ETV Bharat / entertainment

ಬಿಗ್‌ ಬಾಸ್‌ ಮನೆಯಿಂದ ಭಾಗ್ಯಶ್ರೀ ಔಟ್

author img

By ETV Bharat Karnataka Team

Published : Nov 20, 2023, 6:57 AM IST

Kannada Bigg Boss season-10: ಭಾನುವಾರ ನಡೆದ 'ಸೂಪರ್ ಸಂಡೆ' ಎಪಿಸೋಡ್‌ನಲ್ಲಿ ಭಾಗ್ಯಶ್ರೀ ಬಿಗ್‌ ಬಾಸ್ ಸ್ಪರ್ಧೆಯಿಂದ ಎಲಿಮಿನೇಟ್​ ಆದರು.

Bhagyashree
ಭಾಗ್ಯಶ್ರೀ

ಕನ್ನಡ ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಭಾಗ್ಯಶ್ರೀ ಅವರ ಪಯಣ ನಿನ್ನೆ ಕೊನೆಗೊಂಡಿತು. ಭಾನುವಾರದ 'ಸೂಪರ್ ಸಂಡೆ' ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್, ಇವರು ಮನೆಯಿಂದ ಹೊರಬೀಳುತ್ತಿರುವ ವಿಷಯ ಘೋಷಿಸಿದರು.

ತಮ್ಮ ಹೆಸರಿನಲ್ಲಿ ಭಾಗ್ಯ ಇರಿಸಿಕೊಂಡಿರುವ ಭಾಗ್ಯಶ್ರೀ ಅವರಿಗೆ ಬಿಗ್‌ ಬಾಸ್‌ ಮನೆಯೊಳಗೂ ಅನೇಕ ಸಲ ಭಾಗ್ಯ ಕೈ ಹಿಡಿದಿತ್ತು. ಮಾತು ಮಾತಿಗೂ ಕಣ್ಣೀರು ಸುರಿಸುವ ಸ್ವಭಾವದಿಂದ ಅಳುಮುಂಜಿಯಾಗಿಯೂ ಬಿಂಬಿತವಾಗಿದ್ದರೂ, ಇಷ್ಟು ವಾರಗಳ ಕಾಲ ಬಿಗ್‌ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು.

ಎರಡು ವಾರಗಳ ಹಿಂದೆಯೇ ಅವರು ಹೊರಹೋಗಬೇಕಾಗಿತ್ತು. ಸುದೀಪ್​ ಅವರು, ಭಾಗ್ಯಶ್ರೀ ಎಲಿಮಿನೇಟ್ ಆಗಿರುವ ಸಂಗತಿಯನ್ನು ಘೋಷಿಸಿದ್ದರು ಕೂಡಾ. ಆದರೆ ಮನೆ ಬಾಗಿಲು ತೆರೆದಿರಲಿಲ್ಲ. ಆ ವಾರ ಹಬ್ಬದ ಕಾರಣಕ್ಕಾಗಿ ಯಾರನ್ನೂ ಎಲಿಮಿನೇಟ್ ಮಾಡದೇ ಉಳಿಸಿಕೊಳ್ಳಲಾಗಿತ್ತು. ಅದರ ಮುಂದಿನ ವಾರ ಪ್ರತಾಪ್‌ ಅವರು ಭಾಗ್ಯಶ್ರೀ ಅವರನ್ನು ನಾಮಿನೇಷನ್‌ ಪಟ್ಟಿಯಿಂದಲೇ ಪಾರು ಮಾಡಿದ್ದರು. ಅದಾದ ಬಳಿಕ, ವರ್ತೂರು ಸಂತೋಷ್‌ ಕಾರಣದಿಂದ ಇನ್ನೊಂದು ವಾರ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿರಲಿಲ್ಲ.

ಇದೆಲ್ಲದರಿಂದ ನಿನ್ನೆಯ ವಾರ ಡಬಲ್‌ ಎಲಿಮಿನೇಷನ್‌ನೊಂದಿಗೆ ಕಿಚ್ಚ ವೀಕೆಂಡ್ ಎಪಿಸೋಡಿಗೆ ಬಂದಿದ್ದರು. ಅದರಂತೆ ಶನಿವಾರದ ಪಂಚಾಯ್ತಿಯಲ್ಲಿ ಇಶಾನಿ ಎಲಿಮಿನೇಟ್ ಆಗಿದ್ದರು. ಹಾಗೆಯೇ ಭಾನುವಾರ ಭಾಗ್ಯಶ್ರೀ ಮನೆಯಿಂದ ಹೊರಹೋಗುತ್ತಿರುವ ವಿಷಯವನ್ನು ಸುದೀಪ್ ಪ್ರಕಟಿಸಿದರು.

ತಾನಾಗೇ ಎದ್ದು ನಿಂತಿದ್ದ ಇಶಾನಿ: ಶನಿವಾರದ ಎಪಿಸೋಡ್ ಕೊನೆಯಲ್ಲಿ ಸುದೀಪ್​, "ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರೆಂದು ನಿಮಗೆ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ" ಎಂದಿದ್ದರು. ಇಶಾನಿ ಎದ್ದು ನಿಂತುಕೊಂಡರು. ಆಗ ಕಿಚ್ಚ, "ನಿಜ. ನಿಮ್ಮ ಪಯಣ ಬಿಗ್‌ ಬಾಸ್‌ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ ದಿ ಬೆಸ್ಟ್" ಎಂದು ಹೇಳಿದ್ದರು.

ಈ ವಾರ ಇಶಾನಿ ಮತ್ತು ಭಾಗ್ಯಶ್ರೀ ಅನುಪಸ್ಥಿತಿಯಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳು ಮನೆಯಲ್ಲಿ ಮುಂದುವರಿಯಲಿದ್ದಾರೆ. ಮನೆ ಸದಸ್ಯರ ಪೈಕಿ ಇಬ್ಬರು ಕಡಿಮೆಯಾಗಿರುವುದು ಸ್ಪರ್ಧೆಯನ್ನು ಇನ್ನಷ್ಟು ಚುರುಕುಗೊಳಿಸಿದೆ. ಇದರ ಪರಿಣಾಮ ಏನಾಗಲಿದೆ ಎಂಬುದನ್ನು ಜಿಯೋಸಿನಿಮಾದಲ್ಲಿ ವೀಕ್ಷಿಸಿ ತಿಳಿದುಕೊಳ್ಳಬಹುದು. 24 ಗಂಟೆಗಳ ನೇರಪ್ರಸಾರವನ್ನು ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್​​ಕನ್ನಡ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಇದನ್ನೂ ಓದಿ: ಬಿಗ್‌ ಬಾಸ್​ ಮನೆಯಿಂದ ಇಶಾನಿ ಔಟ್; ಇಂದು ಮತ್ತೊಬ್ಬರಿಗೆ ಕಾದಿದೆ ಶಾಕ್​!​

ಕನ್ನಡ ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಭಾಗ್ಯಶ್ರೀ ಅವರ ಪಯಣ ನಿನ್ನೆ ಕೊನೆಗೊಂಡಿತು. ಭಾನುವಾರದ 'ಸೂಪರ್ ಸಂಡೆ' ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್, ಇವರು ಮನೆಯಿಂದ ಹೊರಬೀಳುತ್ತಿರುವ ವಿಷಯ ಘೋಷಿಸಿದರು.

ತಮ್ಮ ಹೆಸರಿನಲ್ಲಿ ಭಾಗ್ಯ ಇರಿಸಿಕೊಂಡಿರುವ ಭಾಗ್ಯಶ್ರೀ ಅವರಿಗೆ ಬಿಗ್‌ ಬಾಸ್‌ ಮನೆಯೊಳಗೂ ಅನೇಕ ಸಲ ಭಾಗ್ಯ ಕೈ ಹಿಡಿದಿತ್ತು. ಮಾತು ಮಾತಿಗೂ ಕಣ್ಣೀರು ಸುರಿಸುವ ಸ್ವಭಾವದಿಂದ ಅಳುಮುಂಜಿಯಾಗಿಯೂ ಬಿಂಬಿತವಾಗಿದ್ದರೂ, ಇಷ್ಟು ವಾರಗಳ ಕಾಲ ಬಿಗ್‌ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು.

ಎರಡು ವಾರಗಳ ಹಿಂದೆಯೇ ಅವರು ಹೊರಹೋಗಬೇಕಾಗಿತ್ತು. ಸುದೀಪ್​ ಅವರು, ಭಾಗ್ಯಶ್ರೀ ಎಲಿಮಿನೇಟ್ ಆಗಿರುವ ಸಂಗತಿಯನ್ನು ಘೋಷಿಸಿದ್ದರು ಕೂಡಾ. ಆದರೆ ಮನೆ ಬಾಗಿಲು ತೆರೆದಿರಲಿಲ್ಲ. ಆ ವಾರ ಹಬ್ಬದ ಕಾರಣಕ್ಕಾಗಿ ಯಾರನ್ನೂ ಎಲಿಮಿನೇಟ್ ಮಾಡದೇ ಉಳಿಸಿಕೊಳ್ಳಲಾಗಿತ್ತು. ಅದರ ಮುಂದಿನ ವಾರ ಪ್ರತಾಪ್‌ ಅವರು ಭಾಗ್ಯಶ್ರೀ ಅವರನ್ನು ನಾಮಿನೇಷನ್‌ ಪಟ್ಟಿಯಿಂದಲೇ ಪಾರು ಮಾಡಿದ್ದರು. ಅದಾದ ಬಳಿಕ, ವರ್ತೂರು ಸಂತೋಷ್‌ ಕಾರಣದಿಂದ ಇನ್ನೊಂದು ವಾರ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿರಲಿಲ್ಲ.

ಇದೆಲ್ಲದರಿಂದ ನಿನ್ನೆಯ ವಾರ ಡಬಲ್‌ ಎಲಿಮಿನೇಷನ್‌ನೊಂದಿಗೆ ಕಿಚ್ಚ ವೀಕೆಂಡ್ ಎಪಿಸೋಡಿಗೆ ಬಂದಿದ್ದರು. ಅದರಂತೆ ಶನಿವಾರದ ಪಂಚಾಯ್ತಿಯಲ್ಲಿ ಇಶಾನಿ ಎಲಿಮಿನೇಟ್ ಆಗಿದ್ದರು. ಹಾಗೆಯೇ ಭಾನುವಾರ ಭಾಗ್ಯಶ್ರೀ ಮನೆಯಿಂದ ಹೊರಹೋಗುತ್ತಿರುವ ವಿಷಯವನ್ನು ಸುದೀಪ್ ಪ್ರಕಟಿಸಿದರು.

ತಾನಾಗೇ ಎದ್ದು ನಿಂತಿದ್ದ ಇಶಾನಿ: ಶನಿವಾರದ ಎಪಿಸೋಡ್ ಕೊನೆಯಲ್ಲಿ ಸುದೀಪ್​, "ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರೆಂದು ನಿಮಗೆ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ" ಎಂದಿದ್ದರು. ಇಶಾನಿ ಎದ್ದು ನಿಂತುಕೊಂಡರು. ಆಗ ಕಿಚ್ಚ, "ನಿಜ. ನಿಮ್ಮ ಪಯಣ ಬಿಗ್‌ ಬಾಸ್‌ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ ದಿ ಬೆಸ್ಟ್" ಎಂದು ಹೇಳಿದ್ದರು.

ಈ ವಾರ ಇಶಾನಿ ಮತ್ತು ಭಾಗ್ಯಶ್ರೀ ಅನುಪಸ್ಥಿತಿಯಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳು ಮನೆಯಲ್ಲಿ ಮುಂದುವರಿಯಲಿದ್ದಾರೆ. ಮನೆ ಸದಸ್ಯರ ಪೈಕಿ ಇಬ್ಬರು ಕಡಿಮೆಯಾಗಿರುವುದು ಸ್ಪರ್ಧೆಯನ್ನು ಇನ್ನಷ್ಟು ಚುರುಕುಗೊಳಿಸಿದೆ. ಇದರ ಪರಿಣಾಮ ಏನಾಗಲಿದೆ ಎಂಬುದನ್ನು ಜಿಯೋಸಿನಿಮಾದಲ್ಲಿ ವೀಕ್ಷಿಸಿ ತಿಳಿದುಕೊಳ್ಳಬಹುದು. 24 ಗಂಟೆಗಳ ನೇರಪ್ರಸಾರವನ್ನು ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್​​ಕನ್ನಡ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಇದನ್ನೂ ಓದಿ: ಬಿಗ್‌ ಬಾಸ್​ ಮನೆಯಿಂದ ಇಶಾನಿ ಔಟ್; ಇಂದು ಮತ್ತೊಬ್ಬರಿಗೆ ಕಾದಿದೆ ಶಾಕ್​!​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.