ETV Bharat / elections

ಕಾಂಗ್ರೆಸ್​​ ನಾಶ ಮಾಡಿದವ ಇದೀಗ ಬಿಜೆಪಿ ಅಭ್ಯರ್ಥಿ: ಅಗಿಲೆ ಯೋಗೀಶ್​​ - undefined

ಬಿಜೆಪಿ‌ ಶಾಸಕ ಪ್ರೀತಂ ಗೌಡ ಮೊದಲಿನಿಂದಲೂ ಕುತಂತ್ರದ ಮೂಲಕವೇ ಅಧಿಕಾರಕ್ಕೆ ಬಂದರು. ಇವರಿಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರೇ ಇಲ್ಲ. ಈ ಮನುಷ್ಯ ಹಾಸನಕ್ಕೆ ಕಾಲಿಟ್ಟ ನಂತರ ತಂತ್ರಗಾರಿಕೆಗಿಂತ ಕುತಂತ್ರವೇ ಹೆಚ್ಚಿದೆ ಎಂದು ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ಟೀಕಿಸಿದರು‌.

ಅಗಿಲೆ ಯೋಗೀಶ್
author img

By

Published : Apr 8, 2019, 5:47 PM IST

ಹಾಸನ: ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಿದವರನ್ನು ಇದೀಗ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಮಾಡಿಕೊಂಡಿದೆ ಎಂದು ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ಶಾಸಕ ಪ್ರೀತಂ ಗೌಡ ವಿರುದ್ಧ ಕುಟುಕಿದ್ದಾರೆ.

ಬಿಜೆಪಿ‌ ಶಾಸಕ ಪ್ರೀತಂ ಹೆಸರಿನಲ್ಲೇ ಕುತಂತ್ರ ಅಡಗಿದೆ. ಚುನಾವಣೆ ಸಮಯದಲ್ಲಿ ತಂತ್ರಗಾರಿಕೆ ಮಾಡುವುದು ಸಾಮಾನ್ಯ. ಈ ಮನುಷ್ಯ ಹಾಸನಕ್ಕೆ ಕಾಲಿಟ್ಟ ನಂತರ ತಂತ್ರಗಾರಿಕೆಗಿಂತ ಕುತಂತ್ರವೇ ಹೆಚ್ಚಿದೆ ಎಂದು ಟೀಕಿಸಿದರು‌. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರಿಗೆ ಬಿಜೆಪಿಗೆ ಮತ ಹಾಕುವಂತೆ ಪಕ್ಷದ ಮುಖಂಡರಿಗೆ ಹೇಳುತ್ತಾರೆ. ಆ ಪಕ್ಷಕ್ಕೆ‌ ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ಬರಲು ಹೀಗೆ ಮಾಡುತ್ತಿದ್ದಾರೆ. ಈತ ಹಣದಿಂದ ರಾಜಕೀಯ ಮಾಡುತ್ತಿದ್ದಾನೆ ಹೊರತು ಸಾಮಾಜಿಕ ಕಳಕಳಿ ಇಟ್ಟುಕೊಂಡು ಇದುವರೆಗೂ ಒಂದೇ ಒಂದು ಕೆಲಸ ಮಾಡಿಲ್ಲ ಎಂದರು.

ಅಗಿಲೆ ಯೋಗೀಶ್

ಪ್ರೀತಂ ಪ್ರಜ್ವಲ್ ಸೋಲಿಸುವಂತೆ ಹೇಳಿಕೆ ಕೊಡುತ್ತಾರೆ. ಮೊದಲಿನಿಂದಲೂ ಹೀಗೆ ಕುತಂತ್ರದ ಮೂಲಕವೇ ಅಧಿಕಾರಕ್ಕೆ ಬಂದರು. ಇವರಿಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರೇ ಇಲ್ಲ ಎಂದು ಜರಿದರು.

ಹಾಸನ: ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಿದವರನ್ನು ಇದೀಗ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಮಾಡಿಕೊಂಡಿದೆ ಎಂದು ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ಶಾಸಕ ಪ್ರೀತಂ ಗೌಡ ವಿರುದ್ಧ ಕುಟುಕಿದ್ದಾರೆ.

ಬಿಜೆಪಿ‌ ಶಾಸಕ ಪ್ರೀತಂ ಹೆಸರಿನಲ್ಲೇ ಕುತಂತ್ರ ಅಡಗಿದೆ. ಚುನಾವಣೆ ಸಮಯದಲ್ಲಿ ತಂತ್ರಗಾರಿಕೆ ಮಾಡುವುದು ಸಾಮಾನ್ಯ. ಈ ಮನುಷ್ಯ ಹಾಸನಕ್ಕೆ ಕಾಲಿಟ್ಟ ನಂತರ ತಂತ್ರಗಾರಿಕೆಗಿಂತ ಕುತಂತ್ರವೇ ಹೆಚ್ಚಿದೆ ಎಂದು ಟೀಕಿಸಿದರು‌. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರಿಗೆ ಬಿಜೆಪಿಗೆ ಮತ ಹಾಕುವಂತೆ ಪಕ್ಷದ ಮುಖಂಡರಿಗೆ ಹೇಳುತ್ತಾರೆ. ಆ ಪಕ್ಷಕ್ಕೆ‌ ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ಬರಲು ಹೀಗೆ ಮಾಡುತ್ತಿದ್ದಾರೆ. ಈತ ಹಣದಿಂದ ರಾಜಕೀಯ ಮಾಡುತ್ತಿದ್ದಾನೆ ಹೊರತು ಸಾಮಾಜಿಕ ಕಳಕಳಿ ಇಟ್ಟುಕೊಂಡು ಇದುವರೆಗೂ ಒಂದೇ ಒಂದು ಕೆಲಸ ಮಾಡಿಲ್ಲ ಎಂದರು.

ಅಗಿಲೆ ಯೋಗೀಶ್

ಪ್ರೀತಂ ಪ್ರಜ್ವಲ್ ಸೋಲಿಸುವಂತೆ ಹೇಳಿಕೆ ಕೊಡುತ್ತಾರೆ. ಮೊದಲಿನಿಂದಲೂ ಹೀಗೆ ಕುತಂತ್ರದ ಮೂಲಕವೇ ಅಧಿಕಾರಕ್ಕೆ ಬಂದರು. ಇವರಿಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರೇ ಇಲ್ಲ ಎಂದು ಜರಿದರು.

Intro:ಕಾಂಗ್ರೆಸ್ ನಾಶಮಾಡಿದವ ಇದೀಗ ಬಿಜೆಪಿ ಅಭ್ಯರ್ಥಿ: ಅಗಿಲೆ ಯೋಗೀಶ್

ಹಾಸನ: ಕಾಂಗ್ರೆಸ್ ನಾಶ ಮಾಡಿದವರನ್ನು ಇದೀಗ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಶಾಸಕ ಪ್ರೀತಂ ಗೌಡ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ಕುಟುಕಿದ್ದಾರೆ. 
ಕಾಂಗ್ರೆಸ್ ಮುಖಂಡರ ಜೊತೆ ಶಾಸಕ ಪ್ರೀತಂ ಗೌಡ  ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಸೋಲಿಸುವಂತೆ ನಡೆಸಿದ್ದಾರೆ ಎನ್ನಲಾದ ಮಾತಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿಜೆಪಿ‌ ಶಾಸಕ ಪ್ರೀತಂ ಹೆಸರಿನಲ್ಲೇ ಕುತಂತ್ರ ಅಡಗಿದೆ. ಚುನಾವಣೆ ಸಮಯದಲ್ಲಿ ತಂತ್ರಗಾರಿಕೆ ಮಾಡುವುದು ಸಾಮಾನ್ಯ. ಈ ಮನುಷ್ಯ ಹಾಸನಕ್ಕೆ ಕಾಲಿಟ್ಟ ನಂತರ ತಂತ್ರಗಾರಿಕೆಗಿಂತ ಕುತಂತ್ರವೇ ಹೆಚ್ಚಿದೆ ಎಂದು ಟೀಕಿಸಿದರು‌.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರಿಗೆ ಬಿಜೆಪಿಗೆ ಮತ ಹಾಕುವಂತೆ ಪಕ್ಷದ ಮುಖಂಡರಿಗೆ ಹೇಳುತ್ತಾರೆ.ಆ ಪಕ್ಷಕ್ಕೆ‌ ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ಹೀಗೆ ಮಾಡುತ್ತಿದ್ದಾರೆ. ಈತ ಹಣದಿಂದ ರಾಜಕೀಯ ಮಾಡುತ್ತಿದ್ದಾರೆ ಹೊರತು, ಸಾಮಾಜಿಕ ಕಳಕಳಿ ಇಟ್ಟುಕೊಂಡು ಇದುವರೆಗೂ ಒಂದೇ ಒಂದು ಕೆಲಸ ಮಾಡಿಲ್ಲ. ಅನಿವಾರ್ಯವಾಗಿ ಕ್ಷೇತ್ರದ ಶಾಸಕರಾಗಿದ್ದಾರೆ ಎಂದರು.
ಪ್ರೀತಂ ಪ್ರಜ್ವಲ್ ಸೋಲಿಸುವಂತೆ ಹೇಳಿಕೆ ಕೊಡುತ್ತಾರೆ.ಹಲವು ವರ್ಷಗಳಿಂದ ಜನಗಳೊಂದಿಗೆ ಬೆರೆತಿದ್ದಾರೆ. ಪ್ರೀತಂ ಗೌಡ ಮೊದಲಿನಿಂದಲೂ ಹೀಗೆ ಕುತಂತ್ರದ ಮೂಲಕವೇ ಅಧಿಕಾರಕ್ಕೆ ಬಂದರು.ಇವರಿಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರೇ ಇಲ್ಲ ಎಂದು  ಜರಿದರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ.




Body:0


Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.