ಅಥೆನ್ಸ್ : ಗ್ರೀಕ್ನಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಭದ್ರತೆ ವಿಷಯವನ್ನೇ ಪ್ರಮುಖವಾಗಿ ಪ್ರಸ್ತಾಪಿಸಿ ಚುನಾವಣೆ ಎದುರಿಸಿದ್ದ ಕನ್ಸರ್ವೇಟಿವ್ ನ್ಯೂ ಡೆಮಾಕ್ರಸಿ ಪಕ್ಷವು ಭರ್ಜರಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. 2 ತಿಂಗಳ ಒಳಗಾಗಿ 2ನೇ ಬಾರಿಗೆ ಭಾನುವಾರ ಸಾರ್ವತ್ರಿಕ ಚುನಾವಣೆ ಮತದಾನ ನಡೆದಿತ್ತು.
ಅಥೆನ್ಸ್ನಲ್ಲಿರುವ ಪಕ್ಷದ ಪ್ರಧಾನ ಕಚೇರಿ ಹೊರಗೆ ಜಮಾಯಿಸಿದ ಬೆಂಬಲಿಗರು, ನೀಲಿ ಮತ್ತು ಬಿಳಿ ಬಣ್ಣದ ಪಕ್ಷದ ಧ್ವಜಗಳನ್ನು ಹಾರಿಸಿ, ಚಪ್ಪಾಳೆ ತಟ್ಟಿದರು. ಫಲಿತಾಂಶ ವೀಕ್ಷಿಸಿದಾಗ ಕನ್ಸರ್ವೇಟಿವ್ ನ್ಯೂ ಡೆಮಾಕ್ರಸಿ ಪಕ್ಷವು ಶೇ 40.5ರಷ್ಟು ಮತಗಳನ್ನು ಪಡೆದಕೊಂಡಿದೆ. ಅವರ ಪ್ರಮುಖ ಪ್ರತಿಸ್ಪರ್ಧಿ ಎಡಪಂಥೀಯ ಸಿರಿಜಾ ಪಕ್ಷವನ್ನು ಶೇ 18ಕ್ಕೆ ತಲುಪಲು ಸಹ ಹೆಣಗಾಡಿದೆ. ಇದು ಮೇ ತಿಂಗಳ ಕೊನೆಯಲ್ಲಿ ನಡೆದ ಚುನಾವಣೆಗಳಿಗಿಂತ ಶೇ 2 ರಷ್ಟು ಕಡಿಮೆಯಾಗಿದೆ.
ಗ್ರೀಸ್ನ ಕನ್ಸರ್ವೇಟಿವ್ ನ್ಯೂ ಡೆಮಾಕ್ರಸಿ ಪಕ್ಷದ ನಾಯಕ ಹಾಗೂ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಲಿರುವ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರು ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಆರ್ಥಿಕ ಸುಧಾರಣೆಗಳನ್ನು ವೇಗಗೊಳಿಸಲು ಪ್ರತಿಜ್ಞೆ ಮಾಡಿದ್ದಾರೆ. ಅಭಿವೃದ್ಧಿಯ ಕೆಲಸಗಳಿಗೆ ಮತ್ತಷ್ಟು ವೇಗ ನೀಡಲು ಬದ್ಧವಾಗಿದ್ದೇವೆ ಎಂದು ಘೋಷಿಸಿದ್ದಾರೆ.
ಈ ಕುರಿತು ದೂರದರ್ಶನವೊಂದರಲ್ಲಿ ಹೇಳಿಕೆ ನೀಡಿದ ಅವರು, 'ಉದ್ಯೋಗವಕಾಶಗಳು ಹೆಚ್ಚಲಿದ್ದು, ಅಸಮಾನತೆ ಕಡಿಮೆ ಮಾಡುವತ್ತ ಗಮನಹರಿಸಲಿದ್ದೇವೆ. ಜನತೆಗೆ ಉತ್ತಮ ಮತ್ತು ಉಚಿತ ಸಾರ್ವಜನಿಕ ಆರೋಗ್ಯ ಸೇವೆ ನೀಡುವ ಜೊತೆಗೆ ಮತ್ತು ಪ್ರಬಲ ದೇಶಗಳೊಂದಿಗೆ ಕೈಜೋಡಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದ್ದೇವೆ' ಎಂದರು.
ಒಂದು ವಾರದ ಹಿಂದಷ್ಟೆ ನೂರಾರು ಜನ ವಲಸಿಗರಿದ್ದ ಹಡಗು ಮುಳುಗಿತ್ತು. ಇದು ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿತ್ತು. ಗ್ರೀಸ್ನ ಪಶ್ಚಿಮ ಕರಾವಳಿಯಲ್ಲಿ ವಲಸಿಗರ ಹಡಗು ಮುಳುಗಿ ನೂರಾರು ಜನರು ಮೃತಪಟ್ಟಿದ್ದು, ಅನೇಕರು ಕಾಣೆಯಾಗಿದ್ದರು. ಈ ವೇಳೆ ಹಲವರು ಗ್ರೀಕ್ ಅಧಿಕಾರಿಗಳ ಕ್ರಮ ಮತ್ತು ದೇಶದ ಕಟ್ಟುನಿಟ್ಟಾದ ವಲಸೆ ನೀತಿಯನ್ನು ಪ್ರಶ್ನಿಸಿದ್ದರು. ಆದರೆ, ಇಲ್ಲಿನ ನಾಗರಿಕರು ದೇಶೀಯ ಆರ್ಥಿಕತೆ ಸುಧಾರಣೆಗೆ ಹೆಚ್ಚು ಒತ್ತು ನೀಡಿರುವುದರಿಂದ ಹಡಗು ಮುಳುಗಿರುವ ವಿಚಾರವು ಚುನಾವಣೆ ಫಲಿತಾಂಶದ ಮೇಲೆ ಅಷ್ಟಾಗಿ ಪ್ರಭಾವ ಬೀರಿರುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ: WFI Election : ಭಾರತದ ಕುಸ್ತಿ ಒಕ್ಕೂಟದ ಚುನಾವಣೆಗೆ ಗುವಾಹಟಿ ಹೈಕೋರ್ಟ್ ತಡೆ..
ಸಂಸತ್ತಿನ 300 ಸ್ಥಾನಗಳಲ್ಲಿ 158 ಸ್ಥಾನಗಳನ್ನು ಮಿಟ್ಸೊಟಾಕಿಸ್ ಪಕ್ಷವು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಮೇ ನಲ್ಲಿ ನಡೆದ ಚುನಾವಣೆಯಲ್ಲಿ ಬಹುದೊಡ್ಡ ಅಂತರದಿಂದ ಗೆದ್ದಿದ್ದ ಕನ್ಸರ್ವೇಟಿವ್ ಪಕ್ಷವು ಸರ್ಕಾರ ರಚಿಸುವಲ್ಲಿ ವಿಫಲವಾಗಿತ್ತು. ಮೇ ನಲ್ಲಿ ಶೇ 61ರಷ್ಟು ಮತದಾನ ನಡೆದಿತ್ತು. ಆದರೆ, ಭಾನುವಾರ ಕೇವಲ 53 ಕ್ಕಿಂತ ಕಡಿಮೆ ಮತದಾನವಾಗಿದೆ.
ಇದನ್ನೂ ಓದಿ: Lok Sabha election : ಬಿಜೆಪಿ ಸಜ್ಜುಗೊಳಿಸಲು ಅಮಿತ್ ಶಾ, ನಡ್ಡಾ, ಸಂತೋಷ್ ಚಾಲನೆ: ಯುವ ನಾಯಕರ ಪಡೆ ಕಟ್ಟಲು ಸಿದ್ಧತೆ