ETV Bharat / city

ಕೆಸರು ಗದ್ದೆಯಂತಾಗಿರುವ ರಸ್ತೆ ದುರಸ್ತಿ ಪಡಿಸಲು ಆಗ್ರಹ

author img

By

Published : Jul 11, 2020, 10:43 PM IST

ಹೇಮಾವತಿ ನಾಲೆಯ ಪಕ್ಕದಲ್ಲಿಯೇ ಇರುವ, ಈಚನೂರು ಕೆರೆಕೋಡಿಯಿಂದ ಕರಡಾಳು ಸಂತೆ ಮೈದಾನಕ್ಕೆ ಹೋಗುವ ಮಾರ್ಗದ ರಸ್ತೆ ಹದಗೆಟ್ಟಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ichanuru-villagers-demanding-to-repair-road
ರಸ್ತೆ ದುರಸ್ತಿ

ತುಮಕೂರು : ಜಿಲ್ಲೆಯ ತಿಪಟೂರು ತಾಲೂಕಿನ ಈಚನೂರು ಕೆರೆಕೋಡಿಯಿಂದ ಕರಡಾಳು ಸಂತೆ ಮೈದಾನಕ್ಕೆ ಹೋಗುವ ಮಾರ್ಗದ ರಸ್ತೆ ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹೇಮಾವತಿ ನಾಲೆಯ ಪಕ್ಕದಲ್ಲೇ ಇರುವ ರಸ್ತೆಯನ್ನು ಗ್ರಾಮಸ್ಥರು ಅವಲಂಬಿಸಬೇಕಿದ್ದು, ಈಗಾಗಲೇ ಮಳೆಯಿಂದಾಗಿ ರಸ್ತೆ ಡಾಂಬರು ಇಲ್ಲದೆ ಕೆಸರುಗದ್ದೆಯಂತಾಗಿದೆ. ಅಲ್ಲದೇ ನಾಲೆಗೆ ಸುತ್ತಲೂ ತಡೆಗೋಡೆ ಇಲ್ಲದಿರುವುದರಿಂದ ಗ್ರಾಮಸ್ಥರು ಪ್ರಾಣ ಭಯದಿಂದ ಓಡಾಡಬೇಕಾಗಿದೆ.

ಕೆಸರು ಗದಗೆಯಂತಾಗಿರುವ ರಸ್ತೆ ದುರಸ್ತಿ ಪಡಿಸಲು ಆಗ್ರಹ

ಈ ರಸ್ತೆಯಲ್ಲಿ ಕೋಡಿಹಳ್ಳಿ ಕಾವಲಿನ ಕೆಎಮ್​ಎಫ್​​ ಡೈರಿ ಇದ್ದು ಹಾಲಿನ ವಾಹನ ಹಾಗೂ ಕೋಡಿಹಳ್ಳಿ ಕಾವಲಿನ ನೂರಾರು ಜನರು ಓಡಾಡಲು ತೀವ್ರ ತೊಂದರೆಯಾಗಿದೆ. ರಸ್ತೆ ದುರಸ್ತಿ ಪಡಿಸುವಂತೆ ಹಲವು ಬಾರಿ ಹೇಮಾವತಿ ಇಂಜಿನಿಯರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ತುಮಕೂರು : ಜಿಲ್ಲೆಯ ತಿಪಟೂರು ತಾಲೂಕಿನ ಈಚನೂರು ಕೆರೆಕೋಡಿಯಿಂದ ಕರಡಾಳು ಸಂತೆ ಮೈದಾನಕ್ಕೆ ಹೋಗುವ ಮಾರ್ಗದ ರಸ್ತೆ ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹೇಮಾವತಿ ನಾಲೆಯ ಪಕ್ಕದಲ್ಲೇ ಇರುವ ರಸ್ತೆಯನ್ನು ಗ್ರಾಮಸ್ಥರು ಅವಲಂಬಿಸಬೇಕಿದ್ದು, ಈಗಾಗಲೇ ಮಳೆಯಿಂದಾಗಿ ರಸ್ತೆ ಡಾಂಬರು ಇಲ್ಲದೆ ಕೆಸರುಗದ್ದೆಯಂತಾಗಿದೆ. ಅಲ್ಲದೇ ನಾಲೆಗೆ ಸುತ್ತಲೂ ತಡೆಗೋಡೆ ಇಲ್ಲದಿರುವುದರಿಂದ ಗ್ರಾಮಸ್ಥರು ಪ್ರಾಣ ಭಯದಿಂದ ಓಡಾಡಬೇಕಾಗಿದೆ.

ಕೆಸರು ಗದಗೆಯಂತಾಗಿರುವ ರಸ್ತೆ ದುರಸ್ತಿ ಪಡಿಸಲು ಆಗ್ರಹ

ಈ ರಸ್ತೆಯಲ್ಲಿ ಕೋಡಿಹಳ್ಳಿ ಕಾವಲಿನ ಕೆಎಮ್​ಎಫ್​​ ಡೈರಿ ಇದ್ದು ಹಾಲಿನ ವಾಹನ ಹಾಗೂ ಕೋಡಿಹಳ್ಳಿ ಕಾವಲಿನ ನೂರಾರು ಜನರು ಓಡಾಡಲು ತೀವ್ರ ತೊಂದರೆಯಾಗಿದೆ. ರಸ್ತೆ ದುರಸ್ತಿ ಪಡಿಸುವಂತೆ ಹಲವು ಬಾರಿ ಹೇಮಾವತಿ ಇಂಜಿನಿಯರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.