ETV Bharat / entertainment

ರಸ್ತೆಯಲ್ಲಿ ಗರ್ಲ್‌ಫ್ರೆಂಡ್‌ ಕಪಾಳಕ್ಕೆ ಹೊಡೆದ ಯುವಕ; ಕಾರು ನಿಲ್ಲಿಸಿ ಕ್ಷಮೆ ಕೇಳೆಂದ ನಟ ನಾಗಶೌರ್ಯ

author img

By

Published : Mar 2, 2023, 10:27 AM IST

ಹೈದರಾಬಾದ್‌ನ ನಡುರಸ್ತೆಯಲ್ಲಿ ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ಅಸಭ್ಯವಾಗಿ ವರ್ತಿಸಿದ್ದನ್ನು ಕಂಡ ತೆಲುಗು ನಟ ನಾಗ ಶೌರ್ಯ ಕೂಡಲೇ ಕಾರಿನಿಂದ ಇಳಿದು ಯುವಕನಿಗೆ ಕ್ಲಾಸ್ ತೆಗೆದುಕೊಂಡರು.

Naga Shaurya
ನಟ ನಾಗ ಶೌರ್ಯ

ಹೈದರಾಬಾದ್: ಸಾರ್ವಜನಿಕ ಸ್ಥಳದಲ್ಲಿ ತನ್ನ ಗೆಳತಿಗೆ ಕಪಾಳಮೋಕ್ಷ ಮಾಡಿದ ಯುವಕನನ್ನು ಟಾಲಿವುಡ್​ ನಾಯಕ ನಟ ನಾಗಶೌರ್ಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಚಲನಚಿತ್ರಗಳಲ್ಲಿ ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಟ, ಕಣ್ಣ ಮುಂದೆಯೇ ಅನ್ಯಾಯ ನಡೆಯುತ್ತಿರುವುದನ್ನು ನೋಡಿ, ಕೂಡಲೇ ಯುವತಿಯ ರಕ್ಷಣೆಗೆ ಧಾವಿಸುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿ ಮೆರೆದರು. ಈ ಮೂಲಕ ಅಭಿಮಾನಿಗಳ ಮನಗೆದ್ದರು.

ವಿವರ: ಹೈದರಾಬಾದ್‌ನ ನಡುರಸ್ತೆಯ ಮೇಲೆ ತನ್ನ ಗೆಳತಿಯ ಕೆನ್ನೆಗೆ ಯುವಕನೊಬ್ಬ ಹೊಡೆಯುತ್ತಿರುವುದನ್ನು ಗಮನಿಸಿದ ನಾಗ ಶೌರ್ಯ, ಕೂಡಲೇ ತಮ್ಮ ಕಾರು ನಿಲ್ಲಿಸಿ ಆ ಯುವಕನ ಬಳಿ ಹೋಗಿ ಕ್ಷಮೆ ಕೇಳುವಂತೆ ಹೇಳಿದ್ದಾರೆ. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಣವಾಗುತ್ತಿದಂತೆ ಕಪಾಳಮೋಕ್ಷ ಮಾಡಿದ ಯುವಕ, "ಅವಳು ನನ್ನ ಲವರ್​" ಎಂದುಬಿಟ್ಟ. ಇದಕ್ಕೆ ಉತ್ತರಿಸಿದ ನಟ, "ಅವಳು ನಿನ್ನ ಲವರ್​ ಆಗಿರಬಹುದು, ಹಾಗಂತ, ಈ ರೀತಿ ಅನುಚಿತವಾಗಿ ವರ್ತಿಸಬಹುದೇ? ಹೊಡೆಯುವ ಹಕ್ಕು ನಿನಗಿಲ್ಲ. ಅವಳಿಗೆ ರಸ್ತೆಯಲ್ಲಿ ಏಕೆ ಕಪಾಳಮೋಕ್ಷ ಮಾಡಿದ್ದೀಯಾ?, ಅವಳ ಬಳಿ ಕ್ಷಮೆ ಕೇಳು" ಎಂದು ಚಾಟಿ ಬೀಸಿದ್ದಾರೆ.

ಇದನ್ನೂ ಓದಿ: ನಾನಿ ಕನ್ನಡ ಚಿತ್ರರಂಗದ ಮತ್ತು ಕಾಂತಾರ ಬಗ್ಗೆ ಏನು ಹೇಳಿದ್ದಾರೆ ನೋಡಿ...!

ಘಟನೆಯ ಸಂಪೂರ್ಣ ವಿಡಿಯೋವನ್ನು ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಇದರಲ್ಲಿ ಯುವತಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸುವಂತೆ ವ್ಯಕ್ತಿಗೆ ಪದೇ ಪದೇ ನಟ ಹೇಳುತ್ತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೇ, ಘಟನೆ ನಡೆಯುತ್ತಿದ್ದಂತೆ ಅಲ್ಲೇ ಇದ್ದ ಸ್ಥಳೀಯರು ನಾಗಶೌರ್ಯಗೆ ಬೆಂಬಲಿಸಿ, ಯುವಕನಿಗೆ ಕ್ಷಮೆಯಾಚಿಸುವಂತೆ ಸೂಚಿಸಿದ್ದಾರೆ.

ವ್ಯಕ್ತಿಯ ಅನುಚಿತ ವರ್ತನೆಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಟ್ವಿಟರ್ ಬಳಕೆದಾರರು ನಟನನ್ನು ಶ್ಲಾಘಿಸಿದ್ದಾರೆ. "ನಾಗ ಶೌರ್ಯ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ದೇಶದಲ್ಲಿ ಮಾನವೀಯತೆ ಮತ್ತು ನ್ಯಾಯದ ಪ್ರಜ್ಞೆ ಇನ್ನೂ ಅಸ್ತಿತ್ವದಲ್ಲಿದೆ. ಇಂತಹ ದುರ್ವರ್ತನೆ ಮಾಡುತ್ತಿರುವವರನ್ನು ಒದ್ದು ಓಡಿಸಬೇಕು. ಅಭಿನಂದನೆಗಳು ಸರ್"​ ಎಂದಿದ್ದಾರೆ.

ಇದನ್ನೂ ಓದಿ: 90ರ ದಶಕದಲ್ಲಿ ನಾನು ಉಪ್ಪಿ ಸಾರ್ ಸಿನಿಮಾ ನೋಡುತ್ತಿದ್ದೆ.. ನಟ ರಾಣಾ ದಗ್ಗುಬಾಟಿ

ಸದ್ಯಕ್ಕೆ ನಾಗ ಶೌರ್ಯ ತಮ್ಮ ಮುಂಬರುವ ಸಿನಿಮಾ "ಫಲನಾ ಅಬ್ಬಾಯಿ ಫಲನಾ ಅಮ್ಮಾಯಿ" ನಲ್ಲಿ ಬ್ಯುಸಿಯಾಗಿದ್ದಾರೆ. ಮಾರ್ಚ್ 17ರಂದು ಈ ಚಿತ್ರ ತೆರೆ ಕಾಣಲಿದೆ. ಶ್ರೀನಿವಾಸ್ ಅವಸರಾಳ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಮಾಳವಿಕಾ ನಾಯರ್ ನಾಯಕಿಯಾಗಿದ್ದಾರೆ.

ಇದನ್ನೂ ಓದಿ: 90ರ ದಶಕದಲ್ಲಿ ನಾನು ಉಪ್ಪಿ ಸಾರ್ ಸಿನಿಮಾ ನೋಡುತ್ತಿದ್ದೆ.. ನಟ ರಾಣಾ ದಗ್ಗುಬಾಟಿ

ಹೈದರಾಬಾದ್: ಸಾರ್ವಜನಿಕ ಸ್ಥಳದಲ್ಲಿ ತನ್ನ ಗೆಳತಿಗೆ ಕಪಾಳಮೋಕ್ಷ ಮಾಡಿದ ಯುವಕನನ್ನು ಟಾಲಿವುಡ್​ ನಾಯಕ ನಟ ನಾಗಶೌರ್ಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಚಲನಚಿತ್ರಗಳಲ್ಲಿ ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಟ, ಕಣ್ಣ ಮುಂದೆಯೇ ಅನ್ಯಾಯ ನಡೆಯುತ್ತಿರುವುದನ್ನು ನೋಡಿ, ಕೂಡಲೇ ಯುವತಿಯ ರಕ್ಷಣೆಗೆ ಧಾವಿಸುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿ ಮೆರೆದರು. ಈ ಮೂಲಕ ಅಭಿಮಾನಿಗಳ ಮನಗೆದ್ದರು.

ವಿವರ: ಹೈದರಾಬಾದ್‌ನ ನಡುರಸ್ತೆಯ ಮೇಲೆ ತನ್ನ ಗೆಳತಿಯ ಕೆನ್ನೆಗೆ ಯುವಕನೊಬ್ಬ ಹೊಡೆಯುತ್ತಿರುವುದನ್ನು ಗಮನಿಸಿದ ನಾಗ ಶೌರ್ಯ, ಕೂಡಲೇ ತಮ್ಮ ಕಾರು ನಿಲ್ಲಿಸಿ ಆ ಯುವಕನ ಬಳಿ ಹೋಗಿ ಕ್ಷಮೆ ಕೇಳುವಂತೆ ಹೇಳಿದ್ದಾರೆ. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಣವಾಗುತ್ತಿದಂತೆ ಕಪಾಳಮೋಕ್ಷ ಮಾಡಿದ ಯುವಕ, "ಅವಳು ನನ್ನ ಲವರ್​" ಎಂದುಬಿಟ್ಟ. ಇದಕ್ಕೆ ಉತ್ತರಿಸಿದ ನಟ, "ಅವಳು ನಿನ್ನ ಲವರ್​ ಆಗಿರಬಹುದು, ಹಾಗಂತ, ಈ ರೀತಿ ಅನುಚಿತವಾಗಿ ವರ್ತಿಸಬಹುದೇ? ಹೊಡೆಯುವ ಹಕ್ಕು ನಿನಗಿಲ್ಲ. ಅವಳಿಗೆ ರಸ್ತೆಯಲ್ಲಿ ಏಕೆ ಕಪಾಳಮೋಕ್ಷ ಮಾಡಿದ್ದೀಯಾ?, ಅವಳ ಬಳಿ ಕ್ಷಮೆ ಕೇಳು" ಎಂದು ಚಾಟಿ ಬೀಸಿದ್ದಾರೆ.

ಇದನ್ನೂ ಓದಿ: ನಾನಿ ಕನ್ನಡ ಚಿತ್ರರಂಗದ ಮತ್ತು ಕಾಂತಾರ ಬಗ್ಗೆ ಏನು ಹೇಳಿದ್ದಾರೆ ನೋಡಿ...!

ಘಟನೆಯ ಸಂಪೂರ್ಣ ವಿಡಿಯೋವನ್ನು ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಇದರಲ್ಲಿ ಯುವತಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸುವಂತೆ ವ್ಯಕ್ತಿಗೆ ಪದೇ ಪದೇ ನಟ ಹೇಳುತ್ತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೇ, ಘಟನೆ ನಡೆಯುತ್ತಿದ್ದಂತೆ ಅಲ್ಲೇ ಇದ್ದ ಸ್ಥಳೀಯರು ನಾಗಶೌರ್ಯಗೆ ಬೆಂಬಲಿಸಿ, ಯುವಕನಿಗೆ ಕ್ಷಮೆಯಾಚಿಸುವಂತೆ ಸೂಚಿಸಿದ್ದಾರೆ.

ವ್ಯಕ್ತಿಯ ಅನುಚಿತ ವರ್ತನೆಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಟ್ವಿಟರ್ ಬಳಕೆದಾರರು ನಟನನ್ನು ಶ್ಲಾಘಿಸಿದ್ದಾರೆ. "ನಾಗ ಶೌರ್ಯ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ದೇಶದಲ್ಲಿ ಮಾನವೀಯತೆ ಮತ್ತು ನ್ಯಾಯದ ಪ್ರಜ್ಞೆ ಇನ್ನೂ ಅಸ್ತಿತ್ವದಲ್ಲಿದೆ. ಇಂತಹ ದುರ್ವರ್ತನೆ ಮಾಡುತ್ತಿರುವವರನ್ನು ಒದ್ದು ಓಡಿಸಬೇಕು. ಅಭಿನಂದನೆಗಳು ಸರ್"​ ಎಂದಿದ್ದಾರೆ.

ಇದನ್ನೂ ಓದಿ: 90ರ ದಶಕದಲ್ಲಿ ನಾನು ಉಪ್ಪಿ ಸಾರ್ ಸಿನಿಮಾ ನೋಡುತ್ತಿದ್ದೆ.. ನಟ ರಾಣಾ ದಗ್ಗುಬಾಟಿ

ಸದ್ಯಕ್ಕೆ ನಾಗ ಶೌರ್ಯ ತಮ್ಮ ಮುಂಬರುವ ಸಿನಿಮಾ "ಫಲನಾ ಅಬ್ಬಾಯಿ ಫಲನಾ ಅಮ್ಮಾಯಿ" ನಲ್ಲಿ ಬ್ಯುಸಿಯಾಗಿದ್ದಾರೆ. ಮಾರ್ಚ್ 17ರಂದು ಈ ಚಿತ್ರ ತೆರೆ ಕಾಣಲಿದೆ. ಶ್ರೀನಿವಾಸ್ ಅವಸರಾಳ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಮಾಳವಿಕಾ ನಾಯರ್ ನಾಯಕಿಯಾಗಿದ್ದಾರೆ.

ಇದನ್ನೂ ಓದಿ: 90ರ ದಶಕದಲ್ಲಿ ನಾನು ಉಪ್ಪಿ ಸಾರ್ ಸಿನಿಮಾ ನೋಡುತ್ತಿದ್ದೆ.. ನಟ ರಾಣಾ ದಗ್ಗುಬಾಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.