ETV Bharat / international

ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು: ಕಾಶ್ಮೀರಿ ನಾಯಕತ್ವ, ಪ್ರತ್ಯೇಕತಾವಾದಿಗಳ ಮೇಲೇನು ಪರಿಣಾಮ?

author img

By

Published : Feb 24, 2023, 7:07 PM IST

Updated : Feb 24, 2023, 7:48 PM IST

ಪಾಕಿಸ್ತಾನದಲ್ಲಿ ಹಣದುಬ್ಬರ ಗಗನಕ್ಕೇರಿದೆ. ದೇಶದ ಆರ್ಥಿಕತೆ ದಿವಾಳಿಯಂಚಿಗೆ ಬಂದಿದೆ. ಇದರ ನಡುವೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ಬಗ್ಗೆ ನೆರೆರಾಷ್ಟ್ರ ಆಸಕ್ತಿ ತೋರಿದೆ. ಪಾಕ್‌ನ ಸದ್ಯದ ವಾಸ್ತವವನ್ನು ಈಟಿವಿ ಭಾರತ್​ ನೆಟ್‌ವರ್ಕ್‌ ಸಂಪಾದಕ ಬಿಲಾಲ್ ಭಟ್ ವಿಶ್ಲೇಷಿಸಿದ್ದಾರೆ.

pakistan-economic-crisis-its-impact-on-kashmiri-leadership-cadres-that-reside-there
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು

ಪಾಕಿಸ್ತಾನದ ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಪಾಕಿಸ್ತಾನವಷ್ಟೇ ಅಲ್ಲ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನೂ ಸರಿ ಸಮಾನವಾಗಿ ಕಾಡುತ್ತಿದೆ. ಏಕೆಂದರೆ, ಭಾರತದ ವಿರುದ್ಧ ಪ್ರತ್ಯೇಕತಾವಾದಿಗಳು ದಾಳಿ ಮಾಡಬಹುದು ಎಂಬ ದುರುದ್ದೇಶದಿಂದ ಆ ನಾಯಕರಿಗೆ ಪಾಕ್ ಆಶ್ರಯ ನೀಡಿದೆ. ಆದರೆ, ವಾಸ್ತವ ಬೇರೇನೇ ಇದೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಊಹಿಸಲಾಗದಷ್ಟು ಅಸ್ಥಿರಗೊಂಡಿದೆ. ಇಡೀ ದೇಶ ದಿವಾಳಿಯ ಅಂಚಿನಲ್ಲಿದೆ. ದಿನದಿನಕ್ಕೂ ಬತ್ತಿ ಹೋಗುತ್ತಿರುವ ಆರ್ಥಿಕತೆ ರಾಜಕೀಯ ಪ್ರಕ್ಷುಬ್ಧತೆಗೂ ಕಾರಣವಾಗಿದೆ.

ಪಾಕಿಸ್ತಾನ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಸದಾ ಬೆಂಬಲಿಸುತ್ತಲೇ ಬಂದಿದೆ. ಗಡಿ ಪ್ರದೇಶಗಳ ಬುಡಕಟ್ಟು ಜನಾಂಗದವರ ಪರಕೀಯತೆಯಿಂದಾಗಿ ಪ್ರತ್ಯೇಕತಾವಾದದ ಪಿಡುಗು ತನ್ನದೇ ಗಡಿಯೊಳಗೆ ಬೆಳೆದು ಬಿಟ್ಟಿದೆ. ವೈರಿಯ ವಿರುದ್ಧ ಸೇಡು ತೀರಿಸಿಕೊಳ್ಳುವಾಗ ನಮ್ಮಲ್ಲಿ ಎರಡು ಬುಲೆಟ್‌ಗಳಿರಬೇಕು ಎಂಬ ಗಾದೆ ಮಾತು. ಇದರ ಅರ್ಥ ಎರಡು ಬುಲೆಟ್​ಗಳು ಪೈಕಿ ಒಂದು ನಮ್ಮ ಶತ್ರುವಿಗೆ, ಮತ್ತೊಂದು ಸ್ವಯಂ ರಕ್ಷಣೆಗಾಗಿ ಎಂದಾಗುತ್ತದೆ.

1971ರಲ್ಲಿ ಈಗಿನ ಬಾಂಗ್ಲಾದೇಶದಿಂದ (ಆಗಿನ ಪೂರ್ವ ಪಾಕಿಸ್ತಾನದ) ಪ್ರತ್ಯೇಕ ರಾಷ್ಟ್ರಕ್ಕಾಗಿ ನಡೆದ ಪ್ರತ್ಯೇಕತಾವಾದಿ ಚಳುವಳಿಯನ್ನು ಭಾರತ ಬೆಂಬಲಿಸಿತ್ತು. ಹೀಗಾಗಿ ಪಾಕಿಸ್ತಾನವು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿತ್ತು. 1980ರ ದಶಕದಲ್ಲಿ ಪಾಕಿಸ್ತಾನ ಭಾರತ ವಿರುದ್ಧದ ಖಲಿಸ್ತಾನ್ ಚಳವಳಿಯನ್ನು ಬೆಂಬಲಿಸಿತ್ತು. ಆದರೆ, ಇದು ಭಾರತವನ್ನು ವಿಭಜಿಸುವ ವಿಫಲ ಪ್ರಯತ್ನವಾಗಿತ್ತು. ಇದರ ನಂತರ ಪಾಕಿಸ್ತಾನವು ತನ್ನ ಹಳೆಯ ಗುರಿಯಾದ ಕಾಶ್ಮೀರಕ್ಕೆ ತನ್ನ ಗಮನ ಕೇಂದ್ರೀಕರಿಸಿ, ಅನೇಕ ಬಾರಿ ಕಾಶ್ಮೀರವನ್ನು ಏಕೀಕರಿಸಲು ಪ್ರಯತ್ನಿಸುತ್ತಿದೆ.

ಕೆ-ಫ್ಯಾಕ್ಟರ್: ಕಾಶ್ಮೀರವು ಪಾಕಿಸ್ತಾನಿ ರಾಜಕಾರಣಿಗಳಿಗೆ ಉತ್ತಮವಾಗಿಯೇ ಕೆಲಸ ಮಾಡುತ್ತದೆ. ಕಾಶ್ಮೀರ ಪ್ರತ್ಯೇಕತಾವಾದದ ಪಕ್ಷ ಸೇರಿಕೊಂಡವರಿಗೆ ಚುನಾವಣಾ ರಾಜಕೀಯದಲ್ಲಿ ಸಹಾಯ ಮಾಡುತ್ತದೆ. ಇದೇ ವೇಳೆ ಕಾಶ್ಮೀರದ ಬಗ್ಗೆ ಅಸಮಾಧಾನ ತೋರಿದವರು ರಾಷ್ಟ್ರದ ಕ್ರೋಧವನ್ನು ಎದುರಿಸಬೇಕಾಗಿರುವುದು ಸ್ಪಷ್ಟ ಸತ್ಯ. ಇಡೀ ದೇಶವು ಸಾಕಷ್ಟು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವಾಗಲೂ ಕಾಶ್ಮೀರದ ವಿಷಯದಲ್ಲಿ ಈಗಲೂ ಇದೇ ನಿಲುವು ಹೊಂದಿದೆ. ಫೆಬ್ರವರಿ 23ರಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವು ಕಾಶ್ಮೀರದ ಕುರಿತು ಮತ್ತೊಮ್ಮೆ ಪ್ರಸ್ತಾಪಿಸಿತ್ತು. ತನ್ನ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆಯೋ, ಇಲ್ಲವೋ ಎಂಬುದರ ಬಗ್ಗೆಯೂ ಗಮನ ಕೊಡದೇ ಈ ವಿಚಾರ ಪ್ರಸ್ತಾಪ ಮಾಡಿತ್ತು.

ರಾಜಕೀಯ ಇಚ್ಛಾಶಕ್ತಿ ಕೊರತೆ: ಆಂತರಿಕ ಮತ್ತು ಬಾಹ್ಯ ಸಂಘರ್ಷಗಳಿಂದ ತನ್ನ ಸಂಪನ್ಮೂಲಗಳು ಬರಿದಾಗಿವೆ. ತನ್ನ ಆರ್ಥಿಕತೆಗೆ ಗೆದ್ದಲಿನಂತಿದೆ ಎಂಬುದನ್ನು ಪಾಕಿಸ್ತಾನವು ಅಕ್ಷರಶಃ ಮರೆತಿದೆ. ಇತ್ತೀಚಿನ ಪ್ರವಾಹಗಳು ಹಾನಿ ಮಾಡಿವೆ ಹಾಗೂ ದೇಶದ ಆರ್ಥಿಕತೆಯನ್ನು ಇನ್ನಷ್ಟು ಹದಗೆಡಿಸಿದೆ. ಪಾಕಿಸ್ತಾನವು ತನ್ನ ಬಜೆಟ್‌ನ ಹೆಚ್ಚಿನ ಭಾಗವನ್ನು ಸೇನೆಗಾಗಿಯೇ ಖರ್ಚು ಮಾಡುತ್ತದೆ. ಏಕೆಂದರೆ, ದೇಶವನ್ನು ಸ್ಥಾಪಿಸಿದಾಗಿನಿಂದ ತಾನು ಪಳಗಿಸುತ್ತಿರುವ ಈ ಬಿಳಿ ಆನೆಯನ್ನು ನಿರ್ವಹಿಸುವ ಅಗತ್ಯವಿದೆ. ತಮ್ಮ ಗಡಿ ಭಾಗದಲ್ಲಿ ಪ್ರತ್ಯೇಕತಾವಾದವನ್ನೇ ಹೊಂದಿದೆ. ಅಫ್ಘಾನಿಸ್ತಾನದ ಗಡಿಗಳ ಮೇಲೆ ನಿಗಾ ಇಡುತ್ತಿದೆ. ಪಾಕಿಸ್ತಾನದ ಯಾವುದೇ ರಾಜಕೀಯ ಪಕ್ಷವನ್ನು ತೆಗೆದುಕೊಂಡರೂ ಅದು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳ ಮೇಲೆ ಅವಲಂಬಿತವಾಗಿದೆ. ಯಾವುದೇ ನಾಯಕರು ಸಹ ಪ್ರತ್ಯೇಕತಾವಾದಿಗಳ ವಿರುದ್ಧ ಮಾತನಾಡುವ ಧೈರ್ಯವೂ ತೋರಲ್ಲ. ಒಟ್ಟಿನಲ್ಲಿ ಪಾಕಿಸ್ತಾನವೇ ಕುಸಿಯುವ ಹಂತ ಮತ್ತು ದೇಶದ ಅಸ್ತಿತ್ವವೇ ಅಪಾಯದಲ್ಲಿದೆ ಇರುವಾಗಲೂ ಕಾಶ್ಮೀರ ನೀತಿಯೇ ಅದಕ್ಕೆ ಪ್ರಮುಖವಾಗಿದೆ.

ಭಯೋತ್ಪಾದನೆಗೆ ಉತ್ತೇಜನ: ಯುನೈಟೆಡ್ ಜಿಹಾದ್ ಕೌನ್ಸಿಲ್. ಇದು ಕಾಶ್ಮೀರದಲ್ಲಿಮ ಅನೇಕ ಸಣ್ಣ ಉಗ್ರಗಾಮಿ ಸಂಘಟನೆಗಳ ಸಮ್ಮಿಶ್ರಣವಾಗಿದ್ದು, ಪಾಕಿಸ್ತಾನದಲ್ಲಿ ತನ್ನ ನೆಲೆಯನ್ನು ಹೊಂದಿದೆ. ಅಲ್ಲಿಯೇ ಇದರ ನಾಯಕ ಸೈಯದ್ ಸಲಾಹುದಿನ್ 20 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದಾನೆ. ಪ್ರತ್ಯೇಕತಾವಾದಿ ಗುಂಪುಗಳ ಈ ಒಕ್ಕೂಟವು ವಿಭಜಿತ ತಂತ್ರದೊಂದಿಗೆ ಕಾಶ್ಮೀರಕ್ಕೆ ಹೆಚ್ಚಿನ ಹಣ ಪೂರೈಕೆ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತದೆ. ಜೆಕೆಎಲ್​ಎಫ್​, ಹಿಜ್ಬ್ ಮತ್ತು ತೆಹ್ರೀಕ್ ಉಲ್ ಮುಜಾಹಿದ್ದೀನ್ ಹಾಗೂ ಇತ್ಯಾದಿ ಸಂಘಟನೆಗಳನ್ನು ಬಣಗಳಾಗಿ ವಿಂಗಡಿಸಲಾಗಿದೆ.

ಇದನ್ನೂ ಓದಿ: ಐಎಂಎಫ್​​ನೊಂದಿಗೆ ಮಾತುಕತೆ ವಿಫಲ: ಹಣವಿಲ್ಲದ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ

ಪ್ರಸ್ತುತ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಹಾಗೂ ದೇಶವು ಅನುಭವಿಸುತ್ತಿರುವ ಹಣ ದುಬ್ಬರವನ್ನು ಗಮನಿಸಿದರೆ, ಇಸ್ಲಾಮಾಬಾದ್ ಮತ್ತು ಇತರೆಡೆಗಳಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತ್ಯೇಕತಾವಾದಿ ಶಿಬಿರಗಳನ್ನು ನಿರ್ವಹಿಸುವುದು ಕೂಡ ಸವಾಲಾಗಿದೆ. ಕಾಶ್ಮೀರ ಉಗ್ರಗಾಮಿ ಗುಂಪುಗಳು ಪಾಕಿಸ್ತಾನದಲ್ಲಿ ತಮ್ಮ ಪ್ರತಿನಿಧಿಗಳನ್ನು ಹೊಂದಿದ್ದಾರೆ. ಈಗ ಆರ್ಥಿಕ ಬಿಕ್ಕಟ್ಟಿನ ಬಿಸಿಯಿಂದ ಮುಖ್ಯ ಕಮಾಂಡರ್‌ಗಳು ಸೇರಿದಂತೆ ಪ್ರತ್ಯೇಕತಾವಾದಿ ಗುಂಪುಗಳ ನಾಯಕರನ್ನು ಪೋಷಿಸಲು ದೇಶಕ್ಕೆ ಕಷ್ಟಕರವಾಗಿರುಬಹದು.

ಸಾಮಾಜಿಕ ಪರಿಣಾಮ: ದೇಶದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕತ್ವದ ಹೊರತಾಗಿ, ಹಣದುಬ್ಬರವು ಶ್ರೀಮಂತರು ಮತ್ತು ಬಡವರ ನಡುವಿನ ವಿಭಜನೆಯನ್ನೂ ವಿಸ್ತರಿಸಲಿದೆ. ಏಕೆಂದರೆ ಸಮಾಜದ ಎರಡು ವರ್ಗಗಳ ನಡುವೆ ಈಗಾಗಲೇ ದೊಡ್ಡ ಅಸಮಾನತೆ ಇದೆ. ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ವಾಸಿಸುವ ಕಾಶ್ಮೀರದ ಕಾರ್ಯಕರ್ತರು ಮತ್ತು ನಾಯಕರ ವಿಷಯದಲ್ಲಿ ಇದು ಸತ್ಯವೂ ಆಗಿದೆ. ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಸುಮಾರು 30 ಪ್ರತಿಶತದಷ್ಟು ಏರಿಕೆಯಾಗಿದೆ. ಇದರಿಂದಾಗಿ ಜನರು ಅನ್ನ ತಿನ್ನಲೂ ಸಹ ಕಷ್ಟಪಡುತ್ತಾರೆ. ಈಗಾಗಲೇ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಬಡತನವನ್ನು ಎದುರಿಸುತ್ತಿದ್ದಾರೆ. ಭಿಕ್ಷಾಟನೆಯ ಸ್ಥಿತಿಗೂ ಇಳಿದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಜನತೆಗೆ ವಿದ್ಯುತ್​ ಶಾಕ್​: ಪ್ರತಿ ಯೂನಿಟ್​ಗೆ ವಿಶೇಷ ಹೆಚ್ಚುವರಿ ಶುಲ್ಕ

ಐಎಂಎಫ್​ ಬೇಲ್ಔಟ್: ಮತ್ತೊಂದೆಡೆ, ಜಾಗತಿಕ ಸಾಲದಾತರಾದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)​ ಮತ್ತು ಪಾಕಿಸ್ತಾನದ ಸರ್ಕಾರದ ಒಪ್ಪಂದವು ಅಂತಿಮಗೊಳ್ಳುವ ಸಾಧ್ಯತೆಯೂ ಇಲ್ಲ. ಏಕೆಂದರೆ ಐಎಂಎಫ್​ನ ನ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ದೇಶವನ್ನು ದಿವಾಳಿತನದಿಂದ ರಕ್ಷಿಸಲು ಔಪಚಾರಿಕವಾಗಿ ಒಪ್ಪಿಕೊಳ್ಳುವ ಮೊದಲು ಹಲವಾರು ಷರತ್ತುಗಳನ್ನು ಹಾಕಿದ್ದಾರೆ. ಶ್ರೀಮಂತ ವ್ಯಕ್ತಿಗಳ ಆದಾಯದ ಮೇಲೆ ತೆರಿಗೆಗಳ ಹೆಚ್ಚಳ ಮತ್ತು ಅಗತ್ಯವಿರುವ ಬಡವರಿಗೆ ನೆರವು ನೀಡುವುದು ಸೇರಿದಂತೆ ಹಲವಾರು ಷರತ್ತುಗಳನ್ನು ಹಾಕಲಾಗಿದೆ. ಈ ಪ್ರಸ್ತಾವನೆಯನ್ನು ಒಪ್ಪಿಕೊಂಡರೆ ಆಡಳಿತ ಪಕ್ಷದ ಮೇಲೆ ದೀರ್ಘಕಾಲೀನ ಪ್ರಭಾವ ಸಹ ಬೀರಲಿದೆ. ಏಕೆಂದರೆ ಇದು ಶ್ರೀಮಂತರಿಗೆ ಕಿರುಕುಳ ಎಂದು ಭಾವನೆಯನ್ನು ಹುಟ್ಟುಹಾಕುತ್ತದೆ.

ವಿಘಟನೆ ಆರಂಭ: ಒಂದು ವಾರದ ಹಿಂದಷ್ಟೇ ರಾವಲ್ಪಿಂಡಿಯಲ್ಲಿ ಕಾಶ್ಮೀರಿ ಉಗ್ರಗಾಮಿ ನಾಯಕರ ನಿಗೂಢ ಹತ್ಯೆ ನಡೆದಿದೆ. ಇದು ಪಾಕಿಸ್ತಾನ ಮತ್ತು ಪ್ರತ್ಯೇಕತಾವಾದಿ ಗುಂಪಿನ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದರ ಸೂಚನೆಯಾಗಿದ್ದು, ಈಗಾಗಲೇ ವಿಭಜನೆ ಪ್ರಾರಂಭವಾಗಿದೆ. ಅದರಲ್ಲೂ ರಾವಲ್ಪಿಂಡಿಯಲ್ಲಿ ಜಿಹಾದ್ ಕೌನ್ಸಿಲ್‌ನ ಮುಖ್ಯಸ್ಥ ಹಾಗು ಜಾಗತಿಕ ಭಯೋತ್ಪಾದಕ ಸೈಯದ್ ಸಲಾವುದ್ದೀನ್ ಉಗ್ರರ ಅಂತ್ಯಕ್ರಿಯೆಯ ನೇತೃತ್ವ ವಹಿಸಿರುವುದು ಕಂಡುಬಂದಿದೆ. ಇನ್ನೊಂದೆಡೆ, FATF ಬೂದುಪಟ್ಟಿಯಿಂದ ಹೊರಬರಲು ಶತಾಯಗತಾಯ ಹೋರಾಡುತ್ತಿರುವ ದೇಶಕ್ಕೆ ಸೈಯದ್ ಸಲಾವುದ್ದೀನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಮತ್ತಷ್ಟು ಹಿನ್ನಡೆಯಾಗುತ್ತಿದೆ. ಹಣಕಾಸು ಕ್ರಿಯಾ ಕಾರ್ಯಪಡೆ (FATF), ಇದು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಪೂರೈಕೆಯಾಗುವ ಹಣಕಾಸಿನ ಮೇಲೆ ನಿಗಾವಹಿಸುವ ಅಂತರ್‌ಸರ್ಕಾರಗಳ ಕಾರ್ಯಪಡೆಯಾಗಿದೆ.

ಇದನ್ನೂ ಓದಿ: 'ಹಮೇ ಸಿರ್ಫ್‌ ಮೋದಿ ಚಾಯಿಯೇ..': ಪಾಕಿಸ್ತಾನಿ ಪ್ರಜೆಯ ಹತಾಶ ನುಡಿ- ವಿಡಿಯೋ

ಪಾಕಿಸ್ತಾನದ ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಪಾಕಿಸ್ತಾನವಷ್ಟೇ ಅಲ್ಲ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನೂ ಸರಿ ಸಮಾನವಾಗಿ ಕಾಡುತ್ತಿದೆ. ಏಕೆಂದರೆ, ಭಾರತದ ವಿರುದ್ಧ ಪ್ರತ್ಯೇಕತಾವಾದಿಗಳು ದಾಳಿ ಮಾಡಬಹುದು ಎಂಬ ದುರುದ್ದೇಶದಿಂದ ಆ ನಾಯಕರಿಗೆ ಪಾಕ್ ಆಶ್ರಯ ನೀಡಿದೆ. ಆದರೆ, ವಾಸ್ತವ ಬೇರೇನೇ ಇದೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಊಹಿಸಲಾಗದಷ್ಟು ಅಸ್ಥಿರಗೊಂಡಿದೆ. ಇಡೀ ದೇಶ ದಿವಾಳಿಯ ಅಂಚಿನಲ್ಲಿದೆ. ದಿನದಿನಕ್ಕೂ ಬತ್ತಿ ಹೋಗುತ್ತಿರುವ ಆರ್ಥಿಕತೆ ರಾಜಕೀಯ ಪ್ರಕ್ಷುಬ್ಧತೆಗೂ ಕಾರಣವಾಗಿದೆ.

ಪಾಕಿಸ್ತಾನ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಸದಾ ಬೆಂಬಲಿಸುತ್ತಲೇ ಬಂದಿದೆ. ಗಡಿ ಪ್ರದೇಶಗಳ ಬುಡಕಟ್ಟು ಜನಾಂಗದವರ ಪರಕೀಯತೆಯಿಂದಾಗಿ ಪ್ರತ್ಯೇಕತಾವಾದದ ಪಿಡುಗು ತನ್ನದೇ ಗಡಿಯೊಳಗೆ ಬೆಳೆದು ಬಿಟ್ಟಿದೆ. ವೈರಿಯ ವಿರುದ್ಧ ಸೇಡು ತೀರಿಸಿಕೊಳ್ಳುವಾಗ ನಮ್ಮಲ್ಲಿ ಎರಡು ಬುಲೆಟ್‌ಗಳಿರಬೇಕು ಎಂಬ ಗಾದೆ ಮಾತು. ಇದರ ಅರ್ಥ ಎರಡು ಬುಲೆಟ್​ಗಳು ಪೈಕಿ ಒಂದು ನಮ್ಮ ಶತ್ರುವಿಗೆ, ಮತ್ತೊಂದು ಸ್ವಯಂ ರಕ್ಷಣೆಗಾಗಿ ಎಂದಾಗುತ್ತದೆ.

1971ರಲ್ಲಿ ಈಗಿನ ಬಾಂಗ್ಲಾದೇಶದಿಂದ (ಆಗಿನ ಪೂರ್ವ ಪಾಕಿಸ್ತಾನದ) ಪ್ರತ್ಯೇಕ ರಾಷ್ಟ್ರಕ್ಕಾಗಿ ನಡೆದ ಪ್ರತ್ಯೇಕತಾವಾದಿ ಚಳುವಳಿಯನ್ನು ಭಾರತ ಬೆಂಬಲಿಸಿತ್ತು. ಹೀಗಾಗಿ ಪಾಕಿಸ್ತಾನವು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿತ್ತು. 1980ರ ದಶಕದಲ್ಲಿ ಪಾಕಿಸ್ತಾನ ಭಾರತ ವಿರುದ್ಧದ ಖಲಿಸ್ತಾನ್ ಚಳವಳಿಯನ್ನು ಬೆಂಬಲಿಸಿತ್ತು. ಆದರೆ, ಇದು ಭಾರತವನ್ನು ವಿಭಜಿಸುವ ವಿಫಲ ಪ್ರಯತ್ನವಾಗಿತ್ತು. ಇದರ ನಂತರ ಪಾಕಿಸ್ತಾನವು ತನ್ನ ಹಳೆಯ ಗುರಿಯಾದ ಕಾಶ್ಮೀರಕ್ಕೆ ತನ್ನ ಗಮನ ಕೇಂದ್ರೀಕರಿಸಿ, ಅನೇಕ ಬಾರಿ ಕಾಶ್ಮೀರವನ್ನು ಏಕೀಕರಿಸಲು ಪ್ರಯತ್ನಿಸುತ್ತಿದೆ.

ಕೆ-ಫ್ಯಾಕ್ಟರ್: ಕಾಶ್ಮೀರವು ಪಾಕಿಸ್ತಾನಿ ರಾಜಕಾರಣಿಗಳಿಗೆ ಉತ್ತಮವಾಗಿಯೇ ಕೆಲಸ ಮಾಡುತ್ತದೆ. ಕಾಶ್ಮೀರ ಪ್ರತ್ಯೇಕತಾವಾದದ ಪಕ್ಷ ಸೇರಿಕೊಂಡವರಿಗೆ ಚುನಾವಣಾ ರಾಜಕೀಯದಲ್ಲಿ ಸಹಾಯ ಮಾಡುತ್ತದೆ. ಇದೇ ವೇಳೆ ಕಾಶ್ಮೀರದ ಬಗ್ಗೆ ಅಸಮಾಧಾನ ತೋರಿದವರು ರಾಷ್ಟ್ರದ ಕ್ರೋಧವನ್ನು ಎದುರಿಸಬೇಕಾಗಿರುವುದು ಸ್ಪಷ್ಟ ಸತ್ಯ. ಇಡೀ ದೇಶವು ಸಾಕಷ್ಟು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವಾಗಲೂ ಕಾಶ್ಮೀರದ ವಿಷಯದಲ್ಲಿ ಈಗಲೂ ಇದೇ ನಿಲುವು ಹೊಂದಿದೆ. ಫೆಬ್ರವರಿ 23ರಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವು ಕಾಶ್ಮೀರದ ಕುರಿತು ಮತ್ತೊಮ್ಮೆ ಪ್ರಸ್ತಾಪಿಸಿತ್ತು. ತನ್ನ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆಯೋ, ಇಲ್ಲವೋ ಎಂಬುದರ ಬಗ್ಗೆಯೂ ಗಮನ ಕೊಡದೇ ಈ ವಿಚಾರ ಪ್ರಸ್ತಾಪ ಮಾಡಿತ್ತು.

ರಾಜಕೀಯ ಇಚ್ಛಾಶಕ್ತಿ ಕೊರತೆ: ಆಂತರಿಕ ಮತ್ತು ಬಾಹ್ಯ ಸಂಘರ್ಷಗಳಿಂದ ತನ್ನ ಸಂಪನ್ಮೂಲಗಳು ಬರಿದಾಗಿವೆ. ತನ್ನ ಆರ್ಥಿಕತೆಗೆ ಗೆದ್ದಲಿನಂತಿದೆ ಎಂಬುದನ್ನು ಪಾಕಿಸ್ತಾನವು ಅಕ್ಷರಶಃ ಮರೆತಿದೆ. ಇತ್ತೀಚಿನ ಪ್ರವಾಹಗಳು ಹಾನಿ ಮಾಡಿವೆ ಹಾಗೂ ದೇಶದ ಆರ್ಥಿಕತೆಯನ್ನು ಇನ್ನಷ್ಟು ಹದಗೆಡಿಸಿದೆ. ಪಾಕಿಸ್ತಾನವು ತನ್ನ ಬಜೆಟ್‌ನ ಹೆಚ್ಚಿನ ಭಾಗವನ್ನು ಸೇನೆಗಾಗಿಯೇ ಖರ್ಚು ಮಾಡುತ್ತದೆ. ಏಕೆಂದರೆ, ದೇಶವನ್ನು ಸ್ಥಾಪಿಸಿದಾಗಿನಿಂದ ತಾನು ಪಳಗಿಸುತ್ತಿರುವ ಈ ಬಿಳಿ ಆನೆಯನ್ನು ನಿರ್ವಹಿಸುವ ಅಗತ್ಯವಿದೆ. ತಮ್ಮ ಗಡಿ ಭಾಗದಲ್ಲಿ ಪ್ರತ್ಯೇಕತಾವಾದವನ್ನೇ ಹೊಂದಿದೆ. ಅಫ್ಘಾನಿಸ್ತಾನದ ಗಡಿಗಳ ಮೇಲೆ ನಿಗಾ ಇಡುತ್ತಿದೆ. ಪಾಕಿಸ್ತಾನದ ಯಾವುದೇ ರಾಜಕೀಯ ಪಕ್ಷವನ್ನು ತೆಗೆದುಕೊಂಡರೂ ಅದು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳ ಮೇಲೆ ಅವಲಂಬಿತವಾಗಿದೆ. ಯಾವುದೇ ನಾಯಕರು ಸಹ ಪ್ರತ್ಯೇಕತಾವಾದಿಗಳ ವಿರುದ್ಧ ಮಾತನಾಡುವ ಧೈರ್ಯವೂ ತೋರಲ್ಲ. ಒಟ್ಟಿನಲ್ಲಿ ಪಾಕಿಸ್ತಾನವೇ ಕುಸಿಯುವ ಹಂತ ಮತ್ತು ದೇಶದ ಅಸ್ತಿತ್ವವೇ ಅಪಾಯದಲ್ಲಿದೆ ಇರುವಾಗಲೂ ಕಾಶ್ಮೀರ ನೀತಿಯೇ ಅದಕ್ಕೆ ಪ್ರಮುಖವಾಗಿದೆ.

ಭಯೋತ್ಪಾದನೆಗೆ ಉತ್ತೇಜನ: ಯುನೈಟೆಡ್ ಜಿಹಾದ್ ಕೌನ್ಸಿಲ್. ಇದು ಕಾಶ್ಮೀರದಲ್ಲಿಮ ಅನೇಕ ಸಣ್ಣ ಉಗ್ರಗಾಮಿ ಸಂಘಟನೆಗಳ ಸಮ್ಮಿಶ್ರಣವಾಗಿದ್ದು, ಪಾಕಿಸ್ತಾನದಲ್ಲಿ ತನ್ನ ನೆಲೆಯನ್ನು ಹೊಂದಿದೆ. ಅಲ್ಲಿಯೇ ಇದರ ನಾಯಕ ಸೈಯದ್ ಸಲಾಹುದಿನ್ 20 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದಾನೆ. ಪ್ರತ್ಯೇಕತಾವಾದಿ ಗುಂಪುಗಳ ಈ ಒಕ್ಕೂಟವು ವಿಭಜಿತ ತಂತ್ರದೊಂದಿಗೆ ಕಾಶ್ಮೀರಕ್ಕೆ ಹೆಚ್ಚಿನ ಹಣ ಪೂರೈಕೆ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತದೆ. ಜೆಕೆಎಲ್​ಎಫ್​, ಹಿಜ್ಬ್ ಮತ್ತು ತೆಹ್ರೀಕ್ ಉಲ್ ಮುಜಾಹಿದ್ದೀನ್ ಹಾಗೂ ಇತ್ಯಾದಿ ಸಂಘಟನೆಗಳನ್ನು ಬಣಗಳಾಗಿ ವಿಂಗಡಿಸಲಾಗಿದೆ.

ಇದನ್ನೂ ಓದಿ: ಐಎಂಎಫ್​​ನೊಂದಿಗೆ ಮಾತುಕತೆ ವಿಫಲ: ಹಣವಿಲ್ಲದ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ

ಪ್ರಸ್ತುತ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಹಾಗೂ ದೇಶವು ಅನುಭವಿಸುತ್ತಿರುವ ಹಣ ದುಬ್ಬರವನ್ನು ಗಮನಿಸಿದರೆ, ಇಸ್ಲಾಮಾಬಾದ್ ಮತ್ತು ಇತರೆಡೆಗಳಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತ್ಯೇಕತಾವಾದಿ ಶಿಬಿರಗಳನ್ನು ನಿರ್ವಹಿಸುವುದು ಕೂಡ ಸವಾಲಾಗಿದೆ. ಕಾಶ್ಮೀರ ಉಗ್ರಗಾಮಿ ಗುಂಪುಗಳು ಪಾಕಿಸ್ತಾನದಲ್ಲಿ ತಮ್ಮ ಪ್ರತಿನಿಧಿಗಳನ್ನು ಹೊಂದಿದ್ದಾರೆ. ಈಗ ಆರ್ಥಿಕ ಬಿಕ್ಕಟ್ಟಿನ ಬಿಸಿಯಿಂದ ಮುಖ್ಯ ಕಮಾಂಡರ್‌ಗಳು ಸೇರಿದಂತೆ ಪ್ರತ್ಯೇಕತಾವಾದಿ ಗುಂಪುಗಳ ನಾಯಕರನ್ನು ಪೋಷಿಸಲು ದೇಶಕ್ಕೆ ಕಷ್ಟಕರವಾಗಿರುಬಹದು.

ಸಾಮಾಜಿಕ ಪರಿಣಾಮ: ದೇಶದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕತ್ವದ ಹೊರತಾಗಿ, ಹಣದುಬ್ಬರವು ಶ್ರೀಮಂತರು ಮತ್ತು ಬಡವರ ನಡುವಿನ ವಿಭಜನೆಯನ್ನೂ ವಿಸ್ತರಿಸಲಿದೆ. ಏಕೆಂದರೆ ಸಮಾಜದ ಎರಡು ವರ್ಗಗಳ ನಡುವೆ ಈಗಾಗಲೇ ದೊಡ್ಡ ಅಸಮಾನತೆ ಇದೆ. ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ವಾಸಿಸುವ ಕಾಶ್ಮೀರದ ಕಾರ್ಯಕರ್ತರು ಮತ್ತು ನಾಯಕರ ವಿಷಯದಲ್ಲಿ ಇದು ಸತ್ಯವೂ ಆಗಿದೆ. ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಸುಮಾರು 30 ಪ್ರತಿಶತದಷ್ಟು ಏರಿಕೆಯಾಗಿದೆ. ಇದರಿಂದಾಗಿ ಜನರು ಅನ್ನ ತಿನ್ನಲೂ ಸಹ ಕಷ್ಟಪಡುತ್ತಾರೆ. ಈಗಾಗಲೇ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಬಡತನವನ್ನು ಎದುರಿಸುತ್ತಿದ್ದಾರೆ. ಭಿಕ್ಷಾಟನೆಯ ಸ್ಥಿತಿಗೂ ಇಳಿದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಜನತೆಗೆ ವಿದ್ಯುತ್​ ಶಾಕ್​: ಪ್ರತಿ ಯೂನಿಟ್​ಗೆ ವಿಶೇಷ ಹೆಚ್ಚುವರಿ ಶುಲ್ಕ

ಐಎಂಎಫ್​ ಬೇಲ್ಔಟ್: ಮತ್ತೊಂದೆಡೆ, ಜಾಗತಿಕ ಸಾಲದಾತರಾದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)​ ಮತ್ತು ಪಾಕಿಸ್ತಾನದ ಸರ್ಕಾರದ ಒಪ್ಪಂದವು ಅಂತಿಮಗೊಳ್ಳುವ ಸಾಧ್ಯತೆಯೂ ಇಲ್ಲ. ಏಕೆಂದರೆ ಐಎಂಎಫ್​ನ ನ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ದೇಶವನ್ನು ದಿವಾಳಿತನದಿಂದ ರಕ್ಷಿಸಲು ಔಪಚಾರಿಕವಾಗಿ ಒಪ್ಪಿಕೊಳ್ಳುವ ಮೊದಲು ಹಲವಾರು ಷರತ್ತುಗಳನ್ನು ಹಾಕಿದ್ದಾರೆ. ಶ್ರೀಮಂತ ವ್ಯಕ್ತಿಗಳ ಆದಾಯದ ಮೇಲೆ ತೆರಿಗೆಗಳ ಹೆಚ್ಚಳ ಮತ್ತು ಅಗತ್ಯವಿರುವ ಬಡವರಿಗೆ ನೆರವು ನೀಡುವುದು ಸೇರಿದಂತೆ ಹಲವಾರು ಷರತ್ತುಗಳನ್ನು ಹಾಕಲಾಗಿದೆ. ಈ ಪ್ರಸ್ತಾವನೆಯನ್ನು ಒಪ್ಪಿಕೊಂಡರೆ ಆಡಳಿತ ಪಕ್ಷದ ಮೇಲೆ ದೀರ್ಘಕಾಲೀನ ಪ್ರಭಾವ ಸಹ ಬೀರಲಿದೆ. ಏಕೆಂದರೆ ಇದು ಶ್ರೀಮಂತರಿಗೆ ಕಿರುಕುಳ ಎಂದು ಭಾವನೆಯನ್ನು ಹುಟ್ಟುಹಾಕುತ್ತದೆ.

ವಿಘಟನೆ ಆರಂಭ: ಒಂದು ವಾರದ ಹಿಂದಷ್ಟೇ ರಾವಲ್ಪಿಂಡಿಯಲ್ಲಿ ಕಾಶ್ಮೀರಿ ಉಗ್ರಗಾಮಿ ನಾಯಕರ ನಿಗೂಢ ಹತ್ಯೆ ನಡೆದಿದೆ. ಇದು ಪಾಕಿಸ್ತಾನ ಮತ್ತು ಪ್ರತ್ಯೇಕತಾವಾದಿ ಗುಂಪಿನ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದರ ಸೂಚನೆಯಾಗಿದ್ದು, ಈಗಾಗಲೇ ವಿಭಜನೆ ಪ್ರಾರಂಭವಾಗಿದೆ. ಅದರಲ್ಲೂ ರಾವಲ್ಪಿಂಡಿಯಲ್ಲಿ ಜಿಹಾದ್ ಕೌನ್ಸಿಲ್‌ನ ಮುಖ್ಯಸ್ಥ ಹಾಗು ಜಾಗತಿಕ ಭಯೋತ್ಪಾದಕ ಸೈಯದ್ ಸಲಾವುದ್ದೀನ್ ಉಗ್ರರ ಅಂತ್ಯಕ್ರಿಯೆಯ ನೇತೃತ್ವ ವಹಿಸಿರುವುದು ಕಂಡುಬಂದಿದೆ. ಇನ್ನೊಂದೆಡೆ, FATF ಬೂದುಪಟ್ಟಿಯಿಂದ ಹೊರಬರಲು ಶತಾಯಗತಾಯ ಹೋರಾಡುತ್ತಿರುವ ದೇಶಕ್ಕೆ ಸೈಯದ್ ಸಲಾವುದ್ದೀನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಮತ್ತಷ್ಟು ಹಿನ್ನಡೆಯಾಗುತ್ತಿದೆ. ಹಣಕಾಸು ಕ್ರಿಯಾ ಕಾರ್ಯಪಡೆ (FATF), ಇದು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಪೂರೈಕೆಯಾಗುವ ಹಣಕಾಸಿನ ಮೇಲೆ ನಿಗಾವಹಿಸುವ ಅಂತರ್‌ಸರ್ಕಾರಗಳ ಕಾರ್ಯಪಡೆಯಾಗಿದೆ.

ಇದನ್ನೂ ಓದಿ: 'ಹಮೇ ಸಿರ್ಫ್‌ ಮೋದಿ ಚಾಯಿಯೇ..': ಪಾಕಿಸ್ತಾನಿ ಪ್ರಜೆಯ ಹತಾಶ ನುಡಿ- ವಿಡಿಯೋ

Last Updated : Feb 24, 2023, 7:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.