ETV Bharat / city

ಸೀಲ್​ಡೌನ್​ಗೂ ರಾಜಕೀಯ : ಅಧಿಕಾರಿಗೆ ಮೇಯರ್ ತಾಕೀತು ಮಾಡಿರುವ ಆಡಿಯೋ ವೈರಲ್ - davanagere mayor viral audio

ಸೀಲ್​​ಡೌನ್​ ಮಾಡುವ ವಿಚಾರದಲ್ಲೂ ರಾಜಕೀಯ ಶುರುವಾಗಿದ್ದು, ದಾವಣಗೆರೆಯಲ್ಲಿ ಸೀಲ್​ಡೌನ್​ ಮಾಡಲಾಗಿದ್ದ ಪ್ರದೇಶವನ್ನು ಪಾಲಿಕೆಯ ಮೇಯರ್​​ ಅಧಿಕಾರಿಗಳ ಜೊತೆ ಮಾತನಾಡಿ ಬೆಳಗಾಗುವುದರೊಳಗೆ ತೆರವುಗೊಳಿಸಿದ್ದಾರೆ. ಸದ್ಯ ಮೇಯರ್​​ ಮತ್ತು ಅಧಿಕಾರಿಯ ನಡುವಿನ ಫೋನ್​ ಸಂಭಾಷಣೆ ವೈರಲ್​ ಆಗಿದೆ.

davanagere seal down cancel audio viral
ಸೀಲ್​ಡೌನ್​ ರಾಜಕೀಯ
author img

By

Published : Jul 24, 2020, 7:21 PM IST

ದಾವಣಗೆರೆ: ಕೊರೊನಾ ಬಂದ ಬಳಿಕ ಏರಿಯಾದಲ್ಲಿ ಸೀಲ್ ಡೌನ್ ಮಾಡುವ ವಿಚಾರಕ್ಕೂ ಈಗ ರಾಜಕೀಯ ಎಂಟ್ರಿಯಾಗಿದೆ. ಸೀಲ್ ಡೌನ್ ಮಾಡುವ ಸಂಬಂಧ ಮಹಾನಗರ ಪಾಲಿಕೆಯ ಮೇಯರ್ ಅಧಿಕಾರಿಯ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ದಾವಣಗೆರೆಯ ಹಳೆ ಕಾಳಿಕಾದೇವಿ ರಸ್ತೆಯಲ್ಲಿರುವ ಬಿ.ಎಸ್. ಚನ್ನಬಸಪ್ಪ ಮಳಿಗೆ ಎದುರುಗಡೆಯ ಒಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಎದುರುಗಡೆ ಇದ್ದ ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಮೇಯರ್ ಅಜಯ್ ಕುಮಾರ್ ಮಾತನಾಡಿರುವ ಆಡಿಯೋ ಈಗ ವೈರಲ್ ಆಗಿದೆ.

ಅಧಿಕಾರಿಗಳಿಗೆ ಮೇಯರ್ ತಾಕೀತು ಮಾಡಿರುವ ಆಡಿಯೋ ವೈರಲ್

ಮೇಯರ್ ಮಾತನಾಡಿದ ಬಳಿಕ ಬೆಳಗಾಗುವುದರೊಳಗೆ ಸೀಲ್ ಡೌನ್ ತೆರವು ಮಾಡಲಾಗಿದೆ. ಕಮರ್ಷಿಯಲ್ ಅಂಗಡಿಗಳಿಗೆ ತೊಂದರೆಯಾಗಬಾರದು. ಮಾತ್ರವಲ್ಲ, ಬಿ.ಎಸ್. ಚನ್ನಬಸಪ್ಪನವರ ಮಳಿಗೆಯ ವ್ಯಾಪಾರಕ್ಕೂ ತೊಂದರೆಯಾಗಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿರುವ ಆಡಿಯೋ ಈಗ ಬೆಳಕಿಗೆ ಬಂದಿದೆ.

ಆದ್ರೆ, ಈ ಪ್ರದೇಶದ ಜನರು ಮಾತ್ರ ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯಬಾರದು. ಜನರ ಆರೋಗ್ಯ ಮುಖ್ಯ. ಎಷ್ಟೇ ದೊಡ್ಡವರಾದರೂ ಕಾನೂನು ಒಂದೇ. ಜಿಲ್ಲಾಡಳಿತ ಈ ಕ್ರಮ ಕೈಗೊಂಡಿರುವುದಕ್ಕೆ ನಮ್ಮ ವಿರೋಧ ಇದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ: ಕೊರೊನಾ ಬಂದ ಬಳಿಕ ಏರಿಯಾದಲ್ಲಿ ಸೀಲ್ ಡೌನ್ ಮಾಡುವ ವಿಚಾರಕ್ಕೂ ಈಗ ರಾಜಕೀಯ ಎಂಟ್ರಿಯಾಗಿದೆ. ಸೀಲ್ ಡೌನ್ ಮಾಡುವ ಸಂಬಂಧ ಮಹಾನಗರ ಪಾಲಿಕೆಯ ಮೇಯರ್ ಅಧಿಕಾರಿಯ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ದಾವಣಗೆರೆಯ ಹಳೆ ಕಾಳಿಕಾದೇವಿ ರಸ್ತೆಯಲ್ಲಿರುವ ಬಿ.ಎಸ್. ಚನ್ನಬಸಪ್ಪ ಮಳಿಗೆ ಎದುರುಗಡೆಯ ಒಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಎದುರುಗಡೆ ಇದ್ದ ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಮೇಯರ್ ಅಜಯ್ ಕುಮಾರ್ ಮಾತನಾಡಿರುವ ಆಡಿಯೋ ಈಗ ವೈರಲ್ ಆಗಿದೆ.

ಅಧಿಕಾರಿಗಳಿಗೆ ಮೇಯರ್ ತಾಕೀತು ಮಾಡಿರುವ ಆಡಿಯೋ ವೈರಲ್

ಮೇಯರ್ ಮಾತನಾಡಿದ ಬಳಿಕ ಬೆಳಗಾಗುವುದರೊಳಗೆ ಸೀಲ್ ಡೌನ್ ತೆರವು ಮಾಡಲಾಗಿದೆ. ಕಮರ್ಷಿಯಲ್ ಅಂಗಡಿಗಳಿಗೆ ತೊಂದರೆಯಾಗಬಾರದು. ಮಾತ್ರವಲ್ಲ, ಬಿ.ಎಸ್. ಚನ್ನಬಸಪ್ಪನವರ ಮಳಿಗೆಯ ವ್ಯಾಪಾರಕ್ಕೂ ತೊಂದರೆಯಾಗಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿರುವ ಆಡಿಯೋ ಈಗ ಬೆಳಕಿಗೆ ಬಂದಿದೆ.

ಆದ್ರೆ, ಈ ಪ್ರದೇಶದ ಜನರು ಮಾತ್ರ ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯಬಾರದು. ಜನರ ಆರೋಗ್ಯ ಮುಖ್ಯ. ಎಷ್ಟೇ ದೊಡ್ಡವರಾದರೂ ಕಾನೂನು ಒಂದೇ. ಜಿಲ್ಲಾಡಳಿತ ಈ ಕ್ರಮ ಕೈಗೊಂಡಿರುವುದಕ್ಕೆ ನಮ್ಮ ವಿರೋಧ ಇದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.