಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತದೆ. ಭಾರತದಂತೆ ಅಯುತ್ಥಾಯ ನಗರದಲ್ಲಿ ರಾಜ ಕೆಲವು ಹಿಂದೂ ದೇವಾಲಯಗಳನ್ನು ನಿರ್ಮಿಸಿದ್ದಾನೆ. ಅಯುತ್ಥಾಯದಿಂದ 35 ಕಿಲೋಮೀಟರ್ ದೂರದಲ್ಲಿ, ವಿಷ್ಣು, ಬ್ರಹ್ಮ ಮತ್ತು ಶಂಕರನ ದೇವಾಲಯವಿದೆ" ಎಂದು ತಿಳಿಸಿದರು.

ಅಯುತ್ಥಾಯ ನಗರದ ವಿಶೇಷತೆ: ಥಾಯ್ಲೆಂಡ್‌ನ ಪ್ರಸಿದ್ಧ ನಗರವನ್ನು ಅಯುತ್ಥಾಯದಲ್ಲಿ ರಾಜರು 'ರಾಮ್ ಅತಿಬೋಧಿ' (ಲಾರ್ಡ್ ರಾಮ್ ಎ) ಎಂಬ ಬಿರುದು ಹೊಂದಿದ್ದರು. ಭಗವಾನ್ ರಾಮನ ರಾಜಧಾನಿ ಅಯೋಧ್ಯೆಯಂತೆ ಥಾಯ್ಲೆಂಡ್‌ನ ಅಯುತ್ಥಾಯ ಕೂಡ ಮಹತ್ವ ಪಡೆದಿದೆ. ಕ್ರಿ.ಶ. 1351ರಿಂದ ಸಯಾಮಿ ಆಡಳಿತಗಾರರ ರಾಜಧಾನಿಯಾಗಿದ್ದ ಅಯುತ್ಥಾಯವನ್ನು ಬರ್ಮಾ ಪಡೆಗಳು 1767ರಲ್ಲಿ ಲೂಟಿ ಮಾಡಿ ಸಂಪೂರ್ಣವಾಗಿ ನಾಶಪಡಿಸಿದ್ದವು. ಥಾಯ್ಲೆಂಡ್​ನ ಧಾರ್ಮಿಕ ಹೆಸರು ರಾಮ್ ಕೀನ್. ಇದು ಥಾಯ್ ರಾಮ್ ಅಯಾನದಂತೆಯೇ ಸ್ಥಾನಮಾನ ಹೊಂದಿದೆ.

'300 ರಾಮ್ ಅಯನ' ಪುಸ್ತಕ ಬರೆದ ರಾಮ್ ಅನುಜನ್ ಈ ಪುಸ್ತಕವನ್ನು ವಾಲ್ಮೀಕಿ ರಾಮ್ ಅಯನದೊಂದಿಗೆ ಹೋಲಿಸಿದ್ದಾರೆ. ಇದನ್ನು 18ನೇ ಶತಮಾನದಲ್ಲಿ ಕಿಂಗ್ ರಾಮ್ -1 ಹೊಸದಾಗಿ ರಚಿಸಿದ್ದಾರೆ ಎಂದು ನಂಬಲಾಗಿದೆ. ಈ ಪುಸ್ತಕದ ಮುಖ್ಯ ಖಳನಾಯಕ ತೋತ್ಸಕನ್ ಹಿಂದೂ ಪಠ್ಯದ ರಾವಣನಂತೆ. ಈ ಪುಸ್ತಕವು ರಾಮನ ಆದರ್ಶಗಳನ್ನು ಒಳಗೊಂಡಿದೆ. ಈಗ ಥಾಯ್ಲೆಂಡ್​ನ ಅಯೋಧ್ಯೆಯ (ಅಯುತ್ಥಾಯ) ಅವಶೇಷಗಳು ದೊಡ್ಡ ಪ್ರದೇಶದಲ್ಲಿ ಹರಡಿಕೊಂಡಿವೆ. ಅಯುತ್ಥಾಯ ಪ್ರದೇಶವು ಯುನೆಸ್ಕೋ (UNESCO) ವಿಶ್ವ ಪಾರಂಪರಕ ಪಟ್ಟಿಯಲ್ಲಿ ಸೇರಿಕೊಂಡಿದೆ.

ಇದನ್ನೂ ಓದಿ: ಮೈತೇಯಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣದೀಪ್ ಹೂಡಾ-ಲಿನ್ ಲೈಶ್ರಾಮ್:ವಿಡಿಯೋ

ಅಯುತ್ಥಾಯ(ಬ್ಯಾಂಕಾಕ್): ಉತ್ತರ ಪ್ರದೇಶದ ಪ್ರಸಿದ್ಧ ಅಯೋಧ್ಯಾ ನಗರಿಯಂತೆ ದೂರದ ಥಾಯ್ಲೆಂಡ್‌ನಲ್ಲೂ ಒಂದು ಅಯೋಧ್ಯೆ ಇದೆ. ಆದರೆ ಈ ಸ್ಥಳಕ್ಕೆ ಅಯೋಧ್ಯೆ ಎಂಬ ಹೆಸರಿಲ್ಲ ಅಷ್ಟೇ. ಆದರೆ, ಇಲ್ಲಿನ ರಾಜರು ತಮ್ಮ ಹೆಸರಿನಲ್ಲಿ ರಾಮನ ಬಿರುದನ್ನು ಸಾಮಾನ್ಯವಾಗಿ ಹೊಂದಿದ್ದಾರೆ. ಇದು ಇಲ್ಲಿನ ಪುರಾತನ ಸಂಪ್ರದಾಯ. ಭಾರತದ ಅಯೋಧ್ಯೆ ಮತ್ತು ಥಾಯ್ಲೆಂಡ್‌ನ ಅಯೋಧ್ಯೆಯ ನಡುವಿನ ಸಾಮ್ಯತೆಗಳೇನು? ಥಾಯ್ಲೆಂಡ್‌ ಅಯೋಧ್ಯೆಯನ್ನು 'ಅಯುತ್ಥಾಯ' ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ರಾಜವಂಶವಿದೆ. ಪ್ರತಿಯೊಬ್ಬ ರಾಜನನ್ನೂ ರಾಮನ ಅವತಾರವೆಂದೇ ಜನರು ಪರಿಗಣಿಸುತ್ತಾರೆ.

ಥಾಯ್ಲೆಂಡ್​ನಲ್ಲಿ 22 ವರ್ಷಗಳಿಂದ ಬೋಧನೆ ಮಾಡುತ್ತಿರುವ ಡಾ.ಸುರೇಶ್ ಪಾಲ್ ಗಿರಿ ಮಾತನಾಡುತ್ತಾ, "ನಾನು ಥಾಯ್ಲೆಂಡ್‌ನ ಧಾರ್ಮಿಕ ವಿಶ್ವವಿದ್ಯಾಲಯದಲ್ಲಿ ಭೋಧನೆ ಮಾಡುತ್ತೇನೆ. ಇಲ್ಲಿ ಹಿಂದೂ ಧರ್ಮದ ಬೇರುಗಳು ಇರುವುದನ್ನು ಗಮನಿಸಬಹುವುದು. ಕಾಲಾನಂತರದಲ್ಲಿ ಬೌದ್ಧ ಮತ್ತು ಹಿಂದೂ ಧರ್ಮಗಳು ಇಲ್ಲಿ ಬೆರೆತವು'' ಎಂದು ಅವರು ಹೇಳುತ್ತಾರೆ.

"ಭಾರತದ ಅಯೋಧ್ಯೆ ಮತ್ತು ಥಾಯ್ಲೆಂಡ್‌ನ ಅಯೋಧ್ಯೆಯ ನಡುವಿನ ಸಾಮ್ಯತೆ ಏನೆಂದರೆ, ನಮ್ಮ ಪೂರ್ವಜರು, ನಮ್ಮ ಅಸ್ತಿತ್ವ ಮತ್ತು ನಮ್ಮ ಸಂಪ್ರದಾಯಗಳನ್ನು ನಾವು ಮರೆತಿಲ್ಲ. ಇಷ್ಟು ವರ್ಷಗಳ ನಂತರವೂ ಶ್ರೀರಾಮನನ್ನು ನಂಬುತ್ತೇವೆ. ಥಾಯ್ಲೆಂಡ್‌ನಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತದೆ. ಭಾರತದಂತೆ ಅಯುತ್ಥಾಯ ನಗರದಲ್ಲಿ ರಾಜ ಕೆಲವು ಹಿಂದೂ ದೇವಾಲಯಗಳನ್ನು ನಿರ್ಮಿಸಿದ್ದಾನೆ. ಅಯುತ್ಥಾಯದಿಂದ 35 ಕಿಲೋಮೀಟರ್ ದೂರದಲ್ಲಿ, ವಿಷ್ಣು, ಬ್ರಹ್ಮ ಮತ್ತು ಶಂಕರನ ದೇವಾಲಯವಿದೆ" ಎಂದು ತಿಳಿಸಿದರು.

ಅಯುತ್ಥಾಯ ನಗರದ ವಿಶೇಷತೆ: ಥಾಯ್ಲೆಂಡ್‌ನ ಪ್ರಸಿದ್ಧ ನಗರವನ್ನು ಅಯುತ್ಥಾಯದಲ್ಲಿ ರಾಜರು 'ರಾಮ್ ಅತಿಬೋಧಿ' (ಲಾರ್ಡ್ ರಾಮ್ ಎ) ಎಂಬ ಬಿರುದು ಹೊಂದಿದ್ದರು. ಭಗವಾನ್ ರಾಮನ ರಾಜಧಾನಿ ಅಯೋಧ್ಯೆಯಂತೆ ಥಾಯ್ಲೆಂಡ್‌ನ ಅಯುತ್ಥಾಯ ಕೂಡ ಮಹತ್ವ ಪಡೆದಿದೆ. ಕ್ರಿ.ಶ. 1351ರಿಂದ ಸಯಾಮಿ ಆಡಳಿತಗಾರರ ರಾಜಧಾನಿಯಾಗಿದ್ದ ಅಯುತ್ಥಾಯವನ್ನು ಬರ್ಮಾ ಪಡೆಗಳು 1767ರಲ್ಲಿ ಲೂಟಿ ಮಾಡಿ ಸಂಪೂರ್ಣವಾಗಿ ನಾಶಪಡಿಸಿದ್ದವು. ಥಾಯ್ಲೆಂಡ್​ನ ಧಾರ್ಮಿಕ ಹೆಸರು ರಾಮ್ ಕೀನ್. ಇದು ಥಾಯ್ ರಾಮ್ ಅಯಾನದಂತೆಯೇ ಸ್ಥಾನಮಾನ ಹೊಂದಿದೆ.

'300 ರಾಮ್ ಅಯನ' ಪುಸ್ತಕ ಬರೆದ ರಾಮ್ ಅನುಜನ್ ಈ ಪುಸ್ತಕವನ್ನು ವಾಲ್ಮೀಕಿ ರಾಮ್ ಅಯನದೊಂದಿಗೆ ಹೋಲಿಸಿದ್ದಾರೆ. ಇದನ್ನು 18ನೇ ಶತಮಾನದಲ್ಲಿ ಕಿಂಗ್ ರಾಮ್ -1 ಹೊಸದಾಗಿ ರಚಿಸಿದ್ದಾರೆ ಎಂದು ನಂಬಲಾಗಿದೆ. ಈ ಪುಸ್ತಕದ ಮುಖ್ಯ ಖಳನಾಯಕ ತೋತ್ಸಕನ್ ಹಿಂದೂ ಪಠ್ಯದ ರಾವಣನಂತೆ. ಈ ಪುಸ್ತಕವು ರಾಮನ ಆದರ್ಶಗಳನ್ನು ಒಳಗೊಂಡಿದೆ. ಈಗ ಥಾಯ್ಲೆಂಡ್​ನ ಅಯೋಧ್ಯೆಯ (ಅಯುತ್ಥಾಯ) ಅವಶೇಷಗಳು ದೊಡ್ಡ ಪ್ರದೇಶದಲ್ಲಿ ಹರಡಿಕೊಂಡಿವೆ. ಅಯುತ್ಥಾಯ ಪ್ರದೇಶವು ಯುನೆಸ್ಕೋ (UNESCO) ವಿಶ್ವ ಪಾರಂಪರಕ ಪಟ್ಟಿಯಲ್ಲಿ ಸೇರಿಕೊಂಡಿದೆ.

ಇದನ್ನೂ ಓದಿ: ಮೈತೇಯಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣದೀಪ್ ಹೂಡಾ-ಲಿನ್ ಲೈಶ್ರಾಮ್:ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.