ETV Bharat / city

ಮೋದಿ ಹೆಸರು ಕೇಳಿದ್ರೆ ಕಾಂಗ್ರೆಸಿಗರಿಗೆ ಭೇದಿ : ಆಯನೂರು ಮಂಜುನಾಥ್​ ಲೇವಡಿ

ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಕೊಚ್ಚಿ ಹೋಗಿದ್ದಾರೆ. ಪಪ್ಪು ರಾಜಕೀಯ ಹಸುಳೆ . ತಲತಲಾಂತರದಿಂದ ಉಳಿಸಿಕೊಂಡುಬಂದ ಅವರ ಕ್ಷೇತ್ರವನ್ನು ಇಂದು ಕಳೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.

author img

By

Published : May 24, 2019, 3:34 AM IST

ಆಯನೂರು ಮಂಜುನಾಥ್

ಶಿವಮೊಗ್ಗ: ಮೋದಿ ಹೆಸರು ಕೇಳಿದ್ರೆ ಕಾಂಗ್ರೆಸ್​ನವರಿಗೆ ಭೇದಿ ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.

ಸಮಾರಂಭವೊಂದರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಗೆಲುವು ಕಂಡದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಈ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳ ಗಡಿ ದಾಟಿದ್ದೇವೆ. ಅದರ ಪ್ರತಿಫಲವಾಗಿ ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಮೋದಿ ಹೇಳಿದಂತೆ 22 ರಾಜ್ಯಗಳು ಕಾಂಗ್ರೆಸ್ ಮುಕ್ತ ಆಗಿವೆ ಎಂದು ಕುಟುಕಿದರು.

ಆಯನೂರು ಮಂಜುನಾಥ್

ನಿರೀಕ್ಷೆ ಮೀರಿ ನುಗ್ಗಿದ ಮೋದಿ ಸುನಾಮಿಗೆ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಕೊಚ್ಚಿ ಹೋಗಿದ್ದಾರೆ. ಪಪ್ಪು ರಾಜಕೀಯ ಹಸುಳೆ . ತಲತಲಾಂತರದಿಂದ ಉಳಿಸಿಕೊಂಡುಬಂದ ಅವರ ಕ್ಷೇತ್ರವನ್ನು ಇಂದು ಕಳೆದುಕೊಂಡಿದ್ದಾರೆ ಎಂದರು. ಕೋತಿ ಹಾಗೆ ಕುಣಿಯುತ್ತಿದ್ದ ಸಿದ್ದರಾಮಯ್ಯ ಇಂದು ಉಸಿರಾಡಲು ಸಹ ಅಸಾಧ್ಯವಾಗಿದೆ ಎಂದರು.

ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಮೋದಿ ವಿರುದ್ಧ ಏಕವಚನದಲ್ಲಿ ಆಡಿದ್ದ ದುರಹಂಕಾರದ ಮಾತುಗಳಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಯಡಿಯೂರಪ್ಪ ನಾಯಕತ್ವದಲ್ಲಿ ಇತಿಹಾಸ ಸೃಷ್ಟಿಸಿದ್ದೇವೆ. ಯಡಿಯೂರಪ್ಪನವರು ರಾತ್ರಿ-ಹಗಲೆನ್ನದೆ, ದಣಿವರಿಯದೆ ಪಕ್ಷವನ್ನು ಕಟ್ಟಿದ್ದಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ ಎಂದರು.

ಬಿಜೆಪಿಯವರಿಗೆ ಎರಡಂಕಿ ದಾಟಲು ಬಿಡುವುದಿಲ್ಲ ಎಂದು ಕಾಂಗ್ರೆಸ್​ನವರು ಹೇಳುತ್ತಿದ್ದರು. ಆದರೆ ಅವರಿಗೇ ಎರಡಂಕಿ ದಾಟಲು ಸಾಧ್ಯವಾಗಿಲ್ಲ ಎಂದು ಕಿಚಾಯಿಸಿದರು.

ಶಿವಮೊಗ್ಗ: ಮೋದಿ ಹೆಸರು ಕೇಳಿದ್ರೆ ಕಾಂಗ್ರೆಸ್​ನವರಿಗೆ ಭೇದಿ ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.

ಸಮಾರಂಭವೊಂದರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಗೆಲುವು ಕಂಡದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಈ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳ ಗಡಿ ದಾಟಿದ್ದೇವೆ. ಅದರ ಪ್ರತಿಫಲವಾಗಿ ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಮೋದಿ ಹೇಳಿದಂತೆ 22 ರಾಜ್ಯಗಳು ಕಾಂಗ್ರೆಸ್ ಮುಕ್ತ ಆಗಿವೆ ಎಂದು ಕುಟುಕಿದರು.

ಆಯನೂರು ಮಂಜುನಾಥ್

ನಿರೀಕ್ಷೆ ಮೀರಿ ನುಗ್ಗಿದ ಮೋದಿ ಸುನಾಮಿಗೆ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಕೊಚ್ಚಿ ಹೋಗಿದ್ದಾರೆ. ಪಪ್ಪು ರಾಜಕೀಯ ಹಸುಳೆ . ತಲತಲಾಂತರದಿಂದ ಉಳಿಸಿಕೊಂಡುಬಂದ ಅವರ ಕ್ಷೇತ್ರವನ್ನು ಇಂದು ಕಳೆದುಕೊಂಡಿದ್ದಾರೆ ಎಂದರು. ಕೋತಿ ಹಾಗೆ ಕುಣಿಯುತ್ತಿದ್ದ ಸಿದ್ದರಾಮಯ್ಯ ಇಂದು ಉಸಿರಾಡಲು ಸಹ ಅಸಾಧ್ಯವಾಗಿದೆ ಎಂದರು.

ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಮೋದಿ ವಿರುದ್ಧ ಏಕವಚನದಲ್ಲಿ ಆಡಿದ್ದ ದುರಹಂಕಾರದ ಮಾತುಗಳಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಯಡಿಯೂರಪ್ಪ ನಾಯಕತ್ವದಲ್ಲಿ ಇತಿಹಾಸ ಸೃಷ್ಟಿಸಿದ್ದೇವೆ. ಯಡಿಯೂರಪ್ಪನವರು ರಾತ್ರಿ-ಹಗಲೆನ್ನದೆ, ದಣಿವರಿಯದೆ ಪಕ್ಷವನ್ನು ಕಟ್ಟಿದ್ದಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ ಎಂದರು.

ಬಿಜೆಪಿಯವರಿಗೆ ಎರಡಂಕಿ ದಾಟಲು ಬಿಡುವುದಿಲ್ಲ ಎಂದು ಕಾಂಗ್ರೆಸ್​ನವರು ಹೇಳುತ್ತಿದ್ದರು. ಆದರೆ ಅವರಿಗೇ ಎರಡಂಕಿ ದಾಟಲು ಸಾಧ್ಯವಾಗಿಲ್ಲ ಎಂದು ಕಿಚಾಯಿಸಿದರು.

Intro:ಶಿವಮೊಗ್ಗ,
ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲುವು ಸಾಧಿಸಿದ ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮೋದಿ ಅವರ ಹೆಸರು ಕೇಳಿದರೆ ಕಾಂಗ್ರೆಸ್ ನವರಿಗೆ ಬೇಧಿ ಬರುತ್ತದೆ ಎಂದು ವ್ಯಂಗ್ಯವಾಡಿದರು. ಲೋಕಸಭಾ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸೀಟುಗಳ ಗಡಿ ದಾಟಿದ್ದೇವೆ. ಅದರ ಪ್ರತಿಫಲವಾಗಿ ಇಡೀ ದೇಶದಲ್ಲಿ ಇಂದು ಕಾಂಗ್ರೆಸ್ ಧೂಳಿಪಟವಾಗಿದೆ. 29 ರಾಜ್ಯಗಳಲ್ಲಿ 22 ರಾಜ್ಯಗಳಲ್ಲಿ ಕಾಂಗ್ರೆಸ್ಸಿಲ್ಲ ಮೋದಿ ಹೇಳಿದ ಹಾಗೆ ಕಾಂಗ್ರೆಸ್ ಮುಕ್ತ ಆಗಿದೆ ಎಂದರು.


Body:ನಿರೀಕ್ಷೆ ಮೀರಿದ ಮೋದಿಯವರ ಸುನಾಮಿ ಗೆ ರಾಹುಲ್ ಗಾಂಧಿ ಸ್ಮೃತಿ ಇರಾನಿ ವಿರುದ್ಧ ಕೊಚ್ಚಿ ಹೋಗಿದ್ದಾರೆ. ಈ ದೇಶದ ಪಪ್ಪು ರಾಜಕೀಯ ಹಸುಳೆ ತಲತಲಾಂತರದಿಂದ ಬೆಳೆದುಬಂದ ಅವರ ಕ್ಷೇತ್ರವನ್ನು ಇಂದು ಕಳೆದುಕೊಂಡಿದ್ದಾರೆ ಎಂದರು. ಸಿದ್ದರಾಮಯ್ಯ ಎನ್ನುವ ಕೋತಿಯ ಬಾಷೆ ,ಅದರ ಡ್ಯಾನ್ಸ್ ಸ್ಟೆಪ್ ,.ಕೋತಿ ಹಾಗೆ ಕುಣಿಯುತ್ತಿದ್ದ ಸಿದ್ದರಾಮಯ್ಯ ಇವತ್ತು ಉಸಿರಾಡಲು ಅಸಾಧ್ಯವಾಗಿದೆ ಎಂದರು.


Conclusion:ಏಕವಚನದಲ್ಲಿ ಯಡಿಯೂರಪ್ಪನವರಿಗೆ ಬೈದಿದ್ದು ಹಾಗೂ ಮೋದಿ ಅವರಿಗೆ ಬೈದಿದ್ದ ದುರಹಂಕಾರದ ಮಾತುಗಳಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಯಡಿಯೂರಪ್ಪನವರ ನಾಯಕತ್ವದಲ್ಲಿ ಇತಿಹಾಸ ಸೃಷ್ಟಿಸಿದ್ದೇವೆ ಯಡಿಯೂರಪ್ಪನವರು ರಾತ್ರಿ-ಹಗಲೆನ್ನದೆ ಧಣಿವನ್ನು ಲೆಕ್ಕಿಸದೆ ಪಕ್ಷವನ್ನು ಕಟ್ಟಿ ದ ಪ್ರತಿಫಲವೇ ಇಂದು ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದರು. ಕಾಂಗ್ರೆಸ್ ಬಿಜೆಪಿಯವರಿಗೆ ಎರಡಂಕಿ ದಾಟಲು ಬಿಡುವುದಿಲ್ಲ ಎನ್ನುತ್ತಿದ್ದರು ಆದರೆ ಅವರಿಗೆ ಎರಡು ಅಂಕಿ ದಾಟಲು ಸಾಧ್ಯವಾಗಿಲ್ಲ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.