ಮೈಸೂರು: ದಸರಾ ಮಹೋತ್ಸವದ ವೇಳೆ ಚಾಮುಂಡಿ ಬೆಟ್ಟದಲ್ಲಿ ನಡೆಯಬೇಕಿದ್ದ ಮಹಿಷಾ ದಸರಾ ಆಚರಣೆಯನ್ನು ತಡೆದ ಹಿನ್ನೆಲೆಯಲ್ಲಿ ಅಸಮಾಧಾನ ಹಾಗೂ ಆಕ್ರೋಶ ಹೊರಹಾಕಿದ್ದ ಪ್ರಗತಿಪರರು ಇಂದು ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬಹುಪರಾಕ್ ಕೂಗಿದರು.
ಪ್ರಗತಿಪರರಾದ ಪ್ರೊ. ಮಹೇಶ್ ಚಂದ್ರಗುರು, ಪ್ರೊ. ಕೆ.ಎಸ್.ಭಗವಾನ್, ಶಾಂತರಾಜ್ ಸೇರಿದಂತೆ ಅನೇಕರು ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮೆಣದಬತ್ತಿಗಳನ್ನು ಹಚ್ಚಿ ಮಹಿಷಾ ಒಬ್ಬ ಉತ್ತಮ ರಾಜ. ಆತನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇತಿಹಾಸವನ್ನು ತಿಳಿಸಬೇಕಿದೆ ಎಂದರು.
ಇನ್ನು ಸಂಸದ ಪ್ರತಾಪ್ ಸಿಂಹರಿಗೆ ಧನ್ಯವಾದ ಅರ್ಪಿಸಬೇಕು. ಮೈಸೂರು ಜಿಲ್ಲೆಗೆ ಸೀಮಿತವಾಗಿದ್ದ ಮಹಿಷಾ ಆಚರಣೆಯನ್ನು ದೇಶಕ್ಕೆ ಗೊತ್ತಾಗುವಂತೆ ಮಾಡಿದ್ದಾರೆ. ನೈಜ ಇತಿಹಾಸವನ್ನು ಜನರಿಗೆ ತಿಳಿಸಬೇಕು ಎಂದು ಪ್ರಗತಿಪರರು ಹೇಳಿದರು.