ETV Bharat / entertainment

ಭಾವನೆಗಳ ಸುತ್ತ ನಡೆಯುವ ಕಥೆ ಬೈರಾಗಿ: ಶಿವರಾಜ್‌ ಕುಮಾರ್ - ಬೈರಾಗಿ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಶಿವರಾಜ್​ಕುಮಾರ್​

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 123ನೇ ಚಿತ್ರ ಬೈರಾಗಿ ಜುಲೈ 1ಕ್ಕೆ ರಾಜ್ಯಾದ್ಯಂತ ಪ್ರೇಕ್ಷಕರ ಮುಂದೆ ಬರ್ತಾ ಇದೆ.

ಭಾವನೆಗಳ ಸುತ್ತ ನಡೆಯುವ ಕಥೆ ಬೈರಾಗಿ ಎಂದ  ಶಿವಕುಮಾರ್
ಭಾವನೆಗಳ ಸುತ್ತ ನಡೆಯುವ ಕಥೆ ಬೈರಾಗಿ ಎಂದ ಶಿವಕುಮಾರ್
author img

By

Published : Jun 13, 2022, 10:15 PM IST

'ಭಜರಂಗಿ 2' ಸಿನಿಮಾ ಕುರಿತು ನಾಗವಾರದ ತಮ್ಮ ನಿವಾಸದಲ್ಲಿ ನಟ ಶಿವರಾಜ್ ಕುಮಾರ್ ಅನುಭವ ಹಂಚಿಕೊಂಡರು. ಚಿತ್ರದ ಹಾಡುಗಳು ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಭಾವನೆಗಳ ಸುತ್ತ ನಡೆಯುವ ಕಥೆ ಇದು. ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಸದ್ಯ ವೈರಲ್ ಆಗಿರುವ ಹುಲಿ ವೇಷದ‌ ಮುಖ ಹಾಗು ಡಿಫ್ರೆಂಟ್ ಹೇರ್ ಸ್ಟೈಲ್ ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ ಎಂದರು.


ಟಗರು ಬಳಿಕ ನಾನು ಮತ್ತು ಧನಂಜಯ್ ಕಾಂಬಿನೇಶನ್​ನ ಸಿನಿಮಾ ಪ್ರೇಕ್ಷಕರಿಗೆ ಹೊಸ ರೀತಿಯಲ್ಲಿಯೇ ಇಷ್ಟ ಆಗುತ್ತೆ‌. ನಾಯಕಿ ಪಾತ್ರ ಮಾಡಿರೋ ಅಂಜಲಿ, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಪಾತ್ರಗಳಲ್ಲಿ ಅವ್ರದ್ದೇ ಆದ ಒಂದು ಭಾವನೆಗಳ ಕಥೆ ಇದೆ. ಚಿತ್ರದ ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ...ಎಂಬ ಹಾಡಿಗೆ ಎರಡು ದಿನ ಪ್ರಾಕ್ಟೀಸ್ ಮಾಡಿ ಸಿಂಗಲ್ ಶಾಟ್​​ನಲ್ಲಿ ಶೂಟ್ ಮಾಡಿರುವುದು ಮತ್ತೊಂದು ವಿಶೇಷ. ಹುಲಿ ವೇಶಕ್ಕೆ ಎಲ್ಲಾ ಕಡೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅದಕ್ಕೆ ಕಾರಣ ಡೈರೆಕ್ಟರ್ ಎಂದು ಹೊಗಳಿದರು.

ತಮಿಳು ನಿರ್ದೇಶಕ ವಿಜಯ್ ಮಿಲ್ಟನ್‌ ನಿರ್ದೇಶನ ಮಾಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಬಂಡವಾಳ ಹೂಡಿದ್ದಾರೆ. ನಿರ್ಮಾಪಕ ಕೃಷ್ಣ ಸಾರ್ಥಕ್ ಹೇಳುವ ಹಾಗೇ ಬೈರಾಗಿ ಸಿನಿಮಾವನ್ನು 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅನು ಪ್ರಭಾಕರ್ ಅಭಿನಯಿಸಿದ್ದಾರೆ.

ಇದನ್ನೂ ಓದಿ : ಕಲಬುರಗಿ: ಮುಂಗಾರು ಶುರುವಾಗ್ತಿದ್ದಂತೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಚಿಂತೆ

'ಭಜರಂಗಿ 2' ಸಿನಿಮಾ ಕುರಿತು ನಾಗವಾರದ ತಮ್ಮ ನಿವಾಸದಲ್ಲಿ ನಟ ಶಿವರಾಜ್ ಕುಮಾರ್ ಅನುಭವ ಹಂಚಿಕೊಂಡರು. ಚಿತ್ರದ ಹಾಡುಗಳು ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಭಾವನೆಗಳ ಸುತ್ತ ನಡೆಯುವ ಕಥೆ ಇದು. ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಸದ್ಯ ವೈರಲ್ ಆಗಿರುವ ಹುಲಿ ವೇಷದ‌ ಮುಖ ಹಾಗು ಡಿಫ್ರೆಂಟ್ ಹೇರ್ ಸ್ಟೈಲ್ ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ ಎಂದರು.


ಟಗರು ಬಳಿಕ ನಾನು ಮತ್ತು ಧನಂಜಯ್ ಕಾಂಬಿನೇಶನ್​ನ ಸಿನಿಮಾ ಪ್ರೇಕ್ಷಕರಿಗೆ ಹೊಸ ರೀತಿಯಲ್ಲಿಯೇ ಇಷ್ಟ ಆಗುತ್ತೆ‌. ನಾಯಕಿ ಪಾತ್ರ ಮಾಡಿರೋ ಅಂಜಲಿ, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಪಾತ್ರಗಳಲ್ಲಿ ಅವ್ರದ್ದೇ ಆದ ಒಂದು ಭಾವನೆಗಳ ಕಥೆ ಇದೆ. ಚಿತ್ರದ ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ...ಎಂಬ ಹಾಡಿಗೆ ಎರಡು ದಿನ ಪ್ರಾಕ್ಟೀಸ್ ಮಾಡಿ ಸಿಂಗಲ್ ಶಾಟ್​​ನಲ್ಲಿ ಶೂಟ್ ಮಾಡಿರುವುದು ಮತ್ತೊಂದು ವಿಶೇಷ. ಹುಲಿ ವೇಶಕ್ಕೆ ಎಲ್ಲಾ ಕಡೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅದಕ್ಕೆ ಕಾರಣ ಡೈರೆಕ್ಟರ್ ಎಂದು ಹೊಗಳಿದರು.

ತಮಿಳು ನಿರ್ದೇಶಕ ವಿಜಯ್ ಮಿಲ್ಟನ್‌ ನಿರ್ದೇಶನ ಮಾಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಬಂಡವಾಳ ಹೂಡಿದ್ದಾರೆ. ನಿರ್ಮಾಪಕ ಕೃಷ್ಣ ಸಾರ್ಥಕ್ ಹೇಳುವ ಹಾಗೇ ಬೈರಾಗಿ ಸಿನಿಮಾವನ್ನು 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅನು ಪ್ರಭಾಕರ್ ಅಭಿನಯಿಸಿದ್ದಾರೆ.

ಇದನ್ನೂ ಓದಿ : ಕಲಬುರಗಿ: ಮುಂಗಾರು ಶುರುವಾಗ್ತಿದ್ದಂತೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಚಿಂತೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.