ETV Bharat / entertainment

'ಕುಮಾರಸ್ವಾಮಿ 30 ಸ್ಥಾನ ಗೆದ್ದು ಸಿಎಂ ಆಗಲಿಲ್ಲವೇ?' ಆಂಧ್ರ ಮುಖ್ಯಮಂತ್ರಿ ಸ್ಥಾನದ ಮೇಲೆ ಪವನ್ ಕಲ್ಯಾಣ್‌ ಕಣ್ಣು

author img

By

Published : May 12, 2023, 8:32 AM IST

ಜೆಎಸ್‌ಪಿ ನಾಯಕ, ನಟ ಪವನ್​ ಕಲ್ಯಾಣ್​ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

Pawan Kalyan
ನಟ ಪವನ್​ ಕಲ್ಯಾಣ್​

ಅಮರಾವತಿ (ಆಂಧ್ರಪ್ರದೇಶ): ಟಾಲಿವುಡ್​ ನಟ, ರಾಜಕಾರಣಿ ಪವನ್​ ಕಲ್ಯಾಣ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಗುರುವಾರ ಹೇಳಿದ್ದಾರೆ.​ ಕರ್ನಾಟಕದ ರಾಜಕೀಯವನ್ನು ಉಲ್ಲೇಖಿಸಿರುವ ಅವರು, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕೇವಲ 30 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮುಖ್ಯಮಂತ್ರಿಯಾದರು. 2019ರಲ್ಲಿ ಜನರು ತನಗೆ 40 ಸ್ಥಾನಗಳನ್ನು ನೀಡಿದ್ದರೆ ನಾನೂ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದೆ ಎಂದು ಜನಸೇನಾ ಪಕ್ಷದ (ಜೆಎಸ್‌ಪಿ) ನಾಯಕ ತಿಳಿಸಿದರು.

ಇಲ್ಲಿನ ಮಂಗಳಗಿರಿಯ ಜೆಎಸ್‌ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್​ ಕಲ್ಯಾಣ್,​ ನಾನು ಮುಖ್ಯಮಂತ್ರಿಯಾಗಲು ಬಯಸಿದರೆ, ಅದನ್ನು ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ಹಾಗಂತ ನಾನೆಂದಿಗೂ ತೆಲುಗು ದೇಶಂ ಪಕ್ಷ (ಟಿಡಿಪಿ) ಅಥವಾ ಭಾರತೀಯ ಜನತಾ ಪಕ್ಷ (ಬಿಜೆಪಿ) ಅವರಲ್ಲಿ ನನ್ನನ್ನು ಮುಖ್ಯಮಂತ್ರಿ ಮಾಡುವಂತೆ ಕೇಳುವುದಿಲ್ಲ ಎಂದರು. ನಾನು ನನ್ನ ಶಕ್ತಿಯನ್ನು ತೋರಿಸುತ್ತೇನೆ ಮತ್ತು ಅಧಿಕಾರವನ್ನು ಕೇಳುತ್ತೇನೆ ಎಂದು ಹೇಳಿದ್ದಾರೆ.

2019ರ ಚುನಾವಣೆಯಲ್ಲಿ ಎಡ ಪಕ್ಷಗಳು ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಜೊತೆ ಮೈತ್ರಿ ಮಾಡಿಕೊಂಡಿದ್ದ ಪವನ್​ ಅವರ ಜೆಎಸ್​ಪಿ ಪಕ್ಷವು 175 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆದ್ದಿತ್ತು. ಪಕ್ಷದ ನಾಯಕರಾದ ಪವನ್​ ಕಲ್ಯಾಣ್​ ಸ್ಪರ್ಧಿಸಿದ್ದ ಎರಡೂ ಸ್ಥಾನಗಳಲ್ಲಿ ಸೋತಿದ್ದರು.

ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಆಡಳಿತವನ್ನು ಕೊನೆಗೊಳಿಸಲು ಪ್ರಮುಖ ಪಕ್ಷಗಳೊಂದಿಗೆ ಜೆಎಸ್‌ಪಿ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಹಲವು ರಾಜಕೀಯ ಪಕ್ಷಗಳು ಮೈತ್ರಿಯೊಂದಿಗೆ ಪ್ರಬಲವಾಗಿ ಹೊರಹೊಮ್ಮಿವೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಆಡಳಿತ ವಿರೋಧಿ ಮತಗಳು ವಿಭಜನೆಯಾಗುವುದನ್ನು ತಡೆಯಲು ಜೆಎಸ್‌ಪಿ ಪ್ರಮುಖ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: 'ವರ್ಗ' ನಿರ್ಧರಿಸುವುದು ನೀವು ಮಾಡುವ ಕೆಲಸದಿಂದಲೇ ಹೊರತು ಹಣದಿಂದಲ್ಲ: ಸುಧಾ ಮೂರ್ತಿ

ನಾನು ಕಮ್ಯುನಿಸ್ಟ್ ಪಕ್ಷಗಳನ್ನು ಗೌರವಿಸುತ್ತೇನೆ. ಆದರೆ ಚುನಾವಣೆಯಲ್ಲಿ ಪ್ರಭಾವ ಬೀರುವ ಪಕ್ಷಗಳನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಬಗ್ಗೆ ಚರ್ಚಿಸುವುದಾಗಿ ಹೇಳಿದರು. ಜೆಎಸ್‌ಪಿ ಈಗಾಗಲೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ರಾಜ್ಯ ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾದ ಟಿಡಿಪಿಯನ್ನು ಕಣಕ್ಕಿಳಿಸುವ ಮೂಲಕ ಮಹಾಮೈತ್ರಿಕೂಟವನ್ನು ರೂಪಿಸಲು ಉತ್ಸುಕವಾಗಿದೆ. ಪವನ್ ಇತ್ತೀಚೆಗೆ ಟಿಡಿಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು.

2014 ರಲ್ಲಿ ಬಿಜೆಪಿ ಮತ್ತು ಟಿಡಿಪಿ ಜೊತೆಗಿನ ಮೈತ್ರಿ ನಂತರ ರಾಜ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿರುವ ಪವನ್​, ರಾಜ್ಯದ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮೈತ್ರಿ ಬಗ್ಗೆ ಜೆಎಸ್‌ಪಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು. ಹಿಂದಿನದಕ್ಕೆ ಹೋಲಿಸಿದರೆ ಜೆಎಸ್‌ಪಿ ಸ್ಥಾನ ಬಲಗೊಂಡಿದೆ. 2019 ರಲ್ಲಿ ಜೆಎಸ್‌ಪಿ 137 ವಿಧಾನಸಭಾ ಸ್ಥಾನಗಳಿಗೆ (ಒಟ್ಟು 175 ರಲ್ಲಿ) ಸ್ಪರ್ಧಿಸಿ ಶೇಕಡಾ 7 ರಷ್ಟು ಮತಗಳನ್ನು ಗಳಿಸಿದೆ. ಕೆಲವು ಕ್ಷೇತ್ರಗಳಲ್ಲಿ ಪಕ್ಷ ಶೇ. 20-30ರಷ್ಟು ಮತಗಳನ್ನು ಪಡೆದಿದೆ ಎಂದರು.

ಚುನಾವಣೆ ಮುಂದೂಡಿದ್ದಲ್ಲಿ ಜೂನ್‌ನಿಂದ ಕ್ಷೇತ್ರ ಕಾರ್ಯ ಆರಂಭಿಸುವುದಾಗಿ ಹೇಳಿದರು. ವೈಎಸ್‌ಆರ್‌ಸಿಪಿಯನ್ನು ತೊಡೆದು ಹಾಕಲು ಪ್ರಬಲ ಪಕ್ಷಗಳು ತಮ್ಮೊಂದಿಗೆ ಬಂದರೆ ನನಗೆ ಸಂತೋಷವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಪಾಕ್​ ಅವ್ಯವಸ್ಥೆ: ಇಮ್ರಾನ್ ಖಾನ್ ಗುಣಗಾನ ಮಾಡಲು 'ದಿ ಕಾಶ್ಮೀರ್ ಫೈಲ್ಸ್' ಸಾಂಗ್​ ಬಳಕೆ

ಅಮರಾವತಿ (ಆಂಧ್ರಪ್ರದೇಶ): ಟಾಲಿವುಡ್​ ನಟ, ರಾಜಕಾರಣಿ ಪವನ್​ ಕಲ್ಯಾಣ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಗುರುವಾರ ಹೇಳಿದ್ದಾರೆ.​ ಕರ್ನಾಟಕದ ರಾಜಕೀಯವನ್ನು ಉಲ್ಲೇಖಿಸಿರುವ ಅವರು, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕೇವಲ 30 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮುಖ್ಯಮಂತ್ರಿಯಾದರು. 2019ರಲ್ಲಿ ಜನರು ತನಗೆ 40 ಸ್ಥಾನಗಳನ್ನು ನೀಡಿದ್ದರೆ ನಾನೂ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದೆ ಎಂದು ಜನಸೇನಾ ಪಕ್ಷದ (ಜೆಎಸ್‌ಪಿ) ನಾಯಕ ತಿಳಿಸಿದರು.

ಇಲ್ಲಿನ ಮಂಗಳಗಿರಿಯ ಜೆಎಸ್‌ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್​ ಕಲ್ಯಾಣ್,​ ನಾನು ಮುಖ್ಯಮಂತ್ರಿಯಾಗಲು ಬಯಸಿದರೆ, ಅದನ್ನು ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ಹಾಗಂತ ನಾನೆಂದಿಗೂ ತೆಲುಗು ದೇಶಂ ಪಕ್ಷ (ಟಿಡಿಪಿ) ಅಥವಾ ಭಾರತೀಯ ಜನತಾ ಪಕ್ಷ (ಬಿಜೆಪಿ) ಅವರಲ್ಲಿ ನನ್ನನ್ನು ಮುಖ್ಯಮಂತ್ರಿ ಮಾಡುವಂತೆ ಕೇಳುವುದಿಲ್ಲ ಎಂದರು. ನಾನು ನನ್ನ ಶಕ್ತಿಯನ್ನು ತೋರಿಸುತ್ತೇನೆ ಮತ್ತು ಅಧಿಕಾರವನ್ನು ಕೇಳುತ್ತೇನೆ ಎಂದು ಹೇಳಿದ್ದಾರೆ.

2019ರ ಚುನಾವಣೆಯಲ್ಲಿ ಎಡ ಪಕ್ಷಗಳು ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಜೊತೆ ಮೈತ್ರಿ ಮಾಡಿಕೊಂಡಿದ್ದ ಪವನ್​ ಅವರ ಜೆಎಸ್​ಪಿ ಪಕ್ಷವು 175 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆದ್ದಿತ್ತು. ಪಕ್ಷದ ನಾಯಕರಾದ ಪವನ್​ ಕಲ್ಯಾಣ್​ ಸ್ಪರ್ಧಿಸಿದ್ದ ಎರಡೂ ಸ್ಥಾನಗಳಲ್ಲಿ ಸೋತಿದ್ದರು.

ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಆಡಳಿತವನ್ನು ಕೊನೆಗೊಳಿಸಲು ಪ್ರಮುಖ ಪಕ್ಷಗಳೊಂದಿಗೆ ಜೆಎಸ್‌ಪಿ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಹಲವು ರಾಜಕೀಯ ಪಕ್ಷಗಳು ಮೈತ್ರಿಯೊಂದಿಗೆ ಪ್ರಬಲವಾಗಿ ಹೊರಹೊಮ್ಮಿವೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಆಡಳಿತ ವಿರೋಧಿ ಮತಗಳು ವಿಭಜನೆಯಾಗುವುದನ್ನು ತಡೆಯಲು ಜೆಎಸ್‌ಪಿ ಪ್ರಮುಖ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: 'ವರ್ಗ' ನಿರ್ಧರಿಸುವುದು ನೀವು ಮಾಡುವ ಕೆಲಸದಿಂದಲೇ ಹೊರತು ಹಣದಿಂದಲ್ಲ: ಸುಧಾ ಮೂರ್ತಿ

ನಾನು ಕಮ್ಯುನಿಸ್ಟ್ ಪಕ್ಷಗಳನ್ನು ಗೌರವಿಸುತ್ತೇನೆ. ಆದರೆ ಚುನಾವಣೆಯಲ್ಲಿ ಪ್ರಭಾವ ಬೀರುವ ಪಕ್ಷಗಳನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಬಗ್ಗೆ ಚರ್ಚಿಸುವುದಾಗಿ ಹೇಳಿದರು. ಜೆಎಸ್‌ಪಿ ಈಗಾಗಲೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ರಾಜ್ಯ ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾದ ಟಿಡಿಪಿಯನ್ನು ಕಣಕ್ಕಿಳಿಸುವ ಮೂಲಕ ಮಹಾಮೈತ್ರಿಕೂಟವನ್ನು ರೂಪಿಸಲು ಉತ್ಸುಕವಾಗಿದೆ. ಪವನ್ ಇತ್ತೀಚೆಗೆ ಟಿಡಿಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು.

2014 ರಲ್ಲಿ ಬಿಜೆಪಿ ಮತ್ತು ಟಿಡಿಪಿ ಜೊತೆಗಿನ ಮೈತ್ರಿ ನಂತರ ರಾಜ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿರುವ ಪವನ್​, ರಾಜ್ಯದ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮೈತ್ರಿ ಬಗ್ಗೆ ಜೆಎಸ್‌ಪಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು. ಹಿಂದಿನದಕ್ಕೆ ಹೋಲಿಸಿದರೆ ಜೆಎಸ್‌ಪಿ ಸ್ಥಾನ ಬಲಗೊಂಡಿದೆ. 2019 ರಲ್ಲಿ ಜೆಎಸ್‌ಪಿ 137 ವಿಧಾನಸಭಾ ಸ್ಥಾನಗಳಿಗೆ (ಒಟ್ಟು 175 ರಲ್ಲಿ) ಸ್ಪರ್ಧಿಸಿ ಶೇಕಡಾ 7 ರಷ್ಟು ಮತಗಳನ್ನು ಗಳಿಸಿದೆ. ಕೆಲವು ಕ್ಷೇತ್ರಗಳಲ್ಲಿ ಪಕ್ಷ ಶೇ. 20-30ರಷ್ಟು ಮತಗಳನ್ನು ಪಡೆದಿದೆ ಎಂದರು.

ಚುನಾವಣೆ ಮುಂದೂಡಿದ್ದಲ್ಲಿ ಜೂನ್‌ನಿಂದ ಕ್ಷೇತ್ರ ಕಾರ್ಯ ಆರಂಭಿಸುವುದಾಗಿ ಹೇಳಿದರು. ವೈಎಸ್‌ಆರ್‌ಸಿಪಿಯನ್ನು ತೊಡೆದು ಹಾಕಲು ಪ್ರಬಲ ಪಕ್ಷಗಳು ತಮ್ಮೊಂದಿಗೆ ಬಂದರೆ ನನಗೆ ಸಂತೋಷವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಪಾಕ್​ ಅವ್ಯವಸ್ಥೆ: ಇಮ್ರಾನ್ ಖಾನ್ ಗುಣಗಾನ ಮಾಡಲು 'ದಿ ಕಾಶ್ಮೀರ್ ಫೈಲ್ಸ್' ಸಾಂಗ್​ ಬಳಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.