ETV Bharat / crime

Inhuman: ದೇವರನಾಡಲ್ಲಿ ರಾಕ್ಷಸಿ ಕೃತ್ಯ.. ನಾಯಿಯನ್ನ ಹೊಡೆದು ಸಾಯಿಸಿದ ಪಾಪಿಗಳು!

ಕೇರಳದಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ಬೆಳಕಿಗೆ ಬಂದಿದೆ. ಓರ್ವನ ತಾಯಿಗೆ ನಾಯಿ ಕಚ್ಚಿತೆಂದು ಮೂವರು ಸೇರಿಕೊಂಡು ಮೃಗೀಯವಾಗಿ ವರ್ತಿಸಿದ್ದಾರೆ. ಶ್ವಾನವನ್ನು ಭೀಕರವಾಗಿ ಹೊಡೆದು ಸಾಯಿಸಿರುವ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ.

author img

By

Published : Jul 1, 2021, 12:21 PM IST

Updated : Jul 1, 2021, 12:58 PM IST

Dog brutally thrashed to death in Vizhinjam; accused arrested
ನಾಯಿಯನ್ನ ದಾರುಣವಾಗಿ ಹೊಡೆದು ಸಾಯಿಸಿದ ಪಾಪಿಗಳು

ತಿರುವನಂತಪುರಂ (ಕೇರಳ): ಸಾಕು ನಾಯಿಯನ್ನು ಕಟ್ಟಿಹಾಕಿ ದಾರುಣವಾಗಿ ಹೊಡೆದು ಸಾಯಿಸಿರುವ ಘಟನೆ ಕೇರಳದ ತಿರುವನಂತಪುರಂನ ವಿಜಿಂಜಮ್​ನಲ್ಲಿ ನಡೆದಿದ್ದು, ಈ ಸಂಬಂಧ ಅಪ್ರಾಪ್ತ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಇಬ್ಬರನ್ನು ಶಿಲುವಾಯನ್ (20) ಮತ್ತು ಸುನಿಲ್ (22) ಎಂದು ಗುರುತಿಸಲಾಗಿದೆ. ಲ್ಯಾಬ್ರಡಾರ್ ರಿಟ್ರೈವರ್ ತಳಿಯ ಬ್ರೂನೋ ಎಂಬ ಶ್ವಾನವು ಎಂದಿನಂತೆ ಸಮುದ್ರ ತೀರದ ಬಳಿ ಹೋಗಿದ್ದು, ಬೋಟ್​ ಸಮೀಪ ವಿಶ್ರಾಂತಿಗೆ ಕುಳಿತಿದೆ. ಇದನ್ನು ಕಂಡ ಮೂವರು ನಾಯಿಯನ್ನು ಬೋಟ್​ನ ಹುಕ್ಕಿಗೆ ನೇತುಹಾಕಿ ದೊಣ್ಣೆಯಿಂದ ಅದನ್ನು ಮನಬಂದಂತೆ ಥಳಿಸಿದ್ದಾರೆ.

ನಾಯಿಯನ್ನ ದಾರುಣವಾಗಿ ಹೊಡೆದು ಸಾಯಿಸಿದ ಪಾಪಿಗಳು

ಕೃತ್ಯದ ವಿಡಿಯೋವನ್ನು ಮೊಬೈಲ್​ನಲ್ಲಿ ಸೆರೆಹಿಡಿದವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಶ್ವಾನದ ಮಾಲೀಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಒಬ್ಬನ ತಾಯಿಗೆ ಆ ನಾಯಿ ಕಚ್ಚಿತ್ತು, ಅದಕ್ಕಾಗಿ ಹೀಗೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ. ಈ ಹಿಂದೆಯೂ ನಾಯಿಗೆ ಹಗ್ಗೆ ಕಟ್ಟಿ ರಸ್ತೆಯಲ್ಲಿ ಅಮಾನವೀಯವಾಗಿ ಎಳೆದೊಯ್ದ ಪ್ರಕರಣ ಮತ್ತು ಆನೆಗೆ ಚಿತ್ರಹಿಂಸೆ ನೀಡಿ ಸಾಯಿಸಿದ ಕೇಸ್​ ಕೇರಳದಲ್ಲಿ ಬೆಳಕಿಗೆ ಬಂದಿದ್ದವು. ದೇವರ ನಾಡಲ್ಲಿ ಇಂತಹ ರಾಕ್ಷಸಿ ಕೃತ್ಯಗಳು ಮುಂದುವರಿದಿರುವುದು ವಿಪರ್ಯಾಸ.

ತಿರುವನಂತಪುರಂ (ಕೇರಳ): ಸಾಕು ನಾಯಿಯನ್ನು ಕಟ್ಟಿಹಾಕಿ ದಾರುಣವಾಗಿ ಹೊಡೆದು ಸಾಯಿಸಿರುವ ಘಟನೆ ಕೇರಳದ ತಿರುವನಂತಪುರಂನ ವಿಜಿಂಜಮ್​ನಲ್ಲಿ ನಡೆದಿದ್ದು, ಈ ಸಂಬಂಧ ಅಪ್ರಾಪ್ತ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಇಬ್ಬರನ್ನು ಶಿಲುವಾಯನ್ (20) ಮತ್ತು ಸುನಿಲ್ (22) ಎಂದು ಗುರುತಿಸಲಾಗಿದೆ. ಲ್ಯಾಬ್ರಡಾರ್ ರಿಟ್ರೈವರ್ ತಳಿಯ ಬ್ರೂನೋ ಎಂಬ ಶ್ವಾನವು ಎಂದಿನಂತೆ ಸಮುದ್ರ ತೀರದ ಬಳಿ ಹೋಗಿದ್ದು, ಬೋಟ್​ ಸಮೀಪ ವಿಶ್ರಾಂತಿಗೆ ಕುಳಿತಿದೆ. ಇದನ್ನು ಕಂಡ ಮೂವರು ನಾಯಿಯನ್ನು ಬೋಟ್​ನ ಹುಕ್ಕಿಗೆ ನೇತುಹಾಕಿ ದೊಣ್ಣೆಯಿಂದ ಅದನ್ನು ಮನಬಂದಂತೆ ಥಳಿಸಿದ್ದಾರೆ.

ನಾಯಿಯನ್ನ ದಾರುಣವಾಗಿ ಹೊಡೆದು ಸಾಯಿಸಿದ ಪಾಪಿಗಳು

ಕೃತ್ಯದ ವಿಡಿಯೋವನ್ನು ಮೊಬೈಲ್​ನಲ್ಲಿ ಸೆರೆಹಿಡಿದವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಶ್ವಾನದ ಮಾಲೀಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಒಬ್ಬನ ತಾಯಿಗೆ ಆ ನಾಯಿ ಕಚ್ಚಿತ್ತು, ಅದಕ್ಕಾಗಿ ಹೀಗೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ. ಈ ಹಿಂದೆಯೂ ನಾಯಿಗೆ ಹಗ್ಗೆ ಕಟ್ಟಿ ರಸ್ತೆಯಲ್ಲಿ ಅಮಾನವೀಯವಾಗಿ ಎಳೆದೊಯ್ದ ಪ್ರಕರಣ ಮತ್ತು ಆನೆಗೆ ಚಿತ್ರಹಿಂಸೆ ನೀಡಿ ಸಾಯಿಸಿದ ಕೇಸ್​ ಕೇರಳದಲ್ಲಿ ಬೆಳಕಿಗೆ ಬಂದಿದ್ದವು. ದೇವರ ನಾಡಲ್ಲಿ ಇಂತಹ ರಾಕ್ಷಸಿ ಕೃತ್ಯಗಳು ಮುಂದುವರಿದಿರುವುದು ವಿಪರ್ಯಾಸ.

Last Updated : Jul 1, 2021, 12:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.