ETV Bharat / entertainment

ಆಡಿಯೋ ವೈರಲ್ ಮಾಡಿದವರ ವಿರುದ್ಧ ದೂರು ಕೊಟ್ಟ ನಟ ವಿದ್ಯಾಭರಣ್​​

ನಟಿ ವೈಷ್ಣವಿ ಅವರೊಂದಿಗೆ ನಿಶ್ಚಿತಾರ್ಥಕ್ಕೆ ಸಜ್ಜಾಗಿದ್ದ ವಿದ್ಯಾಭರಣ್ ಯುವತಿಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ರೀತಿ ಯುವತಿಯರಿಬ್ಬರು ಮಾತನಾಡಿದ್ದು, ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದ್ಯಾಭರಣ್​​ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

author img

By

Published : Nov 25, 2022, 8:00 PM IST

Updated : Nov 26, 2022, 11:51 AM IST

actor vidhyabharan
ನಟ ವಿದ್ಯಾಭರಣ್​​

ಬೆಂಗಳೂರು: ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಅವರೊಂದಿಗೆ ನಿಶ್ಚಿತಾರ್ಥ ಮುರಿದು ಬೀಳುತ್ತಿದ್ದಂತೆ ತಮ್ಮ ತೇಜೋವಧೆಗೆ ಕಾರಣರಾದವರ ವಿರುದ್ಧ ನಟ, ಉದ್ಯಮಿ ವಿದ್ಯಾಭರಣ್​​ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಸನ್ನಿಧಿ ಖ್ಯಾತಿಯ ನಟಿ ವೈಷ್ಣವಿ ಅವರೊಂದಿಗೆ ವಿದ್ಯಾಭರಣ್ ನಿಶ್ಚಿತಾರ್ಥಕ್ಕೂ ಮುನ್ನದ​​ ಶಾಸ್ತ್ರಗಳನ್ನು ಮಾಡಿಕೊಂಡಿದ್ದರು. ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿದ್ಯಾಭರಣ್​​ ಕುರಿತಂತೆ ಅಪಸ್ವರ ಕೇಳಿ ಬಂದಿತ್ತು‌.

ನಟ ವಿದ್ಯಾಭರಣ್​​

ಯುವತಿಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ರೀತಿ ಯುವತಿಯರಿಬ್ಬರು ಮಾತನಾಡಿದ್ದು, ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಬಳಿಕ ನಟಿ ವೈಷ್ಣವಿ ತಮ್ಮ ಎಂಗೇಜ್​ಮೆಂಟ್ ಕ್ಯಾನ್ಸಲ್ ಮಾಡಿಕೊಂಡಿದ್ದರು‌. ಆಡಿಯೋ ವೈರಲ್​ ಹಿನ್ನೆಲೆ ತಮ್ಮ ಚಾರಿತ್ರ್ಯವಧೆಗೆ ಕಾರಣರಾದವರ ವಿರುದ್ಧ ಕಮೀಷನರ್ ಕಚೇರಿಗೆ ಭೇಟಿ ನೀಡಿ ನಟ ವಿದ್ಯಾಭರಣ್​​ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ನಟ ವಿದ್ಯಾಭರಣ್​, ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಆಡಿಯೋ ಹರಿಬಿಡಲಾಗಿದೆ. ಇದು ಶುದ್ದ ಸುಳ್ಳು.‌ ಆಡಿಯೋದಲ್ಲಿ ಹೇಳಿರುವಂತೆ ನಾನು ತಪ್ಪು ಮಾಡಿಲ್ಲ. ಇದರಿಂದ ನನ್ನ ಹಾಗೂ ಕುಟುಂಬದವರ ಘನತೆಗೆ ಧಕ್ಕೆಯಾಗಿದೆ. ಈ ಹಿನ್ನೆಲೆ ಆಡಿಯೋ ವೈರಲ್ ಮಾಡಿದವರ ವಿರುದ್ಧ ದೂರು ನೀಡಲಾಗಿದ್ದು, ಕಮೀಷನರ್ ಅವರು ಸುಬ್ರಮಣ್ಯಪುರ ಪೊಲೀಸರಿಗೆ ತನಿಖೆಗೆ ವಹಿಸಿದ್ದಾರೆ ಎಂದರು.

actor vidhyabharan complaint against those who did viral a audio
ಚಾಕೊಲೆಟ್ ಬಾಯ್ ಸಿನಿಮಾದಲ್ಲಿ ಕೆಲಸ ಮಾಡಬೇಕೆಂದುಕೊಂಡಿದ್ದ ವಿದ್ಯಾಭರಣ್ - ವೈಷ್ಣವಿ

ಇದನ್ನೂ ಓದಿ: ವೈಷ್ಣವಿ ಗೌಡ ನಿಶ್ಚಿತಾರ್ಥ ವದಂತಿ: ನಟಿಯ ತಂದೆ ರವಿಕುಮಾರ್ ಹೇಳಿದ್ದೇನು?

ನನಗೂ ವೈಷ್ಣವಿಗೂ 2016ರಿಂದಲೂ ಪರಿಚಯ ಇತ್ತು. ನಾನು ನಟಿಸಬೇಕಿದ್ದ ಚಾಕೋಲೆಟ್ ಬಾಯ್ ಸಿನಿಮಾದಲ್ಲಿ ಅವರು ಹೀರೋಯಿನ್ ಆಗಿದ್ದರು. ಇತ್ತೀಚೆಗೆ ಸಿನಿಮಾವೊಂದರ ಪ್ರೀಮಿಯರ್ ಶೋನಲ್ಲಿ ಮುಖಾಮುಖಿಯಾಗಿದ್ದೆವು. ಬಳಿಕ ಗುರು-ಹಿರಿಯರು ನಿಶ್ಚಯಿಸಿ ಕುಟುಂಬದವರ ಸಮ್ಮುಖ ಮೇರೆಗೆ ವಿಳ್ಯದೆಲೆ ಶಾಸ್ತ್ರ (ಹೆಣ್ಣು ನೋಡುವ ಶಾಸ್ತ್ರ) ನಡೆಯಿತು. ಕಾರ್ಯಕ್ರಮದ ಫೋಟೋ ವೈರಲ್ ಆಗುತ್ತಿದ್ದಂತೆ, ನನ್ನ ವಿರುದ್ಧ ಹೊಟ್ಟೆ ಕಿಚ್ಚಿನಿಂದ ಈ ರೀತಿ ಮಾಡಲಾಗಿದೆ.

ಇದನ್ನೂ ಓದಿ: ವೈಷ್ಣವಿ ಗೌಡ ನಿಶ್ಚಿತಾರ್ಥ ವದಂತಿ: ಮೌನ ಮುರಿದ ಸನ್ನಿಧಿ ಖ್ಯಾತಿಯ ನಟಿ

ಮೂರನೇ ವ್ಯಕ್ತಿಯು ಇಲ್ಲಸಲ್ಲದ ಆರೋಪ ಮಾಡಿದ್ದಾರೆ‌. ಇದರಿಂದ ನನ್ನ ಘನತೆಗೆ ಧಕ್ಕೆಯಾಗಿದೆ‌. ಯುವತಿ ವಿಚಾರವಾಗಿ ಹಿಂದೆ ಕೆಲ ತಪ್ಪು ಮಾಡಿದ್ದು ನಿಜ.‌ ನಾನು ಮನುಷ್ಯನೇ. ಆದರೆ, ಆಗಿರುವ ತಪ್ಪನ್ನು ತಿದ್ದಿಕೊಂಡಿದ್ದೇನೆ‌. ನಾನು ಯಾರ ಹೆಸರನ್ನೂ ಹೇಳಲು ಇಷ್ಟಪಡುವುದಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ವಿಳ್ಯದೆಲೆ ಶಾಸ್ತ್ರ ಆಗುವ ಮುನ್ನವೇ ಅರೋಪಿಸಬಹುದಿತ್ತು‌.‌‌‌‌ ಆದರೆ, ಈಗ್ಯಾಕೆ ಆರೋಪ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ಕಾನೂನು ಹೋರಾಟ ಮಾಡುವೆ ಎಂದು ತಿಳಿಸಿದರು.

ಬೆಂಗಳೂರು: ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಅವರೊಂದಿಗೆ ನಿಶ್ಚಿತಾರ್ಥ ಮುರಿದು ಬೀಳುತ್ತಿದ್ದಂತೆ ತಮ್ಮ ತೇಜೋವಧೆಗೆ ಕಾರಣರಾದವರ ವಿರುದ್ಧ ನಟ, ಉದ್ಯಮಿ ವಿದ್ಯಾಭರಣ್​​ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಸನ್ನಿಧಿ ಖ್ಯಾತಿಯ ನಟಿ ವೈಷ್ಣವಿ ಅವರೊಂದಿಗೆ ವಿದ್ಯಾಭರಣ್ ನಿಶ್ಚಿತಾರ್ಥಕ್ಕೂ ಮುನ್ನದ​​ ಶಾಸ್ತ್ರಗಳನ್ನು ಮಾಡಿಕೊಂಡಿದ್ದರು. ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿದ್ಯಾಭರಣ್​​ ಕುರಿತಂತೆ ಅಪಸ್ವರ ಕೇಳಿ ಬಂದಿತ್ತು‌.

ನಟ ವಿದ್ಯಾಭರಣ್​​

ಯುವತಿಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ರೀತಿ ಯುವತಿಯರಿಬ್ಬರು ಮಾತನಾಡಿದ್ದು, ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಬಳಿಕ ನಟಿ ವೈಷ್ಣವಿ ತಮ್ಮ ಎಂಗೇಜ್​ಮೆಂಟ್ ಕ್ಯಾನ್ಸಲ್ ಮಾಡಿಕೊಂಡಿದ್ದರು‌. ಆಡಿಯೋ ವೈರಲ್​ ಹಿನ್ನೆಲೆ ತಮ್ಮ ಚಾರಿತ್ರ್ಯವಧೆಗೆ ಕಾರಣರಾದವರ ವಿರುದ್ಧ ಕಮೀಷನರ್ ಕಚೇರಿಗೆ ಭೇಟಿ ನೀಡಿ ನಟ ವಿದ್ಯಾಭರಣ್​​ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ನಟ ವಿದ್ಯಾಭರಣ್​, ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಆಡಿಯೋ ಹರಿಬಿಡಲಾಗಿದೆ. ಇದು ಶುದ್ದ ಸುಳ್ಳು.‌ ಆಡಿಯೋದಲ್ಲಿ ಹೇಳಿರುವಂತೆ ನಾನು ತಪ್ಪು ಮಾಡಿಲ್ಲ. ಇದರಿಂದ ನನ್ನ ಹಾಗೂ ಕುಟುಂಬದವರ ಘನತೆಗೆ ಧಕ್ಕೆಯಾಗಿದೆ. ಈ ಹಿನ್ನೆಲೆ ಆಡಿಯೋ ವೈರಲ್ ಮಾಡಿದವರ ವಿರುದ್ಧ ದೂರು ನೀಡಲಾಗಿದ್ದು, ಕಮೀಷನರ್ ಅವರು ಸುಬ್ರಮಣ್ಯಪುರ ಪೊಲೀಸರಿಗೆ ತನಿಖೆಗೆ ವಹಿಸಿದ್ದಾರೆ ಎಂದರು.

actor vidhyabharan complaint against those who did viral a audio
ಚಾಕೊಲೆಟ್ ಬಾಯ್ ಸಿನಿಮಾದಲ್ಲಿ ಕೆಲಸ ಮಾಡಬೇಕೆಂದುಕೊಂಡಿದ್ದ ವಿದ್ಯಾಭರಣ್ - ವೈಷ್ಣವಿ

ಇದನ್ನೂ ಓದಿ: ವೈಷ್ಣವಿ ಗೌಡ ನಿಶ್ಚಿತಾರ್ಥ ವದಂತಿ: ನಟಿಯ ತಂದೆ ರವಿಕುಮಾರ್ ಹೇಳಿದ್ದೇನು?

ನನಗೂ ವೈಷ್ಣವಿಗೂ 2016ರಿಂದಲೂ ಪರಿಚಯ ಇತ್ತು. ನಾನು ನಟಿಸಬೇಕಿದ್ದ ಚಾಕೋಲೆಟ್ ಬಾಯ್ ಸಿನಿಮಾದಲ್ಲಿ ಅವರು ಹೀರೋಯಿನ್ ಆಗಿದ್ದರು. ಇತ್ತೀಚೆಗೆ ಸಿನಿಮಾವೊಂದರ ಪ್ರೀಮಿಯರ್ ಶೋನಲ್ಲಿ ಮುಖಾಮುಖಿಯಾಗಿದ್ದೆವು. ಬಳಿಕ ಗುರು-ಹಿರಿಯರು ನಿಶ್ಚಯಿಸಿ ಕುಟುಂಬದವರ ಸಮ್ಮುಖ ಮೇರೆಗೆ ವಿಳ್ಯದೆಲೆ ಶಾಸ್ತ್ರ (ಹೆಣ್ಣು ನೋಡುವ ಶಾಸ್ತ್ರ) ನಡೆಯಿತು. ಕಾರ್ಯಕ್ರಮದ ಫೋಟೋ ವೈರಲ್ ಆಗುತ್ತಿದ್ದಂತೆ, ನನ್ನ ವಿರುದ್ಧ ಹೊಟ್ಟೆ ಕಿಚ್ಚಿನಿಂದ ಈ ರೀತಿ ಮಾಡಲಾಗಿದೆ.

ಇದನ್ನೂ ಓದಿ: ವೈಷ್ಣವಿ ಗೌಡ ನಿಶ್ಚಿತಾರ್ಥ ವದಂತಿ: ಮೌನ ಮುರಿದ ಸನ್ನಿಧಿ ಖ್ಯಾತಿಯ ನಟಿ

ಮೂರನೇ ವ್ಯಕ್ತಿಯು ಇಲ್ಲಸಲ್ಲದ ಆರೋಪ ಮಾಡಿದ್ದಾರೆ‌. ಇದರಿಂದ ನನ್ನ ಘನತೆಗೆ ಧಕ್ಕೆಯಾಗಿದೆ‌. ಯುವತಿ ವಿಚಾರವಾಗಿ ಹಿಂದೆ ಕೆಲ ತಪ್ಪು ಮಾಡಿದ್ದು ನಿಜ.‌ ನಾನು ಮನುಷ್ಯನೇ. ಆದರೆ, ಆಗಿರುವ ತಪ್ಪನ್ನು ತಿದ್ದಿಕೊಂಡಿದ್ದೇನೆ‌. ನಾನು ಯಾರ ಹೆಸರನ್ನೂ ಹೇಳಲು ಇಷ್ಟಪಡುವುದಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ವಿಳ್ಯದೆಲೆ ಶಾಸ್ತ್ರ ಆಗುವ ಮುನ್ನವೇ ಅರೋಪಿಸಬಹುದಿತ್ತು‌.‌‌‌‌ ಆದರೆ, ಈಗ್ಯಾಕೆ ಆರೋಪ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ಕಾನೂನು ಹೋರಾಟ ಮಾಡುವೆ ಎಂದು ತಿಳಿಸಿದರು.

Last Updated : Nov 26, 2022, 11:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.