ETV Bharat / city

ಅಬಕಾರಿ ಸಚಿವ ನಾಗೇಶ್​ ಪ್ರತಿಕೃತಿಗೆ ಮದ್ಯಾಭಿಷೇಕ: ಮೆಜೆಸ್ಟಿಕ್​ನಲ್ಲಿ ವಾಟಾಳ್​ ವಿನೂತನ ಪ್ರತಿಭಟನೆ

author img

By

Published : Sep 20, 2019, 10:47 PM IST

ಆನ್​ಲೈನ್ ಮೂಲಕ ಮನೆ ಮನೆಗೂ ಮದ್ಯ ಪೂರೈಸಲಾಗುತ್ತೆ ಎಂದು ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಹೆಚ್​ ನಾಗೇಶ್​ ವಿರುದ್ಧ ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್​ ಪ್ರತಿಭಟನೆ ನಡೆಸಿದ್ರು.

ಅಬಕಾರಿ ಸಚಿವ ನಾಗೇಶ್​ ಪ್ರತಿಕೃತಿಗೆ ಮದ್ಯಾಭಿಷೇಕ

ಬೆಂಗಳೂರು: ಆನ್​ಲೈನ್ ಮೂಲಕ ಮನೆ ಮನೆಗೂ ಮದ್ಯ ಪೂರೈಕೆ ಮಾಡಲಾಗುತ್ತೆ ಎಂದು ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಹೆಚ್​. ನಾಗೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಾಟಾಳ್ ನಾಗರಾಜ್ ಅವರು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಚಿವರ ಪ್ರತಿಕೃತಿಗೆ ಮದ್ಯದ ಅಭಿಷೇಕ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ರು.

ಅಬಕಾರಿ ಸಚಿವ ನಾಗೇಶ್​ ಪ್ರತಿಕೃತಿಗೆ ಮದ್ಯಾಭಿಷೇಕ ಮಾಡಿ ಪ್ರತಿಭಟನೆ

ಸಚಿವ ನಾಗೇಶ್ ಹೇಳಿಕೆಗೆ ನನ್ನ ಸಂಪೂರ್ಣ ವಿರೋಧವಿದೆ. ಜನಸೇವೆಯಲ್ಲಿ ಇರುವವರು ಈ ರೀತಿ ಮಾತನಾಡಬಾರದು. ಇತಿಹಾಸದಲ್ಲಿ ಯಾವೊಬ್ಬ ಅಬಕಾರಿ ಸಚಿವರೂ ಮನೆಮನೆಗೆ ಮದ್ಯ ಕಳುಹಿಸುತ್ತೇನೆ ಎಂದು ಹೇಳಿಕೆ ನೀಡಿರಲಿಲ್ಲ. ಆದರೆ ಈಗ ಇಂತಹ ಮಹಾನ್​ ಕೆಲಸ ಮಾಡಲು ಸಚಿವ ನಾಗೇಶ್ ಮುಂದಾಗಿದ್ದರು. ಇದನ್ನು ನಾವು ಖಂಡಿಸುತ್ತೇವೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.

ಇನ್ನು ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಜೊತೆ ವಿವಿಧ ಸಂಘಟನೆ ಮುಖಂಡರು ಭಾಗಿಯಾಗಿ, ಸಚಿವ ನಾಗೇಶ್ ಪ್ರತಿಕೃತಿಗೆ ಮದ್ಯಾಭಿಷೇಕ ಮಾಡಿದರು.

ಬೆಂಗಳೂರು: ಆನ್​ಲೈನ್ ಮೂಲಕ ಮನೆ ಮನೆಗೂ ಮದ್ಯ ಪೂರೈಕೆ ಮಾಡಲಾಗುತ್ತೆ ಎಂದು ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಹೆಚ್​. ನಾಗೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಾಟಾಳ್ ನಾಗರಾಜ್ ಅವರು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಚಿವರ ಪ್ರತಿಕೃತಿಗೆ ಮದ್ಯದ ಅಭಿಷೇಕ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ರು.

ಅಬಕಾರಿ ಸಚಿವ ನಾಗೇಶ್​ ಪ್ರತಿಕೃತಿಗೆ ಮದ್ಯಾಭಿಷೇಕ ಮಾಡಿ ಪ್ರತಿಭಟನೆ

ಸಚಿವ ನಾಗೇಶ್ ಹೇಳಿಕೆಗೆ ನನ್ನ ಸಂಪೂರ್ಣ ವಿರೋಧವಿದೆ. ಜನಸೇವೆಯಲ್ಲಿ ಇರುವವರು ಈ ರೀತಿ ಮಾತನಾಡಬಾರದು. ಇತಿಹಾಸದಲ್ಲಿ ಯಾವೊಬ್ಬ ಅಬಕಾರಿ ಸಚಿವರೂ ಮನೆಮನೆಗೆ ಮದ್ಯ ಕಳುಹಿಸುತ್ತೇನೆ ಎಂದು ಹೇಳಿಕೆ ನೀಡಿರಲಿಲ್ಲ. ಆದರೆ ಈಗ ಇಂತಹ ಮಹಾನ್​ ಕೆಲಸ ಮಾಡಲು ಸಚಿವ ನಾಗೇಶ್ ಮುಂದಾಗಿದ್ದರು. ಇದನ್ನು ನಾವು ಖಂಡಿಸುತ್ತೇವೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.

ಇನ್ನು ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಜೊತೆ ವಿವಿಧ ಸಂಘಟನೆ ಮುಖಂಡರು ಭಾಗಿಯಾಗಿ, ಸಚಿವ ನಾಗೇಶ್ ಪ್ರತಿಕೃತಿಗೆ ಮದ್ಯಾಭಿಷೇಕ ಮಾಡಿದರು.

Intro:ಅಬಕಾರಿ ಸಚಿವ ನಾಗೇಶ್ ಗೆ ಮದ್ಯಪಾನದ ಅಭಿಷೇಕ ಮಾಡಿಸಿದ ವಾಟಳ್ ನಾಗರಾಜ್..!!!

ಬೆಂಗಳೂರು: ಆನ್ಲೈನ್ ಮೂಲಕ ಮನೆ ಮನೆಗೂ ಮದ್ಯ ಪೂರೈಕೆ ಮಾಡಲಾಗುತ್ತೆ ಎಂದು ಹೇಳಿಕೆ ನೀಡಿದ್ದ
ಅಬಕಾರಿ ಸಚಿವ ನಾಗೇಶ್ ವಿರುದ್ದ ಇಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗೆ ನನ್ನ ಸಂಪೂರ್ಣ ವಿರೋಧವಿದೆ. ಜನಸೇವೆಯಲ್ಲಿ ಇರುವವರು ಈ ರೀ ಮಾತನಾಡಬಾರದೆಂದು ಎಂದು ಅಕ್ರೋಶ ವ್ಯಕ್ತಪಡಿಸಿ. ಅಬಕಾರಿ ಸಚಿವರ ಪ್ರತಿಕೃತಿಗೆ
ಮಧ್ಯದ ಅಭಿಷೇಕ ಮಾಡುವ ಮೂಲಕ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಿಭಿನ್ನ‌ರೀತಿಯಲ್ಲಿ ಪ್ರತಿಭಟನೆ ಮಾಡಲಾಯ್ತು. ಇತಿಹಾಸದಲ್ಲಿ ಯಾವೊಬ್ಬ ಅಬಕಾರಿ ಸಚಿವರು ಮನೆಮನೆಗೆ ಮದ್ಯ ಕಳಿಸುತ್ತೇನೆ ಎಂದು ಹೇಳಿಕೆ ನೀಡಿರಲಿಲ್ಲ.Body:ಅದ್ರೆ ಈಗ ಇಂತಹ ಮಹಾನ್ ಕೆಲಸಕ್ಕೆ ಅಬಕಾರಿ ಸಚಿವ ನಾಗೇಶ್ ಮುಂದಾಗಿದ್ದಾರೆ.
ಅದ್ರೆ ಇದನ್ನು ನಾವು ಖಂಡಿಸುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ರು.ಇನ್ನೂ ಈ ಪ್ರತಿಭಟನೆಯಲ್ಲಿ
ವಾಟಾಳ್ ನಾಗರಾಜ್ ಸೇರಿ ವಿವಿಧ ಸಂಘಟನೆ ಮುಖಂಡರು ಭಾಗಿಯಾಗಿ ಸಚಿವ ನಾಗೇಶ್ ಪ್ರತಿಕೃತಿಗೆ ಮದ್ಯಾಭಿಷೇಕ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿ ಅಬಕಾರಿ ಸಚಿವ ನಾಗೇಶ್ ಹೇಳಿಕೆಯನ್ನು ಖಂಡಿಸಿದ್ರು..

ಸತೀಶ ಎಂಬಿ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.