ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ 'ಚಂದ್ರಮುಖಿ' ಚಿತ್ರದ ಸೀಕ್ವೆಲ್ ಬರುತ್ತಿದೆ. ತಮಿಳು ಮತ್ತು ತೆಲುಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದರೆ, ಕನ್ನಡದ 'ಆಪ್ತಮಿತ್ರ' ಚಿತ್ರದಲ್ಲಿ ಸಾಹಸಸಿಂಹ ದಿ.ಡಾ.ವಿಷ್ಣುವರ್ಧನ ಮಾಡಿದ್ದರು. ಇದೀಗ 'ಚಂದ್ರಮುಖಿ-2' ಚಿತ್ರದಲ್ಲಿ ರಜನಿಕಾಂತ್ ಬದಲಿಗೆ ರಾಘವ್ ಲಾರೆನ್ಸ್ ಮಾಡುತ್ತಿದ್ದಾರೆ. ಶುಕ್ರವಾರದಿಂದ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ಕೂಡ ಆರಂಭವಾಗಿದೆ.
ಹೌದು, ಈ ಬಗ್ಗೆ ಖುದ್ದು ನಟ ರಾಘವ್ ಲಾರೆನ್ಸ್ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ, ಚಿತ್ರದ ಶೂಟಿಂಗ್ ಆರಂಭಕ್ಕೂ ಮುನ್ನ ರಜನಿಕಾಂತ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿರುವ ಬಗ್ಗೆ ಲಾರೆನ್ಸ್ ಟ್ವಿಟರ್ ಮೂಲಕ ಬಹಿರಂಗ ಪಡಿಸಿದ್ದಾರೆ.
-
Hi friends and fans, Today Chandramukhi 2 shooting begins in Mysore with my Thalaivar and guru’s @rajinikanth blessings! I need all your wishes! 🙏🏼🙏🏼 #Chandramukhi2 pic.twitter.com/dSrD3B5Xwh
— Raghava Lawrence (@offl_Lawrence) July 15, 2022 " class="align-text-top noRightClick twitterSection" data="
">Hi friends and fans, Today Chandramukhi 2 shooting begins in Mysore with my Thalaivar and guru’s @rajinikanth blessings! I need all your wishes! 🙏🏼🙏🏼 #Chandramukhi2 pic.twitter.com/dSrD3B5Xwh
— Raghava Lawrence (@offl_Lawrence) July 15, 2022Hi friends and fans, Today Chandramukhi 2 shooting begins in Mysore with my Thalaivar and guru’s @rajinikanth blessings! I need all your wishes! 🙏🏼🙏🏼 #Chandramukhi2 pic.twitter.com/dSrD3B5Xwh
— Raghava Lawrence (@offl_Lawrence) July 15, 2022
‘ಹಾಯ್ ಫ್ರೆಂಡ್ಸ್ ಮತ್ತು ಫ್ಯಾನ್ಸ್, ಇಂದು ನನ್ನ ತಲೈವರ್ ಮತ್ತು ಗುರು ರಜನಿಕಾಂತ್ ಆಶೀರ್ವಾದದೊಂದಿಗೆ ಮೈಸೂರಿನಲ್ಲಿ 'ಚಂದ್ರಮುಖಿ-2 ಶೂಟಿಂಗ್ ಪ್ರಾರಂಭವಾಗಿದೆ. ನನಗೆ ನಿಮ್ಮೆಲ್ಲರ ಹಾರೈಕೆಗಳ ಬೇಕು' ಎಂದು ಲಾರೆನ್ಸ್ ಟ್ವೀಟ್ ಮಾಡಿದ್ದು, ರಜನಿಕಾಂತ್ ಅವರ ಆಶೀರ್ವಾದ ಪಡೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಪಿ.ವಾಸು ನಿರ್ದೇಶಿಸುತ್ತಿದ್ದು, ರಜನಿಕಾಂತ್ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವಡಿವೇಲು ಮತ್ತೊಂದು ಪ್ರಮುಖ ಪಾತ್ರದಲ್ಲಿಅಭಿನಯಿಸಲಿದ್ದಾರೆ. ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ಇರಲಿದೆ.
ಇದನ್ನೂ ಓದಿ: ಡಾ. ರಾಜ್ ಕುಮಾರ್ - ಪೃಥ್ವಿ ರಾಜ್ ಕಪೂರ್ ರಂತಹ ದಿಗ್ಗಜ ನಟರಿಗೆ ಮೇಕಪ್ ಮಾಡಿದ ಕೇಶವಣ್ಣ ನಿಧನ