ETV Bharat / international

ರಾಜಕೀಯ ಅನಾಥರ ಅಧಿಕಾರ ಕುಸಿಯುತ್ತಿದೆ: ಇಮ್ರಾನ್​ ಖಾನ್​ ವಿರುದ್ಧ ಬಿಲಾವಾಲ್ ಭುಟ್ಟೋ ಟೀಕೆ - ಬಿಲಾವಾಲ್ ಭುಟ್ಟೋ ಲೇಟೆಸ್ಟ್ ನ್ಯೂಸ್

ರಾಜಕೀಯ ಅನಾಥರು ದೇಶವನ್ನು ಆಳುತ್ತಿರುವುದರಿಂದ ಪಾಕಿಸ್ತಾನದಲ್ಲಿ ನಾಯಕತ್ವ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂದು ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಾಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.

Bilawal Bhutto targets Imran Khan-led govt, ಇಮ್ರಾನ್​ ಖಾನ್​ ವಿರುದ್ಧ ಬಿಲಾವಾಲ್ ಭುಟ್ಟೋ ಟೀಕೆ
ಇಮ್ರಾನ್​ ಖಾನ್​ ವಿರುದ್ಧ ಬಿಲಾವಾಲ್ ಭುಟ್ಟೋ ಟೀಕೆ
author img

By

Published : Dec 28, 2019, 8:16 AM IST

ರಾವಲ್ಪಿಂಡಿ: ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಸರ್ಕಾರವನ್ನ ಜರೆದಿರುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಾಲ್ ಭುಟ್ಟೋ ಜರ್ದಾರಿ, ರಾಜಕೀಯ ಅನಾಥರ ಕೈಗೊಂಬೆ ಆಡಳಿತ ಕುಸಿಯುತ್ತಿದೆ ಎಂದು ಹೇಳಿದ್ದಾರೆ.

2007ರಲ್ಲಿ ಲಿಯಾಕತ್ ಬಾಗ್‌ನಲ್ಲಿ ಚುನಾವಣಾ ರ‍್ಯಾಲಿ ವೇಳೆ ಆತ್ಮಹತ್ಯಾ ಬಾಂಬ್​ ದಾಳಿಯಿಂದ ಸಾವಿಗೀಡಾದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ 12 ವರ್ಷದ ಪುಣ್ಯ ತಿಥಿ ನೆನಪಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಅನಾಥರು ದೇಶವನ್ನು ಆಳುತ್ತಿರುವುದರಿಂದ ಪಾಕಿಸ್ತಾನದಲ್ಲಿ ನಾಯಕತ್ವ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂದಿದ್ದಾರೆ.

ಈ ರಾಜಕೀಯ ಅನಾಥರ ಬಗ್ಗೆ ಬೆನಜೀರ್ ನಿಮಗೆ ಎಚ್ಚರಿಕೆ ನೀಡಿದರು. ಅವರು ತಮ್ಮ ರಾಜಕೀಯವನ್ನು ಹೇಗೆ ನಡೆಸುತ್ತಾರೆ ಎಂಬುದನ್ನು ನೋಡಿ. ಅವರು ಹೇಡಿಗಳು, ನವಾಜ್ ಷರೀಫ್ ಚಿಕಿತ್ಸೆಗಾಗಿ ಎಂದಿಗೂ ವಿದೇಶಕ್ಕೆ ಕಳಿಸುವುದಿಲ್ಲ ಎಂದು ಅವರು ಹೇಳಿದರು. ಆದರೆ ನವಾಜ್ ಷರೀಫ್ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ಹೋದರು. ಅಧ್ಯಕ್ಷ ಆಸಿಫ್ ಅಲಿ ಎಂದಿಗೂ ಜೈಲಿನಿಂದ ಹೊರಬರುವುದಿಲ್ಲ ಎಂದು ಹೇಳಿದರು. ಆದರೀಗ ಅವರು ಜೈಲಿನಿಂದ ಹೊರ ಬಂದಿದ್ದಾರೆ ಇವರು ಎಂದಿಗೂ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ.

ನನ್ನ ತಾತ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರ ಅಧಿಕಾರಾವಧಿಯಲ್ಲಿ ಕಾರ್ಮಿಕರಿಗೆ ಸೂಕ್ತ ಹಕ್ಕುಗಳನ್ನ ನೀಡಲಾಯಿತು. ತನ್ನ ತಾಯಿ ಅವರ ಜೀವಿತಾವಧಿಯಲ್ಲಿ ಇಬ್ಬರು ಸರ್ವಾಧಿಕಾರಿಗಳೊಂದಿಗೆ ಹೋರಾಡಿದರು. ಈ ಹೋರಾಟದಿಂದ ಅವರು ಎಂದೂ ಹಿಂದೆ ಸರಿಯಲಿಲ್ಲ ಎಂದಿದ್ದಾರೆ.

ರಾವಲ್ಪಿಂಡಿ: ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಸರ್ಕಾರವನ್ನ ಜರೆದಿರುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಾಲ್ ಭುಟ್ಟೋ ಜರ್ದಾರಿ, ರಾಜಕೀಯ ಅನಾಥರ ಕೈಗೊಂಬೆ ಆಡಳಿತ ಕುಸಿಯುತ್ತಿದೆ ಎಂದು ಹೇಳಿದ್ದಾರೆ.

2007ರಲ್ಲಿ ಲಿಯಾಕತ್ ಬಾಗ್‌ನಲ್ಲಿ ಚುನಾವಣಾ ರ‍್ಯಾಲಿ ವೇಳೆ ಆತ್ಮಹತ್ಯಾ ಬಾಂಬ್​ ದಾಳಿಯಿಂದ ಸಾವಿಗೀಡಾದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ 12 ವರ್ಷದ ಪುಣ್ಯ ತಿಥಿ ನೆನಪಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಅನಾಥರು ದೇಶವನ್ನು ಆಳುತ್ತಿರುವುದರಿಂದ ಪಾಕಿಸ್ತಾನದಲ್ಲಿ ನಾಯಕತ್ವ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂದಿದ್ದಾರೆ.

ಈ ರಾಜಕೀಯ ಅನಾಥರ ಬಗ್ಗೆ ಬೆನಜೀರ್ ನಿಮಗೆ ಎಚ್ಚರಿಕೆ ನೀಡಿದರು. ಅವರು ತಮ್ಮ ರಾಜಕೀಯವನ್ನು ಹೇಗೆ ನಡೆಸುತ್ತಾರೆ ಎಂಬುದನ್ನು ನೋಡಿ. ಅವರು ಹೇಡಿಗಳು, ನವಾಜ್ ಷರೀಫ್ ಚಿಕಿತ್ಸೆಗಾಗಿ ಎಂದಿಗೂ ವಿದೇಶಕ್ಕೆ ಕಳಿಸುವುದಿಲ್ಲ ಎಂದು ಅವರು ಹೇಳಿದರು. ಆದರೆ ನವಾಜ್ ಷರೀಫ್ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ಹೋದರು. ಅಧ್ಯಕ್ಷ ಆಸಿಫ್ ಅಲಿ ಎಂದಿಗೂ ಜೈಲಿನಿಂದ ಹೊರಬರುವುದಿಲ್ಲ ಎಂದು ಹೇಳಿದರು. ಆದರೀಗ ಅವರು ಜೈಲಿನಿಂದ ಹೊರ ಬಂದಿದ್ದಾರೆ ಇವರು ಎಂದಿಗೂ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ.

ನನ್ನ ತಾತ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರ ಅಧಿಕಾರಾವಧಿಯಲ್ಲಿ ಕಾರ್ಮಿಕರಿಗೆ ಸೂಕ್ತ ಹಕ್ಕುಗಳನ್ನ ನೀಡಲಾಯಿತು. ತನ್ನ ತಾಯಿ ಅವರ ಜೀವಿತಾವಧಿಯಲ್ಲಿ ಇಬ್ಬರು ಸರ್ವಾಧಿಕಾರಿಗಳೊಂದಿಗೆ ಹೋರಾಡಿದರು. ಈ ಹೋರಾಟದಿಂದ ಅವರು ಎಂದೂ ಹಿಂದೆ ಸರಿಯಲಿಲ್ಲ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.