ETV Bharat / international

0 ಅಂಕ ಪಡೆದವರು ಹೀರೋ ಆಗಬಹುದು: ವಿದ್ಯಾರ್ಥಿನಿಗೆ ಸ್ಫೂರ್ತಿ ತುಂಬಿದ ಗೂಗಲ್​ ಸಿಇಒ

author img

By

Published : Nov 22, 2019, 12:57 PM IST

ಅಮೆರಿಕದ ಬರ್ಕ್ಲೇಯಲ್ಲಿರುವ ಯೂನಿವರ್ಸಿಟಿ ಆಫ್​ ಕ್ಯಾಲಿಫೋರ್ನಿಯಾದಲ್ಲಿ ಪಿಹೆಚ್​ಡಿ ವಿದ್ಯಾರ್ಥಿನಿಯ ಟ್ವೀಟನ್ನು ಗೂಗಲ್​ ಸಿಇಒ ಸುಂದರ್​ ಪಿಚೈ ಶೇರ್ ಮಾಡಿದ್ದು ವಿಶ್ವದ ಗಮನ ಸಳೆದಿದೆ.

ಜೀರೋ ಪಡೆದವರು ಹೀರೋ ಆಗಬಹುದು

ಯುಎಸ್​ (ಬರ್ಕ್ಲೆ) : ಅಮೆರಿಕದ ಬರ್ಕ್ಲೆಯಲ್ಲಿರುವ ಯುನಿವರ್ಸಿಟಿ ಆಫ್​ ಕ್ಯಾಲಿಫೋರ್ನಿಯಾದಲ್ಲಿ ಪಿಹೆಚ್​ಡಿ ವಿದ್ಯಾರ್ಥಿನಿಯ ಟ್ವೀಟನ್ನು ಗೂಗಲ್​ ಸಿಇಒ ಸುಂದರ್​ ಪಿಚೈ ಶೇರ್ ಮಾಡಿ ಗಮನ ಸೆಳೆದಿದ್ದಾರೆ.

4 ವರ್ಷಗಳ ಹಿಂದೆ ನಾನು ಕ್ವಾಂಟಮ್ ಭೌತಶಾಸ್ತ್ರ ಪರೀಕ್ಷೆಯಲ್ಲಿ ಸೊನ್ನೆ ಅಂಕ ಪಡೆದಿದ್ದೆ. ಇದೇ ಭಯದಲ್ಲಿ ನಾನು ಪ್ರಾಧ್ಯಾಪಕರನ್ನು ಭೇಟಿ ಮಾಡಿ, ಭೌತಶಾಸ್ತ್ರವನ್ನು ತ್ಯಜಿಸಬೇಕೆಂದು ಭಯದಿಂದ ಹೇಳಿದ್ದೆ. ಆದರೆ ಇಂದು ನಾನು ಉನ್ನತ ಶ್ರೇಣಿಯ ಖಗೋಳ ಭೌತಶಾಸ್ತ್ರ ಪಿಹೆಚ್‌ಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಅಲ್ಲದೇ 2 ಪತ್ರಿಕೆಗಳನ್ನು ಸಹ ಪ್ರಕಟಿಸಿದ್ದೇನೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಎಲ್ಲರಿಗೂ ಕಷ್ಟದ ವಿಷಯಗಳೇ. ಆದರೆ ನೀವು ಪಡೆಯುವ ಶ್ರೇಣಿಯಿಂದ ನೀವು ಸಾಧಿಸಲು ಅಸಾಧ್ಯ ಎಂದು ಹೇಳಲು ಆಗಲ್ಲ ಎಂದು ಸರಫಿನಾ ನ್ಯಾನ್ಸ್ ಟ್ವೀಟ್​ ಮಾಡಿದ್ದರು. ಈ ಟ್ವೀಟ್‌ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಗಮನ ಸೆಳೆದಿದೆ.

ಪಿಹೆಚ್​ಡಿ ವಿದ್ಯಾರ್ಥಿನಿ ಸರಫಿನಾ ನ್ಯಾನ್ಸ್ ಟ್ವೀಟ್​ ಅನ್ನು ಗೂಗಲ್​ ಸಿಇಒ ಸುಂದರ್​ ಪಿಚಾಯಿ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದು, ಪರೀಕ್ಷೆಯಲ್ಲಿ ಗಳಿಸುವ ಅಂಕ ಸಾಧನೆಗೆ ಕೈಗನ್ನಡಿಯಲ್ಲ. ಸಾಧಿಸಲು ಅಚಲ ಉತ್ಸಾಹ, ಬಿಡದ ಛಲ ಮುಖ್ಯ ಎಂಬುದನ್ನು ಎತ್ತಿಹಿಡಿದಿದ್ದಾರೆ.

ಯುಎಸ್​ (ಬರ್ಕ್ಲೆ) : ಅಮೆರಿಕದ ಬರ್ಕ್ಲೆಯಲ್ಲಿರುವ ಯುನಿವರ್ಸಿಟಿ ಆಫ್​ ಕ್ಯಾಲಿಫೋರ್ನಿಯಾದಲ್ಲಿ ಪಿಹೆಚ್​ಡಿ ವಿದ್ಯಾರ್ಥಿನಿಯ ಟ್ವೀಟನ್ನು ಗೂಗಲ್​ ಸಿಇಒ ಸುಂದರ್​ ಪಿಚೈ ಶೇರ್ ಮಾಡಿ ಗಮನ ಸೆಳೆದಿದ್ದಾರೆ.

4 ವರ್ಷಗಳ ಹಿಂದೆ ನಾನು ಕ್ವಾಂಟಮ್ ಭೌತಶಾಸ್ತ್ರ ಪರೀಕ್ಷೆಯಲ್ಲಿ ಸೊನ್ನೆ ಅಂಕ ಪಡೆದಿದ್ದೆ. ಇದೇ ಭಯದಲ್ಲಿ ನಾನು ಪ್ರಾಧ್ಯಾಪಕರನ್ನು ಭೇಟಿ ಮಾಡಿ, ಭೌತಶಾಸ್ತ್ರವನ್ನು ತ್ಯಜಿಸಬೇಕೆಂದು ಭಯದಿಂದ ಹೇಳಿದ್ದೆ. ಆದರೆ ಇಂದು ನಾನು ಉನ್ನತ ಶ್ರೇಣಿಯ ಖಗೋಳ ಭೌತಶಾಸ್ತ್ರ ಪಿಹೆಚ್‌ಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಅಲ್ಲದೇ 2 ಪತ್ರಿಕೆಗಳನ್ನು ಸಹ ಪ್ರಕಟಿಸಿದ್ದೇನೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಎಲ್ಲರಿಗೂ ಕಷ್ಟದ ವಿಷಯಗಳೇ. ಆದರೆ ನೀವು ಪಡೆಯುವ ಶ್ರೇಣಿಯಿಂದ ನೀವು ಸಾಧಿಸಲು ಅಸಾಧ್ಯ ಎಂದು ಹೇಳಲು ಆಗಲ್ಲ ಎಂದು ಸರಫಿನಾ ನ್ಯಾನ್ಸ್ ಟ್ವೀಟ್​ ಮಾಡಿದ್ದರು. ಈ ಟ್ವೀಟ್‌ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಗಮನ ಸೆಳೆದಿದೆ.

ಪಿಹೆಚ್​ಡಿ ವಿದ್ಯಾರ್ಥಿನಿ ಸರಫಿನಾ ನ್ಯಾನ್ಸ್ ಟ್ವೀಟ್​ ಅನ್ನು ಗೂಗಲ್​ ಸಿಇಒ ಸುಂದರ್​ ಪಿಚಾಯಿ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದು, ಪರೀಕ್ಷೆಯಲ್ಲಿ ಗಳಿಸುವ ಅಂಕ ಸಾಧನೆಗೆ ಕೈಗನ್ನಡಿಯಲ್ಲ. ಸಾಧಿಸಲು ಅಚಲ ಉತ್ಸಾಹ, ಬಿಡದ ಛಲ ಮುಖ್ಯ ಎಂಬುದನ್ನು ಎತ್ತಿಹಿಡಿದಿದ್ದಾರೆ.

ನ್ಯೂರಾನ್ ಚಿತ್ರ ವಿಮರ್ಶೆ

ನ್ಯೂರಾನ್ – ಮನಸಿನ ತಲ್ಲಣ

ಅವದಿ – 132 ನಿಮಿಷ (2 ಘಂಟೆ 12 ನಿಮಿಷ), ಕ್ಯಾಟಗರಿ – ಸೈನ್ಸ್ ಥ್ರಿಲ್ಲರ್, ರೇಟಿಂಗ್ – 3/5

ಚಿತ್ರ – ನ್ಯೂರಾನ್, ನಿರ್ಮಾಪಕರು – ವಿನಯ್ ಕುಮಾರ್ ವಿ ಆರ್, ನಿರ್ದೇಶನ – ವಿಕಾಸ್ ಪುಷ್ಪಗಿರಿ, ಸಂಗೀತ – ಗುರುಕಿರಣ್, ಛಾಯಾಗ್ರಹಣ – ಶೋಯಬ್ ಅಹ್ಮದ್, ತಾರಾಗಣ – ಯುವ, ನೇಹ ಪಾಟಿಲ್, ವೈಷ್ಣವಿ, ಶಿಲ್ಪಾ ಶೆಟ್ಟಿ, ವರ್ಷ, ಕಭೀರ್ ಸಿಂಗ್ ದುಹಾನ್, ಅರವಿಂದ್ ರಾವ್, ಜೈ ಜಗದೀಶ್, ರಾಕ್ ಲೈನ್ ಸುಧಾಕರ್, ಕಾರ್ತಿಕ್ ಹಾಗೂ ಇತರರು.

ಮೊದಲ ಪ್ರಯತ್ನದಲ್ಲಿ ನಿರ್ದೇಶಕ ವಿಕಾಸ್ ಪುಷ್ಪಗಿರಿ ತಾಕತ್ತನ್ನು ಚನ್ನಾಗಿಯೇನೋ ಪ್ರದರ್ಶನ ಮಾಡಿದ್ದಾರೆ ಆದರೆ ಕೆಲವು ಅಸಂಬದ್ದ ವಿಚಾರಗಳಿಗೆ ಅವರು ನೀಡಿರುವ ಗಮನ ಬೇಕಿರಲಿಲ್ಲ. ಚಿತ್ರ ಒಂದು ಸೈಂಟಿಫಿಕ್ ಥ್ರಿಲ್ಲರ್ ಎಂದು ನಿರ್ಧರಿಸಿದ ಮೇಲೆ ಖಳನ ಕ್ರೂರತೆ, ಅದರ ಸುತ್ತ ಸುತ್ತುವ ಪೊಲೀಸ್ ಅಷ್ಟಾಗಿ ಹೊಂದಾಣಿಕೆ ಆಗುವುದಿಲ್ಲ. ನಾಯಕ ತನ್ನ ರಿವೇಂಜ್ ಅನ್ನು ಖಳ ನಟನನ್ನು ಹತ್ಯೆ ಮಾಡುವುದು ಒ ಕೆ ಆದರೆ ಖಳನ ಇನ್ನಿತರ ಬರ್ಬರ ವಿಚಾರಗಳು ಬೇಕಾಗಿರಲಿಲ್ಲ.

ವಿಕಾಸ್ ಪುಷ್ಪಗಿರಿ ಇಂಟರ್ವಲ್ ನಂತರದ ಚಿತ್ರಕಥೆಯನ್ನು ಬಿಗಿ ಮಾಡಿಕೊಂಡಿದ್ದಾರೆ. ನಾಯಕನ ಅಸಹಜ ಗುಣವನ್ನು ವ್ಯಕ್ತ ಮಾಡುತ್ತಾ ಗುಟ್ಟನ್ನು ಕೊನೆಯವರೆವಿಗೂ ಕಾಪಾಡುತ್ತಾರೆ.

ಏನಿದು ನ್ಯೂರಾನ್’? ಮನುಷ್ಯನ ಮೆದುಳಿನಲ್ಲಿ ನ್ಯೂರಾನ್ ಸೆಲ್ಸ್ ವೀಕ್ ಆದಾಗ ಅದು ಅವನ ಮೇಲೆ ಹೇಗೆ ಪರಿಣಾಮ ಬಿರುತ್ತದೆ ಎಂಬುದನ್ನ ಪ್ರೇಮ ಕಥೆಯೊಂದಿಗೆ ಬೆಸೆಸಿದ್ದಾರೆ ನಿರ್ದೇಶಕರು.

ಯುವ ಹಾಗೂ ರಶ್ಮಿಕ ಪ್ರೇಮಿಗಳು. ಆದರೆ ಅವರ ಪ್ರೇಮ ವಿವಾಹಕ್ಕೆ ತಿರುಗುವುದಕ್ಕೂ ಮುಂಚೆ ಅವರಿಬ್ಬರು ತಮ್ಮ ವೃತ್ತಿಯಲ್ಲಿ ಕೆಲವು ದಿವಸ ದೂರ ಇರ ಬೇಕಾಗುತ್ತದೆ. ಯುವ ಲಂಡನ್ ಅಲ್ಲಿ ಅಧ್ಯಯನಕ್ಕೆ ತೆರಳುತ್ತಾನೆ, ರಶ್ಮಿಕ ಮೊಬೈಲ್ ಸಿಗದೇ ಇರುವ ಸ್ಥಳದಲ್ಲಿ ವೃದ್ದಾಶ್ರಮಕ್ಕೆ ಸೇವೆಗೆ ತೆರಳುತ್ತಾಳೆ.

28 ದಿವಸ ಆದ ಮೇಲೆ ಪ್ರೇಮಿಗಳು ಬೇಟಿ ಮಾಡಬೇಕು ಎಂದು ನಿಶ್ಚಯ ಆಗಿದೆ. ಆದರೆ ರಶ್ಮಿಕ ಕಾಣೆಯಾಗಿದ್ದಾಳೆ. ಲಂಡನ್ ಇಂದ ವಾಪಸ್ಸಾದ ಯುವ ಪ್ರೇಯಸಿಯ ಹುಡುಕಾಟದಲ್ಲಿ ಯುವ ತೊಡಗುತ್ತಾನೆ, ಹತಾಶನಗುತ್ತಾನೆ, ನಷೆಗೆ ಗುರಿಯಾಗುತ್ತಾನೆ. ಆತನ ಬಾಳಿನಲ್ಲಿ ಅಂಜಲಿ ಜೋಸೆಫ್, ಡಾ ಚಾಂದಿನಿ ಆಗಮನ ಆಗುತ್ತದೆ. ಆದರೆ ಅಸಲಿಗೆ ಅದೆಲ್ಲವೂ ಅವನ ಕಪೋಲ ಕಲ್ಪಿತ ಸನ್ನಿವೇಶಗಳು. ನಾಯಕ ನಿಜಕ್ಕೂ ತೀವ್ರ  ಸ್ಕಿಜೋಫ್ರೆನಿಯ ಇಂದ ಬಳಲುತ್ತಿದ್ದಾನೆ ಎಂದು ವಿವರಿಸಲಾಗುವುದು. ಇದರ ಜೊತೆಗೆ ಅವನ ನಶೆ ಅವನನ್ನು ದಿಕ್ಕು ತಪ್ಪಿಸುತ್ತದೆ ಸಹ. ಯುವ ಆರೋಗ್ಯವನ್ನು ನೋಡಿಕೊಳ್ಳುವ ಡಾ ಅಶೋಕ್ ಒಂದು ಹಂತದಲ್ಲಿ ಕೆಲವು ಕಟು ಸತ್ಯಗಳನ್ನು ಬಹಿರಂಗ ಮಾಡುತ್ತಾರೆ.

ಯುವ ಹುಡುಕುತ್ತಿದ್ದ ರಶ್ಮಿಕ ಎನಾದಳು, ಯುವನ ಹುಡುಕಾಟದಲ್ಲಿ ಸಫಲ ಆಗುತ್ತಾನ...ಅವನ ಖಾಯಿಲೆಗೆ ಮದ್ದು ಸಿಕ್ಕಿತ....ಇದನೆಲ್ಲ ನೀವು ಚಿತ್ರ ಮಂದಿರದಲ್ಲಿ ನೋಡಬೇಕು.

ಯುವ ಮೊದಲ ಪ್ರಯತ್ನದಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದಾನೆ. ಸಂಭಾಷಣೆ ಶೈಲಿಯಲ್ಲಿ ಸರಿಯಾಗಬೇಕು ಅಷ್ಟೇ. ನೇಹ ಪಾಟೀಲ್ ಸೌಂದರ್ಯ, ವೈಷ್ಣವಿ, ಶಿಲ್ಪಾ ಶೆಟ್ಟಿ ಅಭಿನಯದಲ್ಲಿ ಲವಲವಿಕೆ ಇದೆ. ಜೈ ಜಗದೀಶ್ ವೈಧ್ಯರಾಗಿ, ಅರವಿಂದ್ ರಾವ್ ಪೊಲೀಸ್ ಆಗಿ ಗಮನ ಸೆಳೆಯುತ್ತಾರೆ.

ಚಿತ್ರಕ್ಕೆ ಹಿನ್ನಲೆ ಸಂಗೀತ ತಕ್ಕ ಮಟ್ಟಿಗೆ ಇದೆ, ಛಾಯಾಗ್ರಹಣ ಬೇಷ್ ಅನ್ನಬಹುದು. ಸಂಕಲನದಲ್ಲಿ ಮತ್ತಷ್ಟು ಕತ್ತರಿ ಅಗತ್ಯ ಇತ್ತು. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.