ETV Bharat / international

ಆಹಾರ ಭದ್ರತೆ ಸಮಸ್ಯೆಗೆ ತಂತ್ರಜ್ಞಾನವೇ ಪರಿಹಾರ: ಮೈಕ್ರೊಸಾಫ್ಟ್​ ಅಧ್ಯಕ್ಷ

author img

By

Published : Sep 1, 2022, 3:57 PM IST

ತಂತ್ರಜ್ಞಾನವನ್ನು ನಿಯಂತ್ರಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದು ಕಳೆದ ವರ್ಷ ಸ್ಮಿತ್ ಹೇಳಿದ್ದರು. ನನ್ನ ದೃಷ್ಟಿಯಲ್ಲಿ, ಡಿಜಿಟಲ್ ಸಾರ್ವಭೌಮತ್ವದ ಸುತ್ತಲಿನ ತತ್ವಗಳನ್ನು ಮುನ್ನಡೆಸುವಲ್ಲಿ ಭಾರತವು ಯುರೋಪಿಯನ್ ಯೂನಿಯನ್​ನೊಂದಿಗೆ ನಿಜವಾಗಿಯೂ ಮುಂಚೂಣಿಯಲ್ಲಿದೆ ಎಂದು ಸ್ಮಿತ್ ಮಾಧ್ಯಮ ಸಂವಾದದಲ್ಲಿ ಹೇಳಿದ್ದರು.

ಆಹಾರ ಭದ್ರತೆ ಸಮಸ್ಯೆಗೆ ತಂತ್ರಜ್ಞಾನವೇ ಪರಿಹಾರ: ಮೈಕ್ರೊಸಾಫ್ಟ್​ ಅಧ್ಯಕ್ಷ
Technology is the solution to food security problem: Microsoft President

ನವದೆಹಲಿ: ಹವಾಮಾನ ಬದಲಾವಣೆ ಮತ್ತು ಆಹಾರ ಭದ್ರತೆಯಂಥ ಭಾರತದ ಕೆಲವು ದೊಡ್ಡ ಸವಾಲುಗಳನ್ನು ಪರಿಹರಿಸಲು ತಂತ್ರಜ್ಞಾನವು ಸಹಾಯ ಮಾಡಬಹುದು ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್ ಗುರುವಾರ ಹೇಳಿದ್ದಾರೆ. ಈ ವಾರ ಭಾರತ ಪ್ರವಾಸದಲ್ಲಿರುವ ಸ್ಮಿತ್, ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ವಿಶ್ವ ದರ್ಜೆಯ ಆವಿಷ್ಕಾರಗಳ ಮೂಲಕ ದೇಶವು ದೈತ್ಯ ಸಾಧನೆ ಮಾಡಬಹುದು ಎಂದು ಹೇಳಿದರು. ದೇಶವು 75 ವರ್ಷಗಳ ಸ್ವಾತಂತ್ರ್ಯದ ಸಂಭ್ರಮದಲ್ಲಿರುವಾಗ ನಾನು ಭಾರತದಲ್ಲಿ ಇದ್ದೇನೆ ಎಂದು ಅವರು ತಿಳಿಸಿದರು.

ತಂತ್ರಜ್ಞಾನವು ಭಾರತದ ಕೆಲವು ದೊಡ್ಡ ಸವಾಲುಗಳನ್ನು ಪರಿಹರಿಸಲು ಹೇಗೆ ಸಹಾಯ ಮಾಡುತ್ತದೆ ಮತ್ತು ಭಾರತದ ಆವಿಷ್ಕಾರವು ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇದು ಕುತೂಹಲಕಾರಿ ಸಮಯ ಎಂದು ಸ್ಮಿತ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಟ್ವಿಟರ್ ಬಳಕೆದಾರರೊಬ್ಬರು, ಭಾರತಕ್ಕೆ ಸ್ವಾಗತ ಬ್ರಾಡ್. ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ ಮಾನವೀಯತೆಗೆ ದೊಡ್ಡ ಬೆದರಿಕೆಯಾಗಿದೆ ಮತ್ತು ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮೈಕ್ರೋಸಾಫ್ಟ್ ಅಧ್ಯಕ್ಷ ಸ್ಮಿತ್ ಇದಕ್ಕೂ ಮುನ್ನ ರಾಜಧಾನಿಯಲ್ಲಿ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿಯಾದರು. ಬ್ರಾಡ್ ಸ್ಮಿತ್ ಮತ್ತು ಮೈಕ್ರೋಸಾಫ್ಟ್ ಇಂಡಿಯಾದ ಅನಂತ್ ಮಹೇಶ್ವರಿ ಅವರು ನನ್ನ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಿದರು. ಉದಯೋನ್ಮುಖ ತಂತ್ರಜ್ಞಾನಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದರು ಎಂದು ಚಂದ್ರಶೇಖರ್ ಟ್ವೀಟ್ ಮಾಡಿದ್ದರು. ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಭಾರತ ಜಾಗತಿಕ ಸೂಪರ್ ಪವರ್ ಆಗಲಿದೆ ಎಂದು ಸ್ಮಿತ್ ಈ ಹಿಂದೆ ಹೇಳಿದ್ದರು.

ಇದನ್ನು ಓದಿ:WhatsApp ಹೊಸ ಫೀಚರ್‌: ಗ್ರೂಪ್​ ಅಡ್ಮಿನ್​ಗೆ ಇನ್ಮುಂದೆ ಈ ಆಯ್ಕೆ ಸಿಗುತ್ತೆ!

ನವದೆಹಲಿ: ಹವಾಮಾನ ಬದಲಾವಣೆ ಮತ್ತು ಆಹಾರ ಭದ್ರತೆಯಂಥ ಭಾರತದ ಕೆಲವು ದೊಡ್ಡ ಸವಾಲುಗಳನ್ನು ಪರಿಹರಿಸಲು ತಂತ್ರಜ್ಞಾನವು ಸಹಾಯ ಮಾಡಬಹುದು ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್ ಗುರುವಾರ ಹೇಳಿದ್ದಾರೆ. ಈ ವಾರ ಭಾರತ ಪ್ರವಾಸದಲ್ಲಿರುವ ಸ್ಮಿತ್, ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ವಿಶ್ವ ದರ್ಜೆಯ ಆವಿಷ್ಕಾರಗಳ ಮೂಲಕ ದೇಶವು ದೈತ್ಯ ಸಾಧನೆ ಮಾಡಬಹುದು ಎಂದು ಹೇಳಿದರು. ದೇಶವು 75 ವರ್ಷಗಳ ಸ್ವಾತಂತ್ರ್ಯದ ಸಂಭ್ರಮದಲ್ಲಿರುವಾಗ ನಾನು ಭಾರತದಲ್ಲಿ ಇದ್ದೇನೆ ಎಂದು ಅವರು ತಿಳಿಸಿದರು.

ತಂತ್ರಜ್ಞಾನವು ಭಾರತದ ಕೆಲವು ದೊಡ್ಡ ಸವಾಲುಗಳನ್ನು ಪರಿಹರಿಸಲು ಹೇಗೆ ಸಹಾಯ ಮಾಡುತ್ತದೆ ಮತ್ತು ಭಾರತದ ಆವಿಷ್ಕಾರವು ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇದು ಕುತೂಹಲಕಾರಿ ಸಮಯ ಎಂದು ಸ್ಮಿತ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಟ್ವಿಟರ್ ಬಳಕೆದಾರರೊಬ್ಬರು, ಭಾರತಕ್ಕೆ ಸ್ವಾಗತ ಬ್ರಾಡ್. ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ ಮಾನವೀಯತೆಗೆ ದೊಡ್ಡ ಬೆದರಿಕೆಯಾಗಿದೆ ಮತ್ತು ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮೈಕ್ರೋಸಾಫ್ಟ್ ಅಧ್ಯಕ್ಷ ಸ್ಮಿತ್ ಇದಕ್ಕೂ ಮುನ್ನ ರಾಜಧಾನಿಯಲ್ಲಿ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿಯಾದರು. ಬ್ರಾಡ್ ಸ್ಮಿತ್ ಮತ್ತು ಮೈಕ್ರೋಸಾಫ್ಟ್ ಇಂಡಿಯಾದ ಅನಂತ್ ಮಹೇಶ್ವರಿ ಅವರು ನನ್ನ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಿದರು. ಉದಯೋನ್ಮುಖ ತಂತ್ರಜ್ಞಾನಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದರು ಎಂದು ಚಂದ್ರಶೇಖರ್ ಟ್ವೀಟ್ ಮಾಡಿದ್ದರು. ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಭಾರತ ಜಾಗತಿಕ ಸೂಪರ್ ಪವರ್ ಆಗಲಿದೆ ಎಂದು ಸ್ಮಿತ್ ಈ ಹಿಂದೆ ಹೇಳಿದ್ದರು.

ಇದನ್ನು ಓದಿ:WhatsApp ಹೊಸ ಫೀಚರ್‌: ಗ್ರೂಪ್​ ಅಡ್ಮಿನ್​ಗೆ ಇನ್ಮುಂದೆ ಈ ಆಯ್ಕೆ ಸಿಗುತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.