ETV Bharat / city

ರಾಗಿ ಹೊಲದಲ್ಲಿದ್ದ ಜೋಡಿ ಹೆಬ್ಬಾವುಗಳನ್ನು ಸೆರೆ ಹಿಡಿದ ಅರಣ್ಯಾಧಿಕಾರಿಗಳು... - pythons latest news

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ತಮ್ಮಡಿಹಳ್ಳಿ ಬಿಳೇಕಲ್ಲು ಗೊಲ್ಲರಹಟ್ಟಿಯಲ್ಲಿ ರಾಗಿ ಹೊಲದಲ್ಲಿ ಕಾಣಿಸಿಕೊಂಡ ಎರಡು ಹೆಬ್ಬಾವುಗಳನ್ನು ಅರಣ್ಯಾಧಿಕಾರಿಗಳು ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಹೆಬ್ಬಾವುಗಳು...
author img

By

Published : Nov 15, 2019, 10:44 AM IST

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ತಮ್ಮಡಿಹಳ್ಳಿ ಬಿಳೇಕಲ್ಲು ಗೊಲ್ಲರಹಟ್ಟಿಯ ಹೊಲದಲ್ಲಿ ರಾಗಿ ಕೊಯ್ಲು ಮಾಡುತ್ತಿದ್ದ ವೇಳೆ ಎರಡು ಹೆಬ್ಬಾವುಗಳು ಪ್ರತ್ಯಕ್ಷವಾಗಿ, ಅಲ್ಲಿದ್ದ ಜನರನ್ನು ಗಾಬರಿಗೊಳಿಸಿದ್ದವು.

ರಾಗಿ ಹೊಲದಲ್ಲಿ ಹೆಬ್ಬಾವುಗಳು...

ರಮೇಶ್ ಎಂಬುವರಿಗೆ ಸೇರಿದ ಹೊಲದಲ್ಲಿ ರಾಗಿ ಕೊಯ್ಲು ಮಾಡುತ್ತಿದ್ದ ವೇಳೆ ಒಂದು ಬೃಹತ್ ಗಾತ್ರದ ಮತ್ತು ಮತ್ತೊಂದು ಮಧ್ಯಮ ಗಾತ್ರದ ಹೆಬ್ಬಾವುಗಳನ್ನು ಕಂಡು ಸ್ಥಳದಲ್ಲಿದ್ದ ಮಹಿಳೆಯರು ಬೆಚ್ಚಿಬಿದ್ದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹೆಬ್ಬಾವುಗಳನ್ನು ಸೆರೆಹಿಡಿದಿದ್ದಾರೆ. ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನಯ್ಯ ಅವರ ಮಾರ್ಗದರ್ಶನದಲ್ಲಿ ಡಿಆರ್​ಎಫ್ ಕಿರಣ್ ಕುಮಾರ್, ಅರಣ್ಯ ರಕ್ಷಕ ದಿಲೀಪ್ ಕುಮಾರ್ ಹಾಗೂ ಶೇಖರ್ ಹೆಬ್ಬಾವು ಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾದರು.

Tumkur snake latest news
ಹೆಬ್ಬಾವುಗಳನ್ನು ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

ಸಮೀಪದಲ್ಲೇ ಕುದುರೆ ಕಣಿವೆ ಅರಣ್ಯ ಪ್ರದೇಶವಿದ್ದು, ಹೆಬ್ಬಾವುಗಳು ರಾಗಿ ಹೊಲಕ್ಕೆ ಆಹಾರವನ್ನು ಅರಸಿ ಬಂದಿರಬಹುದೆಂದು ಅರಣ್ಯ ಇಲಾಖೆಯವರು ಶಂಕಿಸಿದ್ದಾರೆ. ಬಳಿಕ ಸೆರೆಸಿಕ್ಕ ಹೆಬ್ಬಾವುಗಳನ್ನು ಬುಕ್ಕಾಪಟ್ಟಣ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ತಮ್ಮಡಿಹಳ್ಳಿ ಬಿಳೇಕಲ್ಲು ಗೊಲ್ಲರಹಟ್ಟಿಯ ಹೊಲದಲ್ಲಿ ರಾಗಿ ಕೊಯ್ಲು ಮಾಡುತ್ತಿದ್ದ ವೇಳೆ ಎರಡು ಹೆಬ್ಬಾವುಗಳು ಪ್ರತ್ಯಕ್ಷವಾಗಿ, ಅಲ್ಲಿದ್ದ ಜನರನ್ನು ಗಾಬರಿಗೊಳಿಸಿದ್ದವು.

ರಾಗಿ ಹೊಲದಲ್ಲಿ ಹೆಬ್ಬಾವುಗಳು...

ರಮೇಶ್ ಎಂಬುವರಿಗೆ ಸೇರಿದ ಹೊಲದಲ್ಲಿ ರಾಗಿ ಕೊಯ್ಲು ಮಾಡುತ್ತಿದ್ದ ವೇಳೆ ಒಂದು ಬೃಹತ್ ಗಾತ್ರದ ಮತ್ತು ಮತ್ತೊಂದು ಮಧ್ಯಮ ಗಾತ್ರದ ಹೆಬ್ಬಾವುಗಳನ್ನು ಕಂಡು ಸ್ಥಳದಲ್ಲಿದ್ದ ಮಹಿಳೆಯರು ಬೆಚ್ಚಿಬಿದ್ದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹೆಬ್ಬಾವುಗಳನ್ನು ಸೆರೆಹಿಡಿದಿದ್ದಾರೆ. ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನಯ್ಯ ಅವರ ಮಾರ್ಗದರ್ಶನದಲ್ಲಿ ಡಿಆರ್​ಎಫ್ ಕಿರಣ್ ಕುಮಾರ್, ಅರಣ್ಯ ರಕ್ಷಕ ದಿಲೀಪ್ ಕುಮಾರ್ ಹಾಗೂ ಶೇಖರ್ ಹೆಬ್ಬಾವು ಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾದರು.

Tumkur snake latest news
ಹೆಬ್ಬಾವುಗಳನ್ನು ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

ಸಮೀಪದಲ್ಲೇ ಕುದುರೆ ಕಣಿವೆ ಅರಣ್ಯ ಪ್ರದೇಶವಿದ್ದು, ಹೆಬ್ಬಾವುಗಳು ರಾಗಿ ಹೊಲಕ್ಕೆ ಆಹಾರವನ್ನು ಅರಸಿ ಬಂದಿರಬಹುದೆಂದು ಅರಣ್ಯ ಇಲಾಖೆಯವರು ಶಂಕಿಸಿದ್ದಾರೆ. ಬಳಿಕ ಸೆರೆಸಿಕ್ಕ ಹೆಬ್ಬಾವುಗಳನ್ನು ಬುಕ್ಕಾಪಟ್ಟಣ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.

Intro:Body:ರಾಗಿ ಹೊಲದಲ್ಲಿ ಪ್ರತ್ಯಕ್ಷವಾದ ಹೆಬ್ಬಾವುಗಳು...

ಹೊಲದಲ್ಲಿ ರಾಗಿ ಕೊಯ್ಲು ಮಾಡುತ್ತಿದ್ದ ವೇಳೆ ಒಂದಲ್ಲ ಎರಡು ಹೆಬ್ಬಾವುಗಳು ಪ್ರತ್ಯಕ್ಷವಾಗಿ ಜನರನ್ನು ಗಾಬರಿಗೊಳಿಸಿದ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕು ತಮ್ಮಡಿಹಳ್ಳಿ ಬಿಳೇಕಲ್ಲು ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ರಮೇಶ್ ಎಂಬುವರಿಗೆ ಸೇರಿದ ಹೊಲದಲ್ಲಿ ಕಾರ್ಮಿಕರು ರಾಗಿ ಕೊಯ್ಲು ಮಾಡುತ್ತಿದ್ದರು ಈ ವೇಳೆ ಒಂದು ಬೃಹತ್ ಗಾತ್ರದ ಮತ್ತು ಮತ್ತೊಂದು ಮಧ್ಯಮ ಗಾತ್ರದ ಹೆಬ್ಬಾವುಗಳನ್ನು ಕಂಡು ಸ್ಥಳದಲ್ಲಿದ್ದ ಮಹಿಳೆಯರು ಬೆಚ್ಚಿಬಿದ್ದರು.
ನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿ ಗಳು ಬೃಹತ್ ಗಾತ್ರದ ಹೆಬ್ಬಾವುಗಳನ್ನು ಸೆರೆಹಿದಿದರು.
ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನಯ್ಯ ಅವರ ಮಾರ್ಗದರ್ಶನದಲ್ಲಿ ಡಿಆರ್‍ಎಫ್ ಕಿರಣ್ ಕುಮಾರ್,ಅರಣ್ಯ ರಕ್ಷಕರಾದ ದಿಲೀಪ್ ಕುಮಾರ್,ಶೇಖರ್ ಹೆಬ್ಬಾವು ಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾದರು.
ಸಮೀಪದಲ್ಲೇ ಕುದುರೆ ಕಣಿವೆ ಅರಣ್ಯ ಪ್ರದೇಶ ವಿದ್ದು, ಹೆಬ್ಬಾವುಗಳು ರಾಗಿ ಹೊಲಕ್ಕೆ ಆಹಾರವನ್ನು ಅರಸಿ ಬಂದಿರಬಹುದೆಂದು ಅರಣ್ಯ ಇಲಾಖೆಯವರು ಶಂಕಿಸಿದ್ದಾರೆ.
ಸೆರೆಸಿಕ್ಕ ಹೆಬ್ಬಾವುಗಳನ್ನು ಬುಕ್ಕಾಪಟ್ಟಣ ಅರಣ್ಯಪ್ರದೇಶದಲ್ಲಿ ಬಿಡಲಾಯಿತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.