ಶಿವಮೊಗ್ಗ: ನಾನು ಜಗದೀಶ್ ಶೆಟ್ಟರ್ ತರ ಸಾಕು ಅಂತ ಹೇಳಲ್ಲ. ಪಕ್ಷದ ವರಿಷ್ಠರು ಹೇಳಿದ್ರೆ, ಡಿಸಿಎಂ ಆಗುತ್ತೇನೆ, ಮಂತ್ರಿ ಆಗು ಅಂದ್ರೂ ಸಹ ಆಗ್ತೇನೆ, ಇಲ್ಲ ಶಾಸಕನಾಗಿರು ಅಂದ್ರೆ ಇರುತ್ತೇನೆ. ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದು ಮಾಜಿ ಸಚಿವ ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಪರೋಕ್ಷವಾಗಿ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ನನಗೆ ಖಾತೆ ಸಿಗುತ್ತದೆಯೋ ಬಿಡುತ್ತದೆಯೋ ಅದರ ಬಗ್ಗೆ ನೋವಿಲ್ಲ, ಇಂತಹದ್ದೆ ಖಾತೆ ಬೇಕು ಅಂತ ನಾನು ಎಂದೂ ಕೇಳಿಲ್ಲ. ನನಗೂ ಅನೇಕರು ಫೋನ್ ಮಾಡಿ ನೀವು ಡಿಸಿಎಂ ಅಗಬೇಕು ಅಂತ ಹೇಳಿದ್ರು, ನಾನು ಪಕ್ಷದ ಕಾರ್ಯಕರ್ತ, ಅನೇಕ ಹಿಂದುಳಿದ ವರ್ಗದ ಮಠಾಧೀಶರು ಸೇರಿದಂತೆ ಹಲವಾರು ಸ್ವಾಮೀಜಿಗಳು ಸಹ ನನಗೆ ಫೋನ್ ಮಾಡಿ ಡಿಸಿಎಂ ಆಗಿ ಅಂತ ಹೇಳಿದ್ರು, ಆದ್ರೆ ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದು ತಿಳಿಸಿದರು.
ಸಿಎಂ ಬದಲಾವಣೆಯಲ್ಲಿ ಬಿಜೆಪಿಯವರಿಗೆ ಸಂತಸ, ಕಾಂಗ್ರೆಸ್ ನವರಿಗೆ ಸಂಕಟ:
ಬಿಜೆಪಿಯಲ್ಲಿನ ಅಚ್ಚರಿಯ ಬೆಳವಣಿಗೆಯಿಂದ ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಸಂತಸ ತಂದಿದ್ರೆ, ಇದನ್ನೇ ರಾಜಕೀಯವಾಗಿ ಲಾಭ ಪಡೆಯಲು ಹೋಗಿದ್ದ ಕಾಂಗ್ರೆಸ್ಗೆ ನಿರಾಸೆಯಾಗಿದೆ. ಮುಂದಿನ ಎರಡು ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ದಿ ಮಾಡಿ ಚುನಾವಣೆಗೆ ಹೋಗುವವರಿದ್ದೇವೆ ಎಂದರು.
ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರು, ಸಂಘಟನೆಯ ಪರಿಶ್ರಮದಿಂದ ಪೂರ್ಣ ಪ್ರಮಾಣದ ಸರ್ಕಾರ ತರುವ ಪ್ರಯತ್ನ ಮಾಡಲಾಗುವುದು. ಎಲ್ಲರಿಗೂ ಅಚ್ಚರಿಯ ರೀತಿ ನಮ್ಮ ಬಿಕ್ಕಟ್ಟನ್ನು ವರಿಷ್ಟರು ಬಂದು ನಿವಾರಿಸಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ತಿಳಿಸಿದರು.
ಬೊಮ್ಮಾಯಿ ಸಿಎಂ ಆಗಿರುವುದು ರಾಜಕೀಯದ ಒಂದು ದಾಳ: