ETV Bharat / city

ಶಿವಮೊಗ್ಗ ಜಿಲ್ಲೆಗೂ ಸಂಚಾರಿ ವಿಜಯ್​​ಗೂ ಅವಿನಾಭಾವ ಸಂಬಂಧ: ಈ ಬಗ್ಗೆ ಸ್ನೇಹಿತ ಹೇಳಿದ್ದೇನು..?

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಕನ್ನಡದ ಯುವ ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಬಗ್ಗೆ, ಶಿವಮೊಗ್ಗದ ಆತ್ಮೀಯ ಸ್ನೇಹಿತರೊಬ್ಬರು ಇಬ್ಬರ ನಡುವೆ ಇದ್ದ ತಮ್ಮ ಹಳೆಯ ಘಟನೆಗಳನ್ನು ಮೆಲುಕು ಹಾಕಿದ್ದಾರೆ.

author img

By

Published : Jun 15, 2021, 8:15 PM IST

Updated : Jun 15, 2021, 9:31 PM IST

actor sanchari vijay
ಸಂಚಾರಿ ವಿಜಯ್

ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಕನ್ನಡ ಯುವ ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಾವನ್ನಪ್ಪಿದ್ದಾರೆ. ಸಂಚಾರಿ ವಿಜಯ್ ಅವರಿಗೂ ಶಿವಮೊಗ್ಗ ಜಿಲ್ಲೆಗೂ ಸಾಕಷ್ಟು ನಂಟಿತ್ತು. ಈ ಬಗ್ಗೆ ಅವರ ಗೆಳೆಯ ಶಂಕರ ಮಿತ್ರ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಸಂಚಾರಿ ವಿಜಯ್ ಸ್ನೇಹಿತ ಶಂಕರ ಮಿತ್ರ

ಓದಿ: ಸ್ನೇಹಿತನ ತೋಟದಲ್ಲಿ ವಿಜಯ್​ ಅಂತ್ಯಸಂಸ್ಕಾರ: ಮುಗಿಲು ಮುಟ್ಟಿದ ಆಕ್ರಂದನ

ಸಂಚಾರಿ ವಿಜಯ್ ಅವರು ಶಿವಮೊಗ್ಗಕ್ಕೆ ಸಾಕಷ್ಟು ಸಲ ಭೇಟಿ ನೀಡಿದ್ದಾರೆ. ಪ್ರತಿ ಬಾರಿ ಬಂದಾಗ ರಂಗ ಕಲಾವಿದರನ್ನು ಭೇಟಿ ಮಾಡುತ್ತಿದ್ದರು, ಜೊತೆಗೆ ಡಯಾನ್ ಬುಕ್ ಹೌಸ್​​​ಗೆ ಭೇಟಿ ನೀಡುತ್ತಿದ್ದರು. ಹಾಗೇ ಶಿವಮೊಗ್ಗ ನಗರದ ಹೊಟೇಲ್ ಮೀನಾಕ್ಷಿ ಭವನದ ಅವಲಕ್ಕಿ ಅಂದರೆ ಅವರಿಗೆ ಪಂಚಪ್ರಾಣ ಎಂದು ನೊಂದ ಮನಸ್ಸಿನಲ್ಲೇ ಹಳೆ ಘಟನೆಗಳನ್ನು ಮೆಲುಕು ಹಾಕಿದರು.

actor sanchari vijay
ಸಂಚಾರಿ ವಿಜಯ್

ಸಿಗಂದೂರು ದೇವಸ್ಥಾನ, ಕುಪ್ಪಳ್ಳಿಗೆ ಭೇಟಿ:

actor sanchari vijay
ಕುಪ್ಪಳ್ಳಿಯಲ್ಲಿ ಸಂಚಾರಿ ವಿಜಯ್

ಸಂಚಾರಿ ವಿಜಯ್ ಸಿಗಂದೂರು ದೇವಸ್ಥಾನಕ್ಕೆ, ನಟಿ ಶೃತಿ ಹರಿಹರನ್ ಹಾಗೂ ಗೆಳೆಯ ಶಂಕರ್ ಮಿತ್ರ ಅವರೊಂದಿಗೆ ಭೇಟಿ ನೀಡಿದ್ದರು. ಹಾಗೇ ರಾಷ್ಟ್ರ ಕವಿ ಕುವೆಂಪು ಅವರ ಮನೆ ಕುಪ್ಪಳಿಗೂ ಭೇಟಿ ನೀಡಿದ್ದರು. ಅಲ್ಲದೇ ಸಾಗರ, ತೀರ್ಥಹಳ್ಳಿ, ಗಾಜನೂರು ಸೇರಿದಂತೆ ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಬೆರೆಯುತ್ತಿದ್ದರು.

actor sanchari vijay
ಸ್ನೇಹಿತರೊಂದಿಗೆ ಸಂಚಾರಿ ವಿಜಯ್

ಭದ್ರಾವತಿಯಲ್ಲಿ ಮೊದಲ ಸನ್ಮಾನ:

actor sanchari vijay
ಸಂಚಾರಿ ವಿಜಯ್ ಅವರಿಗೆ ಸನ್ಮಾನ

ರಾಷ್ಟ್ರ ಪ್ರಶಸ್ತಿ ಬಂದ ನಂತರ ಮೊದಲು ಸನ್ಮಾನ ಮಾಡಿದ್ದೇ ಭದ್ರಾವತಿಯಲ್ಲಿ. 'ನಾನು ಅವನಲ್ಲಾ ಅವಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದ ನಂತರ ಮೊದಲು ಗುರುತಿಸಿ ಭದ್ರಾವತಿಯಲ್ಲಿ ಸನ್ಮಾನ ಮಾಡಲಾಯಿತು.

ಕುವೆಂಪು ವಿವಿಗೆ ಮುಖ್ಯ ಅತಿಥಿಯಾಗಿ ಆಗಮನ:

actor sanchari vijay
ಸಂಚಾರಿ ವಿಜಯ್ ಮತ್ತು ಶಂಕರ ಮಿತ್ರ

ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆಯುವ ಸಹ್ಯಾದ್ರಿ ಉತ್ಸವದ ಉದ್ಘಾಟಕರಾಗಿ ಭಾಗವಹಿಸಿದ್ದರು. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಸಾಗರ ನಗರ ಸಭೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದ ರಾಯಭಾರಿಯಾಗಿ 2016 ರಲ್ಲಿ ಭಾಗಿಯಾಗಿದ್ದರು.

actor sanchari vijay
ಸಂಚಾರಿ ವಿಜಯ್

ಸಂಚಾರಿ ವಿಜಯ್ ಎಲ್ಲೂ ಹೋಗಿಲ್ಲ, ಅವರು ಎಂದಿಗೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಅಪಘಾತ ಆಗುವ ಎರಡು ದಿನ ಮುಂಚೆ ಕರೆ ಮಾಡಿದ್ದರು ಎಂದು ತಮ್ಮ ಗೆಳೆತನದ ಬಗ್ಗೆ ಈಟಿವಿ ಭಾರತದ ಜೊತೆ ಸ್ನೇಹಿತ ಶಂಕರ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

actor sanchari vijay
ಸಂಚಾರಿ ವಿಜಯ್ ಮತ್ತು ಶಂಕರ ಮಿತ್ರ

ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಕನ್ನಡ ಯುವ ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಾವನ್ನಪ್ಪಿದ್ದಾರೆ. ಸಂಚಾರಿ ವಿಜಯ್ ಅವರಿಗೂ ಶಿವಮೊಗ್ಗ ಜಿಲ್ಲೆಗೂ ಸಾಕಷ್ಟು ನಂಟಿತ್ತು. ಈ ಬಗ್ಗೆ ಅವರ ಗೆಳೆಯ ಶಂಕರ ಮಿತ್ರ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಸಂಚಾರಿ ವಿಜಯ್ ಸ್ನೇಹಿತ ಶಂಕರ ಮಿತ್ರ

ಓದಿ: ಸ್ನೇಹಿತನ ತೋಟದಲ್ಲಿ ವಿಜಯ್​ ಅಂತ್ಯಸಂಸ್ಕಾರ: ಮುಗಿಲು ಮುಟ್ಟಿದ ಆಕ್ರಂದನ

ಸಂಚಾರಿ ವಿಜಯ್ ಅವರು ಶಿವಮೊಗ್ಗಕ್ಕೆ ಸಾಕಷ್ಟು ಸಲ ಭೇಟಿ ನೀಡಿದ್ದಾರೆ. ಪ್ರತಿ ಬಾರಿ ಬಂದಾಗ ರಂಗ ಕಲಾವಿದರನ್ನು ಭೇಟಿ ಮಾಡುತ್ತಿದ್ದರು, ಜೊತೆಗೆ ಡಯಾನ್ ಬುಕ್ ಹೌಸ್​​​ಗೆ ಭೇಟಿ ನೀಡುತ್ತಿದ್ದರು. ಹಾಗೇ ಶಿವಮೊಗ್ಗ ನಗರದ ಹೊಟೇಲ್ ಮೀನಾಕ್ಷಿ ಭವನದ ಅವಲಕ್ಕಿ ಅಂದರೆ ಅವರಿಗೆ ಪಂಚಪ್ರಾಣ ಎಂದು ನೊಂದ ಮನಸ್ಸಿನಲ್ಲೇ ಹಳೆ ಘಟನೆಗಳನ್ನು ಮೆಲುಕು ಹಾಕಿದರು.

actor sanchari vijay
ಸಂಚಾರಿ ವಿಜಯ್

ಸಿಗಂದೂರು ದೇವಸ್ಥಾನ, ಕುಪ್ಪಳ್ಳಿಗೆ ಭೇಟಿ:

actor sanchari vijay
ಕುಪ್ಪಳ್ಳಿಯಲ್ಲಿ ಸಂಚಾರಿ ವಿಜಯ್

ಸಂಚಾರಿ ವಿಜಯ್ ಸಿಗಂದೂರು ದೇವಸ್ಥಾನಕ್ಕೆ, ನಟಿ ಶೃತಿ ಹರಿಹರನ್ ಹಾಗೂ ಗೆಳೆಯ ಶಂಕರ್ ಮಿತ್ರ ಅವರೊಂದಿಗೆ ಭೇಟಿ ನೀಡಿದ್ದರು. ಹಾಗೇ ರಾಷ್ಟ್ರ ಕವಿ ಕುವೆಂಪು ಅವರ ಮನೆ ಕುಪ್ಪಳಿಗೂ ಭೇಟಿ ನೀಡಿದ್ದರು. ಅಲ್ಲದೇ ಸಾಗರ, ತೀರ್ಥಹಳ್ಳಿ, ಗಾಜನೂರು ಸೇರಿದಂತೆ ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಬೆರೆಯುತ್ತಿದ್ದರು.

actor sanchari vijay
ಸ್ನೇಹಿತರೊಂದಿಗೆ ಸಂಚಾರಿ ವಿಜಯ್

ಭದ್ರಾವತಿಯಲ್ಲಿ ಮೊದಲ ಸನ್ಮಾನ:

actor sanchari vijay
ಸಂಚಾರಿ ವಿಜಯ್ ಅವರಿಗೆ ಸನ್ಮಾನ

ರಾಷ್ಟ್ರ ಪ್ರಶಸ್ತಿ ಬಂದ ನಂತರ ಮೊದಲು ಸನ್ಮಾನ ಮಾಡಿದ್ದೇ ಭದ್ರಾವತಿಯಲ್ಲಿ. 'ನಾನು ಅವನಲ್ಲಾ ಅವಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದ ನಂತರ ಮೊದಲು ಗುರುತಿಸಿ ಭದ್ರಾವತಿಯಲ್ಲಿ ಸನ್ಮಾನ ಮಾಡಲಾಯಿತು.

ಕುವೆಂಪು ವಿವಿಗೆ ಮುಖ್ಯ ಅತಿಥಿಯಾಗಿ ಆಗಮನ:

actor sanchari vijay
ಸಂಚಾರಿ ವಿಜಯ್ ಮತ್ತು ಶಂಕರ ಮಿತ್ರ

ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆಯುವ ಸಹ್ಯಾದ್ರಿ ಉತ್ಸವದ ಉದ್ಘಾಟಕರಾಗಿ ಭಾಗವಹಿಸಿದ್ದರು. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಸಾಗರ ನಗರ ಸಭೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದ ರಾಯಭಾರಿಯಾಗಿ 2016 ರಲ್ಲಿ ಭಾಗಿಯಾಗಿದ್ದರು.

actor sanchari vijay
ಸಂಚಾರಿ ವಿಜಯ್

ಸಂಚಾರಿ ವಿಜಯ್ ಎಲ್ಲೂ ಹೋಗಿಲ್ಲ, ಅವರು ಎಂದಿಗೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಅಪಘಾತ ಆಗುವ ಎರಡು ದಿನ ಮುಂಚೆ ಕರೆ ಮಾಡಿದ್ದರು ಎಂದು ತಮ್ಮ ಗೆಳೆತನದ ಬಗ್ಗೆ ಈಟಿವಿ ಭಾರತದ ಜೊತೆ ಸ್ನೇಹಿತ ಶಂಕರ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

actor sanchari vijay
ಸಂಚಾರಿ ವಿಜಯ್ ಮತ್ತು ಶಂಕರ ಮಿತ್ರ
Last Updated : Jun 15, 2021, 9:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.