ETV Bharat / city

ಜೋಡಿ ಗೂಬೆ ಹಿಡಿದು ಮಾರಾಟಕ್ಕೆ ಯತ್ನ.. ಓರ್ವನ ಬಂಧನ, ಇನ್ನೊಬ್ಬ ಪರಾರಿ.. - ಜೋಡಿ ಗೂಬೆ ಬೆಲೆ

ಅರಣ್ಯಾಧಿಕಾರಿ ನೇತೃತ್ವದ ತಂಡ ಮಿಂಚಿನ ದಾಳಿ ನಡೆಸಿ ದುಬಾರಿ ಬೆಲೆಯ ಜೋಡಿ ಗೂಬೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸಿ ಗೂಬೆಗಳನ್ನು ರಕ್ಷಣೆ ಮಾಡಿದ್ದಾರೆ.

ಗೂಬೆ
author img

By

Published : Nov 22, 2019, 5:10 PM IST

ಮೈಸೂರು: ಅರಣ್ಯಾಧಿಕಾರಿ ನೇತೃತ್ವದ ತಂಡ ಮಿಂಚಿನ ದಾಳಿ ನಡೆಸಿ ದುಬಾರಿ ಬೆಲೆಯ ಜೋಡಿ ಗೂಬೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸಿ ಗೂಬೆಗಳನ್ನು ರಕ್ಷಣೆ ಮಾಡಿದ್ದಾರೆ.

ಗೂಬೆ ಮಾರಾಟಕ್ಕೆ ಯತ್ನಿಸಿದ ಆರೋಪಿಯ ಬಂಧನ..

ನೆಲಮಂಗಲ ತಾಲೂಕಿನ ಶಿಖರಿಪುರ ಗ್ರಾಮದ ಧವನಿಕುಮಾರ್ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ‌ಈತ ನೆಲಮಂಗಲ ಅರಣ್ಯ ಪ್ರದೇಶದಲ್ಲಿ ಬೃಹತ್ ಗೂಬೆಯನ್ನು ನಿನ್ನೆ ಸೆರೆ ಹಿಡಿದು ಮಾರಾಟ ಮಾಡಲು ಮುಂದಾಗಿದ್ದ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಶಿಖರಿಪುರ ಗ್ರಾಮದಲ್ಲಿ ದಾಳಿ ಮಾಡಿದ್ದಾರೆ. ಜತೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಆರೋಪಿಗಳು ಗೂಬೆಗಳನ್ನು ಸೆರೆ ಹಿಡಿದು ದೊಡ್ಡದೊಡ್ಡ ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಮಾರಾಟ ಮಾಡುವುದರಿಂದ ಲಕ್ಷಾಂತರ ರೂ‌‌. ಸಂಪಾದನೆ ಮಾಡುವ ಯೋಜನೆ ರೂಪಿಸಿಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಈ‌ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅರಣ್ಯ ಇಲಾಖೆ ವಿಚಕ್ಷಣ ದಳದ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್)ಪೂವಯ್ಯ, ಮೌಢ್ಯತೆಯಿಂದ ಗೂಬೆಗಳನ್ನು ಸೆರೆ ಹಿಡಿದು ಮಾರಾಟ ಮಾಡುತ್ತಾರೆ. ಆದರೆ, ವನ್ಯ ಸಂಪತ್ತಿನ ಪ್ರಾಣಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.‌ ಈಗ ಸಿಕ್ಕಿರುವ ಜೋಡಿ ಗೂಬೆಯನ್ನು ನಾಗರಹೊಳೆ ಅಥವಾ ಬಂಡೀಪುರ ಅರಣ್ಯಕ್ಕೆ ಬಿಡಲಾಗುವುದು ಎಂದರು.

ಮೈಸೂರು: ಅರಣ್ಯಾಧಿಕಾರಿ ನೇತೃತ್ವದ ತಂಡ ಮಿಂಚಿನ ದಾಳಿ ನಡೆಸಿ ದುಬಾರಿ ಬೆಲೆಯ ಜೋಡಿ ಗೂಬೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸಿ ಗೂಬೆಗಳನ್ನು ರಕ್ಷಣೆ ಮಾಡಿದ್ದಾರೆ.

ಗೂಬೆ ಮಾರಾಟಕ್ಕೆ ಯತ್ನಿಸಿದ ಆರೋಪಿಯ ಬಂಧನ..

ನೆಲಮಂಗಲ ತಾಲೂಕಿನ ಶಿಖರಿಪುರ ಗ್ರಾಮದ ಧವನಿಕುಮಾರ್ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ‌ಈತ ನೆಲಮಂಗಲ ಅರಣ್ಯ ಪ್ರದೇಶದಲ್ಲಿ ಬೃಹತ್ ಗೂಬೆಯನ್ನು ನಿನ್ನೆ ಸೆರೆ ಹಿಡಿದು ಮಾರಾಟ ಮಾಡಲು ಮುಂದಾಗಿದ್ದ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಶಿಖರಿಪುರ ಗ್ರಾಮದಲ್ಲಿ ದಾಳಿ ಮಾಡಿದ್ದಾರೆ. ಜತೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಆರೋಪಿಗಳು ಗೂಬೆಗಳನ್ನು ಸೆರೆ ಹಿಡಿದು ದೊಡ್ಡದೊಡ್ಡ ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಮಾರಾಟ ಮಾಡುವುದರಿಂದ ಲಕ್ಷಾಂತರ ರೂ‌‌. ಸಂಪಾದನೆ ಮಾಡುವ ಯೋಜನೆ ರೂಪಿಸಿಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಈ‌ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅರಣ್ಯ ಇಲಾಖೆ ವಿಚಕ್ಷಣ ದಳದ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್)ಪೂವಯ್ಯ, ಮೌಢ್ಯತೆಯಿಂದ ಗೂಬೆಗಳನ್ನು ಸೆರೆ ಹಿಡಿದು ಮಾರಾಟ ಮಾಡುತ್ತಾರೆ. ಆದರೆ, ವನ್ಯ ಸಂಪತ್ತಿನ ಪ್ರಾಣಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.‌ ಈಗ ಸಿಕ್ಕಿರುವ ಜೋಡಿ ಗೂಬೆಯನ್ನು ನಾಗರಹೊಳೆ ಅಥವಾ ಬಂಡೀಪುರ ಅರಣ್ಯಕ್ಕೆ ಬಿಡಲಾಗುವುದು ಎಂದರು.

Intro:ಗೂಬೆ ಮಾರಾಟ ಯತ್ನ


Body:ಗೂಬೆ ಮಾರಾಟ ಯತ್ನ


Conclusion:ದುಬಾರಿ ಬೆಲೆಯ ಗೂಬೆ ಮಾರಾಟ ಯತ್ನ ಅರಣ್ಯಾಧಿಕಾರಿ ಮಿಂಚಿನ ದಾಳಿಯಿಂದ ಸೇಫ್
ಮೈಸೂರು: ಅರಣ್ಯಾ ವಿಚಕ್ಷಣ ದಳ ಮಿಂಚಿನ ದಾಳಿ ಮಾಡಿ ,
ದುಬಾರಿ ಬೆಲೆಯ ಜೋಡಿ ಗೂಬೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸಿ, ಗೂಬೆಗಳನ್ನು ರಕ್ಷಣೆ ಮಾಡಿದೆ.
ನೆಲಮಂಗಲ ತಾಲ್ಲೂಕಿನ ಶಿಖರಿಪುರ ಗ್ರಾಮದ ಧವನಿಕುಮಾರ್ ಬಂಧಿತ ಆರೋಪಿ,ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.‌ಈತ ನೆಲಮಂಗಲ ಅರಣ್ಯ ಪ್ರದೇಶದಲ್ಲಿ ಈತ ಹಾಗೂ ಮತ್ತೊಬ್ಬ ಸೇರಿ ಬೃಹತ್ ಗೂಬೆಯನ್ನು ಗುರುವಾರ ಸೆರೆ ಹಿಡಿದು, ನಿನ್ನೆ ಸಂಜೆ ಮಾರಾಟ ಮಾಡಲು ಮುಂದಾಗುತ್ತಿರುವ ವಿಷಯ ತಿಳಿದ ಅರಣ್ಯ ಇಲಾಖೆ ವಿಚಕ್ಷಣದಳ ಸಿಬ್ಬಂದಿ ಶಿಖರಿಪುರ ಗ್ರಾಮದಲ್ಲಿ ದಾಳಿ ಮಾಡಿದಾಗ ಓರ್ವ ಸ್ಥಳದಿಂದ ಕಾಲ್ಕಿತ್ತರೆ,ಧವನಿಕುಮಾರ್ ಸಿಕ್ಕಿಬಿದ್ದಿದ್ದಾನೆ.ಈತನನ್ನು ನ್ಯಾಯಾಂಗ ಬಂಧನಕ್ಕೆ ಅರಣ್ಯ ಇಲಾಖೆ ಒಪ್ಪಿಸಿದೆ.
ಗೂಬೆಗಳನ್ನು ಸೆರೆ ಹಿಡಿದು ದೊಡ್ಡದೊಡ್ಡ ಉದ್ಯಮಗಳಿಗೆ, ರಾಜಕಾರಣಿ ಮಾರಾಟ ಮಾಡುವುದರಿಂದ,ಲಕ್ಷಾಂತರ ರೂ‌‌.ಸಂಪಾದನೆ ಮಾಡುವ ಆಲೋಚನೆ ಇವರದಾಗಿದೆ.
ಈ‌ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅರಣ್ಯ ಇಲಾಖೆಯ ವಿಚಕ್ಷಣ ದಳದ ಅರಣ್ಯ ಉಪಸಂರಕ್ಷಣಾಧಿಕಾರಿ(ಡಿಸಿಎಫ್) ಪೂವಯ್ಯ ಅವರು, ಮೌಢ್ಯತೆಯಿಂದ ಗೂಬೆಗಳನ್ನು ಸೆರೆ ಹಿಡಿದು ಮಾರಾಟ ಮಾಡುತ್ತಾರೆ.ಆದರೆ ವನ್ಯಸಂಪತ್ತಿನ ಪ್ರಾಣಿಗಳು ಬೆಲೆ ಕಟ್ಟಲು ಸಾಧ್ಯವಿಲ್ಲ.‌ಈಗ ಸಿಕ್ಕಿರುವ ಜೋಡಿ ಗೂಬೆಯನ್ನು ನಾಗರಹೊಳೆ ಅಥವಾ ಬಂಡೀಪುರ ಅರಣ್ಯಕ್ಕೆ ಬಿಡಲಾಗುವುದು ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.