ETV Bharat / entertainment

ಬಾಲಿವುಡ್​ ಖ್ಯಾತ ನಿರ್ದೇಶಕ, ನಟ ಸತೀಶ್​ ಚಂದ್ರ ಕೌಶಿಕ್ ಹೃದಯಾಘಾತದಿಂದ ನಿಧನ

ಬಾಲಿವುಡ್​ ನಿರ್ದೇಶಕ ಮತ್ತು ನಟ ಸತೀಶ್​ ಚಂದ್ರ ಕೌಶಿಕ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

author img

By

Published : Mar 9, 2023, 9:21 AM IST

Updated : Mar 9, 2023, 10:12 AM IST

Satish Kaushik
ಸತೀಶ್​ ಚಂದ್ರ ಕೌಶಿಕ್

ಬಾಲಿವುಡ್‌ನ​ ಖ್ಯಾತ ನಿರ್ದೇಶಕ ಹಾಗು ನಟ ಸತೀಶ್​ ಚಂದ್ರ ಕೌಶಿಕ್​ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಕೌಶಿಕ್​ ಅವರು ದೆಹಲಿಯಲ್ಲಿನ ತಮ್ಮ ಸ್ನೇಹಿತನ ಮನೆಯಲ್ಲಿದ್ದರು. ರಾತ್ರಿ 1 ಗಂಟೆಯ ಸುಮಾರಿಗೆ ತೀವ್ರ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಹೃದಯಾಘಾತದಿಂದ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

  • जानता हूँ “मृत्यु ही इस दुनिया का अंतिम सच है!” पर ये बात मैं जीते जी कभी अपने जिगरी दोस्त #SatishKaushik के बारे में लिखूँगा, ये मैंने सपने में भी नहीं सोचा था।45 साल की दोस्ती पर ऐसे अचानक पूर्णविराम !! Life will NEVER be the same without you SATISH ! ओम् शांति! 💔💔💔 pic.twitter.com/WC5Yutwvqc

    — Anupam Kher (@AnupamPKher) March 8, 2023 " class="align-text-top noRightClick twitterSection" data=" ">

ಹಿರಿಯ ನಟ ಅನುಪಮ್​ ಖೇರ್​ ತಮ್ಮ ಪ್ರೀತಿಯ ಸ್ನೇಹಿತ ಸತೀಶ್​ ಜೊತೆಗಿನ ಕಪ್ಪು ಬಿಳುಪಿನ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. "ಸಾವು ಈ ಪ್ರಪಂಚದ ಅಂತಿಮ ಸತ್ಯ. ನಾನು ಬದುಕಿರುವಾಗಲೇ ನನ್ನ ಆತ್ಮೀಯ ಗೆಳೆಯ ಸತೀಶ್​ ಕೌಶಿಕ್​ ಅವರ ಕುರಿತು ಹೀಗೆ ಬರೆಯುತ್ತೇನೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. 45 ವರ್ಷಗಳ ಸ್ನೇಹಕ್ಕೆ ಹೀಗೊಂದು ದಿಢೀರ್​ ಪೂರ್ಣವಿರಾಮ" ಎಂದು ಹಿಂದಿಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸತೀಶ್​ ಸಿನಿ ಪಯಣ: ಸತೀಶ್​ ಚಂದ್ರ ಕೌಶಿಕ್​ ಅವರು 1956 ಏಪ್ರಿಲ್​ 13 ರಂದು ಹರಿಯಾಣದಲ್ಲಿ ಜನಿಸಿದರು. 1980ರ ದಶಕದಲ್ಲಿ ತಮ್ಮ ಸಿನಿಮಾ ವೃತ್ತಿಜೀವನ ಪ್ರಾರಂಭಿಸಿದರು. ನಟನಾಗಿ 1987 ರ ಹಿಂದಿ ಸಿನಿಮಾ 'ಮಿಸ್ಟರ್​ ಇಂಡಿಯಾ' ದಲ್ಲಿ 'ಕ್ಯಾಲೆಂಡರ್'​ ಮತ್ತು 1997 ರ 'ದಿವಾನ ಮಸ್ತಾನ' ಚಿತ್ರದ 'ಪಪ್ಪು ಪೇಜರ್'​ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: ವಿಶ್ರಾಂತಿ ಪಡೆಯುತ್ತಿರುವ ಬಿಗ್​ ಬಿ; ಹೋಳಿ ಸಂಭ್ರಮ ಮಿಸ್​ ಮಾಡಿಕೊಂಡ ಅಮಿತಾಭ್​​​ ಬಚ್ಚನ್​​

ನ್ಯಾಷನಲ್​ ಸ್ಕೂಲ್​ ಆಫ್ ಡ್ರಾಮಾ ನವದೆಹಲಿ ಮತ್ತು ಪುಣೆಯಲ್ಲಿನ ಫಿಲ್ಮ್​ ಅಂಡ್​ ಟೆಲಿವಿಷನ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಹಳೆ ವಿದ್ಯಾರ್ಥಿಯಾಗಿರುವ ಸತೀಶ್​, ಕುಂದನ್​ ಶಾ ಅವರ 1983 ರ ಹಾಸ್ಯ ಚಿತ್ರ 'ಜಾನಿ ಭಿ ದೋ ಯಾರೋನ್​'ಗೆ ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾಗೆ ಬರೆದ ಸಂಭಾಷಣೆಯು ಅವರ ಕೈ ಹಿಡಿಯಿತು. ಮತ್ತಷ್ಟು ಉತ್ತಮ ಬರಹಗಳಿಗೂ ಅದು ನೆರವಾಗಿದೆ.

ಸತೀಶ್​ ಎರಡು ಬಾರಿ ಫಿಲ್ಮ್​ಫೇರ್​ ಅತ್ಯುತ್ತಮ ಹಾಸ್ಯ ಪ್ರಶಸ್ತಿ ಪಡೆದಿದ್ದಾರೆ. 1990 ರ 'ರಾಮ್​ ಲಕಾನ್​' ಮತ್ತು ಏಳು ವರ್ಷಗಳ ನಂತರ 'ಸಾಜನ್​ ಚಲೇ ಸಸುರಾಲ್​' ಚಿತ್ರಕ್ಕಾಗಿ ಈ ಪ್ರಶಸ್ತಿ ಗೆದ್ದರು. ಆ ಬಳಿಕ 1993 ರಲ್ಲಿ ತಮ್ಮದೇ​ ನಿರ್ದೇಶನದ ಮೊದಲ ಸಿನಿಮಾ 'ರೂಪ್​ ಕಿ ರಾಣಿ ಚೋರೋನ್​ ಕಾ ರಾಜಾ' ತೆರೆಕಂಡಿತು. ಬಾಲಿವುಡ್​ ಲೇಡಿ ಸೂಪರ್​ಸ್ಟಾರ್​ ಶ್ರೀದೇವಿ ನಾಯಕಿಯಾಗಿ ಅಭಿನಯಿಸಿದ್ದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಅದಾಗಿ 1995 ರಲ್ಲಿ ಅವರ ಎರಡನೇ ಸಿನಿಮಾ 'ಪ್ರೇಮ್​' ಕೂಡ ಬಾಕ್ಸ್​ ಆಫೀಸ್​ನಲ್ಲಿ ಸೋಲು ಕಂಡಿತು. ಬಳಿಕ ನಾಲ್ಕು ವರ್ಷಗಳ ನಂತರ ಅವರ 'ಹಮ್​ ಆಪ್ಕೆ ದಿಲ್​ ಮೇ ರೆಹ್​ತೆ ಹೇ' ಚಿತ್ರ ಯಶಸ್ವಿಯಾಗಿತ್ತು.

ನಟನ ಹೋಳಿ ಆಟ ನೆನಪಿಸಿಕೊಂಡ ಫ್ಯಾನ್ಸ್​: ಮಾರ್ಚ್​ 7 ರಂದು ಮುಂಬೈನಲ್ಲಿ ಗೀತರಚನೆಕಾರ ಮತ್ತು ಲೇಖಕ ಜಾವೇದ್​ ಅಖ್ತರ್​ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಸತೀಶ್​ ಭಾಗವಹಿಸಿದ್ದರು. ಈವೆಂಟ್​ನ ನಾಲ್ಕು ಫೋಟೋಗಳನ್ನು ಹಂಚಿಕೊಂಡು ಟ್ವೀಟ್​ ಮಾಡಿದ್ದರು. ಇದೇ ವಿಡಿಯೋವನ್ನು ನಟನ ಅಭಿಮಾನಿಗಳು ಪೋಸ್ಟ್​ ಹಾಕಿಕೊಂಡು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಶರಿಯತ್ ಕಾನೂನು ಬಿಕ್ಕಟ್ಟಿಗೆ ಪರಿಹಾರ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಮರು ಮದುವೆಯಾದ ಸಿನಿಮಾ ನಟ

ಬಾಲಿವುಡ್‌ನ​ ಖ್ಯಾತ ನಿರ್ದೇಶಕ ಹಾಗು ನಟ ಸತೀಶ್​ ಚಂದ್ರ ಕೌಶಿಕ್​ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಕೌಶಿಕ್​ ಅವರು ದೆಹಲಿಯಲ್ಲಿನ ತಮ್ಮ ಸ್ನೇಹಿತನ ಮನೆಯಲ್ಲಿದ್ದರು. ರಾತ್ರಿ 1 ಗಂಟೆಯ ಸುಮಾರಿಗೆ ತೀವ್ರ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಹೃದಯಾಘಾತದಿಂದ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

  • जानता हूँ “मृत्यु ही इस दुनिया का अंतिम सच है!” पर ये बात मैं जीते जी कभी अपने जिगरी दोस्त #SatishKaushik के बारे में लिखूँगा, ये मैंने सपने में भी नहीं सोचा था।45 साल की दोस्ती पर ऐसे अचानक पूर्णविराम !! Life will NEVER be the same without you SATISH ! ओम् शांति! 💔💔💔 pic.twitter.com/WC5Yutwvqc

    — Anupam Kher (@AnupamPKher) March 8, 2023 " class="align-text-top noRightClick twitterSection" data=" ">

ಹಿರಿಯ ನಟ ಅನುಪಮ್​ ಖೇರ್​ ತಮ್ಮ ಪ್ರೀತಿಯ ಸ್ನೇಹಿತ ಸತೀಶ್​ ಜೊತೆಗಿನ ಕಪ್ಪು ಬಿಳುಪಿನ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. "ಸಾವು ಈ ಪ್ರಪಂಚದ ಅಂತಿಮ ಸತ್ಯ. ನಾನು ಬದುಕಿರುವಾಗಲೇ ನನ್ನ ಆತ್ಮೀಯ ಗೆಳೆಯ ಸತೀಶ್​ ಕೌಶಿಕ್​ ಅವರ ಕುರಿತು ಹೀಗೆ ಬರೆಯುತ್ತೇನೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. 45 ವರ್ಷಗಳ ಸ್ನೇಹಕ್ಕೆ ಹೀಗೊಂದು ದಿಢೀರ್​ ಪೂರ್ಣವಿರಾಮ" ಎಂದು ಹಿಂದಿಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸತೀಶ್​ ಸಿನಿ ಪಯಣ: ಸತೀಶ್​ ಚಂದ್ರ ಕೌಶಿಕ್​ ಅವರು 1956 ಏಪ್ರಿಲ್​ 13 ರಂದು ಹರಿಯಾಣದಲ್ಲಿ ಜನಿಸಿದರು. 1980ರ ದಶಕದಲ್ಲಿ ತಮ್ಮ ಸಿನಿಮಾ ವೃತ್ತಿಜೀವನ ಪ್ರಾರಂಭಿಸಿದರು. ನಟನಾಗಿ 1987 ರ ಹಿಂದಿ ಸಿನಿಮಾ 'ಮಿಸ್ಟರ್​ ಇಂಡಿಯಾ' ದಲ್ಲಿ 'ಕ್ಯಾಲೆಂಡರ್'​ ಮತ್ತು 1997 ರ 'ದಿವಾನ ಮಸ್ತಾನ' ಚಿತ್ರದ 'ಪಪ್ಪು ಪೇಜರ್'​ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: ವಿಶ್ರಾಂತಿ ಪಡೆಯುತ್ತಿರುವ ಬಿಗ್​ ಬಿ; ಹೋಳಿ ಸಂಭ್ರಮ ಮಿಸ್​ ಮಾಡಿಕೊಂಡ ಅಮಿತಾಭ್​​​ ಬಚ್ಚನ್​​

ನ್ಯಾಷನಲ್​ ಸ್ಕೂಲ್​ ಆಫ್ ಡ್ರಾಮಾ ನವದೆಹಲಿ ಮತ್ತು ಪುಣೆಯಲ್ಲಿನ ಫಿಲ್ಮ್​ ಅಂಡ್​ ಟೆಲಿವಿಷನ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಹಳೆ ವಿದ್ಯಾರ್ಥಿಯಾಗಿರುವ ಸತೀಶ್​, ಕುಂದನ್​ ಶಾ ಅವರ 1983 ರ ಹಾಸ್ಯ ಚಿತ್ರ 'ಜಾನಿ ಭಿ ದೋ ಯಾರೋನ್​'ಗೆ ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾಗೆ ಬರೆದ ಸಂಭಾಷಣೆಯು ಅವರ ಕೈ ಹಿಡಿಯಿತು. ಮತ್ತಷ್ಟು ಉತ್ತಮ ಬರಹಗಳಿಗೂ ಅದು ನೆರವಾಗಿದೆ.

ಸತೀಶ್​ ಎರಡು ಬಾರಿ ಫಿಲ್ಮ್​ಫೇರ್​ ಅತ್ಯುತ್ತಮ ಹಾಸ್ಯ ಪ್ರಶಸ್ತಿ ಪಡೆದಿದ್ದಾರೆ. 1990 ರ 'ರಾಮ್​ ಲಕಾನ್​' ಮತ್ತು ಏಳು ವರ್ಷಗಳ ನಂತರ 'ಸಾಜನ್​ ಚಲೇ ಸಸುರಾಲ್​' ಚಿತ್ರಕ್ಕಾಗಿ ಈ ಪ್ರಶಸ್ತಿ ಗೆದ್ದರು. ಆ ಬಳಿಕ 1993 ರಲ್ಲಿ ತಮ್ಮದೇ​ ನಿರ್ದೇಶನದ ಮೊದಲ ಸಿನಿಮಾ 'ರೂಪ್​ ಕಿ ರಾಣಿ ಚೋರೋನ್​ ಕಾ ರಾಜಾ' ತೆರೆಕಂಡಿತು. ಬಾಲಿವುಡ್​ ಲೇಡಿ ಸೂಪರ್​ಸ್ಟಾರ್​ ಶ್ರೀದೇವಿ ನಾಯಕಿಯಾಗಿ ಅಭಿನಯಿಸಿದ್ದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಅದಾಗಿ 1995 ರಲ್ಲಿ ಅವರ ಎರಡನೇ ಸಿನಿಮಾ 'ಪ್ರೇಮ್​' ಕೂಡ ಬಾಕ್ಸ್​ ಆಫೀಸ್​ನಲ್ಲಿ ಸೋಲು ಕಂಡಿತು. ಬಳಿಕ ನಾಲ್ಕು ವರ್ಷಗಳ ನಂತರ ಅವರ 'ಹಮ್​ ಆಪ್ಕೆ ದಿಲ್​ ಮೇ ರೆಹ್​ತೆ ಹೇ' ಚಿತ್ರ ಯಶಸ್ವಿಯಾಗಿತ್ತು.

ನಟನ ಹೋಳಿ ಆಟ ನೆನಪಿಸಿಕೊಂಡ ಫ್ಯಾನ್ಸ್​: ಮಾರ್ಚ್​ 7 ರಂದು ಮುಂಬೈನಲ್ಲಿ ಗೀತರಚನೆಕಾರ ಮತ್ತು ಲೇಖಕ ಜಾವೇದ್​ ಅಖ್ತರ್​ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಸತೀಶ್​ ಭಾಗವಹಿಸಿದ್ದರು. ಈವೆಂಟ್​ನ ನಾಲ್ಕು ಫೋಟೋಗಳನ್ನು ಹಂಚಿಕೊಂಡು ಟ್ವೀಟ್​ ಮಾಡಿದ್ದರು. ಇದೇ ವಿಡಿಯೋವನ್ನು ನಟನ ಅಭಿಮಾನಿಗಳು ಪೋಸ್ಟ್​ ಹಾಕಿಕೊಂಡು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಶರಿಯತ್ ಕಾನೂನು ಬಿಕ್ಕಟ್ಟಿಗೆ ಪರಿಹಾರ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಮರು ಮದುವೆಯಾದ ಸಿನಿಮಾ ನಟ

Last Updated : Mar 9, 2023, 10:12 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.