ETV Bharat / entertainment

ಪ್ರಿಯಾಂಕ ಉಪೇಂದ್ರ ಇನ್ನು ಅಭಿನಯ ಅಪ್ಸರೆ - Abhinaya Apsare

ಮಿಸ್ ನಂದಿನಿ ಸಿನೆಮಾ ತಂಡವು ಪ್ರಿಯಾಂಕ ಉಪೇಂದ್ರ ಅವರ ನಟನೆಗೆ ಮೆಚ್ಚಿ ಅಭಿನಯ ಅಪ್ಸರೆ ಎಂಬ ಬಿರುದನ್ನು ನೀಡಿದ್ದಾರೆ.

priyanka-upendra-titled-as-abhinaya-apsare
ಪ್ರಿಯಾಂಕ ಉಪೇಂದ್ರ ಇನ್ನು ಅಭಿನಯ ಅಪ್ಸರೆ
author img

By

Published : Aug 4, 2022, 1:07 PM IST

ಗ್ಲ್ಯಾಮರ್ ಜೊತೆಗೆ ತನ್ನ ವಿಶಿಷ್ಟ ಅಭಿನಯದಿಂದಲೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ಪ್ರಿಯಾಂಕ ಉಪೇಂದ್ರ. ಇವರ ಅಭಿನಯದ ಮಿಸ್ ನಂದಿನಿ ಸಿನೆಮಾದ ಆಫೀಶಿಯಲ್ ಟ್ರೈಲರ್ ಅನಾವರಣ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಮಿಸ್ ನಂದಿನಿ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅಮೋಘ ಅಭಿನಯ ನೋಡಿ, ಚಿತ್ರತಂಡ ಪ್ರಿಯಾಂಕ ಅವರಿಗೆ ಅಭಿನಯ ಅಪ್ಸರೆ ಎಂಬ ಬಿರುದು ನೀಡಿ ಗೌರವಿಸಿದ್ದಾರೆ.

priyanka-upendra-titled-as-abhinaya-apsare
ಪ್ರಿಯಾಂಕ ಉಪೇಂದ್ರ ಇನ್ನು ಅಭಿನಯ ಅಪ್ಸರೆ

ಈ ಬಿರುದನ್ನು ಸ್ವೀಕರಿಸಿದ ಮಾತನಾಡಿದ ಪ್ರಿಯಾಂಕ, ಈ ಚಿತ್ರ ತುಂಬಾ ಸೊಗಸಾಗಿ ಮೂಡಿಬಂದಿದೆ. ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದೇನೆ. ಇಂತಹ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ತುಂಬಾ ಧನ್ಯವಾದ. ಕನ್ನಡ ಅಷ್ಟು ಸ್ಪಷ್ಟವಾಗಿ ಮಾತನಾಡಲು ಬಾರದಿದ್ದರೂ ನಿರ್ದೇಶಕರು ಸೆಟ್‌ನಲ್ಲಿ ಹೇಳಿಕೊಡುತ್ತಿದ್ದರು. ಮಕ್ಕಳ ಜತೆ ನಟಿಸುವುದೇ ಒಂದು ರೀತಿಯ ಖುಷಿ ಸಿಗುತ್ತದೆ. ಅವರುಗಳ ಹಾಸ್ಯ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ. ತುಂಬಾ ಸಿನಿಮಾಗಳಲ್ಲಿ ಮಾಡುತ್ತಿದ್ದರೂ ಇಂತಹ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ ಎಂದು ಹೇಳಿದರು.

ಈ ಚಿತ್ರವನ್ನು ಸರ್ಕಾರಿ ಶಾಲೆಯಲ್ಲೇ ಚಿತ್ರೀಕರಣ ಮಾಡಲಾಗಿದೆ. ಇಂತಹ ಚಿತ್ರಕ್ಕೆ ನಾವೆಲ್ಲರೂ ಪ್ರೋತ್ಸಾಹ ಕೊಡಬೇಕು. ಅಭಿಮಾನಿಗಳು ಪ್ರೀತಿಯಿಂದ ಬಿರುದನ್ನು ನೀಡಿದ್ದಾರೆ. ಅವರಿಂದಲೇ ಚಿತ್ರರಂಗದಲ್ಲಿ 25 ವರ್ಷ ಸೇವೆ ಸಲ್ಲಿಸಿ ಇಲ್ಲಿಯ ತನಕ ಬಂದಿರುವುದಾಗಿ ಹೇಳಿದರು.

ಇನ್ನು ಪ್ರಿಯಾಂಕ ಉಪೇಂದ್ರ ಅಲ್ಲದೇ, ಮುಖ್ಯಮಂತ್ರಿಯಾಗಿ ಅಭಿನಯಿಸಿರುವ ಸಿದ್ಲಿಂಗು ಶ್ರೀಧರ್, ಶಿಕ್ಷಕರಾಗಿರುವ ಅಪ್ಪಣ್ಣ, ರಘು ಪಾಂಡೇಶ್ವರ್, ಅಧಿಕಾರಿಯಾಗಿರುವ ಯತಿರಾಜ್, ಶಾಸಕನಾಗಿ ಡ್ಯಾನಿಕುಟ್ಟಪ್ಪ, ವಕೀಲೆಯಾಗಿ ಲಕ್ಷೀ ಸಿದ್ದಯ್ಯ ಈ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ಸಾಯಿಸರ್ವೇಶ್ ನೀಡಿದ್ದಾರೆ.

priyanka-upendra-titled-as-abhinaya-apsare
ಪ್ರಿಯಾಂಕ ಉಪೇಂದ್ರ

ಸಿನೆಮಾದ ನಿರ್ದೇಶಕ ಗುರುದತ್.ಎಸ್.ಆರ್ ಮಾತನಾಡಿ, ಎಲ್ಲಾ ಮಕ್ಕಳು ಸರ್ಕಾರಿ ಶಾಲೆಯಲ್ಲೆ ಓದಬೇಕೆಂದು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಖಾಸಗಿ ಶಾಲೆಯಲ್ಲಿ ಇರುವಂತಹ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲೂ ಒದಗಿಸಬೇಕೆಂದು ಹೇಳಲಾಗಿದೆ. ಇದಕ್ಕೆ ಸರ್ಕಾರವು ಯಾವ ರೀತಿ ಸ್ಪಂದಿಸುತ್ತದೆ ಎನ್ನುವುದೇ ಚಿತ್ರದ ಸಾರಾಂಶ ಎಂದರು.

ಇನ್ನು ಮಿಸ್ ನಂದಿನಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಕಡೂರು ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಸರ್ಕಾರಿ ಶಾಲೆಯ ಸ್ಥಿತಿಗತಿಗಳ ಹಾಗೂ ಅಭಿವೃದ್ದಿ ಕುರಿತಂತೆ ಸಿನಿಮಾ ಮಾಡಿದ್ದಾರೆ. ಶಿಕ್ಷಣ ಉದಾರವಾಗಿರುವುದರಿಂದ ಖಾಸಗಿ ಶಾಲೆಯನ್ನು ವಿರೋಧಿಸುವ ಹಾಗಿಲ್ಲ. ಹಳ್ಳಿಯಲ್ಲಿ ಒಂದು ಖಾಸಗಿ ಶಾಲೆ ತೆರೆದರೆ, ಅದು ಹತ್ತು ಸರ್ಕಾರಿ ಶಾಲೆಯನ್ನು ಕಬಳಿಸುತ್ತದೆ. ಹಿಂದುಳಿದ, ದಲಿತ ವರ್ಗ ಇರುವ ಕಡೆ ಶಾಲೆಗಳು ಕುಂಠಿತವಾಗಿದೆ. ಇದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಶಿಕ್ಷಣ ಇಲಾಖೆ ಒಬ್ಬ ವಿದ್ಯಾರ್ಥಿಗೆ 4000 ಹಣವನ್ನು ಖರ್ಚು ಮಾಡುತ್ತಿದೆ. ಹಳ್ಳಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಶಾಲೆಯಲ್ಲಿ ಮಕ್ಕಳ ಕೊರತೆ ಅದು ಒಂದು ಕಾರಣವಾಗಿದೆ ಎಂದು ಅವರು ಹೇಳಿದರು.

priyanka-upendra-titled-as-abhinaya-apsare
ಮಿಸ್ ನಂದಿನಿ ಸಿನೆಮಾ ತಂಡ

ಈ ಸಿನಿಮಾವನ್ನು ಶ್ರೀ ವಿಜಯ್ ಫಿಲಿಂಸ್ ಮುಖಾಂತರ ನೀಲಕಂಠಸ್ವಾಮಿ ನಿರ್ಮಾಣ ಮಾಡಿದ್ದು, ಆಶಾರವರು ಸಹ ನಿರ್ಮಾಣ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್, ನಟಿ,ನಿರ್ದೇಶಕಿ ಶೀತಲ್‌ಶೆಟ್ಟಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಕನ್ನಡ ಬೆಳಸೋರ್ ಬೇಡ ಬಳಸೋರ್ ಬೇಕು’ ಎಂಬ ಅಡಿಬರಹ ಇರುವ ಮಿಸ್ ನಂದಿನಿ ಚಿತ್ರವು ಸೆಪ್ಟಂಬರ್ ತಿಂಗಳಲ್ಲಿ ತೆರೆಕಾಣುವ ಸಾದ್ಯತೆ ಇದೆ.

ಓದಿ : ಕಲಾಕಾರ್ ಹರೀಶ್ ರಾಜ್ ಸಿನಿಪಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ

ಗ್ಲ್ಯಾಮರ್ ಜೊತೆಗೆ ತನ್ನ ವಿಶಿಷ್ಟ ಅಭಿನಯದಿಂದಲೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ಪ್ರಿಯಾಂಕ ಉಪೇಂದ್ರ. ಇವರ ಅಭಿನಯದ ಮಿಸ್ ನಂದಿನಿ ಸಿನೆಮಾದ ಆಫೀಶಿಯಲ್ ಟ್ರೈಲರ್ ಅನಾವರಣ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಮಿಸ್ ನಂದಿನಿ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅಮೋಘ ಅಭಿನಯ ನೋಡಿ, ಚಿತ್ರತಂಡ ಪ್ರಿಯಾಂಕ ಅವರಿಗೆ ಅಭಿನಯ ಅಪ್ಸರೆ ಎಂಬ ಬಿರುದು ನೀಡಿ ಗೌರವಿಸಿದ್ದಾರೆ.

priyanka-upendra-titled-as-abhinaya-apsare
ಪ್ರಿಯಾಂಕ ಉಪೇಂದ್ರ ಇನ್ನು ಅಭಿನಯ ಅಪ್ಸರೆ

ಈ ಬಿರುದನ್ನು ಸ್ವೀಕರಿಸಿದ ಮಾತನಾಡಿದ ಪ್ರಿಯಾಂಕ, ಈ ಚಿತ್ರ ತುಂಬಾ ಸೊಗಸಾಗಿ ಮೂಡಿಬಂದಿದೆ. ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದೇನೆ. ಇಂತಹ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ತುಂಬಾ ಧನ್ಯವಾದ. ಕನ್ನಡ ಅಷ್ಟು ಸ್ಪಷ್ಟವಾಗಿ ಮಾತನಾಡಲು ಬಾರದಿದ್ದರೂ ನಿರ್ದೇಶಕರು ಸೆಟ್‌ನಲ್ಲಿ ಹೇಳಿಕೊಡುತ್ತಿದ್ದರು. ಮಕ್ಕಳ ಜತೆ ನಟಿಸುವುದೇ ಒಂದು ರೀತಿಯ ಖುಷಿ ಸಿಗುತ್ತದೆ. ಅವರುಗಳ ಹಾಸ್ಯ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ. ತುಂಬಾ ಸಿನಿಮಾಗಳಲ್ಲಿ ಮಾಡುತ್ತಿದ್ದರೂ ಇಂತಹ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ ಎಂದು ಹೇಳಿದರು.

ಈ ಚಿತ್ರವನ್ನು ಸರ್ಕಾರಿ ಶಾಲೆಯಲ್ಲೇ ಚಿತ್ರೀಕರಣ ಮಾಡಲಾಗಿದೆ. ಇಂತಹ ಚಿತ್ರಕ್ಕೆ ನಾವೆಲ್ಲರೂ ಪ್ರೋತ್ಸಾಹ ಕೊಡಬೇಕು. ಅಭಿಮಾನಿಗಳು ಪ್ರೀತಿಯಿಂದ ಬಿರುದನ್ನು ನೀಡಿದ್ದಾರೆ. ಅವರಿಂದಲೇ ಚಿತ್ರರಂಗದಲ್ಲಿ 25 ವರ್ಷ ಸೇವೆ ಸಲ್ಲಿಸಿ ಇಲ್ಲಿಯ ತನಕ ಬಂದಿರುವುದಾಗಿ ಹೇಳಿದರು.

ಇನ್ನು ಪ್ರಿಯಾಂಕ ಉಪೇಂದ್ರ ಅಲ್ಲದೇ, ಮುಖ್ಯಮಂತ್ರಿಯಾಗಿ ಅಭಿನಯಿಸಿರುವ ಸಿದ್ಲಿಂಗು ಶ್ರೀಧರ್, ಶಿಕ್ಷಕರಾಗಿರುವ ಅಪ್ಪಣ್ಣ, ರಘು ಪಾಂಡೇಶ್ವರ್, ಅಧಿಕಾರಿಯಾಗಿರುವ ಯತಿರಾಜ್, ಶಾಸಕನಾಗಿ ಡ್ಯಾನಿಕುಟ್ಟಪ್ಪ, ವಕೀಲೆಯಾಗಿ ಲಕ್ಷೀ ಸಿದ್ದಯ್ಯ ಈ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ಸಾಯಿಸರ್ವೇಶ್ ನೀಡಿದ್ದಾರೆ.

priyanka-upendra-titled-as-abhinaya-apsare
ಪ್ರಿಯಾಂಕ ಉಪೇಂದ್ರ

ಸಿನೆಮಾದ ನಿರ್ದೇಶಕ ಗುರುದತ್.ಎಸ್.ಆರ್ ಮಾತನಾಡಿ, ಎಲ್ಲಾ ಮಕ್ಕಳು ಸರ್ಕಾರಿ ಶಾಲೆಯಲ್ಲೆ ಓದಬೇಕೆಂದು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಖಾಸಗಿ ಶಾಲೆಯಲ್ಲಿ ಇರುವಂತಹ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲೂ ಒದಗಿಸಬೇಕೆಂದು ಹೇಳಲಾಗಿದೆ. ಇದಕ್ಕೆ ಸರ್ಕಾರವು ಯಾವ ರೀತಿ ಸ್ಪಂದಿಸುತ್ತದೆ ಎನ್ನುವುದೇ ಚಿತ್ರದ ಸಾರಾಂಶ ಎಂದರು.

ಇನ್ನು ಮಿಸ್ ನಂದಿನಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಕಡೂರು ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಸರ್ಕಾರಿ ಶಾಲೆಯ ಸ್ಥಿತಿಗತಿಗಳ ಹಾಗೂ ಅಭಿವೃದ್ದಿ ಕುರಿತಂತೆ ಸಿನಿಮಾ ಮಾಡಿದ್ದಾರೆ. ಶಿಕ್ಷಣ ಉದಾರವಾಗಿರುವುದರಿಂದ ಖಾಸಗಿ ಶಾಲೆಯನ್ನು ವಿರೋಧಿಸುವ ಹಾಗಿಲ್ಲ. ಹಳ್ಳಿಯಲ್ಲಿ ಒಂದು ಖಾಸಗಿ ಶಾಲೆ ತೆರೆದರೆ, ಅದು ಹತ್ತು ಸರ್ಕಾರಿ ಶಾಲೆಯನ್ನು ಕಬಳಿಸುತ್ತದೆ. ಹಿಂದುಳಿದ, ದಲಿತ ವರ್ಗ ಇರುವ ಕಡೆ ಶಾಲೆಗಳು ಕುಂಠಿತವಾಗಿದೆ. ಇದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಶಿಕ್ಷಣ ಇಲಾಖೆ ಒಬ್ಬ ವಿದ್ಯಾರ್ಥಿಗೆ 4000 ಹಣವನ್ನು ಖರ್ಚು ಮಾಡುತ್ತಿದೆ. ಹಳ್ಳಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಶಾಲೆಯಲ್ಲಿ ಮಕ್ಕಳ ಕೊರತೆ ಅದು ಒಂದು ಕಾರಣವಾಗಿದೆ ಎಂದು ಅವರು ಹೇಳಿದರು.

priyanka-upendra-titled-as-abhinaya-apsare
ಮಿಸ್ ನಂದಿನಿ ಸಿನೆಮಾ ತಂಡ

ಈ ಸಿನಿಮಾವನ್ನು ಶ್ರೀ ವಿಜಯ್ ಫಿಲಿಂಸ್ ಮುಖಾಂತರ ನೀಲಕಂಠಸ್ವಾಮಿ ನಿರ್ಮಾಣ ಮಾಡಿದ್ದು, ಆಶಾರವರು ಸಹ ನಿರ್ಮಾಣ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್, ನಟಿ,ನಿರ್ದೇಶಕಿ ಶೀತಲ್‌ಶೆಟ್ಟಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಕನ್ನಡ ಬೆಳಸೋರ್ ಬೇಡ ಬಳಸೋರ್ ಬೇಕು’ ಎಂಬ ಅಡಿಬರಹ ಇರುವ ಮಿಸ್ ನಂದಿನಿ ಚಿತ್ರವು ಸೆಪ್ಟಂಬರ್ ತಿಂಗಳಲ್ಲಿ ತೆರೆಕಾಣುವ ಸಾದ್ಯತೆ ಇದೆ.

ಓದಿ : ಕಲಾಕಾರ್ ಹರೀಶ್ ರಾಜ್ ಸಿನಿಪಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.