ಹುಬ್ಬಳ್ಳಿ: ಲಾಕ್ಡೌನ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಗ್ರಾಮ ಲೆಕ್ಕಾಧಿಕಾರಿಯೊಬ್ಬ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.
![Village accountent arrested for demanding money for land registration](https://etvbharatimages.akamaized.net/etvbharat/prod-images/kn-hbl-04-acb-raid-av-7208089_03062020190603_0306f_1591191363_1016.jpg)
ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮ ಲೆಕ್ಕಾಧಿಕಾರಿ, ವೆಂಕಟೇಶ ಗುರಪ್ಪ ಲಮಾಣಿ, ಇಸ್ಮಾಯಿಲ್ ಹತ್ತಿಮತ್ತೂರ ಎಂಬುವರ ಜಮೀನು ನೋಂದಣಿಗೆ ಸಂಬಂಧಿಸಿದಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಇಸ್ಮಾಯಿಲ್, ಡಿಎಸ್ಪಿ ವಿಜಯಕುಮಾರ್ ಬಿಸನಳ್ಳಿಯವರಿಗೆ ದೂರು ನೀಡಿದ್ದರು. ಬಳಿಕ ಡಿಎಸ್ಪಿ ತಂಡವೊಂದನ್ನ ರಚಿಸಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಎಸಿಬಿ ತಂಡ ಆರೋಪಿಯನ್ನ ಬಂಧಿಸಿದ್ದಾರೆ.
ಈ ಕುರಿತು ಧಾರವಾಡ ಎಸಿಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.