ETV Bharat / crime

ಪ್ರಧಾನ ಕಾರ್ಯದರ್ಶಿಗೆ 80 ಲಕ್ಷ ಹಣ ನೀಡುವಂತೆ ಬೆದರಿಕೆ; ಮೂವರು ಆರೋಪಿಗಳು ಅಂದರ್​ - ಸುಲಿಗೆ ಮಾಡಲು ಯತ್ನಿಸಿದ ಮೂರು ಆರೋಪಿ

ಅಧಿಕಾರಿಗಳ ಕುಟುಂಬದ ಮಾಹಿತಿ ಪಡೆದ ಮೂವರು ಆರೋಪಿಗಳು ಇಮೇಲ್​ ಮೂಲಕ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದರು. ಅಮಿತ್​ ಪ್ರತಾಪ್​, ರಜನೀಶ್​ ನಿಗಂ, ಹಾರ್ದಿಕ್​ ಖನ್ನಾ ಬಂಧಿತ ಆರೋಪಿಗಳು.

ಪ್ರಧಾನ ಕಾರ್ಯದರ್ಶಿಗೆ 80 ಲಕ್ಷ ಹಣ ನೀಡುವಂತೆ ಬೆದರಿಕೆ; 3 ಆರೋಪಿಗಳ ಬಂಧನ
threatened-to-pay-80-lakhs-to-the-principal-secretary-arrest-of-3-accused
author img

By

Published : Dec 12, 2022, 10:48 AM IST

ಲಕ್ನೋ(ಉತ್ತರ ಪ್ರದೇಶ): ಪ್ರಧಾನ ಕಾರ್ಯದರ್ಶಿ ನಮಾಮಿ ಗಂಗೆ ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ಅನುರಾಗ್ ಶ್ರೀವಾಸ್ತವ್​ ಅವರಿಗೆ 80 ಲಕ್ಷ ಹಣ ನೀಡುವಂತೆ ಸುಲಿಗೆ ಮಾಡಲು ಯತ್ನಿಸಿದ ಮೂರು ಆರೋಪಿಗಳನ್ನು ಇಲ್ಲಿನ ಸೈಬರ್​ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಅಧಿಕಾರಿಗಳ ಕುಟುಂಬ ಮತ್ತು ಸದಸ್ಯರ ಖಾಸಗಿ ಮಾಹಿತಿಗಳನ್ನು ಹ್ಯಾಕ್​ ಮಾಡಿ ಇವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಮೂವರು ಆರೋಪಿಗಳು ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಧಿಕಾರಿಗಳ ಕುಟುಂಬದ ಮಾಹಿತಿ ಪಡೆದ ಮೂವರು ಆರೋಪಿಗಳು ಇಮೇಲ್​ ಮೂಲಕ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದರು. ಅಮಿತ್​ ಪ್ರತಾಪ್​, ರಜನೀಶ್​ ನಿಗಂ, ಹಾರ್ದಿಕ್​ ಖನ್ನಾ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ಕೆಲಸ ಮುಗಿದ ಬಳಿಕ ಕಚೇರಿಯಲ್ಲಿ ಸರ್ವರ್​ಗಳ ಮೇಲ್ವಿಚಾರಣೆ ನಡೆಸುತ್ತಿದ್ದರು. ಅಲ್ಲದೇ, ಅವರ ಕ್ರೆಡಿಟ್​ ಕಾರ್ಡ್​ ಅನ್ನು ಕೂಡ ಬಳಕೆ ಮಾಡಿದ್ದಾರೆ. ಇವರು ಇಲಾಖೆ ದತ್ತಾಂಶಗಳನ್ನು ತಿರುಚುತ್ತಿದ್ದುದು ಅಧಿಕಾರಿಗಳ ಗಮನ್ಕೆ ಬಂದಿದೆ. ಬಳಿಕ ಇವರು ಪ್ರಧಾನ ಕಾರ್ಯದರ್ಶಿ ಇಮೇಲ್​ ಐಡಿ ಕ್ಯಾಕ್​ ಮಾಡಿ, ಕುಟುಂಬದ ನಾಲ್ವರು ಸದಸ್ಯರ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಅಧಿಕಾರಿಗಳಿಗೆ ಇಮೇಲ್​ ಮೂಲಕ 80 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಸೈಬರ್​ಕ್ರೈಮ್​ ಠಾಣೆ ಮುಖ್ಯಸ್ಥ ಮೊಹಮ್ಮದ್​ ತಿಳಿಸಿದ್ದಾರೆ.

ನ. 21ರಂದು ಪ್ರಧಾನ ಕಾರ್ಯದರ್ಶಿ ಕ್ರೆಡಿಟ್​ ಕಾರ್ಯ ಬಳಸಿ 49,999 ರೂ ವಿದೇಶಿ ಹಣವನ್ನು ಪಡೆದಿದ್ದಾರೆ. ಈ ಅಂಶ ಗಮನಕ್ಕೆ ಬಂದಾಕ್ಷಣ ಪ್ರಧಾನ ಕಾರ್ಯದರ್ಶಿ ತಮ್ಮ ಕಾರ್ಡ್​ ಬ್ಲಾಕ್​ ಮಾಡಲು ಮುಂದಾಗಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಬಳಿಕ ಬ್ಯಾಂಕ್​ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪೊಲೀಸರಿಂದ ಬೆದರಿಕೆ ಆರೋಪ: ಶ್ರೀರಂಗಪಟ್ಟದಲ್ಲಿ ರಾತ್ರಿಯಿಡೀ ಹಿಂದೂ ಕಾರ್ಯಕರ್ತರ ಪ್ರತಿಭಟನೆ

ಲಕ್ನೋ(ಉತ್ತರ ಪ್ರದೇಶ): ಪ್ರಧಾನ ಕಾರ್ಯದರ್ಶಿ ನಮಾಮಿ ಗಂಗೆ ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ಅನುರಾಗ್ ಶ್ರೀವಾಸ್ತವ್​ ಅವರಿಗೆ 80 ಲಕ್ಷ ಹಣ ನೀಡುವಂತೆ ಸುಲಿಗೆ ಮಾಡಲು ಯತ್ನಿಸಿದ ಮೂರು ಆರೋಪಿಗಳನ್ನು ಇಲ್ಲಿನ ಸೈಬರ್​ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಅಧಿಕಾರಿಗಳ ಕುಟುಂಬ ಮತ್ತು ಸದಸ್ಯರ ಖಾಸಗಿ ಮಾಹಿತಿಗಳನ್ನು ಹ್ಯಾಕ್​ ಮಾಡಿ ಇವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಮೂವರು ಆರೋಪಿಗಳು ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಧಿಕಾರಿಗಳ ಕುಟುಂಬದ ಮಾಹಿತಿ ಪಡೆದ ಮೂವರು ಆರೋಪಿಗಳು ಇಮೇಲ್​ ಮೂಲಕ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದರು. ಅಮಿತ್​ ಪ್ರತಾಪ್​, ರಜನೀಶ್​ ನಿಗಂ, ಹಾರ್ದಿಕ್​ ಖನ್ನಾ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ಕೆಲಸ ಮುಗಿದ ಬಳಿಕ ಕಚೇರಿಯಲ್ಲಿ ಸರ್ವರ್​ಗಳ ಮೇಲ್ವಿಚಾರಣೆ ನಡೆಸುತ್ತಿದ್ದರು. ಅಲ್ಲದೇ, ಅವರ ಕ್ರೆಡಿಟ್​ ಕಾರ್ಡ್​ ಅನ್ನು ಕೂಡ ಬಳಕೆ ಮಾಡಿದ್ದಾರೆ. ಇವರು ಇಲಾಖೆ ದತ್ತಾಂಶಗಳನ್ನು ತಿರುಚುತ್ತಿದ್ದುದು ಅಧಿಕಾರಿಗಳ ಗಮನ್ಕೆ ಬಂದಿದೆ. ಬಳಿಕ ಇವರು ಪ್ರಧಾನ ಕಾರ್ಯದರ್ಶಿ ಇಮೇಲ್​ ಐಡಿ ಕ್ಯಾಕ್​ ಮಾಡಿ, ಕುಟುಂಬದ ನಾಲ್ವರು ಸದಸ್ಯರ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಅಧಿಕಾರಿಗಳಿಗೆ ಇಮೇಲ್​ ಮೂಲಕ 80 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಸೈಬರ್​ಕ್ರೈಮ್​ ಠಾಣೆ ಮುಖ್ಯಸ್ಥ ಮೊಹಮ್ಮದ್​ ತಿಳಿಸಿದ್ದಾರೆ.

ನ. 21ರಂದು ಪ್ರಧಾನ ಕಾರ್ಯದರ್ಶಿ ಕ್ರೆಡಿಟ್​ ಕಾರ್ಯ ಬಳಸಿ 49,999 ರೂ ವಿದೇಶಿ ಹಣವನ್ನು ಪಡೆದಿದ್ದಾರೆ. ಈ ಅಂಶ ಗಮನಕ್ಕೆ ಬಂದಾಕ್ಷಣ ಪ್ರಧಾನ ಕಾರ್ಯದರ್ಶಿ ತಮ್ಮ ಕಾರ್ಡ್​ ಬ್ಲಾಕ್​ ಮಾಡಲು ಮುಂದಾಗಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಬಳಿಕ ಬ್ಯಾಂಕ್​ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪೊಲೀಸರಿಂದ ಬೆದರಿಕೆ ಆರೋಪ: ಶ್ರೀರಂಗಪಟ್ಟದಲ್ಲಿ ರಾತ್ರಿಯಿಡೀ ಹಿಂದೂ ಕಾರ್ಯಕರ್ತರ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.