ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಾಗಿಣಿಗಾಗಿ ಅವರ ಇಬ್ಬರು ಗೆಳೆಯರು ಹೊಡೆದಾಡಿಕೊಂಡ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಘಟನೆ ನಂತರ ಬೌನ್ಸರ್ಗಳು ಶಿವಪ್ರಕಾಶ್ನನ್ನು ಕರೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.
ಮೊದಲು ಶಿವಪ್ರಕಾಶ್ರೊಂದಿಗೆ ಆತ್ಮೀಯವಾಗಿದ್ದ ರಾಗಿಣಿ ನಂತರ ರವಿ ಎಂಬಾತನೊಂದಿಗೆ ಹೆಚ್ಚು ಓಡಾಡುತ್ತಿದ್ದು, ಈ ಸಂಬಂಧ ಮೊನ್ನೆ ಶಿವಪ್ರಕಾಶ್ ಹಾಗೂ ಆರ್ಟಿಒ ಅಧಿಕಾರಿ ರವಿ ಇಬ್ಬರೂ ರೆಸಿಡೆನ್ಸಿ ರಸ್ತೆಯಲ್ಲಿರುವ ರಿಟ್ಜ್ ಕಾರ್ಲ್ಟನ್ ಹೋಟೆಲ್ನಲ್ಲಿ ನಟಿ ಎದುರೇ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ.
ಗಲಾಟೆ ನಂತರ ಶಿವಪ್ರಕಾಶ್ನನ್ನು ಬೌನ್ಸರ್ಗಳು ಕರೆದೊಯ್ಯತ್ತಿರುವ ದೃಶ್ಯ ರಿಟ್ಜ್ ಕಾರ್ಲ್ಟನ್ ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಮೂವರಿಗೂ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.