ETV Bharat / entertainment

'ಕಾಟೇರ' ಸಿನಿಮಾ ಹೇಗಿದೆ?: ಯಾರು, ಏನಂದ್ರು? ವಿಡಿಯೋ ನೋಡಿ

author img

By ETV Bharat Karnataka Team

Published : Dec 29, 2023, 6:32 PM IST

Kaatera: ಕಾಟೇರ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಸಿನಿಪ್ರಿಯರಿಂದ ಸಕಾರಾತ್ಮಕ ಸ್ಪಂದನೆ ಪಡೆಯುತ್ತಿದೆ.

Stars watched Kaatera movie
ಕಾಟೇರ ಸಿನಿಮಾ ವೀಕ್ಷಿಸಿದ ತಾರೆಯರು
ಕಾಟೇರ ಬಿಡುಗಡೆ- ಪ್ರತಿಕ್ರಿಯೆಗಳು

2023ರ ಕೊನೆಯಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟ ದರ್ಶನ್​ ಅಭಿನಯದ 'ಕಾಟೇರ' ಸಿನಿಮಾ ತೆರೆಕಂಡು ರಾಜ್ಯಾದ್ಯಂತ ಅಬ್ಬರಿಸುತ್ತಿದೆ. ಇದೊಂದು ನೈಜ ಘಟನಾಧರಿತ ಕಥೆ ಎಂದು ಹೇಳಿಕೊಂಡು ಬಂದಿದ್ದ ಚಿತ್ರತಂಡದ ಮಾತೀಗ ನಿಜವಾಗಿದೆ. ನಿನ್ನೆ ಮಧ್ಯರಾತ್ರಿಯೇ ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ. ಕಾಟೇರ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಗೊಳ್ಳುವ ಮೂಲಕ ಸಿನಿಪ್ರಿಯರಿಂದ ಜೈಕಾರ ಹಾಕಿಸಿಕೊಳ್ಳುತ್ತಿದೆ.

ಕಾಟೇರ ನಾಯಕಿ ಆರಾಧನಾ ರಾಮ್, ತಾಯಿ ಮಾಲಾಶ್ರೀ ಜೊತೆ ಬೆಂಗಳೂರಿನ ಅನುಪಮ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದರು. ಆ ಸಂದರ್ಭದಲ್ಲಿ ನಟಿ ಶೃತಿ ಕೂಡ ಫ್ಯಾನ್ಸ್ ಜೊತೆ ಕುಳಿತು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಅಲ್ಲದೇ ಸೆಲೆಬ್ರೇಷನ್​ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುವ ಅಭಿಮಾನಿಗಳು ಸೂಪರ್ ಹಿಟ್, ಬ್ಲಾಕ್​ಬಸ್ಟರ್, ಅದ್ಭುತ ಚಿತ್ರ ಎಂದೆಲ್ಲಾ ತಿಳಿಸುತ್ತಿದ್ದಾರೆ.

ಕಥೆ ಏನು?: 1989ರ ಸಮಯ, ಭೀಮನಹಳ್ಳಿ ಹಾಗೂ ಹಾನಹಳ್ಳಿ ಜನರು ಊರ ಜಾತ್ರೆಗೆ ಸಿದ್ಧತೆ ನಡೆಸಿರುತ್ತಾರೆ. ತನ್ನ ಊರಿಗಾಗಿ ಹೋರಾಡಿ ಜೈಲು ಸೇರಿದ 'ಕಾಟೇರ'ನಿಗೆ ಇಡೀ ಊರು ಕಾಯುತ್ತಿರುತ್ತದೆ. 10 ದಿನಗಳ ಕಾಲ ಪೆರೋಲ್ ಮೇಲೆ ಹೊರಬರುವ ಆತ ಊರಿನ ಹಾದಿ ಹಿಡಿಯುತ್ತಾನೆ. ಮತ್ತೊಂದು ಕಡೆ ನಾಲೆ ಅಗೆಯುವಾಗ ಒಂದೇ ಜಾಗದಲ್ಲಿ 107ರ ಜನರ ಅಸ್ತಿಪಂಜರ ಸಿಕ್ಕಿರುತ್ತದೆ. ಅದು ಯಾರ ಅಸ್ಥಿಪಂಜರ? ಒಮ್ಮೆಲೆ ಅಷ್ಟು ಜನ ಸತ್ತು ಮಣ್ಣಾಗಿದ್ದು ಹೇಗೆ? ಅವರಿಗೂ ಕಾಟೇರನಿಗೂ ಏನು ಸಂಬಂಧ? 70ರ ದಶಕದಲ್ಲಿ ಆ ಎರಡೂ ಊರುಗಳಲ್ಲಿ ನಡೆದ ಘಟನೆಗಳೇನು? ಕಾಟೇರ ಯಾವ ವಿಷ್ಯಕ್ಕೆ ಜೈಲು ಸೇರಿದ? ಎಂಬುದನ್ನು ತಿಳಿದುಕೊಳ್ಳಬೇಕಾದರೆ ನೀವು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲೇಬೇಕು.

'ಕಾಟೇರ' ಕಂಪ್ಲೀಟ್ ಮಾಸ್ ಎಂಟರ್​ಟೈನ್ಮೆಂಟ್ ಸಿನಿಮಾ. ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು ಎನ್ನುವ ಬೇಧ ಭಾವ ಆ ಕಾಲದಲ್ಲಿ ಎಷ್ಟರ ಮಟ್ಟಿಗಿತ್ತು ಎಂಬುದನ್ನು ತೋರಿಸಲಾಗಿದೆ. ಇದರ ಜೊತೆಗೆ ಉಳುವವನೇ ಭೂಮಿಯ ಒಡೆಯ ಕಾಯ್ದೆ ದೇಶದಲ್ಲಿ ಎಂಥ ಬದಲಾವಣೆ ತಂದಿತ್ತು ಎಂಬುದರ ಬಗ್ಗೆಯೂ ಬೆಳಕು ಚೆಲ್ಲುತ್ತದೆ.

ನಟ ದರ್ಶನ್ ಸಿನಿಮಾ ಕೆರಿಯರ್​ನಲ್ಲಿ ಕಾಟೇರ ಮಹತ್ವದ ಚಿತ್ರ ಅಂದ್ರೆ ತಪ್ಪಿಲ್ಲ. ದರ್ಶನ್ ಕುಲುಮೆ ಕೆಲಸ ಮಾಡುವ ಪಕ್ಕಾ ಹಳ್ಳಿ ಹೈದನಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ. ಕ್ಲೈಮಾಕ್ಸ್​ನಲ್ಲಿ ವಯಸ್ಸಾದ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪರಿ ನೋಡಿದ್ರೆ ನಿಜಕ್ಕೂ ದಾಸನ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ.

ಕಾಟೇರ ಸಿನಿಮಾ- ಪ್ರತಿಕ್ರಿಯೆಗಳು

ದರ್ಶನ್ ಜೋಡಿಯಾಗಿ ದಿ.ರಾಮ್ ಹಾಗೂ ಮಾಲಾಶ್ರೀ ದಂಪತಿ ಪುತ್ರಿ ಆರಾಧನಾ ರಾಮ್ ಅವರು ಶಾನುಭೋಗರ ಮಗಳು ಪ್ರಭಾವತಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಊರ ಗೌಡರ ಪಾತ್ರದಲ್ಲಿ ಜಗಪತಿ ಬಾಬು ಹಾಗೂ ವಿನೋದ್ ಆಳ್ವಾ ಖಳ ನಟರಾಗಿ ಭಯ ಹುಟ್ಟಿಸುತ್ತಾರೆ. ಇವರ ಜೊತೆ ಕುಮಾರ ಗೋವಿಂದ್, ಅವಿನಾಶ್, ಶೃತಿ, ವೈಜನಾಥ ಬಿರಾದಾರ್ ಹಾಗೂ ಮಾಸ್ಟರ್ ರೋಹಿತ್ ಕೊಟ್ಟ ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ 'ಕಾಟೇರ' ಅಬ್ಬರ; ಚಾಲೆಂಜಿಂಗ್​ ಸ್ಟಾರ್​ ಅಭಿಮಾನಿಗಳ ಸಂಭ್ರಮ

ಕಾಟೇರ ಚಿತ್ರದ ಹೈಲೆಟ್ಸ್ ಅಂದ್ರೆ 50 ವರ್ಷಗಳ ಹಿಂದಿನ ಕಾಲಘಟ್ಟ ಕಟ್ಟಿಕೊಡಲು ವಿಭಿನ್ನ ಸೆಟ್‌ ಹಾಕಿ, ಲೊಕೇಶನ್‌ಗಳನ್ನು ಹುಡುಕಿ ಚಿತ್ರೀಕರಣ ಮಾಡಲಾಗಿದೆ. ಸುಧಾಕರ್ ಕ್ಯಾಮರಾ ವರ್ಕ್ ಚೆನ್ನಾಗಿದೆ. ಮಾಸ್ತಿ ಸಂಭಾಷಣೆ ಹರಿತವಾಗಿದೆ. ಹರಿಕೃಷ್ಣ ಅವರ ಎರಡು ಹಾಡುಗಳು ಪ್ರೇಕ್ಷಕರಿಗೆ ಬಹಳ ಇಷ್ವಾಗಿದೆ. ಮತ್ತೆರಡು ಸಾಧಾರಣ ಅಂತಾರೆ ವೀಕ್ಷಕರು. ಆದರೆ ತಮ್ಮ ಬಿಜಿಎಂನಿಂದ ಚಿತ್ರವನ್ನು ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ. ಜಡೇಶ್ ಕಥೆಯನ್ನು ನಿರ್ದೇಶಕ ತರುಣ್ ಸುಧೀರ್ ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲೇ ಕಟ್ಟಿಕೊಟ್ಟಿದ್ದಾರೆ.

ಇದನ್ನೂ ಓದಿ: ಕೆಜಿಎಫ್ 3 ಸ್ಕ್ರಿಪ್ಟ್ ರೆಡಿ: ಶೂಟಿಂಗ್​ ಯಾವಾಗ? ಅಧಿಕೃತ ಘೋಷಣೆ ನಿರೀಕ್ಷೆ

ಸಿನಿಮಾದ ರನ್​ ಟೈಮ್​ ಕೊಂಚ ಜಾಸ್ತಿ ಎನಿಸುತ್ತದೆ. ಸೆಕೆಂಡ್ ಹಾಫ್ ಕೊಂಚ ನಿಧಾನ ಎನಿಸುತ್ತದೆ. ಒಂದಷ್ಟು ಸನ್ನಿವೇಶಗಳನ್ನೋ ಅಥವಾ ಹಾಡನ್ನೋ ಕತ್ತರಿಸಿದ್ದರೆ ಸಿನಿಮಾ ಮತ್ತಷ್ಟು ಇಂಟ್ರೆಸ್ಟಿಂಗ್ ಎನಿಸುತ್ತಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿರೋದು ಸ್ಕ್ರೀನ್ ಮೇಲೆ ಗೊತ್ತಾಗುತ್ತದೆ. ವ್ಯವಸ್ಥೆ ಬದಲಾಗಬೇಕು ಎಂದರೆ ಹೋರಾಟ ನಡೆಯಲೇಬೇಕು ಎಂಬ ಸಂದೇಶ ಹೊಂದಿರುವ ಕಾಟೇರ ಸಿನಿಮಾಗೆ ಸದ್ಯ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ದರ್ಶನ್​ಗೆ ಸಿನಿಮಾ ಬ್ರೇಕ್​ ಕೊಡಲಿದೆ ಅನ್ನೋದು ಹಲವರ ಅಭಿಪ್ರಾಯ.

ಕಾಟೇರ ಬಿಡುಗಡೆ- ಪ್ರತಿಕ್ರಿಯೆಗಳು

2023ರ ಕೊನೆಯಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟ ದರ್ಶನ್​ ಅಭಿನಯದ 'ಕಾಟೇರ' ಸಿನಿಮಾ ತೆರೆಕಂಡು ರಾಜ್ಯಾದ್ಯಂತ ಅಬ್ಬರಿಸುತ್ತಿದೆ. ಇದೊಂದು ನೈಜ ಘಟನಾಧರಿತ ಕಥೆ ಎಂದು ಹೇಳಿಕೊಂಡು ಬಂದಿದ್ದ ಚಿತ್ರತಂಡದ ಮಾತೀಗ ನಿಜವಾಗಿದೆ. ನಿನ್ನೆ ಮಧ್ಯರಾತ್ರಿಯೇ ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ. ಕಾಟೇರ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಗೊಳ್ಳುವ ಮೂಲಕ ಸಿನಿಪ್ರಿಯರಿಂದ ಜೈಕಾರ ಹಾಕಿಸಿಕೊಳ್ಳುತ್ತಿದೆ.

ಕಾಟೇರ ನಾಯಕಿ ಆರಾಧನಾ ರಾಮ್, ತಾಯಿ ಮಾಲಾಶ್ರೀ ಜೊತೆ ಬೆಂಗಳೂರಿನ ಅನುಪಮ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದರು. ಆ ಸಂದರ್ಭದಲ್ಲಿ ನಟಿ ಶೃತಿ ಕೂಡ ಫ್ಯಾನ್ಸ್ ಜೊತೆ ಕುಳಿತು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಅಲ್ಲದೇ ಸೆಲೆಬ್ರೇಷನ್​ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುವ ಅಭಿಮಾನಿಗಳು ಸೂಪರ್ ಹಿಟ್, ಬ್ಲಾಕ್​ಬಸ್ಟರ್, ಅದ್ಭುತ ಚಿತ್ರ ಎಂದೆಲ್ಲಾ ತಿಳಿಸುತ್ತಿದ್ದಾರೆ.

ಕಥೆ ಏನು?: 1989ರ ಸಮಯ, ಭೀಮನಹಳ್ಳಿ ಹಾಗೂ ಹಾನಹಳ್ಳಿ ಜನರು ಊರ ಜಾತ್ರೆಗೆ ಸಿದ್ಧತೆ ನಡೆಸಿರುತ್ತಾರೆ. ತನ್ನ ಊರಿಗಾಗಿ ಹೋರಾಡಿ ಜೈಲು ಸೇರಿದ 'ಕಾಟೇರ'ನಿಗೆ ಇಡೀ ಊರು ಕಾಯುತ್ತಿರುತ್ತದೆ. 10 ದಿನಗಳ ಕಾಲ ಪೆರೋಲ್ ಮೇಲೆ ಹೊರಬರುವ ಆತ ಊರಿನ ಹಾದಿ ಹಿಡಿಯುತ್ತಾನೆ. ಮತ್ತೊಂದು ಕಡೆ ನಾಲೆ ಅಗೆಯುವಾಗ ಒಂದೇ ಜಾಗದಲ್ಲಿ 107ರ ಜನರ ಅಸ್ತಿಪಂಜರ ಸಿಕ್ಕಿರುತ್ತದೆ. ಅದು ಯಾರ ಅಸ್ಥಿಪಂಜರ? ಒಮ್ಮೆಲೆ ಅಷ್ಟು ಜನ ಸತ್ತು ಮಣ್ಣಾಗಿದ್ದು ಹೇಗೆ? ಅವರಿಗೂ ಕಾಟೇರನಿಗೂ ಏನು ಸಂಬಂಧ? 70ರ ದಶಕದಲ್ಲಿ ಆ ಎರಡೂ ಊರುಗಳಲ್ಲಿ ನಡೆದ ಘಟನೆಗಳೇನು? ಕಾಟೇರ ಯಾವ ವಿಷ್ಯಕ್ಕೆ ಜೈಲು ಸೇರಿದ? ಎಂಬುದನ್ನು ತಿಳಿದುಕೊಳ್ಳಬೇಕಾದರೆ ನೀವು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲೇಬೇಕು.

'ಕಾಟೇರ' ಕಂಪ್ಲೀಟ್ ಮಾಸ್ ಎಂಟರ್​ಟೈನ್ಮೆಂಟ್ ಸಿನಿಮಾ. ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು ಎನ್ನುವ ಬೇಧ ಭಾವ ಆ ಕಾಲದಲ್ಲಿ ಎಷ್ಟರ ಮಟ್ಟಿಗಿತ್ತು ಎಂಬುದನ್ನು ತೋರಿಸಲಾಗಿದೆ. ಇದರ ಜೊತೆಗೆ ಉಳುವವನೇ ಭೂಮಿಯ ಒಡೆಯ ಕಾಯ್ದೆ ದೇಶದಲ್ಲಿ ಎಂಥ ಬದಲಾವಣೆ ತಂದಿತ್ತು ಎಂಬುದರ ಬಗ್ಗೆಯೂ ಬೆಳಕು ಚೆಲ್ಲುತ್ತದೆ.

ನಟ ದರ್ಶನ್ ಸಿನಿಮಾ ಕೆರಿಯರ್​ನಲ್ಲಿ ಕಾಟೇರ ಮಹತ್ವದ ಚಿತ್ರ ಅಂದ್ರೆ ತಪ್ಪಿಲ್ಲ. ದರ್ಶನ್ ಕುಲುಮೆ ಕೆಲಸ ಮಾಡುವ ಪಕ್ಕಾ ಹಳ್ಳಿ ಹೈದನಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ. ಕ್ಲೈಮಾಕ್ಸ್​ನಲ್ಲಿ ವಯಸ್ಸಾದ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪರಿ ನೋಡಿದ್ರೆ ನಿಜಕ್ಕೂ ದಾಸನ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ.

ಕಾಟೇರ ಸಿನಿಮಾ- ಪ್ರತಿಕ್ರಿಯೆಗಳು

ದರ್ಶನ್ ಜೋಡಿಯಾಗಿ ದಿ.ರಾಮ್ ಹಾಗೂ ಮಾಲಾಶ್ರೀ ದಂಪತಿ ಪುತ್ರಿ ಆರಾಧನಾ ರಾಮ್ ಅವರು ಶಾನುಭೋಗರ ಮಗಳು ಪ್ರಭಾವತಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಊರ ಗೌಡರ ಪಾತ್ರದಲ್ಲಿ ಜಗಪತಿ ಬಾಬು ಹಾಗೂ ವಿನೋದ್ ಆಳ್ವಾ ಖಳ ನಟರಾಗಿ ಭಯ ಹುಟ್ಟಿಸುತ್ತಾರೆ. ಇವರ ಜೊತೆ ಕುಮಾರ ಗೋವಿಂದ್, ಅವಿನಾಶ್, ಶೃತಿ, ವೈಜನಾಥ ಬಿರಾದಾರ್ ಹಾಗೂ ಮಾಸ್ಟರ್ ರೋಹಿತ್ ಕೊಟ್ಟ ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ 'ಕಾಟೇರ' ಅಬ್ಬರ; ಚಾಲೆಂಜಿಂಗ್​ ಸ್ಟಾರ್​ ಅಭಿಮಾನಿಗಳ ಸಂಭ್ರಮ

ಕಾಟೇರ ಚಿತ್ರದ ಹೈಲೆಟ್ಸ್ ಅಂದ್ರೆ 50 ವರ್ಷಗಳ ಹಿಂದಿನ ಕಾಲಘಟ್ಟ ಕಟ್ಟಿಕೊಡಲು ವಿಭಿನ್ನ ಸೆಟ್‌ ಹಾಕಿ, ಲೊಕೇಶನ್‌ಗಳನ್ನು ಹುಡುಕಿ ಚಿತ್ರೀಕರಣ ಮಾಡಲಾಗಿದೆ. ಸುಧಾಕರ್ ಕ್ಯಾಮರಾ ವರ್ಕ್ ಚೆನ್ನಾಗಿದೆ. ಮಾಸ್ತಿ ಸಂಭಾಷಣೆ ಹರಿತವಾಗಿದೆ. ಹರಿಕೃಷ್ಣ ಅವರ ಎರಡು ಹಾಡುಗಳು ಪ್ರೇಕ್ಷಕರಿಗೆ ಬಹಳ ಇಷ್ವಾಗಿದೆ. ಮತ್ತೆರಡು ಸಾಧಾರಣ ಅಂತಾರೆ ವೀಕ್ಷಕರು. ಆದರೆ ತಮ್ಮ ಬಿಜಿಎಂನಿಂದ ಚಿತ್ರವನ್ನು ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ. ಜಡೇಶ್ ಕಥೆಯನ್ನು ನಿರ್ದೇಶಕ ತರುಣ್ ಸುಧೀರ್ ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲೇ ಕಟ್ಟಿಕೊಟ್ಟಿದ್ದಾರೆ.

ಇದನ್ನೂ ಓದಿ: ಕೆಜಿಎಫ್ 3 ಸ್ಕ್ರಿಪ್ಟ್ ರೆಡಿ: ಶೂಟಿಂಗ್​ ಯಾವಾಗ? ಅಧಿಕೃತ ಘೋಷಣೆ ನಿರೀಕ್ಷೆ

ಸಿನಿಮಾದ ರನ್​ ಟೈಮ್​ ಕೊಂಚ ಜಾಸ್ತಿ ಎನಿಸುತ್ತದೆ. ಸೆಕೆಂಡ್ ಹಾಫ್ ಕೊಂಚ ನಿಧಾನ ಎನಿಸುತ್ತದೆ. ಒಂದಷ್ಟು ಸನ್ನಿವೇಶಗಳನ್ನೋ ಅಥವಾ ಹಾಡನ್ನೋ ಕತ್ತರಿಸಿದ್ದರೆ ಸಿನಿಮಾ ಮತ್ತಷ್ಟು ಇಂಟ್ರೆಸ್ಟಿಂಗ್ ಎನಿಸುತ್ತಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿರೋದು ಸ್ಕ್ರೀನ್ ಮೇಲೆ ಗೊತ್ತಾಗುತ್ತದೆ. ವ್ಯವಸ್ಥೆ ಬದಲಾಗಬೇಕು ಎಂದರೆ ಹೋರಾಟ ನಡೆಯಲೇಬೇಕು ಎಂಬ ಸಂದೇಶ ಹೊಂದಿರುವ ಕಾಟೇರ ಸಿನಿಮಾಗೆ ಸದ್ಯ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ದರ್ಶನ್​ಗೆ ಸಿನಿಮಾ ಬ್ರೇಕ್​ ಕೊಡಲಿದೆ ಅನ್ನೋದು ಹಲವರ ಅಭಿಪ್ರಾಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.