ETV Bharat / city

ಔಷಧಿಗಳಿಲ್ಲದೆ ಕೊರಗುತ್ತಿರುವ ಶತಮಾನೋತ್ಸವ ಕಂಡ ಆಯುರ್ವೇದ ಆಸ್ಪತ್ರೆ - undefined

ಜಯಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಆಯುರ್ವೇದ ಆಸ್ಪತ್ರೆಯೊಂದು ಶತಮಾನೋತ್ಸವ ಕಂಡಿದ್ದು, ದುರಂತವೆಂದರೆ ಇಲ್ಲಿಗೆ ಬರುವ ರೋಗಿಗಳು ತಪಾಸಣೆ ಮಾತ್ರ ಮಾಡಿಸಿಕೊಂಡು ಔಷಧಗಳನ್ನು ಮೆಡಿಕಲ್ ಕೇಂದ್ರದಲ್ಲಿ ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಔಷಧಿಗಳಿಲ್ಲದೆ ಕೊರಗುತ್ತಿರುವ ಆಯುರ್ವೇದ ಆಸ್ಪತ್ರೆ
author img

By

Published : May 25, 2019, 5:28 PM IST

ಮೈಸೂರು: ಜಯಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಆಯುರ್ವೇದ ಆಸ್ಪತ್ರೆಯೊಂದು ಶತಮಾನೋತ್ಸವ ಕಂಡಿದ್ದು, ದುರಂತವೆಂದರೆ ಇಲ್ಲಿಗೆ ಬರುವ ರೋಗಿಗಳು ತಪಾಸಣೆ ಮಾತ್ರ ಮಾಡಿಸಿಕೊಂಡು ಔಷಧಗಳನ್ನು ಮೆಡಿಕಲ್ ಕೇಂದ್ರದಲ್ಲಿ ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಔಷಧಿಗಳಿಲ್ಲದೆ ಕೊರಗುತ್ತಿರುವ ಆಯುರ್ವೇದ ಆಸ್ಪತ್ರೆ

ಹೌದು, ಕೆ.ಆರ್ ಮೊಹಲ್ಲಾದಲ್ಲಿರುವ ನಗರ ಪಾಲಿಕೆ ಅಧೀನದಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ ಕಳೆದ ಆರು ವರ್ಷಗಳಿಂದ ಔಷಧಿಯಿಲ್ಲದೇ ಆಯುರ್ವೇದ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ತಪಾಸಣೆ ಮಾತ್ರ ಮಾಡಿಸಿಕೊಂಡು ಹೊರಗಡೆ ಹೋಗಿ ಔಷಧಿಗಳನ್ನು ತೆಗೆದುಕೊಳ್ಳತ್ತಾರೆ ಎನ್ನಲಾಗಿದೆ.

ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಆಯುರ್ವೇದ ಚಿಕಿತ್ಸೆ ಬಗ್ಗೆ ಅಪಾರ ಒಲವಿದ್ದ ಕಾರಣ ಆಯುರ್ವೇದ ಪಂಡಿತರಿಗೆ ಹೇಳಿ ಕೆ.ಆರ್ ಮೊಹಲ್ಲದಲ್ಲಿ ಮೊದಲಿಗೆ ಆಯುರ್ವೇದ ಆಸ್ಪತ್ರೆಯನ್ನು ತೆರೆದರು. ಅಂದಿನಿಂದ ಇಂದಿನವರೆಗೂ ಆಸ್ಪತ್ರೆ ನಡೆದುಕೊಂಡು ಬಂದಿದೆ. ಆದರೆ ಕಳೆದ ಆರು ವರ್ಷಗಳಿಂದ ಸರಿಯಾಗಿ ಔಷಧಿ ಸಿಗದೇ ರೋಗಿಗಳು ಬೇಸರಗೊಂಡಿದ್ದಾರೆ. ಈ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಈ ಕುರಿತು ಸ್ಥಳೀಯರಾದ ರಾಮಚಂದ್ರ ಎಂಬುವರು ಮಾತನಾಡಿ, ಶತಮಾನೋತ್ಸವ ಕಂಡಿರುವ ಆಸ್ಪತ್ರೆಯನ್ನು ಉಳಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಸಕ್ತಿ ವಹಿಸಬೇಕು. ಇಲ್ಲಿಗೆ ವೈದ್ಯರು ಸರಿಯಾದ ವೇಳೆಗೆ ಆಗಮಿಸಿ ತಪಾಸಣೆ ಮಾಡುತ್ತಾರೆ. ಆದರೆ ಔಷಧಿ ಸಿಗದೇ ಇರುವುದು ಬೇಸರ ತಂದಿದೆ. ಯಾವುದೇ ಕಾರಣಕ್ಕೂ ಆಸ್ಪತ್ರೆ ಮುಚ್ಚಬಾರದು ಎಂದು ಮನವಿ ಮಾಡಿದ್ದಾರೆ.

ಮೈಸೂರು: ಜಯಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಆಯುರ್ವೇದ ಆಸ್ಪತ್ರೆಯೊಂದು ಶತಮಾನೋತ್ಸವ ಕಂಡಿದ್ದು, ದುರಂತವೆಂದರೆ ಇಲ್ಲಿಗೆ ಬರುವ ರೋಗಿಗಳು ತಪಾಸಣೆ ಮಾತ್ರ ಮಾಡಿಸಿಕೊಂಡು ಔಷಧಗಳನ್ನು ಮೆಡಿಕಲ್ ಕೇಂದ್ರದಲ್ಲಿ ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಔಷಧಿಗಳಿಲ್ಲದೆ ಕೊರಗುತ್ತಿರುವ ಆಯುರ್ವೇದ ಆಸ್ಪತ್ರೆ

ಹೌದು, ಕೆ.ಆರ್ ಮೊಹಲ್ಲಾದಲ್ಲಿರುವ ನಗರ ಪಾಲಿಕೆ ಅಧೀನದಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ ಕಳೆದ ಆರು ವರ್ಷಗಳಿಂದ ಔಷಧಿಯಿಲ್ಲದೇ ಆಯುರ್ವೇದ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ತಪಾಸಣೆ ಮಾತ್ರ ಮಾಡಿಸಿಕೊಂಡು ಹೊರಗಡೆ ಹೋಗಿ ಔಷಧಿಗಳನ್ನು ತೆಗೆದುಕೊಳ್ಳತ್ತಾರೆ ಎನ್ನಲಾಗಿದೆ.

ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಆಯುರ್ವೇದ ಚಿಕಿತ್ಸೆ ಬಗ್ಗೆ ಅಪಾರ ಒಲವಿದ್ದ ಕಾರಣ ಆಯುರ್ವೇದ ಪಂಡಿತರಿಗೆ ಹೇಳಿ ಕೆ.ಆರ್ ಮೊಹಲ್ಲದಲ್ಲಿ ಮೊದಲಿಗೆ ಆಯುರ್ವೇದ ಆಸ್ಪತ್ರೆಯನ್ನು ತೆರೆದರು. ಅಂದಿನಿಂದ ಇಂದಿನವರೆಗೂ ಆಸ್ಪತ್ರೆ ನಡೆದುಕೊಂಡು ಬಂದಿದೆ. ಆದರೆ ಕಳೆದ ಆರು ವರ್ಷಗಳಿಂದ ಸರಿಯಾಗಿ ಔಷಧಿ ಸಿಗದೇ ರೋಗಿಗಳು ಬೇಸರಗೊಂಡಿದ್ದಾರೆ. ಈ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಈ ಕುರಿತು ಸ್ಥಳೀಯರಾದ ರಾಮಚಂದ್ರ ಎಂಬುವರು ಮಾತನಾಡಿ, ಶತಮಾನೋತ್ಸವ ಕಂಡಿರುವ ಆಸ್ಪತ್ರೆಯನ್ನು ಉಳಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಸಕ್ತಿ ವಹಿಸಬೇಕು. ಇಲ್ಲಿಗೆ ವೈದ್ಯರು ಸರಿಯಾದ ವೇಳೆಗೆ ಆಗಮಿಸಿ ತಪಾಸಣೆ ಮಾಡುತ್ತಾರೆ. ಆದರೆ ಔಷಧಿ ಸಿಗದೇ ಇರುವುದು ಬೇಸರ ತಂದಿದೆ. ಯಾವುದೇ ಕಾರಣಕ್ಕೂ ಆಸ್ಪತ್ರೆ ಮುಚ್ಚಬಾರದು ಎಂದು ಮನವಿ ಮಾಡಿದ್ದಾರೆ.

Intro:ಆಯುರ್ವೇದ ಆಸ್ಪತ್ರೆಯಲ್ಲಿಲ್ಲ ಔಷಧಿ :


Body:ಆಯುರ್ವೇದ ಆಸ್ಪತ್ರೆ ಸ್ಟೋರಿ


Conclusion:ಶತಮಾನೋತ್ಸವ ಕಂಡ ಆಯುರ್ವೇದ ಆಸ್ಪತ್ರೆಯಲ್ಲಿಲ್ಲ ಔಷಧ!
ಮೈಸೂರು: ಶತಮಾನೋತ್ಸವ ಕಂಡ ಆಯುರ್ವೇದ ಆಸ್ಪತ್ರೆಯಲ್ಲಿಲ್ಲ ಔಷಧ, ಇಲ್ಲಿಗೆ ಬರುವ ರೋಗಿಗಳು ತಪಾಸಣೆ ಮಾಡಿಸಿ ಮೆಡಿಕಲ್ ಕೇಂದ್ರದಲ್ಲಿ ಔಷಧಿಗಳನ್ನು ಪಡೆದುಕೊಳ್ಳಬೇಕು.
ಹೌದು, ಕೆ.ಆರ್.ಮೊಹಲ್ಲಾದಲ್ಲಿರುವ ನಗರ ಪಾಲಿಕೆ ಅಧೀನದಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ ಆರು ವರ್ಷಗಳಿಂದ ಔಷಧಿಯಿಲ್ಲದೇ ಆಯುರ್ವೇದ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ತಪಾಸಣೆ ಮಾಡಿಸಿಕೊಂಡು ಹೊರಗಡೆ ಹೋಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು.
ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು ಆಯುರ್ವೇದ ಚಿಕಿತ್ಸೆ ಬಗ್ಗೆ ಅಪಾರ ಒಲವಿದ್ದ ಕಾರಣ, ಆಯುರ್ವೇದ ಪಂಡಿತರಿಗೆ ಹೇಳಿ ಕೆ.ಆರ್.ಮೊಹಲ್ಲದಲ್ಲಿ ಮೊದಲಿಗೆ ಆಯುರ್ವೇದ ಆಸ್ಪತ್ರೆಯನ್ನು ತೆರೆದರು.
ಅಂದಿನಿಂದ ಇಂದಿನವರೆಗೂ ಆಸ್ಪತ್ರೆ ನಡೆದುಕೊಂಡು ಬಂದಿದೆ.ಆದರೆ ಆರು ವರ್ಷಗಳಿಂದ ಸರಿಯಾಗಿ ಔಷಧಿ ಸಿಗದೇ ರೋಗಿಗಳು ಬೇಸರಗೊಂಡಿದ್ದಾರೆ.ಆದರೆ ಇದರ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.
'ಈ ಟಿವಿ ಭಾರತ್'ನೊಂದಿಗೆ ಮಾತನಾಡಿದ ಮುನಿಯಮ್ಮ,ಇಲ್ಲಿಗೆ ವೈದ್ಯರು ಸರಿಯಾದ ವೇಳೆಗೆ ಆಗಮಿಸಿ ತಪಾಸಣೆ ಮಾಡುತ್ತಾರೆ.ಆದರೆ ಔಷಧಿ ಸಿಗದೇ ಇರುವುದು ಬೇಸರ ತಂದಿದೆ ಎನ್ನುತ್ತಾರೆ.
ಸ್ಥಳೀಯರಾದ ರಾಮಚಂದ್ರ ಅವರು ಮಾತನಾಡಿ, ಶತಮಾನೋತ್ಸವ ಕಂಡಿರುವ ಆಸ್ಪತ್ರೆಯನ್ನು ಉಳಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಸಕ್ತಿ ವಹಿಸಬೇಕು.ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಮನವಿ ಮಾಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.