ಮೈಸೂರು: ಕಳೆದ 7 ವರ್ಷಗಳಿಂದ ಪಕ್ಷಿಗಳಿಗೆ ಆಹಾರ ಮತ್ತು ನೀರು ಉಣಿಸುವ ಕೆಲಸ ಮಾಡುತ್ತಿರುವ ನಗರ ನಿವಾಸಿ ಅನಿತಾ ಅವರು ಲಾಕ್ಡೌನ್ ಸಮಯದಲ್ಲಿಯೂ ಸಹ ತಮ್ಮ ಕಾರ್ಯ ಮುಂದುವರೆಸಿದ್ದಾರೆ.
ನಗರದಲ್ಲಿ ಹಾಲಿನ ಬೂತ್ ನಡೆಸುತ್ತಿರುವ ಅನಿತಾ ದಿನನಿತ್ಯ ಆಹಾರ ಅರಸಿ ಬರುವ ಪಕ್ಷಿಗಳಿಗೆ ಆಹಾರ ನೀಡುತ್ತಿದ್ದಾರೆ. ವಿಶೇಷ ಅಂದ್ರೆ ಕಾಗೆ ಸೇರಿದಂತೆ ಇನ್ನೀತರ ಪಕ್ಷಿಗಳು ಯಾವುದೇ ಭಯವಿಲ್ಲದೆ ಇವರ ಅಂಗಡಿಯಲ್ಲಿ ಬಂದು ಕುಳಿತು ಆಹಾರ ತಿಂದು ಹೋಗುತ್ತವೆ.
ಕಳೆದ 7 ವರ್ಷಗಳಿಂದ ನಿರಂತರ ಸೇವೆಯನ್ನು ಮಾಡುತ್ತಾ, ಆತ್ಮತೃಪ್ತಿಯನ್ನು ಕಂಡುಕೊಂಡಿರುವ ಅನಿತಾ ಅವರು, ಲಾಕ್ಡೌನ್ನಂತಹ ಸಮಯದಲ್ಲಿಯೂ ತಮ್ಮ ನಿಸ್ವಾರ್ಥ ಸೇವೆ ಮುಂದುವರೆಸಿರುವುದು ಶ್ಲಾಘನೀಯ.